AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗಿ ಮೋಸ ಹೋದ ಮಗಳು; ಗಂಡನ ಮನೆಯಿಂದ ಬ್ಯಾಂಡ್ ವಾದ್ಯ ಮೆರವಣಿಗೆಯಲ್ಲಿ ತವರಿಗೆ ಕರೆ ತಂದ ಅಪ್ಪ

ಮದುವೆಯಾದ ಕೆಲವೇ ದಿನಗಳಲ್ಲಿ ಸಾಕ್ಷಿಗೆ ತನ್ನ ಪತಿಗೆ ಈಗಾಗಲೇ ಮದುವೆಯಾಗಿದೆ ಎಂದು ತಿಳಿದುಬಂದಿದೆ. ಪ್ರೇಮ್ ಗುಪ್ತಾ ತನ್ನ ಮಗಳು ಮೋಸ ಹೋಗಿದ್ದಾಳೆಂದು ತಿಳಿದಾಗ, ಯಾವುದೇ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಅವಳನ್ನು ಮೊದಲು ಮನೆಗೆ ಕರೆತರಲು ನಿರ್ಧರಿಸಿದರು. ಪ್ರೇಮ್ ಗುಪ್ತಾ ಪಟಾಕಿ ಮತ್ತು ಸಂಗೀತ ವಾದ್ಯಗಳೊಂದಿಗೆ ತನ್ನ ಮಗಳ ಮನೆಗೆ ಹೋಗಿ ಆಕೆಯನ್ನು ಅಲ್ಲಿಂದ ಕರೆ ತಂದಿದ್ದಾರೆ.

ಮದುವೆಯಾಗಿ ಮೋಸ ಹೋದ ಮಗಳು; ಗಂಡನ ಮನೆಯಿಂದ ಬ್ಯಾಂಡ್ ವಾದ್ಯ ಮೆರವಣಿಗೆಯಲ್ಲಿ ತವರಿಗೆ ಕರೆ ತಂದ ಅಪ್ಪ
ಪ್ರೇಮ್ ಗುಪ್ತಾ-ಸಾಕ್ಷಿ
ರಶ್ಮಿ ಕಲ್ಲಕಟ್ಟ
|

Updated on:Oct 18, 2023 | 8:34 PM

Share

ರಾಂಚಿ ಅಕ್ಚೋಬರ್ 18: ರಾಂಚಿಯ (Ranchi) ನಿವಾಸಿ ಪ್ರೇಮ್ ಗುಪ್ತಾ ಅವರು ತಮ್ಮ ಮಗಳು ಸಾಕ್ಷಿಯ ವಿವಾಹವನ್ನು (Marriage) ಅದ್ದೂರಿಯಾಗಿಯೇ ಮಾಡಿದ್ದರು. ಸಾಕ್ಷಿಗೆ ಗಂಡನ ಮನೆಗೆ ಹೋದಾಗಲೇ ಗೊತ್ತಾಗಿದ್ದು ತಾನು ಮೋಸ ಹೋಗಿದ್ದೇನೆ ಎಂಬುದು. ವಿಷಯ ತವರಿಗೆ ತಿಳಿಸಿದಾಗ ಅಪ್ಪ, ಕಾನೂನು ಕ್ರಮ ಕೈಗೊಳ್ಳುವ ಮುನ್ನ ಮಗಳನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಮಾಡಿದ್ದಾರೆ. ಸಾಕ್ಷಿ ಇರುವಲ್ಲಿಗೆ ಹೋಗಿ, ಆಕೆಯ ಗಂಡನ ಮನೆಯಿಂದ ಮಗಳನ್ನು ಬ್ಯಾಂಡ್ ವಾದ್ಯ ಮೆರವಣಿಗೆಯಲ್ಲಿ ತವರಿಗೆ ಕರೆತಂದಿದ್ದಾರೆ ಈ ಅಪ್ಪ.

ಮದುವೆಯಾದ ಕೆಲವೇ ದಿನಗಳಲ್ಲಿ ಸಾಕ್ಷಿಗೆ ತನ್ನ ಪತಿಗೆ ಈಗಾಗಲೇ ಮದುವೆಯಾಗಿದೆ ಎಂದು ತಿಳಿದುಬಂದಿದೆ. ಪ್ರೇಮ್ ಗುಪ್ತಾ ತನ್ನ ಮಗಳು ಮೋಸ ಹೋಗಿದ್ದಾಳೆಂದು ತಿಳಿದಾಗ, ಯಾವುದೇ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಅವಳನ್ನು ಮೊದಲು ಮನೆಗೆ ಕರೆತರಲು ನಿರ್ಧರಿಸಿದರು. ಪ್ರೇಮ್ ಗುಪ್ತಾ ಪಟಾಕಿ ಮತ್ತು ಸಂಗೀತ ವಾದ್ಯಗಳೊಂದಿಗೆ ತನ್ನ ಮಗಳ ಮನೆಗೆ ಹೋಗಿ ಆಕೆಯನ್ನು ಅಲ್ಲಿಂದ ಕರೆ ತಂದಿದ್ದಾರೆ.

ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಕ್ಷಿ, ತನ್ನ ತಂದೆ ಪ್ರೇಮ್ ಜೊತೆಗೆ ಅವಳು ತನ್ನ ಅತ್ತೆಯ ಮನೆಯಿಂದ  ಹೊರಬರುವಾಗ ನಗುತ್ತಿರುವುದನ್ನು ಕಾಣಬಹುದು.

ಪ್ರೇಮ್ ಗುಪ್ತಾ ಅವರಂತಹ ತಂದೆಯನ್ನು ಹೊಂದಲು ನಾನು ಅದೃಷ್ಟಶಾಲಿಯಾಗಿದ್ದೇನೆ ಎಂದು ಎಕ್ಸ್‌ನಲ್ಲಿ ಸಾಕ್ಷಿ ಹೇಳಿದ್ದಾರೆ.

“ನಿಮ್ಮ ಮಗಳ ಮದುವೆಯನ್ನು ಬಹಳ ಆಡಂಬರ ಮತ್ತು ಸಂಭ್ರಮದಿಂದ ಮಾಡಲಾಗಿದೆ. ಆದ್ದರಿಂದ, ಸಂಗಾತಿ ಮತ್ತು ಕುಟುಂಬವು ತಪ್ಪು ಅಥವಾ ಮೋಸಗೊಳಿಸಿದರೆ, ನಿಮ್ಮ ಮಗಳನ್ನು ನಿಮ್ಮ ಮನೆಗೆ ಮರಳಿ ಕರೆತರಬೇಕು.ಆಕೆ ಗೌರವದಿಂದ ಗಂಡನ ಮನೆ ತೊರೆದಳು, ಹೆಣ್ಣುಮಕ್ಕಳು ಬಹಳ ಅಮೂಲ್ಯ, ಈ ಸಂದೇಶ ಅನೇಕರ ಆಲೋಚನೆಯಲ್ಲಿ ಬದಲಾವಣೆಯನ್ನು ತರಬಹುದು ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:33 pm, Wed, 18 October 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!