AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶತಮಾನದ ಬಳಿಕ ನಡೆದ ಅದ್ದೂರಿ ಗ್ರಾಮ ದೇವತೆಯ ಜಾತ್ರೆಯ ವೈಭವ ನೋಡಲು ಬಂದ ಭಕ್ತಗಣ; ಇಲ್ಲಿದೆ ನೋಡಿ ಅದರ ಝಲಕ್

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ದ್ಯಾಮವ್ವ, ದುರ್ಗಮ್ಮ ಗ್ರಾಮ ದೇವಿಯ ಜಾತ್ರೆಯು ಅದ್ದೂರಿಯಾಗಿ ನಡೆದಿದೆ. ಜಿಲ್ಲೆ ಅಷ್ಟೇ ಅಲ್ಲದೇ ಹೊರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದ ಪುನೀತರಾದರು.

TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Jan 24, 2023 | 8:58 PM

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ದ್ಯಾಮವ್ವ, ದುರ್ಗಮ್ಮ ಗ್ರಾಮ ದೇವಿಯ ಮೂರ್ತಿಗಳು ಹಳೆಯದಾದರಿಂದ ಜಾತ್ರೆಯು ಶತಮಾನದಿಂದ ನಡೆದಿರಲಿಲ್ಲ. ಇದೀಗ ದುರ್ಗಮ್ಮ, ದ್ಯಾಮವ್ವ ದೇವಿ ಹೊಸ ಮೂರ್ತಿಗಳು ತರಲಾಗಿದ್ದು, ಗ್ರಾಮಸ್ಥರೆಲ್ಲಾ ಸೇರಿ ಈ ವರ್ಷ ಗ್ರಾಮ ದೇವತೆಗಳ ಜಾತ್ರೆ ಅದ್ಧೂರಿಯಾಗಿ ಆಚರಿಸಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ದ್ಯಾಮವ್ವ, ದುರ್ಗಮ್ಮ ಗ್ರಾಮ ದೇವಿಯ ಮೂರ್ತಿಗಳು ಹಳೆಯದಾದರಿಂದ ಜಾತ್ರೆಯು ಶತಮಾನದಿಂದ ನಡೆದಿರಲಿಲ್ಲ. ಇದೀಗ ದುರ್ಗಮ್ಮ, ದ್ಯಾಮವ್ವ ದೇವಿ ಹೊಸ ಮೂರ್ತಿಗಳು ತರಲಾಗಿದ್ದು, ಗ್ರಾಮಸ್ಥರೆಲ್ಲಾ ಸೇರಿ ಈ ವರ್ಷ ಗ್ರಾಮ ದೇವತೆಗಳ ಜಾತ್ರೆ ಅದ್ಧೂರಿಯಾಗಿ ಆಚರಿಸಿದ್ದಾರೆ.

1 / 7
ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದಿಂದ ದೇವತೆಗಳ ಹೊಸ ಮೂರ್ತಿಗಳು ತರಲಾಗಿದ್ದು, ಇಂದು(ಜ.23) ದ್ಯಾಮವ್ವ, ದುರ್ಗವ್ವ ದೇವತೆಗಳನ್ನ ಗ್ರಾಮಕ್ಕೆ ಅದ್ಧೂರಿಯಾಗಿ ಬರಮಾಡಿಕೊಂಡರು. ಹೂಗಳಿಂದ ಶೃಂಗಾರ ಮಾಡಿದ ಗ್ರಾಮದಲ್ಲಿ ದೇವತೆ ಮೂರ್ತಿಗಳ ಭವ್ಯ ಮೆರವಣಿಗೆ ಮಾಡಲಾಯಿತು.

ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದಿಂದ ದೇವತೆಗಳ ಹೊಸ ಮೂರ್ತಿಗಳು ತರಲಾಗಿದ್ದು, ಇಂದು(ಜ.23) ದ್ಯಾಮವ್ವ, ದುರ್ಗವ್ವ ದೇವತೆಗಳನ್ನ ಗ್ರಾಮಕ್ಕೆ ಅದ್ಧೂರಿಯಾಗಿ ಬರಮಾಡಿಕೊಂಡರು. ಹೂಗಳಿಂದ ಶೃಂಗಾರ ಮಾಡಿದ ಗ್ರಾಮದಲ್ಲಿ ದೇವತೆ ಮೂರ್ತಿಗಳ ಭವ್ಯ ಮೆರವಣಿಗೆ ಮಾಡಲಾಯಿತು.

2 / 7
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಿದ್ರು. ಈ ವೇಳೆ ಭಕ್ತರು  ಪರಸ್ಪರ ಭಂಡಾರ ಎರಚುವ ಮೂಲಕ ಸಂಭ್ರಮಿಸಿದ್ರು. ನೂರಾರು ಸುಮಂಗಲೆಯರು ಕುಂಭಹೊತ್ತು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಿದ್ರು. ಈ ವೇಳೆ ಭಕ್ತರು ಪರಸ್ಪರ ಭಂಡಾರ ಎರಚುವ ಮೂಲಕ ಸಂಭ್ರಮಿಸಿದ್ರು. ನೂರಾರು ಸುಮಂಗಲೆಯರು ಕುಂಭಹೊತ್ತು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

3 / 7
ಈ ವೇಳೆ ಡೊಳ್ಳು ಕುಣಿತ, ಕರಡಿ‌ ಮಜಲು ಸೇರಿದಂತೆ ವಿವಿಧ ವಾದ್ಯಗಳು ಮೆರವಣಿಗೆ ರಂಗು ಹೆಚ್ಚಿಸಿದ್ವು. ಈ ಜಾತ್ರೆ ವಿಶೇಷ ಅಂದರೆ ಎರಡು ದಿನ ಈ ಗ್ರಾಮದಲ್ಲಿ ಯಾರೊಬ್ರು ಅಪ್ಪಿತಪ್ಪಿಯೂ ಚಪ್ಪಲಿ ಹಾಕಿಕೊಳ್ಳುವಂತಿಲ್ಲ. ಅಷ್ಟೇ ಅಲ್ಲದೇ ಯಾರ ಮನೆಯಲ್ಲೂ ಒಲೆ ಹೊತ್ತಿಸುವಂತಿಲ್ಲ. ಇಡೀ ಗ್ರಾಮಸ್ಥರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿರುತ್ತದೆ.

ಈ ವೇಳೆ ಡೊಳ್ಳು ಕುಣಿತ, ಕರಡಿ‌ ಮಜಲು ಸೇರಿದಂತೆ ವಿವಿಧ ವಾದ್ಯಗಳು ಮೆರವಣಿಗೆ ರಂಗು ಹೆಚ್ಚಿಸಿದ್ವು. ಈ ಜಾತ್ರೆ ವಿಶೇಷ ಅಂದರೆ ಎರಡು ದಿನ ಈ ಗ್ರಾಮದಲ್ಲಿ ಯಾರೊಬ್ರು ಅಪ್ಪಿತಪ್ಪಿಯೂ ಚಪ್ಪಲಿ ಹಾಕಿಕೊಳ್ಳುವಂತಿಲ್ಲ. ಅಷ್ಟೇ ಅಲ್ಲದೇ ಯಾರ ಮನೆಯಲ್ಲೂ ಒಲೆ ಹೊತ್ತಿಸುವಂತಿಲ್ಲ. ಇಡೀ ಗ್ರಾಮಸ್ಥರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿರುತ್ತದೆ.

4 / 7
ಶತಮಾನದ ಹಿಂದೆ ಈ ಗ್ರಾಮದ ಗ್ರಾಮದೇವತೆ ಜಾತ್ರೆ ಮಾಡಲಾಗಿತ್ತು. ಈಗ ಒಂದು ಶತಮಾನದ ಬಳಿಕ ದ್ವಾಮವ್ವ, ದುರ್ಗವ್ವ, ಹೊಸ ಮೂರ್ತಿಗಳನ್ನು ತಂದು ಜಾತ್ರೆ ಮಾಡಲಾಗಿದ್ದು, ಮಹಿಳೆಯರು, ಮಕ್ಕಳು, ಹಿರಿಯರು ಎಲ್ಲರೂ ಜಾತಿ ಬೇಧ ಭಾವವಿಲ್ಲದೇ ಈ ಸಂಭ್ರಮದಲ್ಲಿ ತೊಡಗುತ್ತಾರೆ.

ಶತಮಾನದ ಹಿಂದೆ ಈ ಗ್ರಾಮದ ಗ್ರಾಮದೇವತೆ ಜಾತ್ರೆ ಮಾಡಲಾಗಿತ್ತು. ಈಗ ಒಂದು ಶತಮಾನದ ಬಳಿಕ ದ್ವಾಮವ್ವ, ದುರ್ಗವ್ವ, ಹೊಸ ಮೂರ್ತಿಗಳನ್ನು ತಂದು ಜಾತ್ರೆ ಮಾಡಲಾಗಿದ್ದು, ಮಹಿಳೆಯರು, ಮಕ್ಕಳು, ಹಿರಿಯರು ಎಲ್ಲರೂ ಜಾತಿ ಬೇಧ ಭಾವವಿಲ್ಲದೇ ಈ ಸಂಭ್ರಮದಲ್ಲಿ ತೊಡಗುತ್ತಾರೆ.

5 / 7
ಇನ್ನೂಂದು ವಿಶೇಷವೆಂದರೆ ಮದುವೆಯಾಗಿ ಹೋದ ಗ್ರಾಮದ ಎಲ್ಲ ಮಹಿಳೆಯರು ಎಷ್ಟೇ ವಯಸ್ಸಾದ್ರೂ ದೇವಿ ಜಾತ್ರೆಯಲ್ಲಿ ಭಾಗಿಯಾಗಿದ್ದು, ಗ್ರಾಮದ ಅಲ್ಲಲ್ಲಿ ಶಿರಾ, ಅನ್ನ, ಸಾರು ಊಟದ ವ್ಯವಸ್ಥೆ ಮಾಡಲಾಗಿತ್ತು. ದ್ಯಾಮವ್ವ, ದುರ್ಗರ್ವ ಭಕ್ತರ ಇಷ್ಟಾರ್ಥಗಳು ಈಡೇರಿಸುತ್ತಾರೆ ಅನ್ನೋ ನಂಬಿಕೆ ಗ್ರಾಮಸ್ಥರಲ್ಲಿದೆ.

ಇನ್ನೂಂದು ವಿಶೇಷವೆಂದರೆ ಮದುವೆಯಾಗಿ ಹೋದ ಗ್ರಾಮದ ಎಲ್ಲ ಮಹಿಳೆಯರು ಎಷ್ಟೇ ವಯಸ್ಸಾದ್ರೂ ದೇವಿ ಜಾತ್ರೆಯಲ್ಲಿ ಭಾಗಿಯಾಗಿದ್ದು, ಗ್ರಾಮದ ಅಲ್ಲಲ್ಲಿ ಶಿರಾ, ಅನ್ನ, ಸಾರು ಊಟದ ವ್ಯವಸ್ಥೆ ಮಾಡಲಾಗಿತ್ತು. ದ್ಯಾಮವ್ವ, ದುರ್ಗರ್ವ ಭಕ್ತರ ಇಷ್ಟಾರ್ಥಗಳು ಈಡೇರಿಸುತ್ತಾರೆ ಅನ್ನೋ ನಂಬಿಕೆ ಗ್ರಾಮಸ್ಥರಲ್ಲಿದೆ.

6 / 7
ಈ ವಿಶೇಷವಾದ ಜಾತ್ರೆಯಲ್ಲಿ ಮಕ್ಕಳು, ಹಿರಿಯರು ತಮ್ಮ ವಯಸ್ಸಿನ ತಾರತಮ್ಯವಿಲ್ಲದೇ ಎಲ್ಲರೂ ಒಂದೇ ವಯಸ್ಸಿನವರು ಎಂದು ಕೊಂಡು ಜಾತ್ರೆಯನ್ನು ಆನಂದಿಸುತ್ತಾರೆ. ನಿಜಕ್ಕೂ ಈಗಿನ ಆಧುನಿಕ ಯುಗದಲ್ಲಿ ಇಂತಹ ಸಾಂಪ್ರದಾಯಿಕ ಜಾತ್ರೆಯನ್ನು ನಮ್ಮ ನಡುವೆ ಆಚರಿಸುತ್ತಿದ್ದು ಸಂತೋಷದ ವಿಚಾರ.

ಈ ವಿಶೇಷವಾದ ಜಾತ್ರೆಯಲ್ಲಿ ಮಕ್ಕಳು, ಹಿರಿಯರು ತಮ್ಮ ವಯಸ್ಸಿನ ತಾರತಮ್ಯವಿಲ್ಲದೇ ಎಲ್ಲರೂ ಒಂದೇ ವಯಸ್ಸಿನವರು ಎಂದು ಕೊಂಡು ಜಾತ್ರೆಯನ್ನು ಆನಂದಿಸುತ್ತಾರೆ. ನಿಜಕ್ಕೂ ಈಗಿನ ಆಧುನಿಕ ಯುಗದಲ್ಲಿ ಇಂತಹ ಸಾಂಪ್ರದಾಯಿಕ ಜಾತ್ರೆಯನ್ನು ನಮ್ಮ ನಡುವೆ ಆಚರಿಸುತ್ತಿದ್ದು ಸಂತೋಷದ ವಿಚಾರ.

7 / 7

Published On - 8:57 pm, Tue, 24 January 23

Follow us
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ಮರದ ಕೊಂಬೆ ಬಿದ್ದು ಅಕ್ಷಯ್​ ಬ್ರೈನ್ ಡೆಡ್:ಮೊಮ್ಮಗನಿಗಾಗಿ ಅಜ್ಜ-ಅಜ್ಜಿ ಪೂಜೆ
ಮರದ ಕೊಂಬೆ ಬಿದ್ದು ಅಕ್ಷಯ್​ ಬ್ರೈನ್ ಡೆಡ್:ಮೊಮ್ಮಗನಿಗಾಗಿ ಅಜ್ಜ-ಅಜ್ಜಿ ಪೂಜೆ
ಟೆಂಡರ್ ಪ್ರಕ್ರಿಯೆಯಲ್ಲಿ ನಂದಿನಿ ಸಂಸ್ಥೆ ಭಾಗಿಯಾಗಿರಲಿಲ್ಲ: ಅಧಿಕಾರಿಗಳು
ಟೆಂಡರ್ ಪ್ರಕ್ರಿಯೆಯಲ್ಲಿ ನಂದಿನಿ ಸಂಸ್ಥೆ ಭಾಗಿಯಾಗಿರಲಿಲ್ಲ: ಅಧಿಕಾರಿಗಳು
ಕಾರ್ಯಕ್ರಮದಲ್ಲಿ ಶಿವಕುಮಾರ್​ಗೆ ಭಾರೀ ಕರತಾಡನ ಮತ್ತು ಶಿಳ್ಳೆ
ಕಾರ್ಯಕ್ರಮದಲ್ಲಿ ಶಿವಕುಮಾರ್​ಗೆ ಭಾರೀ ಕರತಾಡನ ಮತ್ತು ಶಿಳ್ಳೆ
ನಂದಿನಿ ದೇಶದ ಬೇರೆ ಬೇರೆ ಭಾಗಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಿದೆ: ಸಿಟಿ ರವಿ
ನಂದಿನಿ ದೇಶದ ಬೇರೆ ಬೇರೆ ಭಾಗಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಿದೆ: ಸಿಟಿ ರವಿ