Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijay Hazare Trophy 2021: 6,6,6,6,6,6: ಶಾರೂಖ್ ಖಾನ್ ಸಿಡಿಲಬ್ಬರದ ಬ್ಯಾಟಿಂಗ್

Shahrukh khan Vijay Hazare Trophy 2021: ನಿರ್ಣಾಯಕ ಪಂದ್ಯದಲ್ಲಿ ಶಾರೂಖ್ ಖಾನ್ ಕರ್ನಾಟಕ ಪಾಲಿಗೆ ಕಂಟಕವಾಗಿದ್ದಾರೆ. ಕಳೆದ ಬಾರಿ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್​ ಪರ ಆಡಿದ್ದ ಶಾರೂಖ್ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on:Dec 21, 2021 | 3:18 PM

ವಿಜಯ್ ಹಜಾರೆ ಟೂರ್ನಿಯ 2ನೇ ಕ್ವಾರ್ಟರ್​ ಫೈನಲ್​ನಲ್ಲಿ  ಕರ್ನಾಟಕ ವಿರುದ್ದ ತಮಿಳುನಾಡು ಬ್ಯಾಟರ್ ಶಾರೂಖ್ ಖಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಆರಂಭಿಕ ಜಗದೀಸನ್ ಅವರ ಶತಕ ಹಾಗೂ ಸಾಯಿ ಕಿಶೋರ್ ಅವರ ಅರ್ಧಶತಕದೊಂದಿಗೆ ತಮಿಳುನಾಡು ಉತ್ತಮ ಆರಂಭ ಪಡೆದಿತ್ತು. ಅದರಂತೆ 45 ಓವರ್​ ವೇಳೆ 290 ರ ಗಡಿ ತಲುಪಿದ್ದ ತಮಿಳುನಾಡು ಮೊತ್ತವನ್ನು 350 ರ ಗಡಿದಾಟಿಸಿದ್ದು ಶಾರೂಖ್ ಖಾನ್.

ವಿಜಯ್ ಹಜಾರೆ ಟೂರ್ನಿಯ 2ನೇ ಕ್ವಾರ್ಟರ್​ ಫೈನಲ್​ನಲ್ಲಿ ಕರ್ನಾಟಕ ವಿರುದ್ದ ತಮಿಳುನಾಡು ಬ್ಯಾಟರ್ ಶಾರೂಖ್ ಖಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಆರಂಭಿಕ ಜಗದೀಸನ್ ಅವರ ಶತಕ ಹಾಗೂ ಸಾಯಿ ಕಿಶೋರ್ ಅವರ ಅರ್ಧಶತಕದೊಂದಿಗೆ ತಮಿಳುನಾಡು ಉತ್ತಮ ಆರಂಭ ಪಡೆದಿತ್ತು. ಅದರಂತೆ 45 ಓವರ್​ ವೇಳೆ 290 ರ ಗಡಿ ತಲುಪಿದ್ದ ತಮಿಳುನಾಡು ಮೊತ್ತವನ್ನು 350 ರ ಗಡಿದಾಟಿಸಿದ್ದು ಶಾರೂಖ್ ಖಾನ್.

1 / 6
ಕರ್ನಾಟಕ ಬೌಲರುಗಳ ಮುಂದೆ ಪರಾಕ್ರಮ ಮೆರೆದ ಶಾರೂಖ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. 202 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಶಾರೂಖ್ ಬರೋಬ್ಬರಿ 6 ಸಿಕ್ಸ್ ಸಿಡಿಸಿದರು. ಅಷ್ಟೇ ಅಲ್ಲದೆ ಯುವ ದಾಂಡಿಗನ ಬ್ಯಾಟ್​ನಿಂದ 7 ಫೋರ್​ಗಳು ಕೂಡ ಮೂಡಿ ಬಂದಿತ್ತು. 44ನೇ ಓವರ್‌ ವೇಳೆ 14 ಎಸೆತಗಳಲ್ಲಿ 17 ರನ್ ಗಳಿಸಿದ್ದ ಶಾರೂಖ್ ಆ ಬಳಿಕ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದು ವಿಶೇಷ. ಈ ಮೂಲಕ ತಮಿಳುನಾಡು ಕೊನೆಯ 24 ಎಸೆತಗಳಲ್ಲಿ 64 ರನ್ ಗಳಿಸಿತು. ಈ 64 ರನ್​ಗಳ ಪೈಕಿ 59 ರನ್‌ಗಳು ಶಾರುಖ್ ಖಾನ್ ಅವರ ಬ್ಯಾಟ್‌ನಿಂದ ಮೂಡಿಬಂದಿದ್ದವು.

ಕರ್ನಾಟಕ ಬೌಲರುಗಳ ಮುಂದೆ ಪರಾಕ್ರಮ ಮೆರೆದ ಶಾರೂಖ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. 202 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಶಾರೂಖ್ ಬರೋಬ್ಬರಿ 6 ಸಿಕ್ಸ್ ಸಿಡಿಸಿದರು. ಅಷ್ಟೇ ಅಲ್ಲದೆ ಯುವ ದಾಂಡಿಗನ ಬ್ಯಾಟ್​ನಿಂದ 7 ಫೋರ್​ಗಳು ಕೂಡ ಮೂಡಿ ಬಂದಿತ್ತು. 44ನೇ ಓವರ್‌ ವೇಳೆ 14 ಎಸೆತಗಳಲ್ಲಿ 17 ರನ್ ಗಳಿಸಿದ್ದ ಶಾರೂಖ್ ಆ ಬಳಿಕ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದು ವಿಶೇಷ. ಈ ಮೂಲಕ ತಮಿಳುನಾಡು ಕೊನೆಯ 24 ಎಸೆತಗಳಲ್ಲಿ 64 ರನ್ ಗಳಿಸಿತು. ಈ 64 ರನ್​ಗಳ ಪೈಕಿ 59 ರನ್‌ಗಳು ಶಾರುಖ್ ಖಾನ್ ಅವರ ಬ್ಯಾಟ್‌ನಿಂದ ಮೂಡಿಬಂದಿದ್ದವು.

2 / 6
 ಅದರಂತೆ ಕೇವಲ 39 ಎಸೆತಗಳಲ್ಲಿ 79 ರನ್​ ಸಿಡಿಸುವ ಮೂಲಕ 300ರ ಅಸುಪಾಸಿನಲ್ಲಿರಬೇಕಾದ ಸ್ಕೋರ್ ಅನ್ನು ಅಂತಿಮ ಓವರ್​ಗಳ ವೇಳೆಗೆ ಶಾರೂಖ್ ಖಾನ್ 350 ರ ಗಡಿದಾಟಿಸಿದರು. ಶಾರೂಖ್​ರ ಅಜೇಯ 79 ರನ್​ಗಳ ನೆರವಿನಿಂದ ತಮಿಳುನಾಡು ತಂಡವು ಕರ್ನಾಟಕ ವಿರುದ್ದ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 354 ರನ್​ ಕಲೆಹಾಕಿತು.

ಅದರಂತೆ ಕೇವಲ 39 ಎಸೆತಗಳಲ್ಲಿ 79 ರನ್​ ಸಿಡಿಸುವ ಮೂಲಕ 300ರ ಅಸುಪಾಸಿನಲ್ಲಿರಬೇಕಾದ ಸ್ಕೋರ್ ಅನ್ನು ಅಂತಿಮ ಓವರ್​ಗಳ ವೇಳೆಗೆ ಶಾರೂಖ್ ಖಾನ್ 350 ರ ಗಡಿದಾಟಿಸಿದರು. ಶಾರೂಖ್​ರ ಅಜೇಯ 79 ರನ್​ಗಳ ನೆರವಿನಿಂದ ತಮಿಳುನಾಡು ತಂಡವು ಕರ್ನಾಟಕ ವಿರುದ್ದ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 354 ರನ್​ ಕಲೆಹಾಕಿತು.

3 / 6
 ಈ ಹಿಂದೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್​ ಪಂದ್ಯದಲ್ಲೂ ಕರ್ನಾಟಕ ಪಾಲಿಗೆ ಶಾರೂಖ್ ಖಾನ್ ಮುಳುವಾಗಿದ್ದರು. ಅಂದು ಕೇವಲ 15 ಎಸೆತಗಳಲ್ಲಿ 33 ರನ್ ಬಾರಿಸುವ ಮೂಲಕ ಶಾರೂಖ್ ಖಾನ್ ತಮಿಳುನಾಡು ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ್ದರು. ಅದು ಕೂಡ ಕೊನೆಯ ಎಸೆತದಲ್ಲಿ ಸಿಕ್ಸ್​ ಸಿಡಿಸುವ ಮೂಲಕ ಎಂಬುದು ವಿಶೇಷ.

ಈ ಹಿಂದೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್​ ಪಂದ್ಯದಲ್ಲೂ ಕರ್ನಾಟಕ ಪಾಲಿಗೆ ಶಾರೂಖ್ ಖಾನ್ ಮುಳುವಾಗಿದ್ದರು. ಅಂದು ಕೇವಲ 15 ಎಸೆತಗಳಲ್ಲಿ 33 ರನ್ ಬಾರಿಸುವ ಮೂಲಕ ಶಾರೂಖ್ ಖಾನ್ ತಮಿಳುನಾಡು ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ್ದರು. ಅದು ಕೂಡ ಕೊನೆಯ ಎಸೆತದಲ್ಲಿ ಸಿಕ್ಸ್​ ಸಿಡಿಸುವ ಮೂಲಕ ಎಂಬುದು ವಿಶೇಷ.

4 / 6
ಇದೀಗ ಮತ್ತೊಮ್ಮೆ ನಿರ್ಣಾಯಕ ಪಂದ್ಯದಲ್ಲಿ ಶಾರೂಖ್ ಖಾನ್ ಕರ್ನಾಟಕ ಪಾಲಿಗೆ ಕಂಟಕವಾಗಿದ್ದಾರೆ. ಕಳೆದ ಬಾರಿ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್​ ಪರ ಆಡಿದ್ದ ಶಾರೂಖ್ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟೂರ್ನಿಗಳ ಮೂಲಕ ತಮ್ಮ ಸ್ಪೋಟಕ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿರುವ ಶಾರೂಖ್ ಖರೀದಿಗೆ ಈ ಬಾರಿ ಪೈಪೋಟಿಯಂತು ಕಂಡು ಬರಲಿದೆ.

ಇದೀಗ ಮತ್ತೊಮ್ಮೆ ನಿರ್ಣಾಯಕ ಪಂದ್ಯದಲ್ಲಿ ಶಾರೂಖ್ ಖಾನ್ ಕರ್ನಾಟಕ ಪಾಲಿಗೆ ಕಂಟಕವಾಗಿದ್ದಾರೆ. ಕಳೆದ ಬಾರಿ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್​ ಪರ ಆಡಿದ್ದ ಶಾರೂಖ್ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟೂರ್ನಿಗಳ ಮೂಲಕ ತಮ್ಮ ಸ್ಪೋಟಕ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿರುವ ಶಾರೂಖ್ ಖರೀದಿಗೆ ಈ ಬಾರಿ ಪೈಪೋಟಿಯಂತು ಕಂಡು ಬರಲಿದೆ.

5 / 6
Shahrukh khan

Shahrukh khan blasts 79 runs of 39 balls Tamil Nadu vs Karnataka Vijay Hazare Trophy 2021

6 / 6

Published On - 3:15 pm, Tue, 21 December 21

Follow us
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ