
‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭ ಆಗಿದೆ. ಅದಕ್ಕೂ ಮೊದಲು ನಡೆದ ಅಗ್ನಿಪರೀಕ್ಷೆಯಲ್ಲಿ 60 ಜನ ಸ್ಪರ್ಧಿಗಳು ಇದ್ದರು. ಈ ಪೈಕಿ ನಾಲ್ವರು ಮಾತ್ರ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಯಾರು ಎಂಬುದನ್ನು ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ವೇದಿಕೆ ಮೇಲೆ ರಿವೀಲ್ ಮಾಡಿದ್ದಾರೆ.
ಕಿರಣ್ ಶಾಸ್ತ್ರಿ ಅವರು ಉತ್ತರ ಕರ್ನಾಟಕದವರು. ಅವರು ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಸಿದ್ದರು. ಅವರು ತಮ್ಮ ಮಾತು ಹಾಗೂ ಆಟದ ಮೂಲಕ ಗಮನ ಸೆಳೆದವರು. ಅವರು ಈಗ ದೊಡ್ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟವರು ಕಿರಣ್ ಶಾಸ್ತ್ರಿ.
ಲಿಖಿತ್ ಗೊಂದಿ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಗ್ನಿ ಪರೀಕ್ಷೆ ಎಂಬ ದೊಡ್ಡ ಪರೀಕ್ಷೆಯನ್ನು ದಾಟಿ ಅವರು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ. ಅವರು ಟಾಸ್ಕ್ಗಳನ್ನು ಉತ್ತಮವಾಗಿ ಆಡಿದ್ದರು.
ಗಿನ್ನೆಸ್ ದಾಖಲೆ ಬರೆದ ಧನುಷ್ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವಿವಿಧ ದೇಶಗಳಿಂದ ಸೈಕಲ್ ಹೊಡೆದು ಅವರು ಈ ದಾಖಲೆ ಬರೆದಿದ್ದರು. ಅವರು ಅಗ್ನಿಪರೀಕ್ಷೆಗೆ ಬಂದು ಈಗ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಮಾಡರ್ನ್ ಮಹಾಕವಿ ಮಂಜು ಎಂದೇ ಫೇಮಸ್ ಆದವರು ಇವರು. ಇವರು ಅಗ್ನಿಪರೀಕ್ಷೆಗೆ ಬಂದಾಗ ಅರ್ಧ ತಲೆ ಬೋಳಿಸಿಕೊಂಡಿದ್ದರು. ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಗ್ನಿ ಪರೀಕ್ಷೆಯಿಂದ ವೇದಿಕೆ ಏರಿದ ನಾಲ್ಕನೇ ಸ್ಪರ್ಧಿ ಇವರು. ಜಡ್ಜ್ಗಳ ಆಯ್ಕೆಯಿಂದ ಇವರು ದೊಡ್ಮನೆ ಸೇರಿದ್ದಾರೆ.