AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋ ಚಾಲಕನ ಖಾತೆಗೆ ತಪ್ಪಾಗಿ 9,000 ಕೋಟಿ ರೂ. ಹಾಕಿದ ಬ್ಯಾಂಕ್, ಮುಂದೇನಾಯ್ತು?

ತಮಿಳುನಾಡಿನ ಪಳನಿಯ ನೈಕ್ಕರಪಟ್ಟಿ ಮೂಲದ ರಾಜ್‌ಕುಮಾರ್ ಎಂಬ ಆಟೋ ಚಾಲಕನ ಖಾತೆಗೆ ಬ್ಯಾಂಕ್​​ನಿಂದ 9,000 ಕೋಟಿ ರೂ. ಬಂದಿದೆ. ಹಣ ಕ್ರೆಡಿಟ್​​ ಆಗಿರುವ ಬಗ್ಗೆ ಆತನ ಫೋನ್​​ಗೆ ಎಸ್‌ಎಂಎಸ್ ಬಂದಿದೆ. ಮೊದಲು ಈ ಸಂದೇಶವನ್ನು ಫೇಕ್​​​ಎಂದುಕೊಂಡಿದ್ದರು, ಆದರೆ ಬ್ಯಾಂಕ್​​ ಖಾತೆಯನ್ನು ಪರಿಶೀಲಿಸಿದಾಗ ಗಾಬರಿಯಾಗಿದ್ದಾರೆ.

ಆಟೋ ಚಾಲಕನ ಖಾತೆಗೆ ತಪ್ಪಾಗಿ 9,000 ಕೋಟಿ ರೂ. ಹಾಕಿದ ಬ್ಯಾಂಕ್, ಮುಂದೇನಾಯ್ತು?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Sep 21, 2023 | 3:46 PM

Share

ಚೆನ್ನೈ, ಸೆ.21: ಡಿಜಿಟಲ್.. ಡಿಜಿಟಲ್​​ ಎಂದು ಹೆಚ್ಚಾಗಿ ಅದಕ್ಕೆ ಒಗ್ಗಿಕೊಂಡರೆ ಇಂತಹ ಘಟನೆಗಳು ಆಗುವುದು ಖಂಡಿತ. ಬ್ಯಾಂಕ್​​(Bank) ಎಡವಟ್ಟಿನಿಂದ ವ್ಯಕ್ತಿಯೊಬ್ಬರ ಖಾತೆಗೆ 9,000 ಕೋಟಿ ರೂ. ತಪ್ಪಾಗಿ ಜಮೆಯಾಗಿದೆ. ತಮಿಳುನಾಡಿನ ಪಳನಿಯ ನೈಕ್ಕರಪಟ್ಟಿ ಮೂಲದ ರಾಜ್‌ಕುಮಾರ್ ಎಂಬ ಆಟೋ ಚಾಲಕನ ಖಾತೆಗೆ ಬ್ಯಾಂಕ್​​ನಿಂದ 9,000 ಕೋಟಿ ರೂ. ಬಂದಿದೆ. ಹಣ ಕ್ರೆಡಿಟ್​​ ಆಗಿರುವ ಬಗ್ಗೆ ಆತನ ಫೋನ್​​ಗೆ ಎಸ್‌ಎಂಎಸ್ ಬಂದಿದೆ. ಮೊದಲು ಈ ಸಂದೇಶವನ್ನು ಫೇಕ್​​​ಎಂದುಕೊಂಡಿದ್ದರು, ಆದರೆ ಬ್ಯಾಂಕ್​​ ಖಾತೆಯನ್ನು ಪರಿಶೀಲಿಸಿದಾಗ ಗಾಬರಿಯಾಗಿದ್ದಾರೆ.

ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್​​ನಿಂದ ಆಟೋ ಚಾಲಕನ ಖಾತೆಗೆ 9,000 ಕೋಟಿ ರೂಪಾಯಿ ಜಮಾ ಮಾಡಿರುವ ಸಂದೇಶವನ್ನು ಕಳುಹಿಸಿದ್ದಾರೆ. ಈ ಹಣ ಬರುವ ಮೊದಲು ಆತನ ಖಾತೆಯಲ್ಲಿ 105 ರೂ. ಮಾತ್ರ ಇತ್ತು ಎಂದು ಹೇಳಲಾಗಿದೆ.

ಇದನ್ನೂ ಓದಿ: ಬೀದಿಪಾಲಾಗಿದ್ದ 81 ವರ್ಷದ ಬರ್ಮಾದ ಮರ್ಲಿನ್​ ಚೆನ್ನೈನಲ್ಲಿ ಮತ್ತೀಗ ಇಂಗ್ಲಿಷ್​ ಟೀಚರ್

9,000 ಕೋಟಿ ರೂಪಾಯಿ ಜಮಾಯಾದ 30 ನಿಮಿಷದಲ್ಲಿ ಮತ್ತೆ ಆ ಹಣವನ್ನು ಹಿಂಪಡೆದಿದ್ದಾರೆ. ಆದರೆ ಆಟೋ ಚಾಲಕ 9,000 ಕೋಟಿಯಲ್ಲಿ 21 ಸಾವಿರ ರೂ.ವನ್ನು ತನ್ನ ಸ್ನೇಹಿತನಿಗೆ ಕಳುಹಿಸಿದ್ದಾರೆ. ಮರುದಿನ ಬೆಳಿಗ್ಗೆ ಬ್ಯಾಂಕ್ ಅಧಿಕಾರಿಗಳು ಬಂದು ತಪ್ಪಾಗಿ ಬಂದಿರುವ ಹಣದ ಬಗ್ಗೆ ತಿಳಿಸಿದ್ದಾರೆ. ಖರ್ಚು ಮಾಡಿದ ಹಣವನ್ನು ಹಿಂಪಡೆಯದಂತೆ ರಾಜ್‌ಕುಮಾರ್‌ ಮನವಿ ಮಾಡಿದ್ದಾರೆ. ಬಳಿಕ ಎರಡು ಕಡೆ ರಾಜಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ