AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಗೆರೆ ದಾಟದಿದ್ದರೂ ನೋ ಬಾಲ್ ಎಂದ ಅಂಪೈರ್: ಕಾರಣವೇನು?

IPL 2025 DC vs RR: ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 188 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡ ಕೂಡ 188 ರನ್ ಕಲೆಹಾಕಿತು. ಇದರೊಂದಿಗೆ ಪಂದ್ಯವು ಸೂಪರ್ ಓವರ್​ನ ರೋಚಕ ಪೈಪೋಟಿಗೆ ಸಾಗಿತು. ಸೂಪರ್ ಓವರ್​ನಲ್ಲಿ ಗೆಲ್ಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 2 ಅಂಕಗಳನ್ನು ಪಡೆದುಕೊಂಡಿದೆ.

ಝಾಹಿರ್ ಯೂಸುಫ್
|

Updated on: Apr 17, 2025 | 8:04 AM

Share
IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯವು ಹಲವು ಕಾರಣಗಳಿಂದ ಗಮನ ಸೆಳೆದಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವು ಮೊದಲು ಟೈ ಆಯಿತು. ಆ ಬಳಿಕ ಸೂಪರ್ ಓವರ್​ನತ್ತ ಸಾಗಿದ ಪಂದ್ಯದಲ್ಲಿ ನೋ ಬಾಲ್, ಫ್ರೀ ಹಿಟ್ ಹಾಗೂ ರನೌಟ್​ಗಳು ಕಂಡು ಬಂದವು. ಅದರಲ್ಲೂ ಮಿಚೆಲ್ ಸ್ಟಾರ್ಕ್ (Mitchell Starc) ಸೂಪರ್​ ಓವರ್​ನಲ್ಲಿ​ ಗೆರೆ ದಾಟದಿದ್ದರೂ ಅಂಪೈರ್ ನೋ ಬಾಲ್ ಕೊಟ್ಟಿದ್ದೇಕೆ ಎಂಬ ಪ್ರಶ್ನೆ ಮೂಡುವುದು ಸಹಜ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯವು ಹಲವು ಕಾರಣಗಳಿಂದ ಗಮನ ಸೆಳೆದಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವು ಮೊದಲು ಟೈ ಆಯಿತು. ಆ ಬಳಿಕ ಸೂಪರ್ ಓವರ್​ನತ್ತ ಸಾಗಿದ ಪಂದ್ಯದಲ್ಲಿ ನೋ ಬಾಲ್, ಫ್ರೀ ಹಿಟ್ ಹಾಗೂ ರನೌಟ್​ಗಳು ಕಂಡು ಬಂದವು. ಅದರಲ್ಲೂ ಮಿಚೆಲ್ ಸ್ಟಾರ್ಕ್ (Mitchell Starc) ಸೂಪರ್​ ಓವರ್​ನಲ್ಲಿ​ ಗೆರೆ ದಾಟದಿದ್ದರೂ ಅಂಪೈರ್ ನೋ ಬಾಲ್ ಕೊಟ್ಟಿದ್ದೇಕೆ ಎಂಬ ಪ್ರಶ್ನೆ ಮೂಡುವುದು ಸಹಜ.

1 / 5
ಕ್ರಿಕೆಟ್​ನಲ್ಲಿ ಲೈನ್ ಣೊಬಾಲ್​ಗಳಲ್ಲಿ ಎರಡು ವಿಧವಿದೆ. ಇಲ್ಲಿ ಚೆಂಡೆಸೆಯುವಾಗ ಪಾದವು ಗೆರೆ ದಾಟಿದರೆ ನೋ ಬಾಲ್ ನೀಡುವುದು ಸಾಮಾನ್ಯ. ಇದಾಗ್ಯೂ ಸೈಡ್ ನೋ ಬಾಲ್ ಎಂಬ ನಿಯಮ ಕೂಡ ಇದೆ. ಅಂದರೆ ಚೆಂಡೆಸೆಯುವಾಗ ಬೌಲರ್​ನ ಹಿಂದಿನ ಪಾದವು ರಿಟರ್ನ್ ಕ್ರೀಸ್‌ನೊಳಗೆ (ಸೈಡ್ ಲೈನ್​) ಇರಬೇಕು.

ಕ್ರಿಕೆಟ್​ನಲ್ಲಿ ಲೈನ್ ಣೊಬಾಲ್​ಗಳಲ್ಲಿ ಎರಡು ವಿಧವಿದೆ. ಇಲ್ಲಿ ಚೆಂಡೆಸೆಯುವಾಗ ಪಾದವು ಗೆರೆ ದಾಟಿದರೆ ನೋ ಬಾಲ್ ನೀಡುವುದು ಸಾಮಾನ್ಯ. ಇದಾಗ್ಯೂ ಸೈಡ್ ನೋ ಬಾಲ್ ಎಂಬ ನಿಯಮ ಕೂಡ ಇದೆ. ಅಂದರೆ ಚೆಂಡೆಸೆಯುವಾಗ ಬೌಲರ್​ನ ಹಿಂದಿನ ಪಾದವು ರಿಟರ್ನ್ ಕ್ರೀಸ್‌ನೊಳಗೆ (ಸೈಡ್ ಲೈನ್​) ಇರಬೇಕು.

2 / 5
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೂಪರ್ ಓವರ್​ನ 4ನೇ ಎಸೆತಯುವಾಗ ಮಿಚೆಲ್ ಸ್ಟಾರ್ಕ್ ಅವರ ಹಿಂದಿನ ಎಡ ಪಾದವು ರಿಟರ್ನ್ ಕ್ರೀಸ್​ಗೆ ತಾಗಿದೆ. ಇಲ್ಲಿ ಹಿಂಪಾದವು ಕ್ರೀಸ್​ನ ಹೊರಗೆ ಹೋಗಬೇಕೆಂದಿಲ್ಲ. ಬದಲಾಗಿ ಅದಕ್ಕೆ ತಾಗಿದರೂ ನೋ ಬಾಲ್ ಆಗಿರುತ್ತದೆ. ಅಂದರೆ ಬೌಲರ್​ ರಿಟರ್ನ್​ ಕ್ರೀಸ್​ನ ಒಳಗಿಂದಲೇ ಬೌಲಿಂಗ್ ಮಾಡಬೇಕೆಂಬ ನಿಯಮವಿದೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೂಪರ್ ಓವರ್​ನ 4ನೇ ಎಸೆತಯುವಾಗ ಮಿಚೆಲ್ ಸ್ಟಾರ್ಕ್ ಅವರ ಹಿಂದಿನ ಎಡ ಪಾದವು ರಿಟರ್ನ್ ಕ್ರೀಸ್​ಗೆ ತಾಗಿದೆ. ಇಲ್ಲಿ ಹಿಂಪಾದವು ಕ್ರೀಸ್​ನ ಹೊರಗೆ ಹೋಗಬೇಕೆಂದಿಲ್ಲ. ಬದಲಾಗಿ ಅದಕ್ಕೆ ತಾಗಿದರೂ ನೋ ಬಾಲ್ ಆಗಿರುತ್ತದೆ. ಅಂದರೆ ಬೌಲರ್​ ರಿಟರ್ನ್​ ಕ್ರೀಸ್​ನ ಒಳಗಿಂದಲೇ ಬೌಲಿಂಗ್ ಮಾಡಬೇಕೆಂಬ ನಿಯಮವಿದೆ.

3 / 5
ಎಂಸಿಸಿ ನಿಯಮ 21.5.1 ರ ಪ್ರಕಾರ, 'ಬೌಲರ್ ಚೆಂಡನ್ನು ಎಸೆಯುವಾಗ ಅವನ ಹಿಂದಿನ ಪಾದವು ರಿಟರ್ನ್ ಕ್ರೀಸ್‌ನೊಳಗೆ ಇರಬೇಕು. ಅಲ್ಲದೆ ರಿಟರ್ನ್​ ಕ್ರೀಸ್​ ಅನ್ನು ಮುಟ್ಟಿರಬಾರದು. ಕಾಲು ಗೆರೆಯನ್ನು ತಾಗಿದರೂ ಅದು ನೋ ಬಾಲ್ ಆಗಿರುತ್ತದೆ. ಹೀಗೆ ನೋ ಬಾಲ್ ಆದರೂ ಫ್ರೀ ಹಿಟ್ ಸಿಗುತ್ತದೆ. ಈ ನಿಯಮದ ಅನ್ವಯ ಮಿಚೆಲ್ ಸ್ಟಾರ್ಕ್​ ಅವರ ಕಾಲು ರಿಟರ್ನ್ ಕ್ರೀಸ್​ಗೆ ತಾಗುತ್ತಿದ್ದಂತೆ ಥರ್ಡ್​ ಅಂಪೈರ್ ನೋಬಾಲ್ ನೀಡಿದ್ದಾರೆ.

ಎಂಸಿಸಿ ನಿಯಮ 21.5.1 ರ ಪ್ರಕಾರ, 'ಬೌಲರ್ ಚೆಂಡನ್ನು ಎಸೆಯುವಾಗ ಅವನ ಹಿಂದಿನ ಪಾದವು ರಿಟರ್ನ್ ಕ್ರೀಸ್‌ನೊಳಗೆ ಇರಬೇಕು. ಅಲ್ಲದೆ ರಿಟರ್ನ್​ ಕ್ರೀಸ್​ ಅನ್ನು ಮುಟ್ಟಿರಬಾರದು. ಕಾಲು ಗೆರೆಯನ್ನು ತಾಗಿದರೂ ಅದು ನೋ ಬಾಲ್ ಆಗಿರುತ್ತದೆ. ಹೀಗೆ ನೋ ಬಾಲ್ ಆದರೂ ಫ್ರೀ ಹಿಟ್ ಸಿಗುತ್ತದೆ. ಈ ನಿಯಮದ ಅನ್ವಯ ಮಿಚೆಲ್ ಸ್ಟಾರ್ಕ್​ ಅವರ ಕಾಲು ರಿಟರ್ನ್ ಕ್ರೀಸ್​ಗೆ ತಾಗುತ್ತಿದ್ದಂತೆ ಥರ್ಡ್​ ಅಂಪೈರ್ ನೋಬಾಲ್ ನೀಡಿದ್ದಾರೆ.

4 / 5
ಇನ್ನು ಈ ಪಂದ್ಯದ ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಜನ್ಥಾನ್ ರಾಯಲ್ಸ್ ತಂಡವು 5 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು 11 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ಎಸೆತಗಳಲ್ಲಿ 1 ಫೋರ್ ಹಾಗೂ 1 ಸಿಕ್ಸ್​ನೊಂದಿಗೆ 13 ರನ್​ ಬಾರಿಸಿ ರೋಚಕ ಗೆಲುವು ದಾಖಲಿಸಿತು.

ಇನ್ನು ಈ ಪಂದ್ಯದ ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಜನ್ಥಾನ್ ರಾಯಲ್ಸ್ ತಂಡವು 5 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು 11 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ಎಸೆತಗಳಲ್ಲಿ 1 ಫೋರ್ ಹಾಗೂ 1 ಸಿಕ್ಸ್​ನೊಂದಿಗೆ 13 ರನ್​ ಬಾರಿಸಿ ರೋಚಕ ಗೆಲುವು ದಾಖಲಿಸಿತು.

5 / 5
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಬಿಡದಿ ಟೌನ್‌ಶಿಪ್‌ ವಿವಾದ: ಕಾನೂನಾತ್ಮಕ ಹೋರಾಟ ಮಾಡ್ತೇವೆ; ಕುಮಾರಸ್ವಾಮಿ
ಬಿಡದಿ ಟೌನ್‌ಶಿಪ್‌ ವಿವಾದ: ಕಾನೂನಾತ್ಮಕ ಹೋರಾಟ ಮಾಡ್ತೇವೆ; ಕುಮಾರಸ್ವಾಮಿ
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ