IPL 2025: ಮೆಗಾ ಹರಾಜು ನಿಯಮದಲ್ಲಿ ಬದಲಾವಣೆ: ಸ್ಟಾರ್ ಆಟಗಾರರಿಗೆ ಕೋಟಿಗಳ ಸುರಿಮಳೆ ಪಕ್ಕಾ

IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಹೆನ್ರಿಕ್ ಕ್ಲಾಸೆನ್​ಗೆ ಬರೋಬ್ಬರಿ 23 ಕೋಟಿ ರೂ. ನೀಡಲು ಮುಂದಾಗಿದೆ. ಹೀಗಾಗಿ ಉಳಿದ ತಂಡಗಳಲ್ಲಿರುವ ಆಟಗಾರರು ಕೂಡ ರಿಟೈನ್​ಗಾಗಿ ಬೃಹತ್ ಮೊತ್ತದ ಬೇಡಿಕೆಯಿಡುವುದರಲ್ಲಿ ಅನುಮಾನವೇ ಬೇಡ.

|

Updated on: Oct 21, 2024 | 10:10 AM

IPL 2025: ಐಪಿಎಲ್ ಮೆಗಾ ಹರಾಜಿನ ಧಾರಣ ನಿಯಮದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಈ ಬದಲಾವಣೆಯಿಂದಾಗಿ ಮೆಗಾ ಆಕ್ಷನ್​ಗೂ ಮುನ್ನ ಸ್ಟಾರ್ ಆಟಗಾರರು ಕೋಟ್ಯಾಧಿಪತಿಗಳಾಗುವುದು ಪಕ್ಕಾ. ಏಕೆಂದರೆ ಹೊಸ ನಿಯಮದ ಪ್ರಕಾರ, ಆಟಗಾರರಿಗೆ ನೀಡಲಾಗುವ ಸಂಭಾವನೆಗೆ ಯಾವುದೇ ಮಿತಿ ನಿಗದಿ ಮಾಡಲಾಗಿಲ್ಲ.

IPL 2025: ಐಪಿಎಲ್ ಮೆಗಾ ಹರಾಜಿನ ಧಾರಣ ನಿಯಮದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಈ ಬದಲಾವಣೆಯಿಂದಾಗಿ ಮೆಗಾ ಆಕ್ಷನ್​ಗೂ ಮುನ್ನ ಸ್ಟಾರ್ ಆಟಗಾರರು ಕೋಟ್ಯಾಧಿಪತಿಗಳಾಗುವುದು ಪಕ್ಕಾ. ಏಕೆಂದರೆ ಹೊಸ ನಿಯಮದ ಪ್ರಕಾರ, ಆಟಗಾರರಿಗೆ ನೀಡಲಾಗುವ ಸಂಭಾವನೆಗೆ ಯಾವುದೇ ಮಿತಿ ನಿಗದಿ ಮಾಡಲಾಗಿಲ್ಲ.

1 / 6
ಈ ಹಿಂದೆ ಮೆಗಾ ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ನಿರ್ದಿಷ್ಟ ಮೊತ್ತವನ್ನು ನೀಡಬೇಕಾಗುತ್ತದೆ ಎಂದು ತಿಳಿಸಲಾಗಿತ್ತು. ಇಲ್ಲಿ ಮೊದಲ ಆಟಗಾರನಿಗೆ 18 ಕೋಟಿ, ಎರಡನೇ ಆಟಗಾರನಿಗೆ 14 ಕೋಟಿ, ಮೂರನೇ ಆಟಗಾರನಿಗೆ 11 ಕೋಟಿ, ನಾಲ್ಕನೇ ಆಟಗಾರನಿಗೆ 18 ಕೋಟಿ, ಐದನೇ ಆಟಗಾರನಿಗೆ 14 ಕೋಟಿ ರೂ. ಹಾಗೂ ಅನ್​ಕ್ಯಾಪ್ಡ್ ಆಟಗಾರನನ್ನು ಉಳಿಸಿಕೊಂಡರೆ ಅವರಿಗೆ ಕೇವಲ 4 ಕೋಟಿ ರೂ. ನೀಡಬೇಕಾಗುತ್ತದೆ ಎಂದು ತಿಳಿಸಲಾಗಿತ್ತು.

ಈ ಹಿಂದೆ ಮೆಗಾ ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ನಿರ್ದಿಷ್ಟ ಮೊತ್ತವನ್ನು ನೀಡಬೇಕಾಗುತ್ತದೆ ಎಂದು ತಿಳಿಸಲಾಗಿತ್ತು. ಇಲ್ಲಿ ಮೊದಲ ಆಟಗಾರನಿಗೆ 18 ಕೋಟಿ, ಎರಡನೇ ಆಟಗಾರನಿಗೆ 14 ಕೋಟಿ, ಮೂರನೇ ಆಟಗಾರನಿಗೆ 11 ಕೋಟಿ, ನಾಲ್ಕನೇ ಆಟಗಾರನಿಗೆ 18 ಕೋಟಿ, ಐದನೇ ಆಟಗಾರನಿಗೆ 14 ಕೋಟಿ ರೂ. ಹಾಗೂ ಅನ್​ಕ್ಯಾಪ್ಡ್ ಆಟಗಾರನನ್ನು ಉಳಿಸಿಕೊಂಡರೆ ಅವರಿಗೆ ಕೇವಲ 4 ಕೋಟಿ ರೂ. ನೀಡಬೇಕಾಗುತ್ತದೆ ಎಂದು ತಿಳಿಸಲಾಗಿತ್ತು.

2 / 6
ಈ ಮೂಲಕ 79 ಕೋಟಿ ರೂ.ನಲ್ಲಿ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೀಗ ಈ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಬದಲಾವಣೆಯೊಂದಿಗೆ ಆಟಗಾರರ ಸಂಭಾವನೆ ಮೊತ್ತವನ್ನು ನಿಗದಿ ಮಾಡುವ ಅಧಿಕಾರ ಫ್ರಾಂಚೈಸಿಗಳಿಗೆ ನೀಡಲಾಗಿದೆ.

ಈ ಮೂಲಕ 79 ಕೋಟಿ ರೂ.ನಲ್ಲಿ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೀಗ ಈ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಬದಲಾವಣೆಯೊಂದಿಗೆ ಆಟಗಾರರ ಸಂಭಾವನೆ ಮೊತ್ತವನ್ನು ನಿಗದಿ ಮಾಡುವ ಅಧಿಕಾರ ಫ್ರಾಂಚೈಸಿಗಳಿಗೆ ನೀಡಲಾಗಿದೆ.

3 / 6
ಅಂದರೆ 79 ಕೋಟಿ ರೂ. ರಿಟೈನ್ ಮೊತ್ತದಲ್ಲಿ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರಿಗೆ ಎಷ್ಟು ಕೋಟಿ ರೂ. ಬೇಕಿದ್ದರೂ ನೀಡಬಹುದು. ಆದರೆ ಅದು ಒಟ್ಟು ರಿಟೈನ್ ಮೊತ್ತ 79 ಕೋಟಿ ರೂ. ಅನ್ನು ದಾಟುವಂತಿಲ್ಲ ಎಂದು ತಿಳಿಸಲಾಗಿದೆ.

ಅಂದರೆ 79 ಕೋಟಿ ರೂ. ರಿಟೈನ್ ಮೊತ್ತದಲ್ಲಿ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರಿಗೆ ಎಷ್ಟು ಕೋಟಿ ರೂ. ಬೇಕಿದ್ದರೂ ನೀಡಬಹುದು. ಆದರೆ ಅದು ಒಟ್ಟು ರಿಟೈನ್ ಮೊತ್ತ 79 ಕೋಟಿ ರೂ. ಅನ್ನು ದಾಟುವಂತಿಲ್ಲ ಎಂದು ತಿಳಿಸಲಾಗಿದೆ.

4 / 6
ಉದಾಹರಣೆಗೆ... ಆರ್​ಸಿಬಿ ಮೂವರು ಆಟಗಾರರನ್ನು ಉಳಿಸಿಕೊಳ್ಳಲು ಬಳಿಸಿದರೆ, ವಿರಾಟ್ ಕೊಹ್ಲಿಗೆ 29 ಕೋಟಿ ರೂ. ಮೊಹಮ್ಮದ್ ಸಿರಾಜ್​ಗೆ 25 ಕೋಟಿ ರೂ. ಹಾಗೂ ಫಾಫ್ ಡುಪ್ಲೆಸಿಸ್​ಗೆ 25 ಕೋಟಿ ರೂ. ನೀಡಬಹುದು. ಇಲ್ಲ ವಿರಾಟ್ ಕೊಹ್ಲಿಗೆ 50 ಕೋಟಿ ರೂ. ನೀಡಿ, ಇನ್ನುಳಿದ ಆಟಗಾರರನ್ನು ಉಳಿದ 29 ಕೋಟಿ ರೂ.ನಲ್ಲಿ ರಿಟೈನ್ ಮಾಡಿಕೊಳ್ಳಬಹುದು.

ಉದಾಹರಣೆಗೆ... ಆರ್​ಸಿಬಿ ಮೂವರು ಆಟಗಾರರನ್ನು ಉಳಿಸಿಕೊಳ್ಳಲು ಬಳಿಸಿದರೆ, ವಿರಾಟ್ ಕೊಹ್ಲಿಗೆ 29 ಕೋಟಿ ರೂ. ಮೊಹಮ್ಮದ್ ಸಿರಾಜ್​ಗೆ 25 ಕೋಟಿ ರೂ. ಹಾಗೂ ಫಾಫ್ ಡುಪ್ಲೆಸಿಸ್​ಗೆ 25 ಕೋಟಿ ರೂ. ನೀಡಬಹುದು. ಇಲ್ಲ ವಿರಾಟ್ ಕೊಹ್ಲಿಗೆ 50 ಕೋಟಿ ರೂ. ನೀಡಿ, ಇನ್ನುಳಿದ ಆಟಗಾರರನ್ನು ಉಳಿದ 29 ಕೋಟಿ ರೂ.ನಲ್ಲಿ ರಿಟೈನ್ ಮಾಡಿಕೊಳ್ಳಬಹುದು.

5 / 6
ಈ ಮೂಲಕ 79 ಕೋಟಿ ರೂ. ಅನ್ನು ಹೇಗೆ ಬೇಕಿದ್ದರೂ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಇನ್ನು ಐವರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಬಯಸಿದರೆ 75 ಕೋಟಿ ರೂ. ಖರ್ಚು ಮಾಡಬೇಕೆಂದು ತಿಳಿಸಲಾಗಿದೆ. ಹೀಗಾಗಿ ರಿಟೈನ್ ಆಗಲಿರುವ ಆಟಗಾರರು ಈ ಬಾರಿ ಕೋಟಿ ಮೊತ್ತವನ್ನು ಡಿಮ್ಯಾಂಡ್ ಮಾಡುವುದು ಖಚಿತ. ಈ ಬೇಡಿಕೆಯೊಂದಿಗೆ ಈ ಬಾರಿ ಅತ್ಯಧಿಕ ಕೋಟಿ ಪಡೆಯುವ ಆಟಗಾರ ಯಾರು ಎಂಬುದನ್ನು ಕಾದು ನೋಡಬೇಕಿದೆ.

ಈ ಮೂಲಕ 79 ಕೋಟಿ ರೂ. ಅನ್ನು ಹೇಗೆ ಬೇಕಿದ್ದರೂ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಇನ್ನು ಐವರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಬಯಸಿದರೆ 75 ಕೋಟಿ ರೂ. ಖರ್ಚು ಮಾಡಬೇಕೆಂದು ತಿಳಿಸಲಾಗಿದೆ. ಹೀಗಾಗಿ ರಿಟೈನ್ ಆಗಲಿರುವ ಆಟಗಾರರು ಈ ಬಾರಿ ಕೋಟಿ ಮೊತ್ತವನ್ನು ಡಿಮ್ಯಾಂಡ್ ಮಾಡುವುದು ಖಚಿತ. ಈ ಬೇಡಿಕೆಯೊಂದಿಗೆ ಈ ಬಾರಿ ಅತ್ಯಧಿಕ ಕೋಟಿ ಪಡೆಯುವ ಆಟಗಾರ ಯಾರು ಎಂಬುದನ್ನು ಕಾದು ನೋಡಬೇಕಿದೆ.

6 / 6
Follow us
ಮೆಕ್​ಡೊನಾಲ್ಡ್​ನಲ್ಲಿ ಫ್ರೆಂಚ್​ಫ್ರೈಸ್ ಮಾಡಿದ ಡೊನಾಲ್ಡ್​ ಟ್ರಂಪ್
ಮೆಕ್​ಡೊನಾಲ್ಡ್​ನಲ್ಲಿ ಫ್ರೆಂಚ್​ಫ್ರೈಸ್ ಮಾಡಿದ ಡೊನಾಲ್ಡ್​ ಟ್ರಂಪ್
‘ಬರಬಾರದಿತ್ತು’; ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಸುಸ್ತಾದ ಹನುಮಂತ್
‘ಬರಬಾರದಿತ್ತು’; ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಸುಸ್ತಾದ ಹನುಮಂತ್
ಬೆಂಗಳೂರಿನಲ್ಲಿ ಮಳೆ ಆರ್ಭಟ: ರಸ್ತೆಯಲ್ಲಿ ನಿಂತ ನೀರು, ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಮಳೆ ಆರ್ಭಟ: ರಸ್ತೆಯಲ್ಲಿ ನಿಂತ ನೀರು, ವಾಹನ ಸವಾರರ ಪರದಾಟ
Daily Devotional: ರತ್ನ ಧಾರಣೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ರತ್ನ ಧಾರಣೆಯ ಹಿಂದಿನ ರಹಸ್ಯ ತಿಳಿಯಿರಿ
Nithya Bhavishya: ಈ ರಾಶಿಯ ಸರ್ಕಾರಿ ನೌಕರರು ಇಂದು ಶುಭ ಸುದ್ದಿ ಕೇಳುವರು
Nithya Bhavishya: ಈ ರಾಶಿಯ ಸರ್ಕಾರಿ ನೌಕರರು ಇಂದು ಶುಭ ಸುದ್ದಿ ಕೇಳುವರು
ನನ್ನ ವರ್ಚಸ್ಸು ಹಾಳು ಮಾಡಲು ಯತ್ನ: ಬಿಜೆಪಿ ನಾಯಕರ ಮೇಲೆ ಹೆಚ್​ಡಿಕೆ ಗರಂ
ನನ್ನ ವರ್ಚಸ್ಸು ಹಾಳು ಮಾಡಲು ಯತ್ನ: ಬಿಜೆಪಿ ನಾಯಕರ ಮೇಲೆ ಹೆಚ್​ಡಿಕೆ ಗರಂ
BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
ಹೊಲದಲ್ಲಿ ಕುಮಾರಸ್ವಾಮಿ ಬಾನುವಾರದ ಸ್ಪೆಷಲ್ ಬಾಡೂಟ
ಹೊಲದಲ್ಲಿ ಕುಮಾರಸ್ವಾಮಿ ಬಾನುವಾರದ ಸ್ಪೆಷಲ್ ಬಾಡೂಟ
‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ
‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ
ಡಿಕೆ ಶಿವಕುಮಾರ್​​ರನ್ನು ಸಿಎಂ ಮಾಡಿ ತೋರಿಸುತ್ತೇವೆ: ಸ್ವಾಮೀಜಿ ಶಪಥ
ಡಿಕೆ ಶಿವಕುಮಾರ್​​ರನ್ನು ಸಿಎಂ ಮಾಡಿ ತೋರಿಸುತ್ತೇವೆ: ಸ್ವಾಮೀಜಿ ಶಪಥ