IPL 2023 Auction: ಐಪಿಎಲ್​ ಮಿನಿ ಹರಾಜಿನಲ್ಲಿ ಈ ಆಟಗಾರರು​ ಹರಾಜಾಗುವುದು ಡೌಟ್

IPL 2023 Auction: ಕೆಲ ಸ್ಟಾರ್ ಆಟಗಾರರು ಕಳಪೆ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಅವರ ಖರೀದಿಗೆ ಫ್ರಾಂಚೈಸಿಗಳು ಮುಂದಾಗುವುದಿಲ್ಲ ಎಂದೇ ಹೇಳಬಹುದು. ಅಂತಹ ಐವರು ಆಟಗಾರರ ಪಟ್ಟಿ ಹೀಗಿದೆ....

| Updated By: ಝಾಹಿರ್ ಯೂಸುಫ್

Updated on:Dec 08, 2022 | 10:13 PM

ಐಪಿಎಲ್ ಸೀಸನ್​ 16 ಮಿನಿ ಹರಾಜಿಗಾಗಿ ಒಟ್ಟು 991 ಆಟಗಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ. ಇವರಲ್ಲಿ 714 ಭಾರತೀಯ ಹಾಗೂ 277 ವಿದೇಶಿ ಆಟಗಾರರಿದ್ದಾರೆ. ಆದರೆ ಇವರಲ್ಲಿ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಅವಕಾಶ ಸಿಗಲಿದೆ.

ಐಪಿಎಲ್ ಸೀಸನ್​ 16 ಮಿನಿ ಹರಾಜಿಗಾಗಿ ಒಟ್ಟು 991 ಆಟಗಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ. ಇವರಲ್ಲಿ 714 ಭಾರತೀಯ ಹಾಗೂ 277 ವಿದೇಶಿ ಆಟಗಾರರಿದ್ದಾರೆ. ಆದರೆ ಇವರಲ್ಲಿ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಅವಕಾಶ ಸಿಗಲಿದೆ.

1 / 7
ಅದರಲ್ಲೂ ಕೆಲ ಸ್ಟಾರ್ ಆಟಗಾರರು ಕಳಪೆ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಅವರ ಖರೀದಿಗೆ ಫ್ರಾಂಚೈಸಿಗಳು ಮುಂದಾಗುವುದಿಲ್ಲ ಎಂದೇ ಹೇಳಬಹುದು. ಅಂತಹ ಐವರು ಆಟಗಾರರ ಪಟ್ಟಿ ಹೀಗಿದೆ....

ಅದರಲ್ಲೂ ಕೆಲ ಸ್ಟಾರ್ ಆಟಗಾರರು ಕಳಪೆ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಅವರ ಖರೀದಿಗೆ ಫ್ರಾಂಚೈಸಿಗಳು ಮುಂದಾಗುವುದಿಲ್ಲ ಎಂದೇ ಹೇಳಬಹುದು. ಅಂತಹ ಐವರು ಆಟಗಾರರ ಪಟ್ಟಿ ಹೀಗಿದೆ....

2 / 7
ಜೇಸನ್ ರಾಯ್: ಇಂಗ್ಲೆಂಡ್​ನ ಸ್ಟಾರ್ ಆರಂಭಿಕ ಆಟಗಾರ ಜೇಸನ್ ರಾಯ್ ಈ ಬಾರಿಯ ಐಪಿಎಲ್​ನಲ್ಲಿ 1.5 ಕೋಟಿ ಮೂಲ ಬೆಲೆ ಘೋಷಿಸಿದ್ದಾರೆ. ಆದರೆ ಇತ್ತೀಚೆಗೆ ಮುಕ್ತಾಯಗೊಂಡ ಟಿ10 ಲೀಗ್​ನಲ್ಲಿ ಅವರ ಪ್ರದರ್ಶನ ಅತ್ಯಂತ ಕಳಪೆ ಮಟ್ಟದಲ್ಲಿತ್ತು. ಟಿ10 ಲೀಗ್​ನಲ್ಲಿ ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜೇಸನ್ ರಾಯ್ ಕಲೆಹಾಕಿದ್ದು ಕೇವಲ 84 ರನ್​ಗಳು ಮಾತ್ರ. ಅತ್ತ ಕಳಪೆ ಫಾರ್ಮ್​ ಕಾರಣ ಇಂಗ್ಲೆಂಡ್ ತಂಡದಿಂದ ಕೂಡ ಹೊರಬಿದ್ದಿದ್ದಾರೆ. ಹೀಗಾಗಿ ಜೇಸನ್ ರಾಯ್ ಅವರನ್ನು ಐಪಿಎಲ್ ಫ್ರಾಂಚೈಸಿಗಳು ನಿರ್ಲಕ್ಷಿಸುವ ಸಾಧ್ಯತೆ ಹೆಚ್ಚಿದೆ.

ಜೇಸನ್ ರಾಯ್: ಇಂಗ್ಲೆಂಡ್​ನ ಸ್ಟಾರ್ ಆರಂಭಿಕ ಆಟಗಾರ ಜೇಸನ್ ರಾಯ್ ಈ ಬಾರಿಯ ಐಪಿಎಲ್​ನಲ್ಲಿ 1.5 ಕೋಟಿ ಮೂಲ ಬೆಲೆ ಘೋಷಿಸಿದ್ದಾರೆ. ಆದರೆ ಇತ್ತೀಚೆಗೆ ಮುಕ್ತಾಯಗೊಂಡ ಟಿ10 ಲೀಗ್​ನಲ್ಲಿ ಅವರ ಪ್ರದರ್ಶನ ಅತ್ಯಂತ ಕಳಪೆ ಮಟ್ಟದಲ್ಲಿತ್ತು. ಟಿ10 ಲೀಗ್​ನಲ್ಲಿ ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜೇಸನ್ ರಾಯ್ ಕಲೆಹಾಕಿದ್ದು ಕೇವಲ 84 ರನ್​ಗಳು ಮಾತ್ರ. ಅತ್ತ ಕಳಪೆ ಫಾರ್ಮ್​ ಕಾರಣ ಇಂಗ್ಲೆಂಡ್ ತಂಡದಿಂದ ಕೂಡ ಹೊರಬಿದ್ದಿದ್ದಾರೆ. ಹೀಗಾಗಿ ಜೇಸನ್ ರಾಯ್ ಅವರನ್ನು ಐಪಿಎಲ್ ಫ್ರಾಂಚೈಸಿಗಳು ನಿರ್ಲಕ್ಷಿಸುವ ಸಾಧ್ಯತೆ ಹೆಚ್ಚಿದೆ.

3 / 7
ಚಮಿಕಾ ಕರುಣರತ್ನೆ: ಶ್ರೀಲಂಕಾ ಆಟಗಾರ ಚಮಿಕಾ ಕರುಣರತ್ನೆ ಈ ಬಾರಿಯ ಐಪಿಎಲ್ ಹರಾಜಿಗಾಗಿ 50 ಲಕ್ಷ ರೂ. ಮೂಲಬೆಲೆ ಘೋಷಿಸಿದ್ದಾರೆ. ಆದರೆ ಅಬುಧಾಬಿ ಟಿ10 ಲೀಗ್​ನಲ್ಲಿ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ್ದ ಕರುಣರತ್ನೆ 7 ಪಂದ್ಯಗಳಲ್ಲಿ 8.1 ಓವರ್​ ಬೌಲಿಂಗ್ ಮಾಡಿ 11.75 ರ ಸರಾಸರಿಯಲ್ಲಿ ರನ್​ ನೀಡಿದ್ದರು. ಅಲ್ಲದೆ ಪಡೆದಿದ್ದು ಕೇವಲ 3 ವಿಕೆಟ್ ಮಾತ್ರ. ಹೀಗಾಗಿ ಚಮಿಕಾ ಅವರ ಖರೀದಿಗೂ ಫ್ರಾಂಚೈಸಿಗಳು ಆಸಕ್ತಿ ತೋರುವುದು ಅನುಮಾನ.

ಚಮಿಕಾ ಕರುಣರತ್ನೆ: ಶ್ರೀಲಂಕಾ ಆಟಗಾರ ಚಮಿಕಾ ಕರುಣರತ್ನೆ ಈ ಬಾರಿಯ ಐಪಿಎಲ್ ಹರಾಜಿಗಾಗಿ 50 ಲಕ್ಷ ರೂ. ಮೂಲಬೆಲೆ ಘೋಷಿಸಿದ್ದಾರೆ. ಆದರೆ ಅಬುಧಾಬಿ ಟಿ10 ಲೀಗ್​ನಲ್ಲಿ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ್ದ ಕರುಣರತ್ನೆ 7 ಪಂದ್ಯಗಳಲ್ಲಿ 8.1 ಓವರ್​ ಬೌಲಿಂಗ್ ಮಾಡಿ 11.75 ರ ಸರಾಸರಿಯಲ್ಲಿ ರನ್​ ನೀಡಿದ್ದರು. ಅಲ್ಲದೆ ಪಡೆದಿದ್ದು ಕೇವಲ 3 ವಿಕೆಟ್ ಮಾತ್ರ. ಹೀಗಾಗಿ ಚಮಿಕಾ ಅವರ ಖರೀದಿಗೂ ಫ್ರಾಂಚೈಸಿಗಳು ಆಸಕ್ತಿ ತೋರುವುದು ಅನುಮಾನ.

4 / 7
ಕೆನ್ನರ್ ಲೂಯಿಸ್: ವೆಸ್ಟ್ ಇಂಡೀಸ್ ದಾಂಡಿಗ ಕೆನ್ನರ್ ಲೂಯಿಸ್ ಈ ಬಾರಿಯ ಟಿ10 ಲೀಗ್​ನಲ್ಲಿ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಆದರೆ ಕಲೆಹಾಕಿದ್ದು ಕೇವಲ 41 ರನ್​ಗಳು ಮಾತ್ರ. ಹೀಗಾಗಿ ಕೆನ್ನರ್ ಲೂಯಿಸ್ ಕೂಡ ಈ ಬಾರಿಯ ಹರಾಜಾಗುವುದು ಡೌಟ್.

ಕೆನ್ನರ್ ಲೂಯಿಸ್: ವೆಸ್ಟ್ ಇಂಡೀಸ್ ದಾಂಡಿಗ ಕೆನ್ನರ್ ಲೂಯಿಸ್ ಈ ಬಾರಿಯ ಟಿ10 ಲೀಗ್​ನಲ್ಲಿ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಆದರೆ ಕಲೆಹಾಕಿದ್ದು ಕೇವಲ 41 ರನ್​ಗಳು ಮಾತ್ರ. ಹೀಗಾಗಿ ಕೆನ್ನರ್ ಲೂಯಿಸ್ ಕೂಡ ಈ ಬಾರಿಯ ಹರಾಜಾಗುವುದು ಡೌಟ್.

5 / 7
ಕಾಲಿನ್ ಮನ್ರೋ: ನ್ಯೂಜಿಲೆಂಡ್ ತಂಡದ ಎಡಗೈ ದಾಂಡಿಗ ಕಾಲಿನ್ ಮನ್ರೋ ಕೂಡ ಈ ಬಾರಿಯ ಐಪಿಎಲ್​ನಲ್ಲಿ ಹರಾಜಾಗುವುದು ಅನುಮಾನ. ಏಕೆಂದರೆ ಅಬುಧಾಬಿ ಟಿ10 ಲೀಗ್​ನಲ್ಲಿ 7 ಪಂದ್ಯವಾಡಿದ್ದ ಮನ್ರೊ ಕಲೆಹಾಕಿದ್ದು ಕೇವಲ 78 ರನ್​ ಮಾತ್ರ.

ಕಾಲಿನ್ ಮನ್ರೋ: ನ್ಯೂಜಿಲೆಂಡ್ ತಂಡದ ಎಡಗೈ ದಾಂಡಿಗ ಕಾಲಿನ್ ಮನ್ರೋ ಕೂಡ ಈ ಬಾರಿಯ ಐಪಿಎಲ್​ನಲ್ಲಿ ಹರಾಜಾಗುವುದು ಅನುಮಾನ. ಏಕೆಂದರೆ ಅಬುಧಾಬಿ ಟಿ10 ಲೀಗ್​ನಲ್ಲಿ 7 ಪಂದ್ಯವಾಡಿದ್ದ ಮನ್ರೊ ಕಲೆಹಾಕಿದ್ದು ಕೇವಲ 78 ರನ್​ ಮಾತ್ರ.

6 / 7
ಡೇವಿಡ್ ಮಲಾನ್: ಈ ಬಾರಿಯ ಐಪಿಎಲ್​ ಹರಾಜಿಗಾಗಿ ಇಂಗ್ಲೆಂಡ್ ಆಟಗಾರ ಡೇವಿಡ್ ಮಲಾನ್ 1.5 ಕೋಟಿ ಮೂಲ ಬೆಲೆ ಘೋಷಿಸಿದ್ದಾರೆ. ಆದರೆ ಅತ್ತ ಟಿ10 ಲೀಗ್​ನಲ್ಲಿ ಮಲಾನ್ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದರು. 6 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಮಲಾನ್ ಕಲೆಹಾಕಿದ್ದು ಕೇವಲ 84 ರನ್​ಗಳು ಮಾತ್ರ. ಹೀಗಾಗಿ ಇಂಗ್ಲೆಂಡ್ ಆಟಗಾರ ಖರೀದಿಗೂ ಐಪಿಎಲ್ ಫ್ರಾಂಚೈಸಿಗಳು ಆಸಕ್ತಿ ತೋರುವುದಿಲ್ಲ ಎಂದೇ ಹೇಳಬಹುದು.

ಡೇವಿಡ್ ಮಲಾನ್: ಈ ಬಾರಿಯ ಐಪಿಎಲ್​ ಹರಾಜಿಗಾಗಿ ಇಂಗ್ಲೆಂಡ್ ಆಟಗಾರ ಡೇವಿಡ್ ಮಲಾನ್ 1.5 ಕೋಟಿ ಮೂಲ ಬೆಲೆ ಘೋಷಿಸಿದ್ದಾರೆ. ಆದರೆ ಅತ್ತ ಟಿ10 ಲೀಗ್​ನಲ್ಲಿ ಮಲಾನ್ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದರು. 6 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಮಲಾನ್ ಕಲೆಹಾಕಿದ್ದು ಕೇವಲ 84 ರನ್​ಗಳು ಮಾತ್ರ. ಹೀಗಾಗಿ ಇಂಗ್ಲೆಂಡ್ ಆಟಗಾರ ಖರೀದಿಗೂ ಐಪಿಎಲ್ ಫ್ರಾಂಚೈಸಿಗಳು ಆಸಕ್ತಿ ತೋರುವುದಿಲ್ಲ ಎಂದೇ ಹೇಳಬಹುದು.

7 / 7

Published On - 10:10 pm, Thu, 8 December 22

Follow us
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು