AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ರುತುರಾಜ್ ಶತಕ ಸಿಡಿಸಿದರೆ ಸಿಎಸ್​ಕೆಗೆ ಸೋಲು ಖಚಿತ..!

IPL 2024: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್​ಗೆ ಐಪಿಎಲ್‌ನಲ್ಲಿ ಇದು ಎರಡನೇ ಶತಕ. ಅದಾಗ್ಯೂ ಈ ಎರಡೂ ಶತಕಗಳು ರುತುರಾಜ್ ಪಾಲಿಗೆ ಶುಭ ಶಕುನಗಳಾಗಲೇ ಇಲ್ಲ. ಅಂದರೆ ರುತುರಾಜ್ ಶತಕ ಸಿಡಿಸಿದ ಈ ಎರಡೂ ಪಂದ್ಯಗಳಲ್ಲಿ ಚೆನ್ನೈಗೆ ಗೆಲುವೇ ದಕ್ಕಿಲ್ಲ.

ಪೃಥ್ವಿಶಂಕರ
|

Updated on: Apr 24, 2024 | 4:47 PM

Share
ತವರು ನೆಲದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್​ಗಳಿಂದ ಸೋತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಟಾಪ್ 4 ರಿಂದ ಹೊರಬಿದ್ದಿದೆ. ಇದರರ್ಥ ತಂಡ ಪ್ಲೇ ಆಫ್​ ರೇಸ್​ನಿಂದ ಸದ್ಯಕ್ಕೆ ಹೊರಗುಳಿದಿದೆ.

ತವರು ನೆಲದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್​ಗಳಿಂದ ಸೋತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಟಾಪ್ 4 ರಿಂದ ಹೊರಬಿದ್ದಿದೆ. ಇದರರ್ಥ ತಂಡ ಪ್ಲೇ ಆಫ್​ ರೇಸ್​ನಿಂದ ಸದ್ಯಕ್ಕೆ ಹೊರಗುಳಿದಿದೆ.

1 / 8
ನಿನ್ನೆ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರಿಂದ ತಲಾ ಒಂದೊಂದು ಶತಕ ಸಿಡಿದವು. ಆದರೆ ಇಲ್ಲಿ ವ್ಯತ್ಯಾಸವೆನೆಂದರೆ, ಸಿಎಸ್​ಕೆ ನಾಯಕ ರುತುರಾಜ್ ಗಾಯಕ್ವಾಡ್ ಸಿಡಿಸಿದ ಶತಕ ವ್ಯರ್ಥವಾದರೆ, ಲಕ್ನೋ ಪರ ಆಲ್ ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಸಿಡಿಸಿದ ಶತಕ ತಂಡದ ಗೆಲುವಿಗೆ ನಾಂದಿ ಹಾಡಿತು.

ನಿನ್ನೆ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರಿಂದ ತಲಾ ಒಂದೊಂದು ಶತಕ ಸಿಡಿದವು. ಆದರೆ ಇಲ್ಲಿ ವ್ಯತ್ಯಾಸವೆನೆಂದರೆ, ಸಿಎಸ್​ಕೆ ನಾಯಕ ರುತುರಾಜ್ ಗಾಯಕ್ವಾಡ್ ಸಿಡಿಸಿದ ಶತಕ ವ್ಯರ್ಥವಾದರೆ, ಲಕ್ನೋ ಪರ ಆಲ್ ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಸಿಡಿಸಿದ ಶತಕ ತಂಡದ ಗೆಲುವಿಗೆ ನಾಂದಿ ಹಾಡಿತು.

2 / 8
ವಾಸ್ತವವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್​ಗೆ ಐಪಿಎಲ್‌ನಲ್ಲಿ ಇದು ಎರಡನೇ ಶತಕ. ಅದಾಗ್ಯೂ ಈ ಎರಡೂ ಶತಕಗಳು ರುತುರಾಜ್ ಪಾಲಿಗೆ ಶುಭ ಶಕುನಗಳಾಗಲೇ ಇಲ್ಲ. ಅಂದರೆ ರುತುರಾಜ್ ಶತಕ ಸಿಡಿಸಿದ ಈ ಎರಡೂ ಪಂದ್ಯಗಳಲ್ಲಿ ಚೆನ್ನೈಗೆ ಗೆಲುವೇ ದಕ್ಕಿಲ್ಲ.

ವಾಸ್ತವವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್​ಗೆ ಐಪಿಎಲ್‌ನಲ್ಲಿ ಇದು ಎರಡನೇ ಶತಕ. ಅದಾಗ್ಯೂ ಈ ಎರಡೂ ಶತಕಗಳು ರುತುರಾಜ್ ಪಾಲಿಗೆ ಶುಭ ಶಕುನಗಳಾಗಲೇ ಇಲ್ಲ. ಅಂದರೆ ರುತುರಾಜ್ ಶತಕ ಸಿಡಿಸಿದ ಈ ಎರಡೂ ಪಂದ್ಯಗಳಲ್ಲಿ ಚೆನ್ನೈಗೆ ಗೆಲುವೇ ದಕ್ಕಿಲ್ಲ.

3 / 8
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ರುತುರಾಜ್ ಗಾಯಕ್ವಾಡ್ 60 ಎಸೆತಗಳಲ್ಲಿ 108 ರನ್ ಗಳಿಸಿದರು. ಇದರಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್‌ಗಳೂ ಸೇರಿದ್ದವು. ಆದರೆ ರುತುರಾಜ್ ಕೇವಲ 56 ಎಸೆತಗಳಲ್ಲಿ ಶತಕ ಪೂರೈಸಿದ ಹೊರತಾಗಿಯೂ ತಮ್ಮ ಹೆಸರಿನಲ್ಲಿ ಅನಗತ್ಯ ದಾಖಲೆಯೊಂದು ಬರೆದಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ರುತುರಾಜ್ ಗಾಯಕ್ವಾಡ್ 60 ಎಸೆತಗಳಲ್ಲಿ 108 ರನ್ ಗಳಿಸಿದರು. ಇದರಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್‌ಗಳೂ ಸೇರಿದ್ದವು. ಆದರೆ ರುತುರಾಜ್ ಕೇವಲ 56 ಎಸೆತಗಳಲ್ಲಿ ಶತಕ ಪೂರೈಸಿದ ಹೊರತಾಗಿಯೂ ತಮ್ಮ ಹೆಸರಿನಲ್ಲಿ ಅನಗತ್ಯ ದಾಖಲೆಯೊಂದು ಬರೆದಿದ್ದಾರೆ.

4 / 8
ಮೇಲೆ ಹೇಳಿದಂತೆ ಗಾಯಕ್ವಾಡ್ ಶತಕ ಬಾರಿಸಿದಾಗಲೆಲ್ಲಾ ಸಿಎಸ್​ಕೆ ತಂಡವು ಸೋಲನ್ನು ಎದುರಿಸಿದೆ. ರುತುರಾಜ್  ಇದುವರೆಗೆ ಎರಡು ಶತಕಗಳನ್ನು ಬಾರಿಸಿದ್ದು, ಚೆನ್ನೈ ತಂಡವು ಎರಡೂ ಬಾರಿ ಪಂದ್ಯವನ್ನು ಸೋತಿದೆ. ಇದರೊಂದಿಗೆ ರುತುರಾಜ್ ಸೋತ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಂದಿದ್ದಾರೆ.

ಮೇಲೆ ಹೇಳಿದಂತೆ ಗಾಯಕ್ವಾಡ್ ಶತಕ ಬಾರಿಸಿದಾಗಲೆಲ್ಲಾ ಸಿಎಸ್​ಕೆ ತಂಡವು ಸೋಲನ್ನು ಎದುರಿಸಿದೆ. ರುತುರಾಜ್ ಇದುವರೆಗೆ ಎರಡು ಶತಕಗಳನ್ನು ಬಾರಿಸಿದ್ದು, ಚೆನ್ನೈ ತಂಡವು ಎರಡೂ ಬಾರಿ ಪಂದ್ಯವನ್ನು ಸೋತಿದೆ. ಇದರೊಂದಿಗೆ ರುತುರಾಜ್ ಸೋತ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಂದಿದ್ದಾರೆ.

5 / 8
ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆರ್​ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸೋತ ಪಂದ್ಯಗಳಲ್ಲಿ ಕೊಹ್ಲಿ ಇದುವರೆಗೆ ಮೂರು ಶತಕಗಳನ್ನು ಬಾರಿಸಿದ್ದಾರೆ.

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆರ್​ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸೋತ ಪಂದ್ಯಗಳಲ್ಲಿ ಕೊಹ್ಲಿ ಇದುವರೆಗೆ ಮೂರು ಶತಕಗಳನ್ನು ಬಾರಿಸಿದ್ದಾರೆ.

6 / 8
ಇದೆಲ್ಲದರ ಹೊರತಾಗಿಯೂ ರುತುರಾಜ್ ಗಾಯಕ್ವಾಡ್ ಅವರ ಈ ಶತಕದ ಇನ್ನಿಂಗ್ಸ್ ಸ್ಮರಣೀಯವಾಗಿತ್ತು. ಏಕೆಂದರೆ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಶತಕ ಸಿಡಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ರುತುರಾಜ್ ಪಾತ್ರರಾದರು.

ಇದೆಲ್ಲದರ ಹೊರತಾಗಿಯೂ ರುತುರಾಜ್ ಗಾಯಕ್ವಾಡ್ ಅವರ ಈ ಶತಕದ ಇನ್ನಿಂಗ್ಸ್ ಸ್ಮರಣೀಯವಾಗಿತ್ತು. ಏಕೆಂದರೆ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಶತಕ ಸಿಡಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ರುತುರಾಜ್ ಪಾತ್ರರಾದರು.

7 / 8
ಅಲ್ಲದೆ ಸಿಎಸ್‌ಕೆ ನಾಯಕನಾಗಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆಯನ್ನೂ ರುತುರಾಜ್ ನಿರ್ಮಿಸಿದ್ದಾರೆ. ಈ ಮೊದಲು ಈ ದಾಖಲೆ ಎಸ್‌ಎಸ್ ಧೋನಿ ಹೆಸರಿನಲ್ಲಿತ್ತು. ನಾಯಕನಾಗಿ ಸಿಎಸ್‌ಕೆ ಪರ ಧೋನಿ 84 ರನ್‌ಗಳ ಇನಿಂಗ್ಸ್‌ ಆಡಿದ್ದರು.

ಅಲ್ಲದೆ ಸಿಎಸ್‌ಕೆ ನಾಯಕನಾಗಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆಯನ್ನೂ ರುತುರಾಜ್ ನಿರ್ಮಿಸಿದ್ದಾರೆ. ಈ ಮೊದಲು ಈ ದಾಖಲೆ ಎಸ್‌ಎಸ್ ಧೋನಿ ಹೆಸರಿನಲ್ಲಿತ್ತು. ನಾಯಕನಾಗಿ ಸಿಎಸ್‌ಕೆ ಪರ ಧೋನಿ 84 ರನ್‌ಗಳ ಇನಿಂಗ್ಸ್‌ ಆಡಿದ್ದರು.

8 / 8
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ