IPL 2024: ನಾನೇ ನಾಯಕ: ಮೊದಲ 12 ಓವರ್​ಗಳಲ್ಲಿ ಬುಮ್ರಾಗೆ ಒಂದೇ ಓವರ್ ನೀಡಿದ ಪಾಂಡ್ಯ..!

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್​ 2024) 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವೇಗಿ ಜಸ್​ಪ್ರೀತ್ ಬುಮ್ರಾ ಮಿಂಚಿನ ದಾಳಿ ಮೂಲಕ ಮಿಂಚಿದ್ದಾರೆ. ಆದರೆ ಈ ಪಂದ್ಯದಲ್ಲಿ ಬುಮ್ರಾ ಮೊದಲ 12 ಓವರ್​ಗಳಲ್ಲಿ ಎಸೆದಿದ್ದು ಕೇವಲ 1 ಓವರ್ ಎಂಬುದೇ ಅಚ್ಚರಿ. ಅಂದರೆ ಐಪಿಎಲ್​ನಲ್ಲಿ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಬುಮ್ರಾ ಅವರನ್ನು ಪವರ್​ಪ್ಲೇನಲ್ಲಿ ಬಳಸಿಕೊಳ್ಳದಿರುವುದು ಇದೀಗ ಚರ್ಚೆಯನ್ನು ಹುಟ್ಟುಹಾಕಿದೆ.

| Updated By: ಝಾಹಿರ್ ಯೂಸುಫ್

Updated on: Mar 25, 2024 | 10:03 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡ ಮುಗ್ಗರಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ತಂಡವನ್ನು 6 ರನ್​ಗಳಿಂದ ಮಣಿಸಿ ಗುಜರಾತ್ ಟೈಟಾನ್ಸ್ ತಂಡ ಶುಭಾರಂಭ ಮಾಡಿದೆ. ಈ ಸೋಲಿನ ಬೆನ್ನಲ್ಲೇ ಇದೀಗ ಹಾರ್ದಿಕ್ ಪಾಂಡ್ಯರ (Hardik Pandya) ನಾಯಕತ್ವದ ಬಗ್ಗೆ ಪ್ರಶ್ನೆಗಳೆದಿವೆ.

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡ ಮುಗ್ಗರಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ತಂಡವನ್ನು 6 ರನ್​ಗಳಿಂದ ಮಣಿಸಿ ಗುಜರಾತ್ ಟೈಟಾನ್ಸ್ ತಂಡ ಶುಭಾರಂಭ ಮಾಡಿದೆ. ಈ ಸೋಲಿನ ಬೆನ್ನಲ್ಲೇ ಇದೀಗ ಹಾರ್ದಿಕ್ ಪಾಂಡ್ಯರ (Hardik Pandya) ನಾಯಕತ್ವದ ಬಗ್ಗೆ ಪ್ರಶ್ನೆಗಳೆದಿವೆ.

1 / 7
ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಓವರ್​ ಎಸೆಯುವ ಮೂಲಕ ಪಾಂಡ್ಯ ಎಲ್ಲರ ಗಮನ ಸೆಳೆದರು. ಸಾಮಾನ್ಯವಾಗಿ ಮುಂಬೈ ಇಂಡಿಯನ್ಸ್ ಪರ ಜಸ್​ಪ್ರೀತ್ ಬುಮ್ರಾ ಪ್ರಥಮ ಓವರ್ ಎಸೆಯುವುದು ವಾಡಿಕೆ. ಇದಾಗ್ಯೂ ಮೊದಲ ಮೂರು ಓವರ್​ಗಳ ತನಕ ಕ್ಯಾಪ್ಟನ್ ಪಾಂಡ್ಯ, ಬುಮ್ರಾಗೆ ಚೆಂಡು ನೀಡಿರಲಿಲ್ಲ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಓವರ್​ ಎಸೆಯುವ ಮೂಲಕ ಪಾಂಡ್ಯ ಎಲ್ಲರ ಗಮನ ಸೆಳೆದರು. ಸಾಮಾನ್ಯವಾಗಿ ಮುಂಬೈ ಇಂಡಿಯನ್ಸ್ ಪರ ಜಸ್​ಪ್ರೀತ್ ಬುಮ್ರಾ ಪ್ರಥಮ ಓವರ್ ಎಸೆಯುವುದು ವಾಡಿಕೆ. ಇದಾಗ್ಯೂ ಮೊದಲ ಮೂರು ಓವರ್​ಗಳ ತನಕ ಕ್ಯಾಪ್ಟನ್ ಪಾಂಡ್ಯ, ಬುಮ್ರಾಗೆ ಚೆಂಡು ನೀಡಿರಲಿಲ್ಲ.

2 / 7
ಇನ್ನು ನಾಲ್ಕನೇ ಓವರ್​ನಲ್ಲಿ ದಾಳಿಗಿಳಿದ ಜಸ್​ಪ್ರೀತ್ ಆರಂಭಿಕ ಬ್ಯಾಟರ್ ಬುಮ್ರಾ ವೃದ್ಧಿಮಾನ್ ಸಾಹ (19) ಅವರನ್ನು ಕ್ಲೀನ್ ಬೌಲ್ಡ್ ಮಾಡಿ, ಮುಂಬೈ ಇಂಡಿಯನ್ಸ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಈ ಯಶಸ್ಸಿನ ಬಳಿಕ ಬುಮ್ರಾಗೆ ಮತ್ತೆ ಓವರ್ ನೀಡಿರಲಿಲ್ಲ ಎಂಬುದೇ ಅಚ್ಚರಿ.

ಇನ್ನು ನಾಲ್ಕನೇ ಓವರ್​ನಲ್ಲಿ ದಾಳಿಗಿಳಿದ ಜಸ್​ಪ್ರೀತ್ ಆರಂಭಿಕ ಬ್ಯಾಟರ್ ಬುಮ್ರಾ ವೃದ್ಧಿಮಾನ್ ಸಾಹ (19) ಅವರನ್ನು ಕ್ಲೀನ್ ಬೌಲ್ಡ್ ಮಾಡಿ, ಮುಂಬೈ ಇಂಡಿಯನ್ಸ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಈ ಯಶಸ್ಸಿನ ಬಳಿಕ ಬುಮ್ರಾಗೆ ಮತ್ತೆ ಓವರ್ ನೀಡಿರಲಿಲ್ಲ ಎಂಬುದೇ ಅಚ್ಚರಿ.

3 / 7
ಅಲ್ಲದೆ 4ನೇ ಓವರ್​ ಮುಗಿಸಿದ ಬಳಿಕ ಮತ್ತೆ ಜಸ್​ಪ್ರೀತ್ ಬುಮ್ರಾ ಅವರನ್ನು ದಾಳಿಗಿಳಿಸಿದ್ದು 13ನೇ ಓವರ್​ನಲ್ಲಿ. ಅಂದರೆ ಇಲ್ಲಿ ಪವರ್​ಪ್ಲೇನಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಅನ್ನು ಬಳಸಿಕೊಳ್ಳಲು ಪಾಂಡ್ಯ ಮನಸ್ಸು ಮಾಡಲಿಲ್ಲ. ಇದರ ನಡುವೆ ಗುಜರಾತ್ ಟೈಟಾನ್ಸ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು.

ಅಲ್ಲದೆ 4ನೇ ಓವರ್​ ಮುಗಿಸಿದ ಬಳಿಕ ಮತ್ತೆ ಜಸ್​ಪ್ರೀತ್ ಬುಮ್ರಾ ಅವರನ್ನು ದಾಳಿಗಿಳಿಸಿದ್ದು 13ನೇ ಓವರ್​ನಲ್ಲಿ. ಅಂದರೆ ಇಲ್ಲಿ ಪವರ್​ಪ್ಲೇನಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಅನ್ನು ಬಳಸಿಕೊಳ್ಳಲು ಪಾಂಡ್ಯ ಮನಸ್ಸು ಮಾಡಲಿಲ್ಲ. ಇದರ ನಡುವೆ ಗುಜರಾತ್ ಟೈಟಾನ್ಸ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು.

4 / 7
ಇನ್ನು 17ನೇ ಓವರ್​ನಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಜಸ್​ಪ್ರೀತ್ ಬುಮ್ರಾ ಡೇಂಜರಸ್ ಡೇವಿಡ್ ಮಿಲ್ಲರ್ (12) ವಿಕೆಟ್ ಪಡೆದರು. ಇದೇ ಓವರ್​ನಲ್ಲೇ ಸಾಯಿ ಸುದರ್ಶನ್ (45) ಅವರನ್ನು ಸಹ ಔಟ್ ಮಾಡಿದರು. ಈ ಮೂಲಕ 4 ಓವರ್​ಗಳಲ್ಲಿ ಕೇವಲ 14 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು.

ಇನ್ನು 17ನೇ ಓವರ್​ನಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಜಸ್​ಪ್ರೀತ್ ಬುಮ್ರಾ ಡೇಂಜರಸ್ ಡೇವಿಡ್ ಮಿಲ್ಲರ್ (12) ವಿಕೆಟ್ ಪಡೆದರು. ಇದೇ ಓವರ್​ನಲ್ಲೇ ಸಾಯಿ ಸುದರ್ಶನ್ (45) ಅವರನ್ನು ಸಹ ಔಟ್ ಮಾಡಿದರು. ಈ ಮೂಲಕ 4 ಓವರ್​ಗಳಲ್ಲಿ ಕೇವಲ 14 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು.

5 / 7
ಇಲ್ಲಿ ಗುಜರಾತ್ ಟೈಟಾನ್ಸ್ ತಂಡವು ಪವರ್​ಪ್ಲೇನಲ್ಲಿ 47 ರನ್​ ಬಾರಿಸಿದರೆ, ಆ ಬಳಿಕ 12 ಓವರ್​ ಆಗುವಷ್ಟರಲ್ಲಿ 100 ರನ್​ಗಳ ಗಡಿದಾಟಿದ್ದರು. ಇದಾದ ಬಳಿಕವಷ್ಟೇ ಜಸ್​ಪ್ರೀತ್ ಬುಮ್ರಾ ಮತ್ತೆ ದಾಳಿಗಿಳಿದಿರುವುದು ಎಂಬುದು ಉಲ್ಲೇಖಾರ್ಹ. ಆ ಬಳಿಕ ವಿಕೆಟ್ ಕಳೆದುಕೊಂಡಿದ್ದಲ್ಲದೇ 8 ಓವರ್​ಗಳಲ್ಲಿ ಗಳಿಸಿದ್ದು ಕೇವಲ 64 ರನ್​ಗಳು ಮಾತ್ರ.

ಇಲ್ಲಿ ಗುಜರಾತ್ ಟೈಟಾನ್ಸ್ ತಂಡವು ಪವರ್​ಪ್ಲೇನಲ್ಲಿ 47 ರನ್​ ಬಾರಿಸಿದರೆ, ಆ ಬಳಿಕ 12 ಓವರ್​ ಆಗುವಷ್ಟರಲ್ಲಿ 100 ರನ್​ಗಳ ಗಡಿದಾಟಿದ್ದರು. ಇದಾದ ಬಳಿಕವಷ್ಟೇ ಜಸ್​ಪ್ರೀತ್ ಬುಮ್ರಾ ಮತ್ತೆ ದಾಳಿಗಿಳಿದಿರುವುದು ಎಂಬುದು ಉಲ್ಲೇಖಾರ್ಹ. ಆ ಬಳಿಕ ವಿಕೆಟ್ ಕಳೆದುಕೊಂಡಿದ್ದಲ್ಲದೇ 8 ಓವರ್​ಗಳಲ್ಲಿ ಗಳಿಸಿದ್ದು ಕೇವಲ 64 ರನ್​ಗಳು ಮಾತ್ರ.

6 / 7
ಅಂದರೆ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವುದು ಮೊದಲ 12 ಓವರ್​ಗಳಲ್ಲಿ ಎಂಬುದು ಸ್ಪಷ್ಟ. ಈ ವೇಳೆ ಅನುಭವಿ ವೇಗಿ ಜಸ್​ಪ್ರೀತ್ ಬುಮ್ರಾರನ್ನು ಬೌಲಿಂಗ್​ನಿಂದ ದೂರವಿಟ್ಟಿದ್ದ ನಾಯಕ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಬಗ್ಗೆ ಇದೀಗ ಚರ್ಚೆಗಳು ಶುರುವಾಗಿದೆ.

ಅಂದರೆ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವುದು ಮೊದಲ 12 ಓವರ್​ಗಳಲ್ಲಿ ಎಂಬುದು ಸ್ಪಷ್ಟ. ಈ ವೇಳೆ ಅನುಭವಿ ವೇಗಿ ಜಸ್​ಪ್ರೀತ್ ಬುಮ್ರಾರನ್ನು ಬೌಲಿಂಗ್​ನಿಂದ ದೂರವಿಟ್ಟಿದ್ದ ನಾಯಕ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಬಗ್ಗೆ ಇದೀಗ ಚರ್ಚೆಗಳು ಶುರುವಾಗಿದೆ.

7 / 7
Follow us
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ