Kannada News Photo gallery Ballari Public anger against the municipal corporation People came forward to road repair Ballari news in kannada
ಬಳ್ಳಾರಿ ಪಾಲಿಕೆಗೆ ಹಿಡಿಶಾಪ ಹಾಕುತ್ತಾ ರಸ್ತೆ ರಿಪೇರಿ ಮಾಡುತ್ತಿರುವ ಜನರು
ಸಿಲಿಕಾನ್ ಸಿಟಿ ಬೆಂಗಳೂರು ನಂತರ ಇದೀಗ ಗಣಿ ನಾಡ ಜನರು ರಕ್ಕಸ ರಸ್ತೆಗಳ ವಿರುದ್ದ ರೊಚ್ಚಿಗೆದ್ದಿದ್ದಾರೆ. ಮಕ್ಕಳೊಂದಿಗೆ ಬೀದಿಗೀಳಿದಿರುವ ಜನರು ಪಾಲಿಕೆ ವಿರುದ್ದ ಹಿಡಿಶಾಪ ಹಾಕುತ್ತಲೇ ಸ್ವಂತ ಹಣದಲ್ಲೇ ರಸ್ತೆ ರಿಪೇರಿಗೆ ಮುಂದಾಗಿದ್ದಾರೆ.
Ballari Public anger against the municipal corporation People came forward to road repair Ballari news in kannada
1 / 6
Ballari Public anger against the municipal corporation People came forward to road repair Ballari news in kannada
2 / 6
ಬಳ್ಳಾರಿ ನಗರದ ತಗ್ಗು ಗುಂಡಿಮಯ ರಸ್ತೆಗಳ ವಿರುದ್ದ ಗಾಂಧಿಗಿರಿ ಶುರು ಮಾಡಿದ್ದಾರೆ. ನಗರದ ರಸ್ತೆಗಳು ಸಂಪೂರ್ಣವಾಗಿ ತಗ್ಗು ಗುಂಡಿಮಯವಾಗಿರುವುದರಿಂದ ಪಾಲಿಕೆ ವಿರುದ್ದ ಸ್ಥಳೀಯರು ಹೋರಾಟಕ್ಕೆ ಇಳಿದಿದ್ದಾರೆ. ನಗರದ ರಸ್ತೆಗಳ ರಿಪೇರಿ ವಿಚಾರದಲ್ಲಿ ಪಾಲಿಕೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಸ್ವತಂ ಹಣದಿಂದ ಸ್ಥಳೀಯರೇ ತಗ್ಗು ಗುಂಡಿಗಳನ್ನ ಮುಚ್ಚಲು ಮುಂದಾಗಿದ್ದಾರೆ.
3 / 6
ನಗರದ ಎಲ್ಲ ರಸ್ತೆಗಳು ತಗ್ಗು ಗುಂಡಿಗಳಿಂದ ಹಾಳು ಬಿದ್ದಿವೆ. ಹೀಗಾಗಿ ಪ್ರಯಾಣಿಕರು ನಗರದಲ್ಲಿ ಓಡಾಡಲು ಭಯದಿಂದ ಸಂಚರಿಸಬೇಕಾಗಿದೆ. ತಗ್ಗು ಗುಂಡಿಗಳಲ್ಲಿ ಬೈಕ್ ಸವಾರರು ಬಿದ್ದು ಆಸ್ಪತ್ರೆಗೆ ದಾಖಲಾಗುತ್ತಿರುವ ಪರಿಣಾಮ ಸ್ಥಳೀಯರು ಇದೀಗ ರಕ್ಕಸ ರಸ್ತೆಗಳು ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ತಮ್ಮ ಸ್ವತಂ ಹಣದಿಂದಲೇ ತಗ್ಗು ಗುಂಡಿಗಳಿಗೆ ಕ್ರಾಂಕ್ರೀಟ್ ತುಂಬಿ ತಗ್ಗು ಸರಿಪಡಿಸುತ್ತಿದ್ದಾರೆ. ನಗರದ ದುರ್ಗಮ್ಮ ರಸ್ತೆ, ಮೋಕಾ ರಸ್ತೆ, ಮೋತಿ ಸರ್ಕಲ್ ಸೇರಿದಂತೆ ನಗರದ ಎಲ್ಲ ರಸ್ತೆಗಳ ತಗ್ಗು ಗುಂಡಿಗಳನ್ನ ಮುಚ್ಚಲು ಸ್ಥಳೀಯರೇ ಇದೀಗ ಮುಂದಾಗಿದ್ದಾರೆ. ಇದರೊಂದಿಗೆ ಪಾಲಿಕೆಗೆ ಹಿಡಿಶಾಪ ಹಾಕಲಾಗುತ್ತಿದೆ.
4 / 6
ಬಳ್ಳಾರಿ ನಗರದ ರಸ್ತೆಗಳ ರಿಪೇರಿ ಸರ್ಕಾರ ಅನುದಾನ ಬಿಡುಗಡೆ ಮಾಡಿದರೂ ಪಾಲಿಕೆ ಮಾತ್ರ ಕುಂಟು ನೆಪ ಹೇಳಿ ನಿರ್ಲಕ್ಷ್ಯ ನೀತಿ ಮುಂದುವರಿಸಿದೆ. ಹೀಗಾಗಿ ಪಾಲಿಕೆ ವಿರುದ್ದ ಸ್ಥಳೀಯರು ಹಿಡಿಶಾಪ ಹಾಕುತ್ತಲೇ ಗಾಂಧಿಗಿರಿ ಹೋರಾಟದ ಮೂಲಕ ರಸ್ತೆಗಳ ರಿಪೇರಿ ಶುರು ಮಾಡಿದ್ದಾರೆ.
5 / 6
ಇನ್ನಾದರೂ ಅಭಿವೃದ್ದಿಯೇ ನಮ್ಮ ದೇಯ್ಯ ಅನ್ನೋ ಸಚಿವರು, ಶಾಸಕರು ಬಳ್ಳಾರಿ ನಗರದಲ್ಲಿನ ತಗ್ಗು ಗುಂಡಿಗಳನ್ನ ಮುಚ್ಚಿ ರಸ್ತೆಗಳ ರಿಪೇರಿ ಮಾಡಲು ಮುಂದಾಗಬೇಕಿದೆ. ಆ ನಿಟ್ಟಿನಲ್ಲಿ ಪಾಲಿಕೆ ಮತ್ತು ಸಚಿವರು ಶಾಸಕರು ಕಾರ್ಯ ನಿರ್ವಹಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ. (ವರದಿ: ವೀರಪ್ಪ ದಾನಿ, ಟಿವಿ9 ಬಳ್ಳಾರಿ)