AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Year Ender 2024: ಭಾರತದಲ್ಲಿ ಈ ವರ್ಷ ಸಂಭವಿಸಿದ ರೈಲು ಅಪಘಾತಗಳ ಪಟ್ಟಿ

ಪ್ರತಿ ವರ್ಷವೂ ನಾವು ರಸ್ತೆ ಅಪಘಾತಗಳು, ಭೀಕರ ರೈಲು ಅಪಘಾತಗಳು ಸಂಭವಿಸುವಂತಹ, ಅಪಘಾತದಲ್ಲಿ ಮುಗ್ಧ ಜನರು ಪ್ರಾಣ ಕಳೆದುಕೊಳ್ಳುವಂತಹ ಕಹಿ ಸುದ್ದಿಗಳ ಬಗ್ಗೆ ಕೇಳುತ್ತಿರುತ್ತೇವೆ. ಈ ವರ್ಷವೂ ಹಳಿ ತಪ್ಪಿಸುವುದರಿಂದ ಹಿಡಿದು ಎಕ್ಸ್‌ಪ್ರೆಸ್‌ ರೈಲಿಗೆ ಗೂಡ್ಸ್‌ ರೈಲು ಡಿಕ್ಕಿಯಾಗಿ ಆಕ್ಸಿಡೆಂಟ್‌ ಆದಂತಹ ಹಲವಾರು ರೈಲು ಅಪಘಾತಗಳು ಸಂಭವಿಸಿವೆ. ಮತ್ತು ಇದರಿಂದ ಹಲವು ಸಾವು ನೋವುಗಳು ಕೂಡಾ ಸಂಭವಿಸಿವೆ. ಭಾರತದಲ್ಲಿ ಈ ವರ್ಷ ಸಂಭವಿಸಿದಂತಹ ರೈಲು ಅಪಘಾತಗಳ ಪಟ್ಟಿಯನ್ನು ನೋಡೋಣ.

Year Ender 2024: ಭಾರತದಲ್ಲಿ ಈ ವರ್ಷ ಸಂಭವಿಸಿದ ರೈಲು ಅಪಘಾತಗಳ ಪಟ್ಟಿ
Train Accidents in India
ಮಾಲಾಶ್ರೀ ಅಂಚನ್​
| Edited By: |

Updated on:Dec 12, 2024 | 6:32 PM

Share

ಸಿಹಿ ವಿಷಯಗಳ ಜೊತೆ ಜೊತೆಗೆ ಒಂದಷ್ಟು ಕಹಿ ವಿಷಯಗಳ ಬಗ್ಗೆಯೂ ನಾವು ಪ್ರತಿ ವರ್ಷ ಕೇಳುತ್ತಿರುತ್ತೇವೆ. ಹಾಗೆಯೇ ಈ ವರ್ಷ ಕೂಡಾ ಒಳ್ಳೊಳ್ಳೆಯ ವಿಷಯಗಳ ಜೊತೆ ಜೊತೆಗೆ ರಸ್ತೆ ಅಪಘಾತ ರೈಲು ಅಪಘಾತಗಳು, ಪ್ರಾಕೃತಿಕ ವಿಕೋಪಗಳಂತಹ ಕೆಟ್ಟ ಘಟನೆಗಳು ಕೂಡಾ ನಡೆದಿವೆ. ಅದರಲ್ಲೂ ಈ ವರ್ಷವಂತೂ ಬೆಚ್ಚಿ ಬೀಳಿಸುವಂತಹ ಹಲವಾರು ರೈಲು ಅಪಘಾತಗಳು ಸಂಭವಿಸಿವೆ. ಮಾಹಿತಿಗಳ ಪ್ರಕಾರ 2024 ರ ವರ್ಷದಲ್ಲಿ ಭಾರತದಾದ್ಯಂತ ಹಲವಾರು ರೈಲು ಅಪಘಾತಗಳು ಸಂಭವಿಸಿವೆ. “ನವೆಂಬರ್‌ 26 ರ ವರೆಗೆ ಒಟ್ಟು 29 ಪ್ರಮುಖ ರೈಲು ಅಪಘಾತಗಳು ಸಂಭವಿಸಿದ್ದು, ಈ ಅಪಘಾತಗಳಲ್ಲಿ 17 ಪ್ರಯಾಣಿಕರು ಜೀವವನ್ನು ಕಳೆದುಕೊಂಡರೆ, ಸುಮಾರು 71 ಜನರು ಗಾಯಗೊಂಡಿದ್ದಾರೆ. ತಾಂತ್ರಿಕ ದೋಷ, ಹಳಿ ತಪ್ಪಿಸುವುದರಿಂದ ಹಿಡಿದು ಪರಸ್ಪರ ರೈಲು ಡಿಕ್ಕಿ ಸೇರಿದಂತೆ ವಿವಿಧ ಕಾರಣಗಳಿಂದ ಈ ಎಲ್ಲಾ ಅಪಘಾತಗಳು ಸಂಭವಿಸಿವೆ” ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ರಾಜ್ಯ ಸಭೆಯಲ್ಲಿ ವರದಿ ಸಲ್ಲಿಸಿದ್ದಾರೆ. ಹಾಗಾದರೆ ಈ ವರ್ಷ ಯಾವೆಲ್ಲಾ ಪ್ರಮುಖ ರೈಲು ಅಪಘಾತಗಳು ಸಂಭವಿಸಿದೆ ಎಂಬುದನ್ನು ನೋಡೋಣ.

2024 ರಲ್ಲಿ ಸಂಭವಿಸಿದ ಪ್ರಮುಖ ರೈಲು ಅಪಘಾತಗಳ ಪಟ್ಟಿ:

ಜಮ್ತಾರಾ ರೈಲು ಅಪಘಾತ – ಫೆಬ್ರವರಿ 28, 2024:

ಜಾರ್ಖಾಂಡ್‌ನ ಜಮ್ತಾರಾ ಜಿಲ್ಲೆಯ ಕಲಝಾರಿಯ ಬಳಿ ಫೆಬ್ರವರಿ 28 ರಂದು ರೈಲು ಡಿಕ್ಕಿಯಾಗಿ ಭೀಕರ ಅಪಘಾತವೊಂದು ಸಂಭವಿಸಿತ್ತು. ಈ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಇದು ಈ ವರ್ಷ ನಡೆದ ಭೀಕರ ರೈಲು ಅಪಘಾತಗಳಲ್ಲಿ ಒಂದಾಗಿದೆ.

ಹಳಿ ತಪ್ಪಿದ ಸಬರಮತಿ-ಆಗ್ರಾ ಎಕ್ಸ್‌ಪ್ರೆಸ್ – ಮಾರ್ಚ್ 18, 2024:

ರಾಜಸ್ಥಾನದ ಅಜ್ಮೀರ್ ಬಳಿ ಸಬರಮತಿ-ಆಗ್ರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿದ ಘಟನೆ ಮಾರ್ಚ್‌ 18 ರಂದು ಸಂಭವಿಸಿತ್ತು. ಅದೃಷ್ಟವಶಾತ್ ಈ ಒಂದು ಅಪಘಾತದಲ್ಲಿ ಯಾವುದೇ ಸಾವು ಸಂಭವಿಸಿಲ್ಲ, ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತ – ಜೂನ್ 17, 2024:

ಜೂನ್‌ 17 ರಂದು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನ ರಂಗಪಾಣಿ ನಿಲ್ದಾಣದ ಬಳಿ ಗೂಡ್ಸ್ ರೈಲು ಅಗರ್ತಲಾ ಮತ್ತು ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತವೊಂದು ಸಂಭವಿಸಿತ್ತು. ಈ ಒಂದು ಅಪಘಾತದಲ್ಲಿ ಸುಮಾರು 15 ಜನರು ಮೃತಪಟ್ಟಿದ್ದು, 41 ಜನರು ಗಾಯಗೊಂಡಿದ್ದರು. ಈ ಅಪಘಾತ ಕೂಡಾ ಈ ವರ್ಷ ನಡೆದ ಪ್ರಮುಖ ರೈಲು ಅಘಾತಗಳಲ್ಲಿ ಒಂದಾಗಿದೆದೆ.

ಸಿರ್ಹಿಂದ್ ಗೂಡ್ಸ್‌ ರೈಲು ಅಪಘಾತ – ಜೂನ್ 2, 2024:

ಪಂಜಾಬ್‌ನಲ್ಲಿ ಸಿರ್ಹಿಂದ್‌ನ ಮಾಧೋಪುರ ಬಳಿ ಜೂನ್‌ 2 ರಂದು ಸರಕು ರೈಲುಗಳು ಪರಸ್ಪರ ಡಿಕ್ಕಿ ಹೊಡೆದಂತಹ ಘಟನೆ ನಡೆದಿದ್ದು, ಈ ಒಂದು ಅಪಘಾತದಲ್ಲಿ ಆ ರೈಲುಗಳಲ್ಲಿದ್ದ ಮೂವರು ಪ್ರಯಾಣಿಕರು ಮತ್ತು ಇಬ್ಬರು ಲೋಕೋ ಪೈಲಟ್‌ಗಳಿಗೆ ಗಾಯಗಳಾಗಿದ್ದವು.

ಹಳಿ ತಪ್ಪಿದ ಚಂಡೀಗಢ-ದಿಬ್ರುಗಢ ರೈಲು – ಜುಲೈ 18, 2024:

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ದಿಬ್ರುಗಢ-ಚಂಡೀಗಢ ಎಕ್ಸ್‌ಪ್ರೆಸ್ ಹಳಿತಪ್ಪಿದಂತಹ ಘಟನೆ ಜುಲೈ 18 ರಂದು ನಡೆದಿತ್ತು. ಈ ದುರಂತದಲ್ಲಿ ನಾಲ್ಕು ಜನ ಪ್ರಾಣವನ್ನು ಕಳೆದುಕೊಂಡಿದ್ದಾರೆ ಮತ್ತು 31 ಮಂದಿ ಗಾಯಗೊಂಡಿದ್ದರು. ಇದು ಕೂಡಾ ಈ ವರ್ಷ ಸಂಭವಿಸಿದ ಪ್ರಮುಖ ರೈಲು ಅಪಘಾತಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: Year Ender 2024: ಈ ವರ್ಷ ಭಾರತೀಯರು ಅತೀ ಹೆಚ್ಚು ಹುಡುಕಾಡಿದ ಟಾಪ್ ರೆಸಿಪಿಗಳು ಇವೇ ನೋಡಿ

ಮುಂಬೈ-ಹೌರಾ ರೈಲು ಅಪಘಾತ- ಜುಲೈ 30, 2024:

ಹೌರಾ-ಮುಂಬೈ ಪ್ಯಾಸೆಂಜರ್‌ ರೈಲು ಹಳಿ ತಪ್ಪಿದ ಘಟನೆ ಜಾರ್ಖಾಂಡ್‌ನ ಛಕ್ರಾಧರ್‌ಪುರ್‌ ವಿಭಾಗದ ಬಳಿ ಜುಲೈ 30 ರಂದು ನಡೆದಿತ್ತು. ಪ್ಯಾಸೆಂಜರ್‌ ರೈಲಿನ 18 ಬೋಗಿಗಳು ಹಳಿ ತಪ್ಪಿ ತಪ್ಪಿದ್ದ ಪರಿಣಾಮ 2 ಪ್ರಯಾಣಿಕರು ಮೃತಪಟ್ಟು, ಸುಮಾರು 20 ಗಾಯಗೊಂಡಿದ್ದರು.

ಮೈಸೂರು-ದರ್ಬಾಂಗ ಎಕ್ಸ್‌ಪ್ರೆಸ್ ಡಿಕ್ಕಿ – ಅಕ್ಟೋಬರ್ 11, 2024:

ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕವರಪೇಟ್ಟೈನಲ್ಲಿ ಗೂಡ್ಸ್‌ ರೈಲಿಗೆ ಮೈಸೂರು-ದರ್ಬಾಂಗ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿಯಾಗಿ ಭಾರೀ ಅನಾಹುತ ಸಂಭವಿಸಿದ ಘಟನೆ ಅಕ್ಟೋಬರ್‌ 11 ರಂದು ನಡೆದಿತ್ತು. ಅದೃಷ್ಟವಶಾತ್‌ ಈ ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಹಲವು ಪ್ರಯಾಣಿಕರಿಗೆ ಸಣ್ಣಪಟ್ಟ ಗಾಯಗಳಾಗಿದ್ದವು. ಇದು ಕೂಡಾ ಈ ವರ್ಷ ಸಂಭವಿಸಿದ ಪ್ರಮುಖ ರೈಲು ಅಪಘಾತವಾಗಿದೆ.

Published On - 6:31 pm, Thu, 12 December 24

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ