Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ಜೇನುತುಪ್ಪ ಮಾರಾಟದ ಬಗ್ಗೆ ತನಿಖೆ ಅಗತ್ಯ!

ಭಾರತದ ಜೇನುತುಪ್ಪ ಉತ್ಪಾದನೆಯಲ್ಲಿನ ಅಸಂಗತತೆಗಳ ಬಗ್ಗೆ ಈ ಲೇಖನ ಚರ್ಚಿಸುತ್ತದೆ. ವಾರ್ಷಿಕ ಜೇನು ಉತ್ಪಾದನೆಗಿಂತ ಹೆಚ್ಚಿನ ಪ್ರಮಾಣದ ಜೇನುತುಪ್ಪ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂಬ ಆತಂಕವಿದೆ. ಸರ್ಕಾರದಿಂದ ವಿಶೇಷ ತನಿಖೆ, ಜೇನುಗೂಡುಗಳ ಸಂಖ್ಯೆಯ ಪರಿಶೀಲನೆ ಮತ್ತು ಜೇನುತುಪ್ಪದ ಗುಣಮಟ್ಟ ನಿಯಂತ್ರಣದ ಅಗತ್ಯವನ್ನು ಈ ಲೇಖನ ಪ್ರತಿಪಾದಿಸುತ್ತದೆ. ರೋಗಿ ಜೇನು ಹುಳಗಳ ವಿತರಣೆ ಮತ್ತು ಕೀಟನಾಶಕಗಳ ಬಳಕೆಯ ಪರಿಣಾಮಗಳನ್ನೂ ಚರ್ಚಿಸಲಾಗಿದೆ.

ನಕಲಿ ಜೇನುತುಪ್ಪ ಮಾರಾಟದ ಬಗ್ಗೆ ತನಿಖೆ ಅಗತ್ಯ!
Honey Production
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Apr 12, 2025 | 3:21 PM

ಇತ್ತೀಚಿನ ವರ್ಷಗಳಲ್ಲಿ ಜೇನುತುಪ್ಪದ ಬಗ್ಗೆ ಅನುಮಾನ ಹೆಚ್ಚಾಗಿದೆ ವರ್ಷವೊಂದಕ್ಕೆ ಜೇನು ಹುಳ ಎಷ್ಟು ಜೇನುತುಪ್ಪ ತಯಾರಿಸುತ್ತದೆಯೋ ಅದರ ಸಾವಿರಾರು ಪಟ್ಟು ಹೆಚ್ಚು ಜೇನುತುಪ್ಪ ವಿಕ್ರಿಯಾಗುತ್ತದೆ ಎಂದು ನನಗೆ ಅನುಮಾನ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜೇನುತುಪ್ಪ ,ಜೇನು ತಯಾರಿಸುತ್ತದೆ ಎಂದಾದರೆ ಈ ಬಗ್ಗೆ ಕೇಂದ್ರ ಸರ್ಕಾರ ವಿಸ್ತೃತ ವಿಶೇಷ ಅಧ್ಯಯನ ಮಾಡುವಂತಹ ಇನ್ನೂಂದು ಆಯೋಗದ ರಚನೆ ಮಾಡಿ ಅದನ್ನೇ ರಾಷ್ಟ್ರೀಯ ಕೈಗಾರಿಕಾ ನೀತಿಯಲ್ಲಿ ಅಳವಡಿಸಿಕೊಳ್ಳುವಂತಹ ವಿಚಾರ ಮಾಡಬೇಕು.

ಇತರ ಜಿಲ್ಲೆಗಳಲ್ಲಿ ನನಗೆ ಮಾಹಿತಿ ಇಲ್ಲ ಉತ್ತರ ಕನ್ನಡದಲ್ಲಿಂತು ಹಲವರು ಜೇನು ನಾಶದತ್ತ ಜೇನು ನಾಶದತ್ತ ಅಂತ ಸಾಮಾನ್ಯ ಜನರು ಹೇಳಿದ್ದು ಕೇಳಿದ್ದೇನೆ ಜೇನು ಪೆಟ್ಟಿಗೆ ಜೇನುಗೂಡ ಎಲ್ಲೋ ನೋಡಲಿಕ್ಕೆ ಸಿಗದು ಎಂದು ಜನ ಸಾಮಾನ್ಯ ಜನರು ಆಡಿಕೊಳ್ಳುವುದು ಕೇಳಿದ್ದೇನೆ ಆದರೆ ಜೇನುತುಪ್ಪ ಮಾತ್ರ ವಿಕ್ರಿ ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಆಗುತ್ತಿದೆ .

ಇನ್ನು ಒಂದು ಅಂಬೋಣದಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಜೇನುಪೆಟ್ಟಿಗೆ ಹಾಗೂ ಅದರ ಇನ್ನಿತರ ಪರಿಕರಗಳನ್ನು ರೈತರಿಗೆ ವಿಶೇಷ ಯೋಜನೆ ಅಡಿಯಲ್ಲಿ ನೀಡುತ್ತಾ ಬಂದಿದೆ ಎಂದು ಕೇಳಿದ್ದೇನೆ ಕಳೆದ ಹತ್ತು ವರ್ಷದಿಂದ ಈ ನೀಡಿರುವ ಸಂಖ್ಯೆಯನ್ನು ಒಮ್ಮೆ ಪರಿಶೀಲಿಸಿದರೆ ಜೇನು ಹುಳ ಹಾಗೂ ಜೇನುಪೆಟ್ಟಿಗೆಗಳಿಂದಲೇ ಕಾಡಿನಲ್ಲಿ ಟ್ರಾಫಿಕ್ ಜಾಮ್ ಆಗಬೇಕಿತ್ತು. ಆದರೆ ಜೇನುಪೆಟ್ಟಿಗೆ ಜೇನು ಹುಳಗಳ ಸಂಖ್ಯೆಯಲ್ಲಿ ಹೆಚ್ಚಾಗದೆ ಮಾರಾಟ ಮಾಡುವ ಬಾಟಲಿಗಳಲ್ಲಿಯ ಜೇನುತುಪ್ಪದ ಪ್ರಮಾಣ ಮಾತ್ರ ಗಣನೀಯವಾಗಿ ಏರಿಕೆಯಾಗಿದೆ.

ಜೇನು ಕೃಷಿಕರು ಅಸಲಿ ಯಾರು ? ನಕಲಿ ಯಾರು ? ಎಂಬುದು ಜನಸಾಮಾನ್ಯರಿಗೆ ಈಗಾಗಲೇ ತಿಳಿದಿದೆ ಆದರೆ ಜೇನಿನಿಂದ ಬಂದಂತ ಕೀರ್ತಿ ಪ್ರಶಸ್ತಿ ಹೆಗ್ಗಳಿಕೆ ಇದು ಯಾರ್ಯಾರಿಗೋ ಹೋಗುತ್ತದೆ ಎಂದು ಪ್ರಾಮಾಣಿಕ ಜೇನು ಕೃಷಿಕ ರೈತರು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದಾರೆ .

ಒಂದು ಅನುಮಾನದಂತೆ ಮನುಷ್ಯ ನಿರ್ಮಿತ ಜೇನು ಹಾಗೂ ಜೇನು ನಿರ್ಮಿತ ಜೇನು ಎಂಬ ಎರಡು ವರ್ಗಗಳನ್ನು ಕೇಂದ್ರ ಆಹಾರ ಸುರಕ್ಷತಾ ಸಂಸ್ಥೆ ಮಾಡಬೇಕಿದೆ ಅಲ್ಲದೆ ಈ ಜೇನಿನ ಬಗ್ಗೆ ವಿಶೇಷ ಟಾಸ್ಕ್ ಫೋರ್ಸ್ ಒಂದನ್ನು ತಯಾರಿಸಿ ಜೇನಿನ ಗುಣಮಟ್ಟದ ಬಗ್ಗೆ ತಾಲೂಕ ಮಟ್ಟದಲ್ಲಿ ಪ್ರಯೋಗಾಲಯಗಳಲ್ಲಿ ನಿಶ್ಚಿತ ರೀತಿಯಲ್ಲಿ ಮಾದರಿ ತೆಗೆಯುವ ಮೂಲಕ ಪ್ರತಿ ಮಾರಾಟಕ್ಕೆ ಲಭ್ಯವಿರುವ ಜೇನಿನ ಪರೀಕ್ಷೆ ಆಗಬೇಕಿದೆ.

ಅಲ್ಲದೆ ಸರ್ಕಾರದ ಸಬ್ಸಿಡಿ ಇರುವಂತಹ ಜೇನಿನ ಯೋಜನೆಗಳ ಬಗ್ಗೆ ಸಿಬಿಐ ತನಿಖೆಯಾಗಬೇಕಿದೆ. ಇದೇನಿನ ಯೋಜನೆಗಳು ಕಾಗದದ ಮೇಲೆಯೇ ಹೆಚ್ಚಿದ್ದು ಜೇನಿನ ಪೆಟ್ಟಿಗೆ,ಜೇನಿನ ಸಂಖ್ಯೆಯಲ್ಲಿ ಕಡಿಮೆ ಇದ್ದಂತೆ ತೋರುತ್ತದೆ. ಕಳೆದ ಹತ್ತು ವರ್ಷದಲ್ಲಿ ಈ ಎಲ್ಲಾ ಯೋಜನೆಗಳಿಂದ ಜೇನಿನ ಸಂಖ್ಯೆ ಹೆಚ್ಚಾಗಿದ್ದೇ ಆದರೆ ಈಗ ಪರಿಸರದಲ್ಲಿ ಜೇನುಹುಳಗಳ ಟ್ರಾಫಿಕ್ ಜಾಮ್ ಆಗಬೇಕಿತ್ತು. ಆದರೆ ನೈಸರ್ಗಿಕವಲ್ಲದ ಜೇನುತುಪ್ಪದ ಟ್ರಾಫಿಕ್ ಜಾಮ್ ಆಗಿದೆ .

ಇನ್ನು ಕೆಲವು ಜೇನು ಹುಳ ಪೂರೈಸುವವರು ರೋಗಿ ಜೇನುಹುಳ ನೀಡಿದ್ದರಿಂದ ಇತರ ಜೇನುಹುಳಗಳಿಗೂ ಇರುವ ತಗುಲಿರುವ ಶಂಕೆ ಕೆಲವು ಬೆಳೆಗಾರರ ಅನುಮಾನ, ರೋಗ ರಹಿತ ಜೇನುಹುಳ ಪೂರೈಕೆ ಆಗುವಂತೆ ಸರಕಾರ ಯೋಚಿಸಬೇಕಿದೆ. ಇನ್ನು ಕೆಲವು ಜೇನು ಬೆಳೆಗಾರರ ಅನುಮಾನದಂತೆ ಅಡಿಕೆಗೆ ಸಿಂಪಡಿಸುವ ಕೆಲವು ಔಷಧಿಗಳು ಕೂಡ ಜೇನಿನ ನಾಶಕ್ಕೆ ಕಾರಣ ಅಂತ ಯಾವುದಕ್ಕೂ ಸಂಬಂಧ ಪಟ್ಟ ಇಲಾಖೆ ಯೋಚಿಸಿ ತಿಳಿಸಬೇಕಾದಂತಹ ಅವಶ್ಯಕತೆ ಇದೆ.

ಆಯುರ್ವೇದದಲ್ಲಿ ಜೇನುತುಪ್ಪಕ್ಕೆ ವಿಶೇಷವಾದಂತಹ ಒಂದು ಸ್ಥಾನ ಇದೆ ಅದರಂತೆ ಯೋಗವಾಹಿ ಎಂಬ ಗುಣವನ್ನು ಜೇನುತುಪ್ಪ ಹೊಂದಿದೆ. ಆದರೆ ಜೇನು ಹುಳದಿಂದ ತಯಾರ ಆಗದಂತಹ ಜೇನುತುಪ್ಪ ರೋಗವಾಹಿ ಗುಣ ಹೊಂದಿದೆ ಎಂದು ನನ್ನ ಅನಿಸಿಕೆ. ಕೊನೆಯದಾಗಿ ನಿಮ್ಮ ನಿಮ್ಮ ವಿಶ್ವಾಸದ ಖಾತ್ರಿಯ ಜೇನು ಕೃಷಿಕರಿಂದಲೇ ನೇರವಾಗಿ ಜೇನನ್ನ ಖರೀದಿಸಿ ಉಪಯೋಗಿಸಿ.

ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!