AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ಮೀಸಲಾತಿ ಮಸೂದೆಯ ಕುರಿತು ಮಾತಾನಾಡುವಾಗ ಬಿಜೆಪಿಗೆ ಕಬೀರ್ ‘ದ್ವಿಪದಿ’ ನೆನಪಿಸಿದ ಖರ್ಗೆ

'ಕಲ್ ಕರೇ ಸೋ ಆಜ್ ಕರ್, ಆಜ್ ಕರೇ ಸೋ ಅಬ್...' (ನಾಳೆ ಏನು ಮಾಡಬೇಕೋ ಅದನ್ನು ಇಂದೇ ಮಾಡು. ಇಂದು ಏನು ಮಾಡಬೇಕೋ ಅದನ್ನು ಈಗಲೇ ಮಾಡು.) ಎಂಬ ಕಬೀರದಾಸ್ ದ್ವಿಪದಿಯನ್ನು ಹೇಳಿದಾಗ ಸದನದಲ್ಲಿ ಗದ್ದಲವಾಯಿತು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಥರ್ ಅವರು ಸದಸ್ಯರೆಲ್ಲರೂ ತಮ್ಮ ತಮ್ಮ ಆಸನದಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಧನ್ಖರ್ ಅವರು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಪ್ರತಿಕ್ರಿಯಿಸಲು ಆಹ್ವಾನಿಸಿದರು.

ಮಹಿಳಾ ಮೀಸಲಾತಿ ಮಸೂದೆಯ ಕುರಿತು ಮಾತಾನಾಡುವಾಗ ಬಿಜೆಪಿಗೆ ಕಬೀರ್ 'ದ್ವಿಪದಿ' ನೆನಪಿಸಿದ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: Sep 21, 2023 | 5:09 PM

Share

ದೆಹಲಿ ಸೆಪ್ಟೆಂಬರ್ 21: ಮಹಿಳಾ ಮೀಸಲಾತಿ ಮಸೂದೆ (Women’s Reservation Bill) ಜಾರಿ ವಿಳಂಬದ ಬಗ್ಗೆ ಬಿಜೆಪಿ (BJP) ವಿರುದ್ಧ ರಾಜ್ಯಸಭೆಯಲ್ಲಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಕಬೀರ್ ಅವರ ‘ಕಲ್ ಕರೇ ಸೋ ಆಜ್ ಕರ್’ ದ್ವಿಪದಿಯನ್ನು ಉಲ್ಲೇಖಿಸಿದ್ದಾರೆ. 2024 ರ ಚುನಾವಣೆಯ ಸಮಯದಲ್ಲಿ ಮಹಿಳೆಯರಿಗೆ ಕೆಳಮನೆ ಮತ್ತು ರಾಜ್ಯ ಶಾಸಕಾಂಗಗಳಲ್ಲಿ 33 ಪ್ರತಿಶತದಷ್ಟು ಸ್ಥಾನಗಳನ್ನು ಮೀಸಲಿಡಲು ಮತ್ತು ಮಸೂದೆಯನ್ನು ತಿದ್ದುಪಡಿ ಮಾಡಲು ಸರ್ಕಾರಕ್ಕೆ ಖರ್ಗೆ ಕರೆ ನೀಡಿದರು.  ಪ್ರಸ್ತುತ ಮಸೂದೆಗೆ ಜನಗಣತಿ ಮತ್ತು ಡಿಲಿಮಿಟೇಶನ್ ಅಗತ್ಯವಿದೆ. ಹಾಗಾಗಿ 2029 ಕ್ಕಿಂತ ಮೊದಲು ಜಾರಿಯಾಗುವುದಿಲ್ಲ.

“ಈ ಮಸೂದೆಯ ತಿದ್ದುಪಡಿ ಕಷ್ಟವೇನಲ್ಲ… ನೀವು (ಸರ್ಕಾರ) ಇದನ್ನು ಈಗ ಮಾಡಬಹುದು ಆದರೆ 2031ರವರೆಗೆ ಮುಂದೂಡಿದ್ದೀರಿ. ಇದರ ಅರ್ಥವೇನು?” “ಪಂಚಾಯತ್ ಚುನಾವಣೆ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ (ಮಹಿಳೆಯರಿಗೆ) ಮೀಸಲಾತಿ ಇರುವಾಗ ಇದು ಯಾಕೆ ಇಲ್ಲ ಎಂದು ಪ್ರಶ್ನಿಸಿದ್ದಾರೆ.

‘ಕಲ್ ಕರೇ ಸೋ ಆಜ್ ಕರ್, ಆಜ್ ಕರೇ ಸೋ ಅಬ್…’ (ನಾಳೆ ಏನು ಮಾಡಬೇಕೋ ಅದನ್ನು ಇಂದೇ ಮಾಡು. ಇಂದು ಏನು ಮಾಡಬೇಕೋ ಅದನ್ನು ಈಗಲೇ ಮಾಡು.) ಎಂಬ ಕಬೀರದಾಸ್ ದ್ವಿಪದಿಯನ್ನು ಹೇಳಿದಾಗ ಸದನದಲ್ಲಿ ಗದ್ದಲವಾಯಿತು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಥರ್ ಅವರು ಸದಸ್ಯರೆಲ್ಲರೂ ತಮ್ಮ ತಮ್ಮ ಆಸನದಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಧನ್ಖರ್ ಅವರು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಪ್ರತಿಕ್ರಿಯಿಸಲು ಆಹ್ವಾನಿಸಿದರು.

ಖರ್ಗೆ ಅವರು ಮೀಸಲಾತಿ ಮಸೂದೆಗಾಗಿ ತಿದ್ದುಪಡಿ ಮಾಡಲು ಮತ್ತು ಅದರ ತಕ್ಷಣದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವನ್ನು ಒತ್ತಾಯಿಸಿದರು. ಇದಕ್ಕಾಗಿಯೇ ನೀವು ಇದನ್ನು ಈಗಲೇ ಮಾಡಬೇಕು. ಇಂದೇ ಮಾಡಿ, ನಾವು ಸಿದ್ಧರಿದ್ದೇವೆ. ಇದು ಕಾನೂನುಬಾಹಿರವಲ್ಲ ಎಂದು ಖರ್ಗೆ ಹೇಳಿದ್ದಾರೆ. ಗೌರವಾನ್ವಿತ ಸದಸ್ಯರೇ… ನಾವು ಮೇಲ್ಮನೆ… ಹಿರಿಯರ ಮನೆ.. ಎಂದ ಅವರು, ನಂತರ ಬಿಜೆಪಿ ಸಂಸದರಿಗೆ ಮಾತನಾಡಲು ಅವಕಾಶ ನೀಡಿದರು.

ನಾನು ಒಂದು ವಿಷಯವನ್ನು ಸ್ಪಷ್ಟಪಡಿಸಬಯಸುತ್ತೇನೆ. ಬಿಜೆಪಿಯ ಉದ್ದೇಶ (ಮಸೂದೆಯನ್ನು ವಿಳಂಬವಾಗಿ ಜಾರಿಗೊಳಿಸುವ ಬಗ್ಗೆ)… ಅಂಕ ಗಳಿಸುವುದು ಅಥವಾ ರಾಜಕೀಯ ಲಾಭ ಪಡೆಯುವುದು ಅಲ್ಲ. ನಾವು ಮಹಿಳೆಯರಿಗಾಗಿ ಈ ಮಸೂದೆಯನ್ನು ಜಾರಿಗೆ ತರಲು ಬಯಸುತ್ತೇವೆ. ಆದರೆ ನಾವು ಅದನ್ನು ಸರಿಯಾದ ರೀತಿಯಲ್ಲಿ ಮಾಡಲು ಬಯಸುತ್ತೇವೆ ಸಂವಿಧಾನವನ್ನು ಅನುಸರಿಸುವ ಮೂಲ ಎಂದು ನಡ್ಡಾ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಮೋದಿ ಇದ್ದರೆ ಎಲ್ಲವೂ ಸಾಧ್ಯ: ಮಹಿಳಾ ಮೀಸಲಾತಿ ಮಸೂದೆಯನ್ನು ಕ್ರಾಂತಿಕಾರಿ ಮಸೂದೆ ಎಂದು ಬಣ್ಣಿಸಿದ ಸಚಿವ ಕಿಶನ್ ರೆಡ್ಡಿ

ಲೋಕಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ವಾಗ್ದಾಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “ಡಿಲಿಮಿಟೇಶನ್ ಆಯೋಗವು ದೇಶದಲ್ಲಿ ಚುನಾವಣಾ ಪ್ರಕ್ರಿಯೆಗೆ ಪ್ರಮುಖ ಸಂಸ್ಥೆಯಾಗಿದೆ. ನಾವು ಮೂರನೇ ಒಂದು ಸ್ಥಾನವನ್ನು ಕಾಯ್ದಿರಿಸುತ್ತಿದ್ದರೆ ಅದನ್ನು ಯಾರು ಮಾಡುತ್ತಾರೆ? ನಾವು ಅದನ್ನು ಮಾಡುತ್ತೇವೆ, ನೀವು (ವಿಪಕ್ಷಗಳು) ಅದನ್ನು ಪ್ರಶ್ನಿಸುತ್ತೀರಿ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್