ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುತ್ತೇವೆ: ವಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ನಿರ್ಣಯ

INDIA alliance meeting: ಮೈತ್ರಿಯಲ್ಲಿನ ನಿಜವಾದ ಕೆಲಸವೆಂದರೆ ಮೈತ್ರಿಕೂಟದ ನಾಯಕರ ನಡುವೆ ಬೆಸೆದುಕೊಂಡಿರುವ ಸಂಬಂಧ. ನಾಯಕರ ಬಾಂಧವ್ಯ ವೃದ್ಧಿಗೆ ಸಭೆ ಸಹಕಾರಿಯಾಗಿದೆ. ನಾವು ವಿಷಯಗಳನ್ನು ಸಮೀಪಿಸುತ್ತಿರುವ ರೀತಿಯಲ್ಲಿ ಎಲ್ಲಾ ನಾಯಕರಲ್ಲಿ ಫೆಕ್ಸಿಬಿಲಿಟಿ ಇದೆ ಎಂದು ನಾನು ನೋಡುತ್ತೇನೆ.ಸಹಜವಾಗಿ, ವ್ಯತ್ಯಾಸಗಳಿವೆ. ಆದರೆ, ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ರೀತಿಯಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುತ್ತೇವೆ: ವಿಪಕ್ಷಗಳ ಮೈತ್ರಿಕೂಟ 'ಇಂಡಿಯಾ' ನಿರ್ಣಯ
ಮುಂಬೈನಲ್ಲಿ ಇಂಡಿಯಾ ಸಭೆ
Follow us
|

Updated on:Sep 01, 2023 | 7:08 PM

ಮುಂಬೈ ಸೆಪ್ಟೆಂಬರ್ 01: ವಿಪಕ್ಷಗಳ ಇಂಡಿಯಾ ಮೈತ್ರಿಕೂಟವು (INDIA alliance) 2024 ರ ಲೋಕಸಭೆ ಚುನಾವಣೆಯಲ್ಲಿ (2024 Lok Sabha election) “ಸಾಧ್ಯವಾದಷ್ಟು ಸೀಟುಗಳಲ್ಲಿ ಒಟ್ಟಿಗೆ” ಸ್ಪರ್ಧಿಸಲಿದೆ ಎಂದು ಮುಂಬೈನಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಮೂರನೇ ಬಾರಿ ಅಧಿಕಾರಕ್ಕೇರುವುದನ್ನು ತಡೆಯಲು ಪ್ರತಿಪಕ್ಷಗಳು ಈಗ ಒಗ್ಗಟ್ಟಾಗಿ ನಿಂತಿವೆ. ಮುಂಬೈನಲ್ಲಿ ನಡೆದ ಎರಡು ದಿನಗಳ ಸಭೆಯ ಕೊನೆಯ ದಿನವಾದ ಇಂದು (ಶುಕ್ರವಾರ) ವಿವಿಧ ಪಕ್ಷಗಳು ವಿವಿಧ ಭಾಷೆಗಳಲ್ಲಿ “ಜುಡೇಗಾ ಭಾರತ್, ಜೀತೇಗಾ ಇಂಡಿಯಾ” ಎಂಬ ವಿಷಯದೊಂದಿಗೆ ಸಂಬಂಧಿತ ಸಂವಹನ ಮತ್ತು ಮಾಧ್ಯಮ ಕಾರ್ಯತಂತ್ರಗಳು ಮತ್ತು ಪ್ರಚಾರಗಳನ್ನು ಸಂಘಟಿಸಲು ನಿರ್ಧರಿಸಿದವು.

ಭಾರತದ ಮೂರನೇ ಸಭೆಯ ನಂತರದ ನಿರ್ಣಯದಲ್ಲಿ (ಮೊದಲ ಸಭೆ ಪಾಟ್ನಾ ಮತ್ತು ಎರಡನೆಯದ್ದು ಬೆಂಗಳೂರಿನಲ್ಲಿ) ಸೀಟು ಹಂಚಿಕೆಯ ಬಗ್ಗೆಯೂ ಉಲ್ಲೇಖಿಸಿವೆ. ಇವುಗಳನ್ನು “ತಕ್ಷಣ ಆರಂಭಿಸಲಾಗುತ್ತದೆ ಮತ್ತು ಬೇಗನ ಮುಕ್ತಾಯಗೊಳಿಸಲಾಗುತ್ತದೆ. ಇದೆಲ್ಲವೂ ಕೊಡು-ಕೊಳ್ಳುವಿಕೆಯ ಸಹಕಾರದ ಮನೋಭಾವದಲ್ಲಿ ನಡೆಯುತ್ತದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ .

ಬಿಜೆಪಿಯನ್ನು ಎದುರಿಸಲು ನಿರ್ಣಾಯಕ ಅಸ್ತ್ರ ಎಂದು ಅದರ ಸದಸ್ಯರಿಂದ ಶ್ಲಾಘಿಸಲ್ಪಟ್ಟ ಮೆಗಾ ವಿರೋಧ ಸಭೆಯು ನಿರ್ಣಯಗಳ ಬಿಡುಗಡೆಯೊಂದಿಗೆ ಮುಕ್ತಾಯಗೊಂಡಿತು. ಈ ನಡುವೆ ಮಾಜಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಸಭೆಗೆ ಪ್ರವೇಶಿಸುವ ಮೂಲಕ ನಾಟಕೀಯ ಸನ್ನಿವೇಶಗಳೂ ನಡೆಯಿತು.

ಮುಂಬೈನಲ್ಲಿ ತನ್ನ ಮೂರನೇ ಸಭೆಯನ್ನು ನಡೆಸುತ್ತಿರುವ ವಿರೋಧ ಪಕ್ಷಗಳ ಮೈತ್ರಿಕೂಟವು 13 ಸದಸ್ಯರನ್ನು ಒಳಗೊಂಡಿರುವ ಸಮನ್ವಯ ಸಮಿತಿಯನ್ನು ಘೋಷಿಸಿತು.

ಮುಂಬೈನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಾಟ್ನಾದಲ್ಲಿ ನಡೆದ ಮೊದಲ ಸಭೆ ಮತ್ತು ಬೆಂಗಳೂರಿನಲ್ಲಿ ನಡೆದ ಎರಡನೇ ಸಭೆ ಯಶಸ್ವಿಯಾಗಿದೆ. ಯಾಕೆಂದರೆ ಪ್ರಧಾನಿ ತಮ್ಮ ನಂತರದ ಭಾಷಣಗಳಲ್ಲಿ ಕೇವಲ ಇಂಡಿಮಾ ಮೇಲೆ ದಾಳಿ ಮಾಡಿಲ್ಲ ಆದರೆ ಅದನ್ನು ಭಯೋತ್ಪಾದಕ ಸಂಘಟನೆ ಮತ್ತು ಗುಲಾಮಗಿರಿಯ ಸಂಕೇತದೊಂದಿಗೆ ಹೋಲಿಸಿದ್ದಾರೆ ಎಂದು ಹೇಳಿದ್ದಾರೆ.

‘ನಾವು 14 ಸದಸ್ಯರ ಸಮನ್ವಯ ಸಮಿತಿಯನ್ನು ರಚಿಸಿದ್ದೇವೆ’

ನಾವು ಎಲ್ಲಾ ಪ್ರಮುಖ ವಿಷಯಗಳನ್ನು ಚರ್ಚಿಸಿದ್ದೇವೆ ಮತ್ತು ಕೆಲವು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಿದ್ದೇವೆ. ವಿಶೇಷವಾಗಿ 14 ಸದಸ್ಯರ ಸಮನ್ವಯ ಸಮಿತಿಯ ರಚನೆಯಾಗಿದೆ. ಇದರೊಂದಿಗೆ ಪ್ರಚಾರ ಸಮಿತಿ, ಸಾಮಾಜಿಕ ಮಾಧ್ಯಮದ ಕಾರ್ಯ ಗುಂಪು, ಮಾಧ್ಯಮದ ಕಾರ್ಯ ಗುಂಪು ಮತ್ತು ಸಂಶೋಧನಾ ಕಾರ್ಯ ಗುಂಪುಗಳನ್ನು ಸಹ ರಚಿಸಲಾಗಿದೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ.

ಮಿತ್ರ-ಪರಿವಾರವಾದಕ್ಕೆ ಅವಕಾಶ ನೀಡುವುದಿಲ್ಲ

ಭ್ರಷ್ಟಾಚಾರದ ವಿರುದ್ಧ ಹೋರಾಡಲು ಭಾರತೀಯ ಪಕ್ಷಗಳು ನಿರ್ಧರಿಸಿವೆ, ನಾವು ‘ಮಿತ್ರ-ಪರಿವಾರವಾದ’ಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಮೋದಿ ಎಂದಿಗೂ ಬಡವರಿಗಾಗಿ ಕೆಲಸ ಮಾಡುವುದಿಲ್ಲ: ಖರ್ಗೆ

ಮೋದಿ ಎಂದಿಗೂ ಬಡವರ ಪರವಾಗಿ ಕೆಲಸ ಮಾಡುವುದಿಲ್ಲ, ಏಕೆಂದರೆ ಅವರ ರಾಜಕೀಯ ಯಾವಾಗಲೂ ಶ್ರೀಮಂತರ ಪರವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಹಣದುಬ್ಬರ ಅಥವಾ ನಿರುದ್ಯೋಗವೇ ಆಗಿರಲಿ.ನಾವು ಎಲ್ಲಾ ಕಡೆ ಹೋಗಿ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇವೆ. ಇಡಿ ಅಥವಾ ಸಿಬಿಐ ಆಗಿರಲಿ ಮೋದಿ ಸರ್ಕಾರದಿಂದ ಎಲ್ಲಡೆ ಸ್ವಾಯತ್ವ ಸಂಸ್ಥೆಗಳು ನಾಶವಾಗಿವೆ. ಸಂಸತ್ತಿನ ವಿಶೇಷ ಅಧಿವೇಶನದ ಕುರಿತು ಮಾತನಾಡಿದ ಖರ್ಗೆ, “ವಿಶೇಷ ಅಧಿವೇಶನಕ್ಕೆ ಕೇಂದ್ರ ಕರೆಯುವ ಮೊದಲು ಯಾವುದೇ ವ್ಯವಹಾರ ಸಲಹಾ ಸಮಿತಿ ಅಥವಾ ವಿರೋಧ ಪಕ್ಷಗಳ ಸಲಹೆಯನ್ನು ಪಡೆದಿಲ್ಲ” ಎಂದು ಹೇಳಿದರು. ಮಣಿಪುರ ಹೊತ್ತಿ ಉರಿಯುತ್ತಿರುವಾಗ, ಕೋವಿಡ್-19 ಬಿಕ್ಕಟ್ಟು, ನೋಟು ಅಮಾನ್ಯೀಕರಣ, ವಲಸೆ ಬಿಕ್ಕಟ್ಟು, ಅಥವಾ ಚೀನಾ ಸಮಸ್ಯೆಯ ಸಂದರ್ಭದಲ್ಲಿ ನೀವು ವಿಶೇಷ ಅಧಿವೇಶನಕ್ಕೆ ಕರೆ ನೀಡಲಿಲ್ಲ, ಈಗ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಅಜೆಂಡಾ ಕೂಡಾ ಬಹಿರಂಗ ಪಡಿಸಿಲ್ಲ ಎಂದು ಖರ್ಗೆ ಹೇಳಿದ್ದಾರೆ.

ಕೇಂದ್ರ ಸರ್ಕಾರ ಪರಾಭವಗೊಳ್ಳಲಿದೆ: ನಿತೀಶ್ ಕುಮಾರ್

ಎಲ್ಲಾ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಕೇಂದ್ರದಲ್ಲಿ ಒಬ್ಬರು ಕೆಲಸ ಮಾಡುತ್ತಾರೆ. ಅವರು ಅಧಿಕಾರ ಕಳೆದುಕೊಳ್ಳುತ್ತಾರೆ. ಮಾಧ್ಯಮವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.” ಅವರು ಇತಿಹಾಸವನ್ನು ಬದಲಾಯಿಸಲು ಬಯಸುತ್ತಾರೆ. ನಾವು (ಇಂಡಿಯಾ) ಹಾಗಾಗಲು ಬಿಡುವುದಿಲ್ಲ. ಸಮಾಜದ ಪ್ರತಿಯೊಬ್ಬರೂ ಉನ್ನತಿ ಹೊಂದುತ್ತಾರೆ. ನಾವು ಒಟ್ಟಾಗಿ ಮುನ್ನಡೆಯುತ್ತೇವೆ ಎಂದಿದ್ದಾರೆ.

INDIA ಮೈತ್ರಿಯ ಪ್ರಚಾರ ಸಮಿತಿಯ ಹೆಸರುಗಳು

ಭಾರತ ಮೈತ್ರಿಕೂಟದ ಪ್ರಚಾರ ಸಮಿತಿ: 1. ಗುರುದೀಪ್ ಸಿಂಗ್ ಸಪ್ಪಲ್, ಕಾಂಗ್ರೆಸ್ 2. ಸಂಜಯ್ ಝಾ, ಜೆಡಿ(ಯು) 3. ಅನಿಲ್ ದೇಸಾಯಿ, ಎಸ್ಎಸ್ 4. ಸಂಜಯ್ ಯಾದವ್, RJD 5. ಪಿಸಿ ಚಾಕೋ, NCP 6. ಚಂಪೈ ಸೊರೆನ್, JMM 7. ಕಿರಣ್ಮೋಯ್ ನಂದಾ, ಎಸ್ಪಿ 8. ಸಂಜಯ್ ಸಿಂಗ್, ಎಎಪಿ 9. ಅರುಣ್ ಕುಮಾರ್, ಸಿಪಿಐ(ಎಂ) 10. ಬಿನೋಯ್ ವಿಶ್ವಂ, ಸಿಪಿಐ 11. ನ್ಯಾಯಮೂರ್ತಿ (ನಿವೃತ್ತ) ಹಸನೈನ್ ಮಸೂದಿ, ಎನ್‌ಸಿ 12. ಶಾಹಿದ್ ಸಿದ್ದಿಕಿ, ಆರ್‌ಎಲ್‌ಡಿ 13. ಎನ್‌ಕೆ ಪ್ರೇಮಚಂದ್ರನ್, ಆರ್‌ಎಸ್‌ಪಿ 14. ಜಿ. ದೇವರಾಜನ್, AIFB 15. ರವಿ ರೈ, CPI(ML) 16. ತಿರುಮಾವಲನ್, VCK 17. ಕೆಎಂ ಖಾದರ್ ಮೊಯ್ದಿನ್, IUML 18. ಜೋಸ್ ಕೆ ಮಾಣಿ, KC(M) 19. ಟಿಎಂಸಿ (ನಂತರ ಹೆಸರಿಸಲಿದೆ).

ಇದನ್ನೂ ಓದಿ: ವಿಪಕ್ಷಗಳ ಇಂಡಿಯಾ ಮೈತ್ರಿಕೂಟದಲ್ಲಿ ಸಂಚಾಲಕರಿಲ್ಲ, 13 ಸದಸ್ಯರ ಸಮನ್ವಯ ಸಮಿತಿ ರಚನೆ

ಸಾಮಾಜಿಕ ಮಾಧ್ಯಮದ ಜವಾಬ್ದಾರಿ

ಸಾಮಾಜಿಕ ಮಾಧ್ಯಮಕ್ಕಾಗಿ ಇಂಡಿಯಾ ಮೈತ್ರಿಕೂಟದ ವರ್ಕಿಂಗ್ ಗ್ರೂಪ್: 1. ಸುಪ್ರಿಯಾ ಶ್ರೀನಾಥೆ, INC 2. ಸುಮಿತ್ ಶರ್ಮಾ, RJD 3. ಆಶಿಶ್ ಯಾದವ್, SP 4. ರಾಜೀವ್ ನಿಗಮ್, SP 5. ರಾಘವ್ ಚಡ್ಡಾ, AAP 6. ಅವಿಂದಾನಿ, JMM 7. ಇಲ್ತಿಜಾ ಮೆಹಬೂಬ, PDP8 . ಪ್ರಾಂಜಲ್, ಸಿಪಿಎಂ 9. ಭಾಲಚಂದ್ರ ಕಾಂಗೋ, ಸಿಪಿಐ 10. ಇಫ್ರಾ ಜಾನ್, ಎನ್‌ಸಿ 11. ವಿ ಅರುಣ್ ಕುಮಾರ್, ಸಿಪಿಐ(ಎಂಎಲ್) 12. ಟಿಎಂಸಿ (ನಂತರ ಹೆಸರಿಸಲಿದೆ)

ಈ ಮೈತ್ರಿಯು ಕೇವಲ 28 ಪಕ್ಷಗಳ ಮೈತ್ರಿಯಲ್ಲ: ಅರವಿಂದ ಕೇಜ್ರಿವಾಲ್

ಮುಂಬೈನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್, “ಈ ಇಂಡಿಯಾ ಮೈತ್ರಿಯು ಕೇವಲ 28 ಪಕ್ಷಗಳ ಮೈತ್ರಿಯಲ್ಲ, ಆದರೆ ಎಲ್ಲಾ ದೇಶವಾಸಿಗಳ ಮೈತ್ರಿಯಾಗಿದೆ. ಇದು ಮೋದಿ ಸರ್ಕಾರವು ಸ್ವತಂತ್ರ ಭಾರತದಲ್ಲಿ ಅತ್ಯಂತ ಭ್ರಷ್ಟವಾಗಿದೆ ಎಂಬ ದುಃಖದ ಜ್ಞಾಪನೆಯಾಗಿದೆ ಎಂದಿದ್ದಾರೆ.

ನಾನು ಮೂರು ಸಭೆಗಳಲ್ಲಿ ಭಾಗವಹಿಸಿದ್ದೇನೆ. ಇದೆಲ್ಲವೂ ಪ್ರೀತಿಯಿಂದ ಬಂದಿದೆ, ಯಾವುದೇ ಜಗಳಗಳಿಲ್ಲ. ಎಲ್ಲಾ ಜನರು ಹುದ್ದೆಯ ದುರಾಸೆ ಬಿಟ್ಟು ಇಲ್ಲಿಗೆ ಬಂದಿದ್ದಾರೆ. ಮುಂಬೈನಲ್ಲಿ ನಡೆದ ಸಭೆಯಲ್ಲಿ ಎಲ್ಲರೂ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಈ ಭ್ರಷ್ಟ ಸರ್ಕಾರವನ್ನು ನಾವೆಲ್ಲರೂ ಸೋಲಿಸುತ್ತೇವೆ ಎಂಬ ಭರವಸೆ ನನಗಿದೆ ಎಂದು ಹೇಳಿದ್ದಾರೆ.

ನಾವೆಲ್ಲರೂ ಒಟ್ಟಿಗೆ ಇರಲಿಲ್ಲ, ಅದರ ಪರಿಣಾಮ ದೇಶ ಅನುಭವಿಸಿತು: ಆರ್‌ಜೆಡಿ ನಾಯಕ ಲಾಲು ಯಾದವ್

ನಾವೆಲ್ಲರೂ ಒಟ್ಟಿಗೆ ಇರಲಿಲ್ಲ, ದೇಶ ಅದರ ಪರಿಣಾಮ ಅನುಭವಿಸಿತು. ಮೋದಿ ಅಧಿಕಾರಕ್ಕೆ ಬಂದರು ಭಾರತದಲ್ಲಿ, ಅಲ್ಪಸಂಖ್ಯಾತರು ಸುರಕ್ಷಿತವಾಗಿಲ್ಲ, ಹಣದುಬ್ಬರವಿದೆ ಮತ್ತು ತರಕಾರಿ ಬೆಲೆಗಳು ಗಗನಕ್ಕೇರಿವೆ ಎಂದು ಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಹೇಳಿದ್ದಾರೆ. ಸೀಟು ಹಂಚಿಕೆ ಈಗ ಆರಂಭವಾಗಲಿದೆ. ಯಾವುದೇ ಅಡೆತಡೆಗಳಿಲ್ಲ ಮತ್ತು ನಾವು ಯಶಸ್ವಿಯಾಗುತ್ತೇವೆ. ಸಣ್ಣಪುಟ್ಟ ಸಮಸ್ಯೆ ಇದ್ದರೂ ಇಂಡಿಯಾವನ್ನು ಗೆಲ್ಲಿಸಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಭಾರತೀಯ ಗಣರಾಜ್ಯದ ಪಾತ್ರವನ್ನು ಉಳಿಸಲು ನಾವು ಇಲ್ಲಿದ್ದೇವೆ: ಸೀತಾರಾಮ್ ಯೆಚೂರಿ

ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಭಾರತೀಯ ಗಣರಾಜ್ಯದ ಪಾತ್ರವನ್ನು ಉಳಿಸಲು ನಾವು ಇಲ್ಲಿದ್ದೇವೆ. ಸಂವಿಧಾನವನ್ನು ಉಳಿಸಲು ನಾವು ಇಲ್ಲಿದ್ದೇವೆ. ಈ ಗುಂಪು ಹೆಚ್ಚು ಕ್ರೋಢೀಕರಿಸಲ್ಪಟ್ಟಂತೆ ಅನೇಕ ವಿಷಯಗಳು ನಡೆಯುವುದನ್ನು ನೀವು ನೋಡುತ್ತೀರಿ. ನಾವು ಮೊದಲು ಬೆಂಗಳೂರಿನಲ್ಲಿ ಎನ್‌ಡಿಎ ಪುನರುತ್ಥಾನವಾಯಿತು, ಎರಡನೇ ಬಾರಿಗೆ ಗ್ಯಾಸ್ ಬೆಲೆ ಇಳಿಸಲಾಯಿತು. ನಮ್ಮ ಮೂರನೇ ಸಭೆಗಾಗಿ ನಾವು ಭೇಟಿಯಾದೆವು, ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲಾಯಿತು. ಎಲ್ಲಾ ಜಾತ್ಯತೀತ ಪಕ್ಷಗಳು ಒಗ್ಗೂಡುವುದು ಬಿಜೆಪಿ ಮತ್ತು ಮೋದಿ ಸರ್ಕಾರಕ್ಕೆ ಕಸಿವಿಸಿಯುಂಟು ಮಾಡುತ್ತದೆ ಎಂದು ಯೆಚೂರಿ ಹೇಳಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?

“ಈ ಸಭೆಯಲ್ಲಿ ಈ ನಿಟ್ಟಿನಲ್ಲಿ ಎರಡು ದೊಡ್ಡ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಮನ್ವಯ ಸಮಿತಿ ಮತ್ತು ಎರಡನೆಯದು ಸೀಟು ಹಂಚಿಕೆ ಚರ್ಚೆಯನ್ನು ಚುರುಕುಗೊಳಿಸುವುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಪ್ರಧಾನಿ ಮತ್ತು ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರ. ಇದೇ ಮೊದಲ ಬಾರಿ ಇಂಡಿಯಾ ಒಕ್ಕೂಟವು ಒಗ್ಗಟ್ಟು ಪ್ರದರ್ಶಿಸುತ್ತದೆ ಮತ್ತು ಸಾಬೀತುಪಡಿಸುತ್ತದೆ. ನಾವು ರಾಷ್ಟ್ರದ ಪ್ರಗತಿಯಲ್ಲಿ ಬಡವರು, ರೈತರನ್ನು ಒಳಗೊಳ್ಳುವ ಸ್ಪಷ್ಟವಾದ ಆಲೋಚನೆಗಳನ್ನು ಒಟ್ಟುಗೂಡಿಸಲಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ.

ಮೈತ್ರಿಯಲ್ಲಿನ ನಿಜವಾದ ಕೆಲಸವೆಂದರೆ ಮೈತ್ರಿಕೂಟದ ನಾಯಕರ ನಡುವೆ ಬೆಸೆದುಕೊಂಡಿರುವ ಸಂಬಂಧ. ನಾಯಕರ ಬಾಂಧವ್ಯ ವೃದ್ಧಿಗೆ ಸಭೆ ಸಹಕಾರಿಯಾಗಿದೆ. ನಾವು ವಿಷಯಗಳನ್ನು ಸಮೀಪಿಸುತ್ತಿರುವ ರೀತಿಯಲ್ಲಿ ಎಲ್ಲಾ ನಾಯಕರಲ್ಲಿ ಫೆಕ್ಸಿಬಿಲಿಟಿ ಇದೆ ಎಂದು ನಾನು ನೋಡುತ್ತೇನೆ.ಸಹಜವಾಗಿ, ವ್ಯತ್ಯಾಸಗಳಿವೆ. ಆದರೆ, ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ರೀತಿಯಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ.

“ನಾನು ಲಡಾಖ್‌ನಲ್ಲಿ ಒಂದು ವಾರ ಕಳೆದೆ. ನಾನು ಚೀನೀಯರು ಇರುವ ಪಕ್ಕದಲ್ಲೇ ಇರುವ ಪಾಂಗಾಂಗ್ ಸರೋವರಕ್ಕೆ ಹೋದೆ. ನಾನು ಲಡಾಖ್‌ನ ಜನರೊಂದಿಗೆ, ವಿಶೇಷವಾಗಿ ಕುರಿಗಾಹಿಗಳು, ಮುಖಂಡರು ಮತ್ತು ಸಾಮಾನ್ಯ ಜನರೊಂದಿಗೆ ವಿವರವಾದ ಚರ್ಚೆ ನಡೆಸಿದೆ. ಚೀನಿಯರು ಭಾರತದ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ನನಗೆ ಸ್ಪಷ್ಟವಾಗಿ ಹೇಳಿದರು, ಚೀನಾದವರು ಭಾರತದ ಭೂಮಿಯನ್ನು ತೆಗೆದುಕೊಂಡಿಲ್ಲ ಎಂದು ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ. ಲಡಾಖ್‌ನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಭಾರತ ಸರ್ಕಾರದಿಂದ ದ್ರೋಹ ಮಾಡಲಾಗಿದೆ ಎಂದು ತಿಳಿದಿದೆ. ಸರ್ಕಾರ ಮತ್ತು ಚೀನಿಯರ ನಡುವೆ ಒಪ್ಪಂದ ಏರ್ಪಟ್ಟಿರುವು ಸ್ಪಷ್ಟವಾಗಿದೆ, ಗಡಿಯಲ್ಲಿ ಸ್ಪಷ್ಟ ಬದಲಾವಣೆಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನಾವು ತಪ್ಪು ದಾರಿ ಹಿಡಿಯುವುದಿಲ್ಲ: ಶರದ್ ಪವಾರ್

ಸಭೆಯಲ್ಲಿ ಮಾತನಾಡಿದ ಎನ್‌ಸಿಪಿ ನಾಯಕ ಶರದ್ ಪವಾರ್, ನಾವು ನಿಲ್ಲುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ನಾವು ತಪ್ಪು ದಾರಿ ಹಿಡಿಯುವುದಿಲ್ಲ. ದಾರಿ ತಪ್ಪಿದವರನ್ನು ಸರಿ ದಾರಿಗೆ ತರಲು ಪ್ರಯತ್ನಿಸುತ್ತೇವೆ, ಬರದಿದ್ದರೆ ಹೋರಾಟ ಮಾಡುತ್ತೇವೆ. ಈ ಉದ್ದೇಶಕ್ಕಾಗಿ, ಎಲ್ಲಾ ಭಾರತೀಯ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತವೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Fri, 1 September 23

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ