Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಯಾಕೆ ಕಪ್ ಗೆಲ್ಲುತ್ತಿಲ್ಲ? ಯುಜ್ವೇಂದ್ರ ಚಹಲ್ ಉತ್ತರ ಹೀಗಿದೆ

Yuzvendra Chahal: ಆರ್​ಸಿಬಿ ಪರ ನಾನು 8 ವರ್ಷಗಳ ಕಾಲ ಆಡಿದ್ದೆ. ಆ ತಂಡದಿಂದಲೇ ನಾನು ಟೀಮ್ ಇಂಡಿಯಾದಲ್ಲೂ ಅವಕಾಶ ಪಡೆದಿದ್ದೆ.

TV9 Web
| Updated By: ಝಾಹಿರ್ ಯೂಸುಫ್

Updated on:Jul 17, 2023 | 9:27 PM

ಈ ಸಲ ಕಪ್ ನಮ್ದೆ...ಈ ಘೋಷವಾಕ್ಯ ಶುರುವಾಗಿ 16 ವರ್ಷಗಳೇ ಕಳೆದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿದಿವೆ. ಆದರೆ ಈ ಹದಿನಾರು ವರ್ಷಗಳಲ್ಲಿ ಆರ್​ಸಿಬಿ ತಂಡ ಮೂರು ಬಾರಿ ಫೈನಲ್​ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು.

ಈ ಸಲ ಕಪ್ ನಮ್ದೆ...ಈ ಘೋಷವಾಕ್ಯ ಶುರುವಾಗಿ 16 ವರ್ಷಗಳೇ ಕಳೆದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿದಿವೆ. ಆದರೆ ಈ ಹದಿನಾರು ವರ್ಷಗಳಲ್ಲಿ ಆರ್​ಸಿಬಿ ತಂಡ ಮೂರು ಬಾರಿ ಫೈನಲ್​ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು.

1 / 11
2009 ರಲ್ಲಿ ಮೊದಲ ಬಾರಿಗೆ ಫೈನಲ್​ ಆಡಿದ್ದ ಆರ್​ಸಿಬಿ ಡೆಕ್ಕನ್ ಚಾರ್ಜರ್ಸ್​ (ಈಗಿನ SRH​) ವಿರುದ್ಧ ಸೋಲನುಭವಿಸಿತ್ತು. ಆನಂತರ ಆರ್​ಸಿಬಿ ಫೈನಲ್ ಪ್ರವೇಶಿಸಿದ್ದು 2011 ರಲ್ಲಿ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತು ನಿರಾಸೆ ಅನುಭವಿಸಿತು.

2009 ರಲ್ಲಿ ಮೊದಲ ಬಾರಿಗೆ ಫೈನಲ್​ ಆಡಿದ್ದ ಆರ್​ಸಿಬಿ ಡೆಕ್ಕನ್ ಚಾರ್ಜರ್ಸ್​ (ಈಗಿನ SRH​) ವಿರುದ್ಧ ಸೋಲನುಭವಿಸಿತ್ತು. ಆನಂತರ ಆರ್​ಸಿಬಿ ಫೈನಲ್ ಪ್ರವೇಶಿಸಿದ್ದು 2011 ರಲ್ಲಿ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತು ನಿರಾಸೆ ಅನುಭವಿಸಿತು.

2 / 11
ಇದಾದ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​ಸಿಬಿ 2016 ರಲ್ಲಿ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಆದರೆ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ 8 ರನ್​ಗಳಿಂದ ಸೋತು ಕಿರೀಟ ಮುಡಿಗೇರಿಸಿಕೊಳ್ಳುವ ಅವಕಾಶವನ್ನು ಆರ್​ಸಿಬಿ ಕೈಚೆಲ್ಲಿಕೊಂಡಿತು.

ಇದಾದ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​ಸಿಬಿ 2016 ರಲ್ಲಿ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಆದರೆ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ 8 ರನ್​ಗಳಿಂದ ಸೋತು ಕಿರೀಟ ಮುಡಿಗೇರಿಸಿಕೊಳ್ಳುವ ಅವಕಾಶವನ್ನು ಆರ್​ಸಿಬಿ ಕೈಚೆಲ್ಲಿಕೊಂಡಿತು.

3 / 11
ಅಂದರೆ ಫೈನಲ್ ಆಡಿದ ಬಳಗದಲ್ಲಿ ಯುಜ್ವೇಂದ್ರ ಚಹಲ್ ಕೂಡ ಇದ್ದರು. ಇದೀಗ ಸಂದರ್ಶನವೊಂದರಲ್ಲಿ ಭಾಗವಹಿಸಿದ ಚಹಲ್ ಅವರಿಗೆ ಆರ್​ಸಿಬಿ ಯಾಕೆ ಪ್ರಶಸ್ತಿ ಗೆಲ್ಲುತ್ತಿಲ್ಲ ಎಂಬ ಪ್ರಶ್ನೆಯನ್ನು ಮುಂದಿಡಲಾಗಿದೆ.

ಅಂದರೆ ಫೈನಲ್ ಆಡಿದ ಬಳಗದಲ್ಲಿ ಯುಜ್ವೇಂದ್ರ ಚಹಲ್ ಕೂಡ ಇದ್ದರು. ಇದೀಗ ಸಂದರ್ಶನವೊಂದರಲ್ಲಿ ಭಾಗವಹಿಸಿದ ಚಹಲ್ ಅವರಿಗೆ ಆರ್​ಸಿಬಿ ಯಾಕೆ ಪ್ರಶಸ್ತಿ ಗೆಲ್ಲುತ್ತಿಲ್ಲ ಎಂಬ ಪ್ರಶ್ನೆಯನ್ನು ಮುಂದಿಡಲಾಗಿದೆ.

4 / 11
ಈ ಪ್ರಶ್ನೆಗೆ ಉತ್ತರಿಸಿದ ಚಹಲ್, ಕಳೆದ 8 ವರ್ಷಗಳಿಂದ ನಾನು ಕೂಡ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಆದರೆ ಇದುವರೆಗೆ ಉತ್ತರ ಸಿಕ್ಕಿಲ್ಲ. 2016 ರಲ್ಲಿ ನಮ್ಮದು ಅತ್ಯುತ್ತಮ ತಂಡವಾಗಿತ್ತು. ಕ್ರಿಸ್ ಗೇಲ್, ಕೆಎಲ್ ರಾಹುಲ್​ನಂತಹ ಆಟಗಾರರು ತಂಡದಲ್ಲಿದ್ದರು.

ಈ ಪ್ರಶ್ನೆಗೆ ಉತ್ತರಿಸಿದ ಚಹಲ್, ಕಳೆದ 8 ವರ್ಷಗಳಿಂದ ನಾನು ಕೂಡ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಆದರೆ ಇದುವರೆಗೆ ಉತ್ತರ ಸಿಕ್ಕಿಲ್ಲ. 2016 ರಲ್ಲಿ ನಮ್ಮದು ಅತ್ಯುತ್ತಮ ತಂಡವಾಗಿತ್ತು. ಕ್ರಿಸ್ ಗೇಲ್, ಕೆಎಲ್ ರಾಹುಲ್​ನಂತಹ ಆಟಗಾರರು ತಂಡದಲ್ಲಿದ್ದರು.

5 / 11
ಇದಾಗ್ಯೂ ನಾವು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನುಭವಿಸಿದೆವು. ಅದೊಂದು ನೋವಿನ ಸಂಗತಿ ಎಂದು ಯುಜ್ವೇಂದ್ರ ಚಹಲ್ ಹೇಳಿದರು.

ಇದಾಗ್ಯೂ ನಾವು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನುಭವಿಸಿದೆವು. ಅದೊಂದು ನೋವಿನ ಸಂಗತಿ ಎಂದು ಯುಜ್ವೇಂದ್ರ ಚಹಲ್ ಹೇಳಿದರು.

6 / 11
ಇದೇ ವೇಳೆ ಆರ್​ಸಿಬಿ ಫ್ರಾಂಚೈಸಿ ನನ್ನನ್ನು ತಂಡದಿಂದ ಕೈ ಬಿಟ್ಟಿರುವುದು ತುಂಬಾ ನೋವುಂಟು ಮಾಡಿದೆ ಎಂದ ಚಹಲ್, 8 ವರ್ಷಗಳ ಕಾಲ ಆಡಿದ ತಂಡದಿಂದ ನಾನು ಹೊರಬೀಳುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ ಎಂದರು.

ಇದೇ ವೇಳೆ ಆರ್​ಸಿಬಿ ಫ್ರಾಂಚೈಸಿ ನನ್ನನ್ನು ತಂಡದಿಂದ ಕೈ ಬಿಟ್ಟಿರುವುದು ತುಂಬಾ ನೋವುಂಟು ಮಾಡಿದೆ ಎಂದ ಚಹಲ್, 8 ವರ್ಷಗಳ ಕಾಲ ಆಡಿದ ತಂಡದಿಂದ ನಾನು ಹೊರಬೀಳುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ ಎಂದರು.

7 / 11
ಆರ್​ಸಿಬಿ ಪರ ನಾನು 8 ವರ್ಷಗಳ ಕಾಲ ಆಡಿದ್ದೆ. ಆ ತಂಡದಿಂದಲೇ ನಾನು ಟೀಮ್ ಇಂಡಿಯಾದಲ್ಲೂ ಅವಕಾಶ ಪಡೆದಿದ್ದೆ. ಏಕೆಂದರೆ ಆರ್​ಸಿಬಿ ನನಗೆ ಆಡುವ ಅವಕಾಶ ನೀಡಿತ್ತು. ವಿರಾಟ್ ಕೊಹ್ಲಿ ನನಗೆ ಸಂಪೂರ್ಣ ಬೆಂಬಲ ನೀಡಿದ್ದರು. ನನ್ನ ಪಾಲಿಗೆ ಆರ್​ಸಿಬಿ ಎಂಬುದು ಒಂದು ಫ್ಯಾಮಿಲಿಯಾಗಿತ್ತು.

ಆರ್​ಸಿಬಿ ಪರ ನಾನು 8 ವರ್ಷಗಳ ಕಾಲ ಆಡಿದ್ದೆ. ಆ ತಂಡದಿಂದಲೇ ನಾನು ಟೀಮ್ ಇಂಡಿಯಾದಲ್ಲೂ ಅವಕಾಶ ಪಡೆದಿದ್ದೆ. ಏಕೆಂದರೆ ಆರ್​ಸಿಬಿ ನನಗೆ ಆಡುವ ಅವಕಾಶ ನೀಡಿತ್ತು. ವಿರಾಟ್ ಕೊಹ್ಲಿ ನನಗೆ ಸಂಪೂರ್ಣ ಬೆಂಬಲ ನೀಡಿದ್ದರು. ನನ್ನ ಪಾಲಿಗೆ ಆರ್​ಸಿಬಿ ಎಂಬುದು ಒಂದು ಫ್ಯಾಮಿಲಿಯಾಗಿತ್ತು.

8 / 11
ಆದರೆ 2021 ರ ಬಳಿಕ ಆರ್​ಸಿಬಿ ಫ್ರಾಂಚೈಸಿ ನನ್ನನ್ನು ತಂಡದಿಂದ ಕೈ ಬಿಟ್ಟಿತ್ತು. ಅದೊಂದು ನೋವಿನ ಸಂಗತಿ. ಈ ಬಗ್ಗೆ ನನಗೆ ಫೋನ್ ಕರೆ ಮಾಡಿ ಯಾರೂ ಕೂಡ ತಿಳಿಸಿರಲಿಲ್ಲ. ನನ್ನೊಂದಿಗೆ ಆರ್​ಸಿಬಿ ಫ್ರಾಂಚೈಸಿ ಮಾತುಕತೆಯನ್ನು ಸಹ ನಡೆಸಿರಲಿಲ್ಲ. ಇದಾಗ್ಯೂ ಹರಾಜಿನಲ್ಲಿ ಮತ್ತೆ ಖರೀದಿಸುತ್ತೇನೆ ಎಂದಿದ್ದರು.

ಆದರೆ 2021 ರ ಬಳಿಕ ಆರ್​ಸಿಬಿ ಫ್ರಾಂಚೈಸಿ ನನ್ನನ್ನು ತಂಡದಿಂದ ಕೈ ಬಿಟ್ಟಿತ್ತು. ಅದೊಂದು ನೋವಿನ ಸಂಗತಿ. ಈ ಬಗ್ಗೆ ನನಗೆ ಫೋನ್ ಕರೆ ಮಾಡಿ ಯಾರೂ ಕೂಡ ತಿಳಿಸಿರಲಿಲ್ಲ. ನನ್ನೊಂದಿಗೆ ಆರ್​ಸಿಬಿ ಫ್ರಾಂಚೈಸಿ ಮಾತುಕತೆಯನ್ನು ಸಹ ನಡೆಸಿರಲಿಲ್ಲ. ಇದಾಗ್ಯೂ ಹರಾಜಿನಲ್ಲಿ ಮತ್ತೆ ಖರೀದಿಸುತ್ತೇನೆ ಎಂದಿದ್ದರು.

9 / 11
ಆದರೆ ಐಪಿಎಲ್ 2022 ರ ಹರಾಜಿನಲ್ಲಿ ಆರ್​ಸಿಬಿ ನನ್ನನ್ನು ಖರೀದಿಸಿರಲಿಲ್ಲ. ಈಗಲೂ ನನಗೆ ಚಿನ್ನಸ್ವಾಮಿ ಸ್ಟೇಡಿಯಂ ನೆಚ್ಚಿನ ಮೈದಾನ. ಆದರೆ ಈಗ ನಾನು ಆಡುತ್ತಿರುವುದು ರಾಜಸ್ಥಾನ್ ರಾಯಲ್ಸ್ ಪರ. ಅಂದು ಆರ್​ಸಿಬಿ ನನ್ನನ್ನು ಏಕಾಏಕಿ ಕೈಬಿಟ್ಟಿದ್ದು ನನಗೆ ತುಂಬಾ ನೋವುಂಟು ಮಾಡಿತು ಎಂದು ಯುಜ್ವೇಂದ್ರ ಚಹಲ್ ತಿಳಿಸಿದರು.

ಆದರೆ ಐಪಿಎಲ್ 2022 ರ ಹರಾಜಿನಲ್ಲಿ ಆರ್​ಸಿಬಿ ನನ್ನನ್ನು ಖರೀದಿಸಿರಲಿಲ್ಲ. ಈಗಲೂ ನನಗೆ ಚಿನ್ನಸ್ವಾಮಿ ಸ್ಟೇಡಿಯಂ ನೆಚ್ಚಿನ ಮೈದಾನ. ಆದರೆ ಈಗ ನಾನು ಆಡುತ್ತಿರುವುದು ರಾಜಸ್ಥಾನ್ ರಾಯಲ್ಸ್ ಪರ. ಅಂದು ಆರ್​ಸಿಬಿ ನನ್ನನ್ನು ಏಕಾಏಕಿ ಕೈಬಿಟ್ಟಿದ್ದು ನನಗೆ ತುಂಬಾ ನೋವುಂಟು ಮಾಡಿತು ಎಂದು ಯುಜ್ವೇಂದ್ರ ಚಹಲ್ ತಿಳಿಸಿದರು.

10 / 11
ಅಂದಹಾಗೆ ಐಪಿಎಲ್ ಇತಿಹಾಸದಲ್ಲಿ ಆರ್​ಸಿಬಿ ಫ್ರಾಂಚೈಸಿ ಮಾಡಿದ ಅತೀ ದೊಡ್ಡ ತಪ್ಪುಗಳಲ್ಲಿ ಇದು ಕೂಡ ಒಂದು ಎಂದರೆ ತಪ್ಪಾಗಲಾರದು. ಏಕೆಂದರೆ ಐಪಿಎಲ್​ನ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದ ಬೌಲರ್​ನನ್ನು ಆರ್​ಸಿಬಿ ಏಕಾಏಕಿ ಬಿಡುಗಡೆ ಮಾಡಿತು. ಇದೀಗ ಒಟ್ಟು 187 ವಿಕೆಟ್ ಕಬಳಿಸಿ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಯುಜ್ವೇಂದ್ರ ಚಹಲ್ ನಿರ್ಮಿಸಿ RCB ಗೆ ತಿರುಗೇಟು ನೀಡಿದ್ದಾರೆ.

ಅಂದಹಾಗೆ ಐಪಿಎಲ್ ಇತಿಹಾಸದಲ್ಲಿ ಆರ್​ಸಿಬಿ ಫ್ರಾಂಚೈಸಿ ಮಾಡಿದ ಅತೀ ದೊಡ್ಡ ತಪ್ಪುಗಳಲ್ಲಿ ಇದು ಕೂಡ ಒಂದು ಎಂದರೆ ತಪ್ಪಾಗಲಾರದು. ಏಕೆಂದರೆ ಐಪಿಎಲ್​ನ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದ ಬೌಲರ್​ನನ್ನು ಆರ್​ಸಿಬಿ ಏಕಾಏಕಿ ಬಿಡುಗಡೆ ಮಾಡಿತು. ಇದೀಗ ಒಟ್ಟು 187 ವಿಕೆಟ್ ಕಬಳಿಸಿ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಯುಜ್ವೇಂದ್ರ ಚಹಲ್ ನಿರ್ಮಿಸಿ RCB ಗೆ ತಿರುಗೇಟು ನೀಡಿದ್ದಾರೆ.

11 / 11

Published On - 9:24 pm, Mon, 17 July 23

Follow us
ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ
ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಎಲ್ಲಿಸ್ ಪೆರ್ರಿ ಸೂಪರ್​​ವುಮೆನ್ ಕ್ಯಾಚ್: ವಿಡಿಯೋ ವೈರಲ್
ಎಲ್ಲಿಸ್ ಪೆರ್ರಿ ಸೂಪರ್​​ವುಮೆನ್ ಕ್ಯಾಚ್: ವಿಡಿಯೋ ವೈರಲ್
ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ
ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ
ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸುವುದು ಕೇಂದ್ರ ಸಂಬಂಧಿಸಿದ್ದಲ್ಲ: ಹೆಚ್​ಡಿಕೆ
ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸುವುದು ಕೇಂದ್ರ ಸಂಬಂಧಿಸಿದ್ದಲ್ಲ: ಹೆಚ್​ಡಿಕೆ
ನಿರೂಪಕಿ ಚೈತ್ರಾ ವಾಸುದೇವನ್ ಎರಡನೇ ವಿವಾಹ, ಮಾಂಗಲ್ಯಧಾರಣೆ ವಿಡಿಯೋ
ನಿರೂಪಕಿ ಚೈತ್ರಾ ವಾಸುದೇವನ್ ಎರಡನೇ ವಿವಾಹ, ಮಾಂಗಲ್ಯಧಾರಣೆ ವಿಡಿಯೋ
ಸುಳ್ಳು ಹೇಳಿದರೆ ಪಾಪ ತಟ್ಟುತ್ತದೆಯೇ? ವಿಡಿಯೋ ನೋಡಿ
ಸುಳ್ಳು ಹೇಳಿದರೆ ಪಾಪ ತಟ್ಟುತ್ತದೆಯೇ? ವಿಡಿಯೋ ನೋಡಿ