- Kannada News Photo gallery Cricket photos Sachin Tendulkar was seen consoling the Rohit Sharma and Virat Kohli after heartbreaking defeat
IND vs AUS, World Cup Final: ರೋಹಿತ್-ಕೊಹ್ಲಿ ಅಳುವುದನ್ನು ಕಂಡು ಮೈದಾನಕ್ಕೆ ಓಡಿ ಬಂದ ಸಚಿನ್ ತೆಂಡೂಲ್ಕರ್
Rohit Sharma-Virat Kohli Crying: ಟೂರ್ನಿಯುದ್ದಕ್ಕೂ ತಂಡದ ಗೆಲುವಿಗೆ ಹೋರಾಡಿದ ರೋಹಿತ್-ಕೊಹ್ಲಿಗೆ ಫೈನಲ್ನಲ್ಲಿ ಸೋತಾಗ ಕಣ್ಣೀರನ್ನು ತಡೆಯಲು ಸಾಧ್ಯವಾಗಲಿಲ್ಲ. ಇದನ್ನು ಕಂಡು ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ರೋಹಿತ್ ಹಾಗೂ ಕೊಹ್ಲಿಗೆ ಸಾಂತ್ವನ ಹೇಳಿದರು.
Updated on:Nov 20, 2023 | 8:00 AM

ಭಾನುವಾರ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ ಒನ್ಸೈಡ್ ಆಗಿ ಸಾಗಿತು. ಟೀಮ್ ಇಂಡಿಯಾದ ಬ್ಯಾಟಿಂಗ್ ಮತ್ತು ಬೌಲಿಂಗ್ ಅನ್ನು ಕಾಂಗರೂ ಪಡೆ ದಿಟ್ಟವಾಗಿ ಎದುರಿಸಿ ಆರನೇ ಬಾರಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಿತು.

ಮೂರನೇ ಬಾರಿ ಟ್ರೋಫಿ ಗೆಲ್ಲುವ ಟೀಮ್ ಇಂಡಿಯಾ ಹಾಗೂ ಕೋಟ್ಯಾಂತರ ಅಭಿಮಾನಿಗಳ ಕನಸು ನೆಚ್ಚುನೂರಾಯಿತು. ಆಸ್ಟ್ರೇಲಿಯಾ ವಿರುದ್ಧ ಸೋತ ಬೆನ್ನಲ್ಲೇ ಭಾರತದ ಆಟಗಾರರು ಬೇಸರಗೊಂಡರು. ಕೆಲ ಪ್ಲೇಯರ್ಸ್ ಕಣ್ಣೀರು ಕೂಡ ಇಟ್ಟರು. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕೂಡ ಬೇಸರಗೊಂಡರು.

ಟೂರ್ನಿಯುದ್ದಕ್ಕೂ ತಂಡದ ಗೆಲುವಿಗೆ ಹೋರಾಡಿದ ರೋಹಿತ್-ಕೊಹ್ಲಿಗೆ ಫೈನಲ್ನಲ್ಲಿ ಸೋತಾಗ ಕಣ್ಣೀರನ್ನು ತಡೆಯಲು ಸಾಧ್ಯವಾಗಲಿಲ್ಲ. ಇದನ್ನು ಕಂಡು ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ರೋಹಿತ್ ಹಾಗೂ ಕೊಹ್ಲಿಗೆ ಸಾಂತ್ವನ ಹೇಳಿದರು. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಟೀಮ್ ಇಂಡಿಯಾವನ್ನು, ಎಲ್ಲಾ ವಿಭಾಗಗಳಲ್ಲಿ ಆಸ್ಟ್ರೇಲಿಯಾ ಮೀರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ಕ್ರಿಕೆಟ್ ತಂಡವು ಟ್ರಿಕಿ ಪಿಚ್ನಲ್ಲಿ ಎಡವಿ 50 ಓವರ್ಗಳಲ್ಲಿ 240 ರನ್ಗಳಿಗೆ ಸೀಮಿತವಾಯಿತು. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅರ್ಧಶತಕ ಗಳಿಸಿದರಷ್ಟೆ.

ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡರೂ ಆರಾಮವಾಗಿ ಗುರಿ ತಲುಪಿತು. ಟ್ರಾವಿಸ್ ಹೆಡ್ 120 ಎಸೆತಗಳಲ್ಲಿ 147 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಲಾಬುಶೇನ್ ಹಾಗೂ ಹೆಡ್ ಜೊತೆಯಾಟಕ್ಕೆ ಬ್ರೇಕ್ ಹಾಕಲು ರೋಹಿತ್ ಎಷ್ಟೇ ಪ್ರಯತ್ನ ಪಟ್ಟರು ಅದು ಸಾಧ್ಯವಾಗಲಿಲ್ಲ.

ಭಾರತ ಕಡಿಮೆ ರನ್ ಕಲೆಹಾಕಿದ್ದೇ ಸೋಲಿಗೆ ಮುಖ್ಯ ಕಾರಣ ಎಂಬುದು ಅಭಿಮಾನಿಗಳ ಅಭಿಪ್ರಾಯ. ಟೂರ್ನಮೆಂಟ್ನಲ್ಲಿ ಟೀಮ್ ಇಂಡಿಯಾ ಪರ ಬ್ಯಾಟಿಂಗ್ನಲ್ಲಿ ಮಿಂಚಿದ್ದ ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ ಅವರು ಟ್ರಿಕಿ ಪಿಚ್ನಲ್ಲಿ ಸಂಪೂರ್ಣ ವಿಫಲರಾದರು.

ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮಾತನಾಡಿ, "ಹುಡುಗರು ನಿರಾಶೆಗೊಂಡಿದ್ದಾರೆ. ಡ್ರೆಸ್ಸಿಂಗ್ ಕೋಣೆಯಲ್ಲಿ ಬಹಳಷ್ಟು ಭಾವನೆಗಳು ಇದ್ದವು. ಅವರ ಜೊತೆ ತುಂಬಾ ಸಮಯ ಕಳೆದ ನನಗೆ ಅವರನ್ನು ವೈಯಕ್ತಿಕವಾಗಿ ತಿಳಿದಿದೆ. ಇದು ಕಠಿಣ ಸಮಯ. ಆದರೆ, ನಾಳೆ ನಾವು ಮುಂದುವರಿಯುತ್ತೇವೆ. ಈ ರೀತಿಯ ಆಟಗಳು ನಿಮ್ಮನ್ನು ಉನ್ನತ ಸ್ಥಾನವನ್ನು ಪಡೆದುಕೊಳ್ಳುವಂತೆ ಮಾಡುತ್ತದೆ,”ಎಂದು ಹೇಳಿದ್ದಾರೆ.
Published On - 7:59 am, Mon, 20 November 23




