AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಗೆರೆ ದಾಟದಿದ್ದರೂ ನೋ ಬಾಲ್ ಎಂದ ಅಂಪೈರ್: ಕಾರಣವೇನು?

IPL 2025 DC vs RR: ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 188 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡ ಕೂಡ 188 ರನ್ ಕಲೆಹಾಕಿತು. ಇದರೊಂದಿಗೆ ಪಂದ್ಯವು ಸೂಪರ್ ಓವರ್​ನ ರೋಚಕ ಪೈಪೋಟಿಗೆ ಸಾಗಿತು. ಸೂಪರ್ ಓವರ್​ನಲ್ಲಿ ಗೆಲ್ಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 2 ಅಂಕಗಳನ್ನು ಪಡೆದುಕೊಂಡಿದೆ.

ಝಾಹಿರ್ ಯೂಸುಫ್
|

Updated on: Apr 17, 2025 | 8:04 AM

Share
IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯವು ಹಲವು ಕಾರಣಗಳಿಂದ ಗಮನ ಸೆಳೆದಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವು ಮೊದಲು ಟೈ ಆಯಿತು. ಆ ಬಳಿಕ ಸೂಪರ್ ಓವರ್​ನತ್ತ ಸಾಗಿದ ಪಂದ್ಯದಲ್ಲಿ ನೋ ಬಾಲ್, ಫ್ರೀ ಹಿಟ್ ಹಾಗೂ ರನೌಟ್​ಗಳು ಕಂಡು ಬಂದವು. ಅದರಲ್ಲೂ ಮಿಚೆಲ್ ಸ್ಟಾರ್ಕ್ (Mitchell Starc) ಸೂಪರ್​ ಓವರ್​ನಲ್ಲಿ​ ಗೆರೆ ದಾಟದಿದ್ದರೂ ಅಂಪೈರ್ ನೋ ಬಾಲ್ ಕೊಟ್ಟಿದ್ದೇಕೆ ಎಂಬ ಪ್ರಶ್ನೆ ಮೂಡುವುದು ಸಹಜ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯವು ಹಲವು ಕಾರಣಗಳಿಂದ ಗಮನ ಸೆಳೆದಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವು ಮೊದಲು ಟೈ ಆಯಿತು. ಆ ಬಳಿಕ ಸೂಪರ್ ಓವರ್​ನತ್ತ ಸಾಗಿದ ಪಂದ್ಯದಲ್ಲಿ ನೋ ಬಾಲ್, ಫ್ರೀ ಹಿಟ್ ಹಾಗೂ ರನೌಟ್​ಗಳು ಕಂಡು ಬಂದವು. ಅದರಲ್ಲೂ ಮಿಚೆಲ್ ಸ್ಟಾರ್ಕ್ (Mitchell Starc) ಸೂಪರ್​ ಓವರ್​ನಲ್ಲಿ​ ಗೆರೆ ದಾಟದಿದ್ದರೂ ಅಂಪೈರ್ ನೋ ಬಾಲ್ ಕೊಟ್ಟಿದ್ದೇಕೆ ಎಂಬ ಪ್ರಶ್ನೆ ಮೂಡುವುದು ಸಹಜ.

1 / 5
ಕ್ರಿಕೆಟ್​ನಲ್ಲಿ ಲೈನ್ ಣೊಬಾಲ್​ಗಳಲ್ಲಿ ಎರಡು ವಿಧವಿದೆ. ಇಲ್ಲಿ ಚೆಂಡೆಸೆಯುವಾಗ ಪಾದವು ಗೆರೆ ದಾಟಿದರೆ ನೋ ಬಾಲ್ ನೀಡುವುದು ಸಾಮಾನ್ಯ. ಇದಾಗ್ಯೂ ಸೈಡ್ ನೋ ಬಾಲ್ ಎಂಬ ನಿಯಮ ಕೂಡ ಇದೆ. ಅಂದರೆ ಚೆಂಡೆಸೆಯುವಾಗ ಬೌಲರ್​ನ ಹಿಂದಿನ ಪಾದವು ರಿಟರ್ನ್ ಕ್ರೀಸ್‌ನೊಳಗೆ (ಸೈಡ್ ಲೈನ್​) ಇರಬೇಕು.

ಕ್ರಿಕೆಟ್​ನಲ್ಲಿ ಲೈನ್ ಣೊಬಾಲ್​ಗಳಲ್ಲಿ ಎರಡು ವಿಧವಿದೆ. ಇಲ್ಲಿ ಚೆಂಡೆಸೆಯುವಾಗ ಪಾದವು ಗೆರೆ ದಾಟಿದರೆ ನೋ ಬಾಲ್ ನೀಡುವುದು ಸಾಮಾನ್ಯ. ಇದಾಗ್ಯೂ ಸೈಡ್ ನೋ ಬಾಲ್ ಎಂಬ ನಿಯಮ ಕೂಡ ಇದೆ. ಅಂದರೆ ಚೆಂಡೆಸೆಯುವಾಗ ಬೌಲರ್​ನ ಹಿಂದಿನ ಪಾದವು ರಿಟರ್ನ್ ಕ್ರೀಸ್‌ನೊಳಗೆ (ಸೈಡ್ ಲೈನ್​) ಇರಬೇಕು.

2 / 5
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೂಪರ್ ಓವರ್​ನ 4ನೇ ಎಸೆತಯುವಾಗ ಮಿಚೆಲ್ ಸ್ಟಾರ್ಕ್ ಅವರ ಹಿಂದಿನ ಎಡ ಪಾದವು ರಿಟರ್ನ್ ಕ್ರೀಸ್​ಗೆ ತಾಗಿದೆ. ಇಲ್ಲಿ ಹಿಂಪಾದವು ಕ್ರೀಸ್​ನ ಹೊರಗೆ ಹೋಗಬೇಕೆಂದಿಲ್ಲ. ಬದಲಾಗಿ ಅದಕ್ಕೆ ತಾಗಿದರೂ ನೋ ಬಾಲ್ ಆಗಿರುತ್ತದೆ. ಅಂದರೆ ಬೌಲರ್​ ರಿಟರ್ನ್​ ಕ್ರೀಸ್​ನ ಒಳಗಿಂದಲೇ ಬೌಲಿಂಗ್ ಮಾಡಬೇಕೆಂಬ ನಿಯಮವಿದೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೂಪರ್ ಓವರ್​ನ 4ನೇ ಎಸೆತಯುವಾಗ ಮಿಚೆಲ್ ಸ್ಟಾರ್ಕ್ ಅವರ ಹಿಂದಿನ ಎಡ ಪಾದವು ರಿಟರ್ನ್ ಕ್ರೀಸ್​ಗೆ ತಾಗಿದೆ. ಇಲ್ಲಿ ಹಿಂಪಾದವು ಕ್ರೀಸ್​ನ ಹೊರಗೆ ಹೋಗಬೇಕೆಂದಿಲ್ಲ. ಬದಲಾಗಿ ಅದಕ್ಕೆ ತಾಗಿದರೂ ನೋ ಬಾಲ್ ಆಗಿರುತ್ತದೆ. ಅಂದರೆ ಬೌಲರ್​ ರಿಟರ್ನ್​ ಕ್ರೀಸ್​ನ ಒಳಗಿಂದಲೇ ಬೌಲಿಂಗ್ ಮಾಡಬೇಕೆಂಬ ನಿಯಮವಿದೆ.

3 / 5
ಎಂಸಿಸಿ ನಿಯಮ 21.5.1 ರ ಪ್ರಕಾರ, 'ಬೌಲರ್ ಚೆಂಡನ್ನು ಎಸೆಯುವಾಗ ಅವನ ಹಿಂದಿನ ಪಾದವು ರಿಟರ್ನ್ ಕ್ರೀಸ್‌ನೊಳಗೆ ಇರಬೇಕು. ಅಲ್ಲದೆ ರಿಟರ್ನ್​ ಕ್ರೀಸ್​ ಅನ್ನು ಮುಟ್ಟಿರಬಾರದು. ಕಾಲು ಗೆರೆಯನ್ನು ತಾಗಿದರೂ ಅದು ನೋ ಬಾಲ್ ಆಗಿರುತ್ತದೆ. ಹೀಗೆ ನೋ ಬಾಲ್ ಆದರೂ ಫ್ರೀ ಹಿಟ್ ಸಿಗುತ್ತದೆ. ಈ ನಿಯಮದ ಅನ್ವಯ ಮಿಚೆಲ್ ಸ್ಟಾರ್ಕ್​ ಅವರ ಕಾಲು ರಿಟರ್ನ್ ಕ್ರೀಸ್​ಗೆ ತಾಗುತ್ತಿದ್ದಂತೆ ಥರ್ಡ್​ ಅಂಪೈರ್ ನೋಬಾಲ್ ನೀಡಿದ್ದಾರೆ.

ಎಂಸಿಸಿ ನಿಯಮ 21.5.1 ರ ಪ್ರಕಾರ, 'ಬೌಲರ್ ಚೆಂಡನ್ನು ಎಸೆಯುವಾಗ ಅವನ ಹಿಂದಿನ ಪಾದವು ರಿಟರ್ನ್ ಕ್ರೀಸ್‌ನೊಳಗೆ ಇರಬೇಕು. ಅಲ್ಲದೆ ರಿಟರ್ನ್​ ಕ್ರೀಸ್​ ಅನ್ನು ಮುಟ್ಟಿರಬಾರದು. ಕಾಲು ಗೆರೆಯನ್ನು ತಾಗಿದರೂ ಅದು ನೋ ಬಾಲ್ ಆಗಿರುತ್ತದೆ. ಹೀಗೆ ನೋ ಬಾಲ್ ಆದರೂ ಫ್ರೀ ಹಿಟ್ ಸಿಗುತ್ತದೆ. ಈ ನಿಯಮದ ಅನ್ವಯ ಮಿಚೆಲ್ ಸ್ಟಾರ್ಕ್​ ಅವರ ಕಾಲು ರಿಟರ್ನ್ ಕ್ರೀಸ್​ಗೆ ತಾಗುತ್ತಿದ್ದಂತೆ ಥರ್ಡ್​ ಅಂಪೈರ್ ನೋಬಾಲ್ ನೀಡಿದ್ದಾರೆ.

4 / 5
ಇನ್ನು ಈ ಪಂದ್ಯದ ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಜನ್ಥಾನ್ ರಾಯಲ್ಸ್ ತಂಡವು 5 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು 11 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ಎಸೆತಗಳಲ್ಲಿ 1 ಫೋರ್ ಹಾಗೂ 1 ಸಿಕ್ಸ್​ನೊಂದಿಗೆ 13 ರನ್​ ಬಾರಿಸಿ ರೋಚಕ ಗೆಲುವು ದಾಖಲಿಸಿತು.

ಇನ್ನು ಈ ಪಂದ್ಯದ ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಜನ್ಥಾನ್ ರಾಯಲ್ಸ್ ತಂಡವು 5 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು 11 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ಎಸೆತಗಳಲ್ಲಿ 1 ಫೋರ್ ಹಾಗೂ 1 ಸಿಕ್ಸ್​ನೊಂದಿಗೆ 13 ರನ್​ ಬಾರಿಸಿ ರೋಚಕ ಗೆಲುವು ದಾಖಲಿಸಿತು.

5 / 5
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ