AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: 1 ರನ್​ಗೆ 1 ಕೋಟಿ ಸಂಭಾವನೆ..! ಡೆಲ್ಲಿ ತಂಡಕ್ಕೆ ದುಬಾರಿಯಾದ ದುಬಾರಿ ಪ್ಲೇಯರ್

IPL 2023: ಡೆಲ್ಲಿ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಮಾರ್ಷ್ ಕೋಲ್ಕತ್ತಾ ವಿರುದ್ಧವೂ ವಿಫಲರಾದರು. ಕೇವಲ 2 ರನ್ ಗಳಿಸಲಷ್ಟೇ ಶಕ್ತರಾರು. ಈ ಮೂಲಕ ಸತತ ನಾಲ್ಕನೇ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್ ಮುಂದುವರೆಯಿತು.

ಪೃಥ್ವಿಶಂಕರ
|

Updated on:Apr 21, 2023 | 4:02 PM

Share
ಸತತ ಐದು ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಗೂ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸತತ 5 ಸೋಲಿನ ಬಳಿಕ 128 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು.

ಸತತ ಐದು ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಗೂ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸತತ 5 ಸೋಲಿನ ಬಳಿಕ 128 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು.

1 / 7
ಆದರೆ ಈ ಗೆಲುವು ಕೂಡ ಡೆಲ್ಲಿ ತಂಡಕ್ಕೆ ಸುಲಭವಾಗಿ ದಕ್ಕಲಿಲ್ಲ. ಕೆಕೆಆರ್ ನೀಡಿದ ಅಲ್ಪ ಗುರಿ ಬೆನ್ನತ್ತಿದ್ದ ಡೆಲ್ಲಿ ಪವರ್ ಪ್ಲೇನಲ್ಲೇ 60 ರನ್ ಗಡಿ ದಾಟಿದರೂ ಉಳಿದ ರನ್ ಬಾರಿಸಲು ಕೊನೆಯ ಓವರ್​ವರೆಗೂ ಹೋರಾಟ ನಡೆಸಬೇಕಾಯಿತು.

ಆದರೆ ಈ ಗೆಲುವು ಕೂಡ ಡೆಲ್ಲಿ ತಂಡಕ್ಕೆ ಸುಲಭವಾಗಿ ದಕ್ಕಲಿಲ್ಲ. ಕೆಕೆಆರ್ ನೀಡಿದ ಅಲ್ಪ ಗುರಿ ಬೆನ್ನತ್ತಿದ್ದ ಡೆಲ್ಲಿ ಪವರ್ ಪ್ಲೇನಲ್ಲೇ 60 ರನ್ ಗಡಿ ದಾಟಿದರೂ ಉಳಿದ ರನ್ ಬಾರಿಸಲು ಕೊನೆಯ ಓವರ್​ವರೆಗೂ ಹೋರಾಟ ನಡೆಸಬೇಕಾಯಿತು.

2 / 7
ತಂಡದ ಪರ ಮೊದಲ ಪಂದ್ಯದಲ್ಲೂ ನಾಯಕ ಡೇವಿಡ್ ವಾರ್ನರ್ ಉತ್ತಮ ಬ್ಯಾಟಿಂಗ್ ಮಾಡುತ್ತಿರುವುದನ್ನು ಬಿಟ್ಟರೆ, ಉಳಿದವರ್ಯಾರು ಗೆಲುವಿಗಾಗಿ ಹೋರಾಟ ನಡೆಸುತ್ತಿಲ್ಲ. ಅದರಲ್ಲೂ ತಂಡದ ನಂಬಿಕಸ್ಥ ಬ್ಯಾಟರ್ ಮಿಚೆಲ್ ಮಾರ್ಷ್​ ಅವರ ಕಳಪೆ ಬ್ಯಾಟಿಂಗ್ ಡೆಲ್ಲಿ ತಂಡಕ್ಕೆ ಭಾರಿ ಹಿನ್ನಡೆಯುಂಟು ಮಾಡಿದೆ.

ತಂಡದ ಪರ ಮೊದಲ ಪಂದ್ಯದಲ್ಲೂ ನಾಯಕ ಡೇವಿಡ್ ವಾರ್ನರ್ ಉತ್ತಮ ಬ್ಯಾಟಿಂಗ್ ಮಾಡುತ್ತಿರುವುದನ್ನು ಬಿಟ್ಟರೆ, ಉಳಿದವರ್ಯಾರು ಗೆಲುವಿಗಾಗಿ ಹೋರಾಟ ನಡೆಸುತ್ತಿಲ್ಲ. ಅದರಲ್ಲೂ ತಂಡದ ನಂಬಿಕಸ್ಥ ಬ್ಯಾಟರ್ ಮಿಚೆಲ್ ಮಾರ್ಷ್​ ಅವರ ಕಳಪೆ ಬ್ಯಾಟಿಂಗ್ ಡೆಲ್ಲಿ ತಂಡಕ್ಕೆ ಭಾರಿ ಹಿನ್ನಡೆಯುಂಟು ಮಾಡಿದೆ.

3 / 7
ಡೆಲ್ಲಿ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಮಾರ್ಷ್ ಕೋಲ್ಕತ್ತಾ ವಿರುದ್ಧವೂ ವಿಫಲರಾದರು. ಕೇವಲ 2 ರನ್ ಗಳಿಸಲಷ್ಟೇ ಶಕ್ತರಾರು. ಈ ಮೂಲಕ ಸತತ ನಾಲ್ಕನೇ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್ ಮುಂದುವರೆಯಿತು. ಮಾರ್ಷ್ ಈ ಸೀಸನ್​ನಲ್ಲಿ 4 ಪಂದ್ಯಗಳನ್ನು ಆಡಿದ್ದು, ಈ 4 ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ಒಟ್ಟು 6 ರನ್‌ಗಳು ಹೊರಬಿದ್ದಿವೆ.

ಡೆಲ್ಲಿ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಮಾರ್ಷ್ ಕೋಲ್ಕತ್ತಾ ವಿರುದ್ಧವೂ ವಿಫಲರಾದರು. ಕೇವಲ 2 ರನ್ ಗಳಿಸಲಷ್ಟೇ ಶಕ್ತರಾರು. ಈ ಮೂಲಕ ಸತತ ನಾಲ್ಕನೇ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್ ಮುಂದುವರೆಯಿತು. ಮಾರ್ಷ್ ಈ ಸೀಸನ್​ನಲ್ಲಿ 4 ಪಂದ್ಯಗಳನ್ನು ಆಡಿದ್ದು, ಈ 4 ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ಒಟ್ಟು 6 ರನ್‌ಗಳು ಹೊರಬಿದ್ದಿವೆ.

4 / 7
2021 ರಲ್ಲಿ ಆಸ್ಟ್ರೇಲಿಯಾವನ್ನು ಟಿ20 ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾರ್ಷ್ ಅವರನ್ನು ಐಪಿಎಲ್ 2022 ರ ಮೊದಲು ನಡೆದ ಮೆಗಾ ಹರಾಜಿನಲ್ಲಿ ದೆಹಲಿ 6.50 ಕೋಟಿಗೆ ಖರೀದಿಸಿತು. ಕಳೆದ ಸೀಸನ್ ಅವರಿಗೆ ಚೆನ್ನಾಗಿತ್ತು, ಆದರೆ ಈ ಬಾರಿ ಅವರ ಸ್ಥಿತಿ ತುಂಬಾ ಕೆಟ್ಟದಾಗಿದೆ.

2021 ರಲ್ಲಿ ಆಸ್ಟ್ರೇಲಿಯಾವನ್ನು ಟಿ20 ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾರ್ಷ್ ಅವರನ್ನು ಐಪಿಎಲ್ 2022 ರ ಮೊದಲು ನಡೆದ ಮೆಗಾ ಹರಾಜಿನಲ್ಲಿ ದೆಹಲಿ 6.50 ಕೋಟಿಗೆ ಖರೀದಿಸಿತು. ಕಳೆದ ಸೀಸನ್ ಅವರಿಗೆ ಚೆನ್ನಾಗಿತ್ತು, ಆದರೆ ಈ ಬಾರಿ ಅವರ ಸ್ಥಿತಿ ತುಂಬಾ ಕೆಟ್ಟದಾಗಿದೆ.

5 / 7
ಹರಾಜಿನಲ್ಲಿ 6 ಕೋಟಿಗೂ ಅಧಿಕ ಹಣ ಪಡೆದ ಮಾರ್ಷ್​ ಆಡಿರುವ 4 ಪಂದ್ಯಗಳಲ್ಲಿ ಕೇವಲ 6 ರನ್​ಗಳಿಸಿದ್ದಾರೆ. ಅಂದರೆ ಮಾರ್ಷ್​ ಸಿಡಿಸಿರುವ ಒಂದೊಂದು ರನ್​ಗೆ ಡೆಲ್ಲಿ ತಂಡ ಇದುವರೆಗೆ ಒಂದು ಕೋಟಿ ಸಂಭಾವನೆ ನೀಡಿದಂತ್ತಾಗಿದೆ.

ಹರಾಜಿನಲ್ಲಿ 6 ಕೋಟಿಗೂ ಅಧಿಕ ಹಣ ಪಡೆದ ಮಾರ್ಷ್​ ಆಡಿರುವ 4 ಪಂದ್ಯಗಳಲ್ಲಿ ಕೇವಲ 6 ರನ್​ಗಳಿಸಿದ್ದಾರೆ. ಅಂದರೆ ಮಾರ್ಷ್​ ಸಿಡಿಸಿರುವ ಒಂದೊಂದು ರನ್​ಗೆ ಡೆಲ್ಲಿ ತಂಡ ಇದುವರೆಗೆ ಒಂದು ಕೋಟಿ ಸಂಭಾವನೆ ನೀಡಿದಂತ್ತಾಗಿದೆ.

6 / 7
ಬೌಲಿಂಗ್‌ನಲ್ಲಿ ಕೊಂಚ ಸಮಾಧಾನಕರ ಪ್ರದರ್ಶನ ನೀಡಿರುವ ಮಾರ್ಷ್, ಇದುವರೆಗೆ 43 ಎಸೆತಗಳನ್ನು ಎಸೆದಿದ್ದು, ಅವರ ಖಾತೆಯಲ್ಲಿ 3 ವಿಕೆಟ್‌ಗಳು ಬಂದಿವೆ. ಈ ಸೀಸನ್​ನಲ್ಲಿ ಡೆಲ್ಲಿಗೆ ಇನ್ನೂ ಕನಿಷ್ಠ 8 ಪಂದ್ಯಗಳು ಉಳಿದಿದ್ದೂ, ಈ ಪಂದ್ಯಗಳಲ್ಲಾದರೂ ಮಾರ್ಷ್ ಅಬ್ಬರಿಸಬೇಕಾಗಿದೆ.

ಬೌಲಿಂಗ್‌ನಲ್ಲಿ ಕೊಂಚ ಸಮಾಧಾನಕರ ಪ್ರದರ್ಶನ ನೀಡಿರುವ ಮಾರ್ಷ್, ಇದುವರೆಗೆ 43 ಎಸೆತಗಳನ್ನು ಎಸೆದಿದ್ದು, ಅವರ ಖಾತೆಯಲ್ಲಿ 3 ವಿಕೆಟ್‌ಗಳು ಬಂದಿವೆ. ಈ ಸೀಸನ್​ನಲ್ಲಿ ಡೆಲ್ಲಿಗೆ ಇನ್ನೂ ಕನಿಷ್ಠ 8 ಪಂದ್ಯಗಳು ಉಳಿದಿದ್ದೂ, ಈ ಪಂದ್ಯಗಳಲ್ಲಾದರೂ ಮಾರ್ಷ್ ಅಬ್ಬರಿಸಬೇಕಾಗಿದೆ.

7 / 7

Published On - 4:02 pm, Fri, 21 April 23

Follow Us
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?