AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: 1 ರನ್​ಗೆ 1 ಕೋಟಿ ಸಂಭಾವನೆ..! ಡೆಲ್ಲಿ ತಂಡಕ್ಕೆ ದುಬಾರಿಯಾದ ದುಬಾರಿ ಪ್ಲೇಯರ್

IPL 2023: ಡೆಲ್ಲಿ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಮಾರ್ಷ್ ಕೋಲ್ಕತ್ತಾ ವಿರುದ್ಧವೂ ವಿಫಲರಾದರು. ಕೇವಲ 2 ರನ್ ಗಳಿಸಲಷ್ಟೇ ಶಕ್ತರಾರು. ಈ ಮೂಲಕ ಸತತ ನಾಲ್ಕನೇ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್ ಮುಂದುವರೆಯಿತು.

ಪೃಥ್ವಿಶಂಕರ
|

Updated on:Apr 21, 2023 | 4:02 PM

Share
ಸತತ ಐದು ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಗೂ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸತತ 5 ಸೋಲಿನ ಬಳಿಕ 128 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು.

ಸತತ ಐದು ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಗೂ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸತತ 5 ಸೋಲಿನ ಬಳಿಕ 128 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು.

1 / 7
ಆದರೆ ಈ ಗೆಲುವು ಕೂಡ ಡೆಲ್ಲಿ ತಂಡಕ್ಕೆ ಸುಲಭವಾಗಿ ದಕ್ಕಲಿಲ್ಲ. ಕೆಕೆಆರ್ ನೀಡಿದ ಅಲ್ಪ ಗುರಿ ಬೆನ್ನತ್ತಿದ್ದ ಡೆಲ್ಲಿ ಪವರ್ ಪ್ಲೇನಲ್ಲೇ 60 ರನ್ ಗಡಿ ದಾಟಿದರೂ ಉಳಿದ ರನ್ ಬಾರಿಸಲು ಕೊನೆಯ ಓವರ್​ವರೆಗೂ ಹೋರಾಟ ನಡೆಸಬೇಕಾಯಿತು.

ಆದರೆ ಈ ಗೆಲುವು ಕೂಡ ಡೆಲ್ಲಿ ತಂಡಕ್ಕೆ ಸುಲಭವಾಗಿ ದಕ್ಕಲಿಲ್ಲ. ಕೆಕೆಆರ್ ನೀಡಿದ ಅಲ್ಪ ಗುರಿ ಬೆನ್ನತ್ತಿದ್ದ ಡೆಲ್ಲಿ ಪವರ್ ಪ್ಲೇನಲ್ಲೇ 60 ರನ್ ಗಡಿ ದಾಟಿದರೂ ಉಳಿದ ರನ್ ಬಾರಿಸಲು ಕೊನೆಯ ಓವರ್​ವರೆಗೂ ಹೋರಾಟ ನಡೆಸಬೇಕಾಯಿತು.

2 / 7
ತಂಡದ ಪರ ಮೊದಲ ಪಂದ್ಯದಲ್ಲೂ ನಾಯಕ ಡೇವಿಡ್ ವಾರ್ನರ್ ಉತ್ತಮ ಬ್ಯಾಟಿಂಗ್ ಮಾಡುತ್ತಿರುವುದನ್ನು ಬಿಟ್ಟರೆ, ಉಳಿದವರ್ಯಾರು ಗೆಲುವಿಗಾಗಿ ಹೋರಾಟ ನಡೆಸುತ್ತಿಲ್ಲ. ಅದರಲ್ಲೂ ತಂಡದ ನಂಬಿಕಸ್ಥ ಬ್ಯಾಟರ್ ಮಿಚೆಲ್ ಮಾರ್ಷ್​ ಅವರ ಕಳಪೆ ಬ್ಯಾಟಿಂಗ್ ಡೆಲ್ಲಿ ತಂಡಕ್ಕೆ ಭಾರಿ ಹಿನ್ನಡೆಯುಂಟು ಮಾಡಿದೆ.

ತಂಡದ ಪರ ಮೊದಲ ಪಂದ್ಯದಲ್ಲೂ ನಾಯಕ ಡೇವಿಡ್ ವಾರ್ನರ್ ಉತ್ತಮ ಬ್ಯಾಟಿಂಗ್ ಮಾಡುತ್ತಿರುವುದನ್ನು ಬಿಟ್ಟರೆ, ಉಳಿದವರ್ಯಾರು ಗೆಲುವಿಗಾಗಿ ಹೋರಾಟ ನಡೆಸುತ್ತಿಲ್ಲ. ಅದರಲ್ಲೂ ತಂಡದ ನಂಬಿಕಸ್ಥ ಬ್ಯಾಟರ್ ಮಿಚೆಲ್ ಮಾರ್ಷ್​ ಅವರ ಕಳಪೆ ಬ್ಯಾಟಿಂಗ್ ಡೆಲ್ಲಿ ತಂಡಕ್ಕೆ ಭಾರಿ ಹಿನ್ನಡೆಯುಂಟು ಮಾಡಿದೆ.

3 / 7
ಡೆಲ್ಲಿ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಮಾರ್ಷ್ ಕೋಲ್ಕತ್ತಾ ವಿರುದ್ಧವೂ ವಿಫಲರಾದರು. ಕೇವಲ 2 ರನ್ ಗಳಿಸಲಷ್ಟೇ ಶಕ್ತರಾರು. ಈ ಮೂಲಕ ಸತತ ನಾಲ್ಕನೇ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್ ಮುಂದುವರೆಯಿತು. ಮಾರ್ಷ್ ಈ ಸೀಸನ್​ನಲ್ಲಿ 4 ಪಂದ್ಯಗಳನ್ನು ಆಡಿದ್ದು, ಈ 4 ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ಒಟ್ಟು 6 ರನ್‌ಗಳು ಹೊರಬಿದ್ದಿವೆ.

ಡೆಲ್ಲಿ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಮಾರ್ಷ್ ಕೋಲ್ಕತ್ತಾ ವಿರುದ್ಧವೂ ವಿಫಲರಾದರು. ಕೇವಲ 2 ರನ್ ಗಳಿಸಲಷ್ಟೇ ಶಕ್ತರಾರು. ಈ ಮೂಲಕ ಸತತ ನಾಲ್ಕನೇ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್ ಮುಂದುವರೆಯಿತು. ಮಾರ್ಷ್ ಈ ಸೀಸನ್​ನಲ್ಲಿ 4 ಪಂದ್ಯಗಳನ್ನು ಆಡಿದ್ದು, ಈ 4 ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ಒಟ್ಟು 6 ರನ್‌ಗಳು ಹೊರಬಿದ್ದಿವೆ.

4 / 7
2021 ರಲ್ಲಿ ಆಸ್ಟ್ರೇಲಿಯಾವನ್ನು ಟಿ20 ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾರ್ಷ್ ಅವರನ್ನು ಐಪಿಎಲ್ 2022 ರ ಮೊದಲು ನಡೆದ ಮೆಗಾ ಹರಾಜಿನಲ್ಲಿ ದೆಹಲಿ 6.50 ಕೋಟಿಗೆ ಖರೀದಿಸಿತು. ಕಳೆದ ಸೀಸನ್ ಅವರಿಗೆ ಚೆನ್ನಾಗಿತ್ತು, ಆದರೆ ಈ ಬಾರಿ ಅವರ ಸ್ಥಿತಿ ತುಂಬಾ ಕೆಟ್ಟದಾಗಿದೆ.

2021 ರಲ್ಲಿ ಆಸ್ಟ್ರೇಲಿಯಾವನ್ನು ಟಿ20 ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾರ್ಷ್ ಅವರನ್ನು ಐಪಿಎಲ್ 2022 ರ ಮೊದಲು ನಡೆದ ಮೆಗಾ ಹರಾಜಿನಲ್ಲಿ ದೆಹಲಿ 6.50 ಕೋಟಿಗೆ ಖರೀದಿಸಿತು. ಕಳೆದ ಸೀಸನ್ ಅವರಿಗೆ ಚೆನ್ನಾಗಿತ್ತು, ಆದರೆ ಈ ಬಾರಿ ಅವರ ಸ್ಥಿತಿ ತುಂಬಾ ಕೆಟ್ಟದಾಗಿದೆ.

5 / 7
ಹರಾಜಿನಲ್ಲಿ 6 ಕೋಟಿಗೂ ಅಧಿಕ ಹಣ ಪಡೆದ ಮಾರ್ಷ್​ ಆಡಿರುವ 4 ಪಂದ್ಯಗಳಲ್ಲಿ ಕೇವಲ 6 ರನ್​ಗಳಿಸಿದ್ದಾರೆ. ಅಂದರೆ ಮಾರ್ಷ್​ ಸಿಡಿಸಿರುವ ಒಂದೊಂದು ರನ್​ಗೆ ಡೆಲ್ಲಿ ತಂಡ ಇದುವರೆಗೆ ಒಂದು ಕೋಟಿ ಸಂಭಾವನೆ ನೀಡಿದಂತ್ತಾಗಿದೆ.

ಹರಾಜಿನಲ್ಲಿ 6 ಕೋಟಿಗೂ ಅಧಿಕ ಹಣ ಪಡೆದ ಮಾರ್ಷ್​ ಆಡಿರುವ 4 ಪಂದ್ಯಗಳಲ್ಲಿ ಕೇವಲ 6 ರನ್​ಗಳಿಸಿದ್ದಾರೆ. ಅಂದರೆ ಮಾರ್ಷ್​ ಸಿಡಿಸಿರುವ ಒಂದೊಂದು ರನ್​ಗೆ ಡೆಲ್ಲಿ ತಂಡ ಇದುವರೆಗೆ ಒಂದು ಕೋಟಿ ಸಂಭಾವನೆ ನೀಡಿದಂತ್ತಾಗಿದೆ.

6 / 7
ಬೌಲಿಂಗ್‌ನಲ್ಲಿ ಕೊಂಚ ಸಮಾಧಾನಕರ ಪ್ರದರ್ಶನ ನೀಡಿರುವ ಮಾರ್ಷ್, ಇದುವರೆಗೆ 43 ಎಸೆತಗಳನ್ನು ಎಸೆದಿದ್ದು, ಅವರ ಖಾತೆಯಲ್ಲಿ 3 ವಿಕೆಟ್‌ಗಳು ಬಂದಿವೆ. ಈ ಸೀಸನ್​ನಲ್ಲಿ ಡೆಲ್ಲಿಗೆ ಇನ್ನೂ ಕನಿಷ್ಠ 8 ಪಂದ್ಯಗಳು ಉಳಿದಿದ್ದೂ, ಈ ಪಂದ್ಯಗಳಲ್ಲಾದರೂ ಮಾರ್ಷ್ ಅಬ್ಬರಿಸಬೇಕಾಗಿದೆ.

ಬೌಲಿಂಗ್‌ನಲ್ಲಿ ಕೊಂಚ ಸಮಾಧಾನಕರ ಪ್ರದರ್ಶನ ನೀಡಿರುವ ಮಾರ್ಷ್, ಇದುವರೆಗೆ 43 ಎಸೆತಗಳನ್ನು ಎಸೆದಿದ್ದು, ಅವರ ಖಾತೆಯಲ್ಲಿ 3 ವಿಕೆಟ್‌ಗಳು ಬಂದಿವೆ. ಈ ಸೀಸನ್​ನಲ್ಲಿ ಡೆಲ್ಲಿಗೆ ಇನ್ನೂ ಕನಿಷ್ಠ 8 ಪಂದ್ಯಗಳು ಉಳಿದಿದ್ದೂ, ಈ ಪಂದ್ಯಗಳಲ್ಲಾದರೂ ಮಾರ್ಷ್ ಅಬ್ಬರಿಸಬೇಕಾಗಿದೆ.

7 / 7

Published On - 4:02 pm, Fri, 21 April 23

Follow Us
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್