ಇತ್ತೀಚೆಗೆ, ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಪಾಕಿಸ್ತಾನಿ ತಂಡದಲ್ಲಿ ಮೇಜರ್ ಸರ್ಜರಿಯ ಅವಶ್ಯಕತೆ ಇದೆ ಎಂದಿದ್ದರು. ಈ ಮೂಲಕ ಟಿ20 ವಿಶ್ವಕಪ್ನಿಂದ ಪಾಕ್ ತಂಡ ಹೊರಬಿದ್ದ ನಂತರ ತಂಡದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂಬ ಸುಳಿವು ನೀಡಿದ್ದರು. ಆದರೆ ನಖ್ವಿ ಅವರ ಈ ಹೇಳಿಕೆಯ ನಂತರ ಮಂಡಳಿಯಲ್ಲಿ ಕೋಲಾಹಲ ಎದ್ದಿತ್ತು. ಹೀಗಾಗಿ ಈಗ ಯು-ಟರ್ನ್ ತೆಗೆದುಕೊಂಡಿದ್ದು, ತಂಡದ ಜೊತೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.