AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: RCB ಪ್ಲೇಯಿಂಗ್​ 11 ಬದಲಿಸದಿರಲು ಇದುವೇ ಅಸಲಿ ಕಾರಣ..!

IPL 2023 RCB Kannada: 4 ಪಂದ್ಯಗಳ ಗೆಲುವಿನಲ್ಲಿ ಅತ್ಯಮೂಲ್ಯ ಕೊಡುಗೆ ನೀಡಿರುವುದು ಕೂಡ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಮೊಹಮ್ಮದ್ ಸಿರಾಜ್.

TV9 Web
| Edited By: |

Updated on: Apr 27, 2023 | 9:23 PM

Share
RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಕೇದಾರ್ ಜಾಧವ್, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.

RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಕೇದಾರ್ ಜಾಧವ್, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.

1 / 15
ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಕರಾರುವಾಕ್ ದಾಳಿ ಸಂಘಟಿಸಿದರೂ ಉಳಿದ ಬೌಲರ್​ಗಳಿಂದ ಉತ್ತಮ ಸಾಥ್ ಸಿಗುತ್ತಿಲ್ಲ. ಇತ್ತ 4 ಪಂದ್ಯಗಳ ಗೆಲುವಿನಲ್ಲಿ ಅತ್ಯಮೂಲ್ಯ ಕೊಡುಗೆ ನೀಡಿರುವುದು ಕೂಡ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಮಾತ್ರ.

ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಕರಾರುವಾಕ್ ದಾಳಿ ಸಂಘಟಿಸಿದರೂ ಉಳಿದ ಬೌಲರ್​ಗಳಿಂದ ಉತ್ತಮ ಸಾಥ್ ಸಿಗುತ್ತಿಲ್ಲ. ಇತ್ತ 4 ಪಂದ್ಯಗಳ ಗೆಲುವಿನಲ್ಲಿ ಅತ್ಯಮೂಲ್ಯ ಕೊಡುಗೆ ನೀಡಿರುವುದು ಕೂಡ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಮಾತ್ರ.

2 / 15
ಇಲ್ಲಿ ಫಾಫ್ ಡುಪ್ಲೆಸಿಸ್ 422 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 333 ರನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 258 ರನ್ ಕಲೆಹಾಕಿದ್ದಾರೆ. ಈ ಮೂವರನ್ನು ಹೊರತುಪಡಿಸಿದರೆ ಉಳಿದ ಯಾವುದೇ ಬ್ಯಾಟ್ಸ್​ಮನ್​ 100 ರನ್​ ಕೂಡ ಕಲೆಹಾಕಿಲ್ಲ ಎಂಬುದೇ ಅಚ್ಚರಿ. ಹಾಗೆಯೇ ಮೊಹಮ್ಮದ್ ಸಿರಾಜ್ 8 ಪಂದ್ಯಗಳಿಂದ 14 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಇಲ್ಲಿ ಫಾಫ್ ಡುಪ್ಲೆಸಿಸ್ 422 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 333 ರನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 258 ರನ್ ಕಲೆಹಾಕಿದ್ದಾರೆ. ಈ ಮೂವರನ್ನು ಹೊರತುಪಡಿಸಿದರೆ ಉಳಿದ ಯಾವುದೇ ಬ್ಯಾಟ್ಸ್​ಮನ್​ 100 ರನ್​ ಕೂಡ ಕಲೆಹಾಕಿಲ್ಲ ಎಂಬುದೇ ಅಚ್ಚರಿ. ಹಾಗೆಯೇ ಮೊಹಮ್ಮದ್ ಸಿರಾಜ್ 8 ಪಂದ್ಯಗಳಿಂದ 14 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

3 / 15
ಆರ್​ಸಿಬಿ ತಂಡದ ತ್ರಿಮೂರ್ತಿಗಳನ್ನು ಹೊರತುಪಡಿಸಿದರೆ, ಅನುಭವಿ ಬ್ಯಾಟರ್​ ದಿನೇಶ್ ಕಾರ್ತಿಕ್ ಇದುವರೆಗೆ 83 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಹಾಗೆಯೇ ಮಹಿಪಾಲ್ ಲೊಮ್ರೋರ್ 75 ರನ್, ಶಹಬಾಝ್ ಅಹ್ಮದ್ ಕೇವಲ 42 ರನ್ ಗಳಿಸಿದ್ದಾರೆ. ಇನ್ನು  ಸುಯಶ್ ಪ್ರಭುದೇಸಾಯಿ ಇದುವರೆಗೆ ಕಲೆಹಾಕಿರುವುದು ಕೇವಲ 29 ರನ್ ಮಾತ್ರ. ಇದಲ್ಲದೆ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿದಿರುವ ಅನೂಜ್ ರಾವತ್ ಮೂರು ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 16 ರನ್ ಅಷ್ಟೇ. ಇನ್ನು ಕರ್ಣ್ ಶರ್ಮಾ, ಆಕಾಶ್ ದೀಪ್​ಗೆ ಕೆಲ ಪಂದ್ಯಗಳಲ್ಲಿ ಅವಕಾಶ ನೀಡಿದರೂ ಸಂಪೂರ್ಣ ವಿಫಲರಾಗಿದ್ದರು.

ಆರ್​ಸಿಬಿ ತಂಡದ ತ್ರಿಮೂರ್ತಿಗಳನ್ನು ಹೊರತುಪಡಿಸಿದರೆ, ಅನುಭವಿ ಬ್ಯಾಟರ್​ ದಿನೇಶ್ ಕಾರ್ತಿಕ್ ಇದುವರೆಗೆ 83 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಹಾಗೆಯೇ ಮಹಿಪಾಲ್ ಲೊಮ್ರೋರ್ 75 ರನ್, ಶಹಬಾಝ್ ಅಹ್ಮದ್ ಕೇವಲ 42 ರನ್ ಗಳಿಸಿದ್ದಾರೆ. ಇನ್ನು ಸುಯಶ್ ಪ್ರಭುದೇಸಾಯಿ ಇದುವರೆಗೆ ಕಲೆಹಾಕಿರುವುದು ಕೇವಲ 29 ರನ್ ಮಾತ್ರ. ಇದಲ್ಲದೆ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿದಿರುವ ಅನೂಜ್ ರಾವತ್ ಮೂರು ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 16 ರನ್ ಅಷ್ಟೇ. ಇನ್ನು ಕರ್ಣ್ ಶರ್ಮಾ, ಆಕಾಶ್ ದೀಪ್​ಗೆ ಕೆಲ ಪಂದ್ಯಗಳಲ್ಲಿ ಅವಕಾಶ ನೀಡಿದರೂ ಸಂಪೂರ್ಣ ವಿಫಲರಾಗಿದ್ದರು.

4 / 15
ಇದಾಗ್ಯೂ ಕಳೆದ 8 ಪಂದ್ಯಗಳಲ್ಲೂ ಇದೇ ಆಟಗಾರರು ಸತತ ಅವಕಾಶ ಪಡೆದಿದ್ದಾರೆ. ಸತತ ವೈಫಲ್ಯ ಅನುಭವಿಸುತ್ತಿದ್ದರೂ ಆರ್​ಸಿಬಿ ಟೀಮ್ ಮ್ಯಾನೇಜ್ಮೆಂಟ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆ ಮಾಡುತ್ತಿಲ್ಲವೇಕೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಆರ್​ಸಿಬಿ ಫ್ರಾಂಚೈಸಿ ಖರೀದಿಸಿರುವ ಆಟಗಾರರು.

ಇದಾಗ್ಯೂ ಕಳೆದ 8 ಪಂದ್ಯಗಳಲ್ಲೂ ಇದೇ ಆಟಗಾರರು ಸತತ ಅವಕಾಶ ಪಡೆದಿದ್ದಾರೆ. ಸತತ ವೈಫಲ್ಯ ಅನುಭವಿಸುತ್ತಿದ್ದರೂ ಆರ್​ಸಿಬಿ ಟೀಮ್ ಮ್ಯಾನೇಜ್ಮೆಂಟ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆ ಮಾಡುತ್ತಿಲ್ಲವೇಕೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಆರ್​ಸಿಬಿ ಫ್ರಾಂಚೈಸಿ ಖರೀದಿಸಿರುವ ಆಟಗಾರರು.

5 / 15
ಈ ಬಾರಿಯ ಹರಾಜಿಗೂ ಮುನ್ನ ಆರ್​ಸಿಬಿ 18 ಆಟಗಾರರನ್ನು ಉಳಿಸಿಕೊಂಡಿತ್ತು. ಇದಾದ ಬಳಿಕ ಹರಾಜಿನಲ್ಲಿ ಒಟ್ಟು 7 ಆಟಗಾರರನ್ನು ಖರೀದಿಸಿ ತಂಡದ ಬಲವನ್ನು 25 ಕ್ಕೇರಿಸಿತ್ತು. ಆದರೆ ಹೀಗೆ ಉಳಿಸಿಕೊಂಡ ಹಾಗೂ ಖರೀದಿಸಿದ ಭಾರತೀಯ ಆಟಗಾರರು ಅಂತಹ ಅದ್ಭುತ ಆಟಗಾರರಲ್ಲ ಎಂಬುದೇ ಸತ್ಯ. ಹೀಗಾಗಿಯೇ ಅವರೆಲ್ಲರೂ ಬೆಂಚ್ ಕಾಯಲು ಸೀಮಿತವಾಗಿದ್ದಾರೆ. ಇಲ್ಲಿ ಇದುವರೆಗೆ ಕಣಕ್ಕಿಳಿಯದ ಆಟಗಾರರ ಅಂಕಿ ಅಂಶಗಳನ್ನು ನೋಡುವುದಾದರೆ...

ಈ ಬಾರಿಯ ಹರಾಜಿಗೂ ಮುನ್ನ ಆರ್​ಸಿಬಿ 18 ಆಟಗಾರರನ್ನು ಉಳಿಸಿಕೊಂಡಿತ್ತು. ಇದಾದ ಬಳಿಕ ಹರಾಜಿನಲ್ಲಿ ಒಟ್ಟು 7 ಆಟಗಾರರನ್ನು ಖರೀದಿಸಿ ತಂಡದ ಬಲವನ್ನು 25 ಕ್ಕೇರಿಸಿತ್ತು. ಆದರೆ ಹೀಗೆ ಉಳಿಸಿಕೊಂಡ ಹಾಗೂ ಖರೀದಿಸಿದ ಭಾರತೀಯ ಆಟಗಾರರು ಅಂತಹ ಅದ್ಭುತ ಆಟಗಾರರಲ್ಲ ಎಂಬುದೇ ಸತ್ಯ. ಹೀಗಾಗಿಯೇ ಅವರೆಲ್ಲರೂ ಬೆಂಚ್ ಕಾಯಲು ಸೀಮಿತವಾಗಿದ್ದಾರೆ. ಇಲ್ಲಿ ಇದುವರೆಗೆ ಕಣಕ್ಕಿಳಿಯದ ಆಟಗಾರರ ಅಂಕಿ ಅಂಶಗಳನ್ನು ನೋಡುವುದಾದರೆ...

6 / 15
ಆರ್​ಸಿಬಿ ಈ ಬಾರಿ ಸೋನು ಯಾದವ್ ಹೆಸರಿನ ಯುವ ಆಲ್​ರೌಂಡರ್ ಅನ್ನು ಖರೀದಿಸಿತ್ತು. ಆದರೆ ದೇಶೀಯ ಅಂಗಳದಲ್ಲಿ ಸೋನು ಯಾದವ್ ಅವರ ಪ್ರದರ್ಶನದ ಅಂಕಿ ಅಂಶವನ್ನು ಗಮನಿಸಿದರೆ ಅವರು ಬೆಂಚ್ ಕಾಯಲು ಸೂಕ್ತ ಎಂಬುದು ಸ್ಪಷ್ಟವಾಗುತ್ತೆ. ಏಕೆಂದರೆ 5 ಟಿ20 ಪಂದ್ಯವಾಡಿರುವ ಸೋನು ಕಲೆಹಾಕಿರುವುದು ಕೇವಲ 16 ರನ್​ ಮಾತ್ರ. ಇನ್ನು ಬೌಲಿಂಗ್​ನಲ್ಲಿ 9 ವಿಕೆಟ್ ಪಡೆದಿದ್ದಾರಷ್ಟೇ.

ಆರ್​ಸಿಬಿ ಈ ಬಾರಿ ಸೋನು ಯಾದವ್ ಹೆಸರಿನ ಯುವ ಆಲ್​ರೌಂಡರ್ ಅನ್ನು ಖರೀದಿಸಿತ್ತು. ಆದರೆ ದೇಶೀಯ ಅಂಗಳದಲ್ಲಿ ಸೋನು ಯಾದವ್ ಅವರ ಪ್ರದರ್ಶನದ ಅಂಕಿ ಅಂಶವನ್ನು ಗಮನಿಸಿದರೆ ಅವರು ಬೆಂಚ್ ಕಾಯಲು ಸೂಕ್ತ ಎಂಬುದು ಸ್ಪಷ್ಟವಾಗುತ್ತೆ. ಏಕೆಂದರೆ 5 ಟಿ20 ಪಂದ್ಯವಾಡಿರುವ ಸೋನು ಕಲೆಹಾಕಿರುವುದು ಕೇವಲ 16 ರನ್​ ಮಾತ್ರ. ಇನ್ನು ಬೌಲಿಂಗ್​ನಲ್ಲಿ 9 ವಿಕೆಟ್ ಪಡೆದಿದ್ದಾರಷ್ಟೇ.

7 / 15
ಇನ್ನು ರಜನ್ ಕುಮಾರ್ ಅವರು ಕೂಡ ಭರ್ಜರಿ ಪ್ರದರ್ಶನದಿಂದ ಗಮನ ಸೆಳೆದ ಆಟಗಾರನಲ್ಲ. ಏಕೆಂದರೆ ದೇಶೀಯ ಅಂಗಳದಲ್ಲಿ 7 ಟಿ20 ಪಂದ್ಯಗಳನ್ನಾಡಿರುವ ರಜನ್ ಒಟ್ಟು 10 ವಿಕೆಟ್ ಮಾತ್ರ ಪಡೆದಿದ್ದಾರೆ. ಇದಾಗ್ಯೂ ಆರ್​ಸಿಬಿಗೆ ಆಯ್ಕೆಯಾಗಿರುವುದು ಅಚ್ಚರಿಯೇ ಸರಿ.

ಇನ್ನು ರಜನ್ ಕುಮಾರ್ ಅವರು ಕೂಡ ಭರ್ಜರಿ ಪ್ರದರ್ಶನದಿಂದ ಗಮನ ಸೆಳೆದ ಆಟಗಾರನಲ್ಲ. ಏಕೆಂದರೆ ದೇಶೀಯ ಅಂಗಳದಲ್ಲಿ 7 ಟಿ20 ಪಂದ್ಯಗಳನ್ನಾಡಿರುವ ರಜನ್ ಒಟ್ಟು 10 ವಿಕೆಟ್ ಮಾತ್ರ ಪಡೆದಿದ್ದಾರೆ. ಇದಾಗ್ಯೂ ಆರ್​ಸಿಬಿಗೆ ಆಯ್ಕೆಯಾಗಿರುವುದು ಅಚ್ಚರಿಯೇ ಸರಿ.

8 / 15
ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಆರ್​ಸಿಬಿ ಈ ಬಾರಿ ದೇಶೀಯ ಟೂರ್ನಿ ಆಡದ ಆಟಗಾರನನ್ನೂ ಕೂಡ ಖರೀದಿಸಿದೆ. ಜಮ್ಮು ಕಾಶ್ಮೀರದ ಯುವ ವೇಗಿ ಅವಿನಾಶ್ ಸಿಂಗ್ ಅವರ ವೇಗವನ್ನು ನೋಡಿ ಆರ್​ಸಿಬಿ ಮಣೆಹಾಕಿತ್ತು. ಇದರ ಹೊರತಾಗಿ ಅವಿನಾಶ್ ಯಾವುದೇ ದೇಶೀಯ ಟೂರ್ನಿಗಳನ್ನು ಆಡಿಲ್ಲ ಎಂದು ವರದಿಯಾಗಿದೆ.

ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಆರ್​ಸಿಬಿ ಈ ಬಾರಿ ದೇಶೀಯ ಟೂರ್ನಿ ಆಡದ ಆಟಗಾರನನ್ನೂ ಕೂಡ ಖರೀದಿಸಿದೆ. ಜಮ್ಮು ಕಾಶ್ಮೀರದ ಯುವ ವೇಗಿ ಅವಿನಾಶ್ ಸಿಂಗ್ ಅವರ ವೇಗವನ್ನು ನೋಡಿ ಆರ್​ಸಿಬಿ ಮಣೆಹಾಕಿತ್ತು. ಇದರ ಹೊರತಾಗಿ ಅವಿನಾಶ್ ಯಾವುದೇ ದೇಶೀಯ ಟೂರ್ನಿಗಳನ್ನು ಆಡಿಲ್ಲ ಎಂದು ವರದಿಯಾಗಿದೆ.

9 / 15
ಇನ್ನು ಈ ಬಾರಿ ಆರ್​ಸಿಬಿ 24 ವರ್ಷದ ಲೆಗ್ ಸ್ಪಿನ್ನರ್ ಹಿಮಾಂಶು ಶರ್ಮಾರನ್ನು ಕೂಡ ಖರೀದಿಸಿದೆ. ಆದರೆ ಹಿಮಾಂಶು ದೇಶೀಯ ಅಂಗಳದಲ್ಲಿ ಎಲ್ಲಿ ಯಾವಾಗ ಆಡಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಇನ್ನು ಈ ಬಾರಿ ಆರ್​ಸಿಬಿ 24 ವರ್ಷದ ಲೆಗ್ ಸ್ಪಿನ್ನರ್ ಹಿಮಾಂಶು ಶರ್ಮಾರನ್ನು ಕೂಡ ಖರೀದಿಸಿದೆ. ಆದರೆ ಹಿಮಾಂಶು ದೇಶೀಯ ಅಂಗಳದಲ್ಲಿ ಎಲ್ಲಿ ಯಾವಾಗ ಆಡಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

10 / 15
ಇನ್ನುಳಿದಿರುವುದು ಸಿದ್ದಾರ್ಥ್ ಕೌಲ್. ಈಗಾಗಲೇ ಐಪಿಎಲ್​ನಲ್ಲಿ 55 ಪಂದ್ಯಗಳನ್ನಾಡಿರುವ ಕೌಲ್ ಪ್ರತಿ ಓವರ್​ಗೆ 8.63 ಸರಾಸರಿಯಲ್ಲಿ ರನ್ ನೀಡಿದ್ದಾರೆ. ಇನ್ನು ಪಡೆದಿರುವುದು ಕೇವಲ 58 ವಿಕೆಟ್ ಮಾತ್ರ. ಅತ್ತ ಯಾವುದೇ ಫ್ರಾಂಚೈಸಿಗೂ ಬೇಡವಾಗಿದ್ದ ಸಿದ್ಧಾರ್ಥ್ ಅವರನ್ನು ಕಳೆದ ಸೀಸನ್​ನಲ್ಲಿ ಆರ್​ಸಿಬಿ ಖರೀದಿಸಿತ್ತು. 2022 ರಲ್ಲಿ ಕೊನೆಯ ಬಾರಿ ಆರ್​ಸಿಬಿ ಪರ ಕಣಕ್ಕಿಳಿದಿದ್ದ ಕೌಲ್ 4 ಓವರ್​ಗಳಲ್ಲಿ 43 ರನ್ ನೀಡಿದ್ದರು. ಇದಾದ ಬಳಿಕ ಅವರಿಗೆ ಅವಕಾಶ ನೀಡಿಲ್ಲ. ಅಂದರೆ ಕೌಲ್​ ಅವರ ಬೌಲಿಂಗ್ ಸಾಮರ್ಥ್ಯವನ್ನು ಇಲ್ಲೇ ಊಹಿಸಿಕೊಳ್ಳಬಹುದು.

ಇನ್ನುಳಿದಿರುವುದು ಸಿದ್ದಾರ್ಥ್ ಕೌಲ್. ಈಗಾಗಲೇ ಐಪಿಎಲ್​ನಲ್ಲಿ 55 ಪಂದ್ಯಗಳನ್ನಾಡಿರುವ ಕೌಲ್ ಪ್ರತಿ ಓವರ್​ಗೆ 8.63 ಸರಾಸರಿಯಲ್ಲಿ ರನ್ ನೀಡಿದ್ದಾರೆ. ಇನ್ನು ಪಡೆದಿರುವುದು ಕೇವಲ 58 ವಿಕೆಟ್ ಮಾತ್ರ. ಅತ್ತ ಯಾವುದೇ ಫ್ರಾಂಚೈಸಿಗೂ ಬೇಡವಾಗಿದ್ದ ಸಿದ್ಧಾರ್ಥ್ ಅವರನ್ನು ಕಳೆದ ಸೀಸನ್​ನಲ್ಲಿ ಆರ್​ಸಿಬಿ ಖರೀದಿಸಿತ್ತು. 2022 ರಲ್ಲಿ ಕೊನೆಯ ಬಾರಿ ಆರ್​ಸಿಬಿ ಪರ ಕಣಕ್ಕಿಳಿದಿದ್ದ ಕೌಲ್ 4 ಓವರ್​ಗಳಲ್ಲಿ 43 ರನ್ ನೀಡಿದ್ದರು. ಇದಾದ ಬಳಿಕ ಅವರಿಗೆ ಅವಕಾಶ ನೀಡಿಲ್ಲ. ಅಂದರೆ ಕೌಲ್​ ಅವರ ಬೌಲಿಂಗ್ ಸಾಮರ್ಥ್ಯವನ್ನು ಇಲ್ಲೇ ಊಹಿಸಿಕೊಳ್ಳಬಹುದು.

11 / 15
ಇನ್ನು ತಂಡದಲ್ಲಿರುವ 24 ವರ್ಷದ ಕರ್ನಾಟಕದ ಆಲ್​ರೌಂಡರ್ ಮನೋಜ್ ಭಾಂಡಗೆ ದೇಶೀಯ ಅಂಗಳದಲ್ಲಿ ಇದುವರೆಗೆ 16 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 7 ಇನಿಂಗ್ಸ್​ನಲ್ಲಿ 116 ರನ್​ ಕಲೆಹಾಕಿದ್ದಾರೆ. ಹಾಗೆಯೇ 8 ವಿಕೆಟ್​ಗಳನ್ನು ಕೂಡ ಕಬಳಿಸಿದ್ದಾರೆ. ಪ್ರಸ್ತುತ RCB ಪ್ಲೇಯಿಂಗ್ ಇಲೆವೆನ್​ನ ಭಾಗವಾಗಿರುವ ಇತರೆ ಭಾರತೀಯ ಆಟಗಾರರ ಪ್ರದರ್ಶನ ಗಮನಿಸಿದರೆ, ಮನೋಜ್​ ಭಾಂಡಗೆ ಕೂಡ ಆಯ್ಕೆಗೆ ಅರ್ಹರು ಎನ್ನಬಹುದು.

ಇನ್ನು ತಂಡದಲ್ಲಿರುವ 24 ವರ್ಷದ ಕರ್ನಾಟಕದ ಆಲ್​ರೌಂಡರ್ ಮನೋಜ್ ಭಾಂಡಗೆ ದೇಶೀಯ ಅಂಗಳದಲ್ಲಿ ಇದುವರೆಗೆ 16 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 7 ಇನಿಂಗ್ಸ್​ನಲ್ಲಿ 116 ರನ್​ ಕಲೆಹಾಕಿದ್ದಾರೆ. ಹಾಗೆಯೇ 8 ವಿಕೆಟ್​ಗಳನ್ನು ಕೂಡ ಕಬಳಿಸಿದ್ದಾರೆ. ಪ್ರಸ್ತುತ RCB ಪ್ಲೇಯಿಂಗ್ ಇಲೆವೆನ್​ನ ಭಾಗವಾಗಿರುವ ಇತರೆ ಭಾರತೀಯ ಆಟಗಾರರ ಪ್ರದರ್ಶನ ಗಮನಿಸಿದರೆ, ಮನೋಜ್​ ಭಾಂಡಗೆ ಕೂಡ ಆಯ್ಕೆಗೆ ಅರ್ಹರು ಎನ್ನಬಹುದು.

12 / 15
ಅಂದರೆ ಆರ್​ಸಿಬಿ ಫ್ರಾಂಚೈಸಿಯು ಹರಾಜಿನ ವೇಳೆ ಮಾಡಿದ ದೊಡ್ಡ ತಪ್ಪಿನಿಂದಾಗಿ ಇದೀಗ ಬದಲಿ ಆಟಗಾರರನ್ನು ಕಣಕ್ಕಿಳಿಸಲು ಉತ್ತಮ ಆಟಗಾರರಿಲ್ಲದೆ ಪರಿತಪಿಸುತ್ತಿದೆ.

ಅಂದರೆ ಆರ್​ಸಿಬಿ ಫ್ರಾಂಚೈಸಿಯು ಹರಾಜಿನ ವೇಳೆ ಮಾಡಿದ ದೊಡ್ಡ ತಪ್ಪಿನಿಂದಾಗಿ ಇದೀಗ ಬದಲಿ ಆಟಗಾರರನ್ನು ಕಣಕ್ಕಿಳಿಸಲು ಉತ್ತಮ ಆಟಗಾರರಿಲ್ಲದೆ ಪರಿತಪಿಸುತ್ತಿದೆ.

13 / 15
ಇದೇ ಕಾರಣದಿಂದಾಗಿ ಸತತವಾಗಿ ವಿಫಲರಾಗುತ್ತಿದ್ದರೂ ಸುಯಶ್ ಪ್ರಭುದೇಸಾಯಿ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್​ನಂತಹ ಆಟಗಾರರು ನಿರಂತರ ಅವಕಾಶ ಪಡೆಯುತ್ತಿದ್ದಾರೆ.

ಇದೇ ಕಾರಣದಿಂದಾಗಿ ಸತತವಾಗಿ ವಿಫಲರಾಗುತ್ತಿದ್ದರೂ ಸುಯಶ್ ಪ್ರಭುದೇಸಾಯಿ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್​ನಂತಹ ಆಟಗಾರರು ನಿರಂತರ ಅವಕಾಶ ಪಡೆಯುತ್ತಿದ್ದಾರೆ.

14 / 15
ಇತ್ತ ತಂಡದಲ್ಲಿ ಅತ್ಯುತ್ತಮ ಅನುಭವಿ ಭಾರತೀಯ ಆಟಗಾರರು ಇಲ್ಲದಿರುವ ಕಾರಣ ಆರ್​ಸಿಬಿ ಫ್ರಾಂಚೈಸಿ ಕೂಡ ಔಟ್ ಆಫ್ ಫಾರ್ಮ್​ನಲ್ಲಿರುವ ಆಟಗಾರರನ್ನೇ ಮತ್ತೆ ಮತ್ತೆ ಕಣಕ್ಕಿಳಿಸುತ್ತಿದೆ. ಪರಿಣಾಮ ಗೆಲ್ಲಬಹುದಾಗಿದ್ದ ಮ್ಯಾಚ್​ಗಳನ್ನು ಕೂಡ ಸೋತು ಆರ್​ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಇತ್ತ ತಂಡದಲ್ಲಿ ಅತ್ಯುತ್ತಮ ಅನುಭವಿ ಭಾರತೀಯ ಆಟಗಾರರು ಇಲ್ಲದಿರುವ ಕಾರಣ ಆರ್​ಸಿಬಿ ಫ್ರಾಂಚೈಸಿ ಕೂಡ ಔಟ್ ಆಫ್ ಫಾರ್ಮ್​ನಲ್ಲಿರುವ ಆಟಗಾರರನ್ನೇ ಮತ್ತೆ ಮತ್ತೆ ಕಣಕ್ಕಿಳಿಸುತ್ತಿದೆ. ಪರಿಣಾಮ ಗೆಲ್ಲಬಹುದಾಗಿದ್ದ ಮ್ಯಾಚ್​ಗಳನ್ನು ಕೂಡ ಸೋತು ಆರ್​ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

15 / 15
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ