AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ರಾಮ ಜಪ: ರಂಗೋಲಿ, ಥರ್ಮಕೋಲ್​ನಲ್ಲಿ ರಾಮಮಂದಿರ

ಆಯೋಧ್ಯ ರಾಮ‌ಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ಬೆಂಗಳೂರಿನಲ್ಲಿ ರಾಮನ ಸ್ಮರಣೆ ಜೋರಾಗಿದೆ. ರಂಗೋಲಿಯಲ್ಲಿ ರಾಮಮಂದಿರ ಅರಳಿದೆ. ನಗರದ ಖಾಸಗಿ ಮಾಲ್ ಒಂದರಲ್ಲಿ ಅಯೋಧ್ಯೆಯನ್ನ ರಂಗೋಲಿಯಿಂದ ಚಿತ್ರಿಸಿದ್ದು, ನೋಡುಗರನ್ನ ಸೆಳೆಯುತ್ತಿದೆ.‌ ಮತ್ತೊಂದೆಡೆ ಬಸವೇಶ್ವರ ನಗರದ ಫ್ಲಾರೆನ್ಸ್ ಶಾಲೆಯಲ್ಲಿ ಥರ್ಮಕೋಲ್ ನಿಂದ ರಾಮ ಮಂದಿರ ನಿರ್ಮಿಸಲಾಗಿದೆ.

Poornima Agali Nagaraj
| Edited By: |

Updated on: Jan 13, 2024 | 1:38 PM

Share
ಆಯೋಧ್ಯ ರಾಮ‌ಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ‌ಸಿಲಿಕಾನ್‌ ಸಿಟಿಯಲ್ಲಿ ರಾಮನ ಸ್ಮರಣೆ ಜೋರಾಗಿದೆ.  ರಂಗೋಲಿಯಲ್ಲಿ ರಾಮಮಂದಿರ ಅರಳಿದೆ.

ಆಯೋಧ್ಯ ರಾಮ‌ಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ‌ಸಿಲಿಕಾನ್‌ ಸಿಟಿಯಲ್ಲಿ ರಾಮನ ಸ್ಮರಣೆ ಜೋರಾಗಿದೆ. ರಂಗೋಲಿಯಲ್ಲಿ ರಾಮಮಂದಿರ ಅರಳಿದೆ.

1 / 8
ನಗರದ ಖಾಸಗಿ ಮಾಲ್ ಒಂದರಲ್ಲಿ ಅಯೋಧ್ಯೆಯನ್ನ ರಂಗೋಲಿಯಿಂದ ಚಿತ್ರಿಸಿದ್ದು, ನೋಡುಗರನ್ನ ಸೆಳೆಯುತ್ತಿದೆ.‌ ಅಂದಹಾಗೇ ಚಿತ್ರ ಬಿಡಿಸಲು ಹೈ ಕ್ವಾಲಿಟಿಯ ರಂಗೋಲಿಯನ್ನ ಬಳಕೆ‌ ಮಾಡಿಕೊಂಡಿದ್ದು, 25 ಅಡಿ ಉದ್ದ, 25 ಅಡಿ ಅಗಲದ ವಿನ್ಯಾಸವಾಗಿದೆ.

ನಗರದ ಖಾಸಗಿ ಮಾಲ್ ಒಂದರಲ್ಲಿ ಅಯೋಧ್ಯೆಯನ್ನ ರಂಗೋಲಿಯಿಂದ ಚಿತ್ರಿಸಿದ್ದು, ನೋಡುಗರನ್ನ ಸೆಳೆಯುತ್ತಿದೆ.‌ ಅಂದಹಾಗೇ ಚಿತ್ರ ಬಿಡಿಸಲು ಹೈ ಕ್ವಾಲಿಟಿಯ ರಂಗೋಲಿಯನ್ನ ಬಳಕೆ‌ ಮಾಡಿಕೊಂಡಿದ್ದು, 25 ಅಡಿ ಉದ್ದ, 25 ಅಡಿ ಅಗಲದ ವಿನ್ಯಾಸವಾಗಿದೆ.

2 / 8
ಚಿತ್ರದಲ್ಲಿ ವಿಶೇಷ ಏನೆಂದರೆ ರಾಮ ಮಂದಿರವನ್ನ ನಿರ್ಮಿಸಿದ ನಂತರ ರಾಮಮಂದಿರ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದ ಕೂಲಿ - ಕಾರ್ಮಿಕರಿಗೆ ರಾಮ ದರ್ಶನ ನೀಡಿದ ಎನ್ನುವ ಕಾನ್ಸೆಪ್ಟ್ ನಲ್ಲಿ‌ ತ್ರಿಡಿ ಎಫೆಕ್ಟ್ ನಲ್ಲಿ ಈ ಚಿತ್ರವನ್ನ ಬಿಡಿಸಲಾಗಿದೆ.

ಚಿತ್ರದಲ್ಲಿ ವಿಶೇಷ ಏನೆಂದರೆ ರಾಮ ಮಂದಿರವನ್ನ ನಿರ್ಮಿಸಿದ ನಂತರ ರಾಮಮಂದಿರ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದ ಕೂಲಿ - ಕಾರ್ಮಿಕರಿಗೆ ರಾಮ ದರ್ಶನ ನೀಡಿದ ಎನ್ನುವ ಕಾನ್ಸೆಪ್ಟ್ ನಲ್ಲಿ‌ ತ್ರಿಡಿ ಎಫೆಕ್ಟ್ ನಲ್ಲಿ ಈ ಚಿತ್ರವನ್ನ ಬಿಡಿಸಲಾಗಿದೆ.

3 / 8
ರಂಗೋಲಿಯಲ್ಲಿ ರಾಮನನ್ನ ಅದ್ಬುತವಾಗಿ ಚಿತ್ರಿಸಿದ್ದು, ತುಂಬ ಖುಷಿಯಾಗುತ್ತಿದೆ.‌ ರಾಮಮಂದಿರ ಅನ್ನೋದೆ ಹಿಂದುಗಳಿಗೆ ಹೆಮ್ಮೆ.‌ ರಂಗೋಲಿಯಲ್ಲಿ ರಾಮಮಂದಿರ ಮೂಡಿಸುವುದಕ್ಕೆ ಸಾಕಷ್ಟು ಶ್ರಮ ಇರುತ್ತೆ ಅಂತ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ರು.

ರಂಗೋಲಿಯಲ್ಲಿ ರಾಮನನ್ನ ಅದ್ಬುತವಾಗಿ ಚಿತ್ರಿಸಿದ್ದು, ತುಂಬ ಖುಷಿಯಾಗುತ್ತಿದೆ.‌ ರಾಮಮಂದಿರ ಅನ್ನೋದೆ ಹಿಂದುಗಳಿಗೆ ಹೆಮ್ಮೆ.‌ ರಂಗೋಲಿಯಲ್ಲಿ ರಾಮಮಂದಿರ ಮೂಡಿಸುವುದಕ್ಕೆ ಸಾಕಷ್ಟು ಶ್ರಮ ಇರುತ್ತೆ ಅಂತ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ರು.

4 / 8
ಇದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಬಸವೇಶ್ವರ ನಗರದ ಫ್ಲಾರೆನ್ಸ್ ಶಾಲೆಯಲ್ಲಿ ಮಕ್ಕಳಿಗೆ ಅಯೋಧ್ಯೆ ಬಗ್ಗೆ ಗೊತ್ತಗಬೇಕು ಎನ್ನುವ ಕಾರಣಕ್ಕೆ ಶಾಲೆಯಲ್ಲಿ ಥರ್ಮಕೋಲ್ ನಿಂದ ರಾಮ ಮಂದಿರ ನಿರ್ಮಿಸಿದ್ದು, ರಾಮಮಂದಿರ ವಿನ್ಯಾಸದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಗಿದೆ.

ಇದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಬಸವೇಶ್ವರ ನಗರದ ಫ್ಲಾರೆನ್ಸ್ ಶಾಲೆಯಲ್ಲಿ ಮಕ್ಕಳಿಗೆ ಅಯೋಧ್ಯೆ ಬಗ್ಗೆ ಗೊತ್ತಗಬೇಕು ಎನ್ನುವ ಕಾರಣಕ್ಕೆ ಶಾಲೆಯಲ್ಲಿ ಥರ್ಮಕೋಲ್ ನಿಂದ ರಾಮ ಮಂದಿರ ನಿರ್ಮಿಸಿದ್ದು, ರಾಮಮಂದಿರ ವಿನ್ಯಾಸದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಗಿದೆ.

5 / 8
ಮತ್ತೊಂದೆಡೆ  ರಾಮೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ವಿಮಾನಯಾನದ ಟಿಕೆಟ್ ದರ ಏರಿಕೆಯಾಗಿದೆ. ಬೆಂಗಳೂರಿನಿಂದ ಅಯೋಧ್ಯೆಗೆ ಹೊರಡುವ ಭಕ್ತರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆ ಬೆಂಗಳೂರು ಟು ಅಯೋಧ್ಯ ಫ್ಲೈಟ್ ಟಿಕೆಟ್ ದರ 6 ಸಾವಿರದಿಂದ 25 ಸಾವಿರದವರೆಗೂ ಏರಿಕೆಯಾಗಿದೆ.‌

ಮತ್ತೊಂದೆಡೆ ರಾಮೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ವಿಮಾನಯಾನದ ಟಿಕೆಟ್ ದರ ಏರಿಕೆಯಾಗಿದೆ. ಬೆಂಗಳೂರಿನಿಂದ ಅಯೋಧ್ಯೆಗೆ ಹೊರಡುವ ಭಕ್ತರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆ ಬೆಂಗಳೂರು ಟು ಅಯೋಧ್ಯ ಫ್ಲೈಟ್ ಟಿಕೆಟ್ ದರ 6 ಸಾವಿರದಿಂದ 25 ಸಾವಿರದವರೆಗೂ ಏರಿಕೆಯಾಗಿದೆ.‌

6 / 8
ಶನಿವಾರ, ಭಾನುವಾರದಂದು ರಜೆ ಇರುವ ಕಾರಣ ಉದ್ಘಾಟನೆಗೆ ಮುನ್ನವೇ ಅಯೋಧ್ಯೆಗೆ ಸಾಕಷ್ಟು ಪ್ರಯಾಣಿಕರು ತೆರಳುತ್ತಿದ್ದು, 6 ಸಾವಿರ ಇದ್ದ ಟಿಕೆಟ್ ರೇಟ್ 20 ಸಾವಿರ ದಾಟಿದೆ. ಇನ್ನು, ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್‌ ದರ 6 ಸಾವಿರ ರೂಪಾಯಿ ಇತ್ತು. ಆದ್ರೆ ಜನವರಿ 19 ಶುಕ್ರವಾರ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನದ ಒಂದು ಟಿಕೆಟ್ ಗೆ ಬರೋಬ್ಬರಿ 25000-26,000 ರೂಪಾಯಿಯಾಗಿದೆ.

ಶನಿವಾರ, ಭಾನುವಾರದಂದು ರಜೆ ಇರುವ ಕಾರಣ ಉದ್ಘಾಟನೆಗೆ ಮುನ್ನವೇ ಅಯೋಧ್ಯೆಗೆ ಸಾಕಷ್ಟು ಪ್ರಯಾಣಿಕರು ತೆರಳುತ್ತಿದ್ದು, 6 ಸಾವಿರ ಇದ್ದ ಟಿಕೆಟ್ ರೇಟ್ 20 ಸಾವಿರ ದಾಟಿದೆ. ಇನ್ನು, ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್‌ ದರ 6 ಸಾವಿರ ರೂಪಾಯಿ ಇತ್ತು. ಆದ್ರೆ ಜನವರಿ 19 ಶುಕ್ರವಾರ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನದ ಒಂದು ಟಿಕೆಟ್ ಗೆ ಬರೋಬ್ಬರಿ 25000-26,000 ರೂಪಾಯಿಯಾಗಿದೆ.

7 / 8
ಜನವರಿ 20 ರಂದು ಬೆಂಗಳೂರಿನಿಂದ ಅಯ್ಯೋಧ್ಯೆಗೆ ಒಂದು ಟಿಕೆಟ್ ಗೆ ಬರೋಬ್ಬರಿ 28,886 ರೂಪಾಯಿ ನಿಗದಿಯಾಗಿದೆ. ಇನ್ನು ಎರಡು ದಿನ ಕೇವಲ ಎರಡೇ ಎರಡು ಫ್ಲೈಟ್ ಗಳು ಮಾತ್ರ ಹೊರಡುತ್ತಿರುವ ಹಿನ್ನೆಲೆ‌ ಟಿಕೆಟ್ ದರ ಏರಿಕೆಯಾಗಿದೆ.

ಜನವರಿ 20 ರಂದು ಬೆಂಗಳೂರಿನಿಂದ ಅಯ್ಯೋಧ್ಯೆಗೆ ಒಂದು ಟಿಕೆಟ್ ಗೆ ಬರೋಬ್ಬರಿ 28,886 ರೂಪಾಯಿ ನಿಗದಿಯಾಗಿದೆ. ಇನ್ನು ಎರಡು ದಿನ ಕೇವಲ ಎರಡೇ ಎರಡು ಫ್ಲೈಟ್ ಗಳು ಮಾತ್ರ ಹೊರಡುತ್ತಿರುವ ಹಿನ್ನೆಲೆ‌ ಟಿಕೆಟ್ ದರ ಏರಿಕೆಯಾಗಿದೆ.

8 / 8
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ