ಸಕ್ಕರೆ ನಾಡು ಮಡ್ಯದಲ್ಲಿ ಮೊದಲ ಬಾರಿಗೆ ಕೃಷಿ ಕ್ರೀಡಾಕೂಟ; ಎಲ್ಲರ ಗಮನ ಸೆಳೆದ ಕಬ್ಬು ಕಟಾವು ಚಾಲೆಂಜ್

ಈ ಬಾರಿ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಮಂಡ್ಯ ಜಿಲ್ಲಾಡಳಿತ ತಯಾರಿ ಕೂಡ ಮಾಡುತ್ತಿದೆ. ಈ ನಡುವೆ ಸಮ್ಮೇಳನವನ್ನ ಪ್ರಚಾರ ಪಡಿಸಲು ವಿವಿಧ ಸ್ವರ್ಧೆಗಳನ್ನ ಕೂಡ ಏರ್ಪಡಿಸಲಾಗುತ್ತಿದೆ. ಇದೇ ಮೊದಲ ಬಾರಿ ಕಬ್ಬು ಕಟಾವು ಸ್ವರ್ಧೆಯನ್ನ ಆಯೋಜನೆ ಮಾಡಲಾಗಿತ್ತು. ಕಬ್ಬು ಕಟಾವು ಸ್ವರ್ಧೆ ಎಲ್ಲರ ಗಮನ ಸೆಳೆದಿದ್ದು, ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

|

Updated on: Oct 05, 2024 | 7:16 PM

ಸಕ್ಕರೆ ನಗರಿ ಮಂಡ್ಯದಲ್ಲಿ ಈ ಬಾರಿ ಡಿಸೆಂಬರ್​ನಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನವನ್ನ ಆಯೋಜನೆ ಮಾಡಲಾಗಿದೆ. ಡಿಸೆಂಬರ್ 21, 22, 23 ರಂದು ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನವನ್ನ ಅರ್ಥಪೂರ್ಣವಾಗಿ ಆಚರಣೆ ಮಾಡಲು ಮಂಡ್ಯ ಜಿಲ್ಲಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್​ ಈಗಿನಿಂದಲೇ ಎಲ್ಲ ರೀತಿಯ ತಯಾರಿ ಮಾಡುತ್ತಿದೆ.

ಸಕ್ಕರೆ ನಗರಿ ಮಂಡ್ಯದಲ್ಲಿ ಈ ಬಾರಿ ಡಿಸೆಂಬರ್​ನಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನವನ್ನ ಆಯೋಜನೆ ಮಾಡಲಾಗಿದೆ. ಡಿಸೆಂಬರ್ 21, 22, 23 ರಂದು ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನವನ್ನ ಅರ್ಥಪೂರ್ಣವಾಗಿ ಆಚರಣೆ ಮಾಡಲು ಮಂಡ್ಯ ಜಿಲ್ಲಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್​ ಈಗಿನಿಂದಲೇ ಎಲ್ಲ ರೀತಿಯ ತಯಾರಿ ಮಾಡುತ್ತಿದೆ.

1 / 6
ಸಮ್ಮೇಳನವನ್ನ ಹೆಚ್ಚು ಪ್ರಚಾರ ಪಡಿಸಿ, ಜನರನ್ನ ಆಕರ್ಷಿಸಲು ಈಗಿನಿಂದಲೇ ಎಲ್ಲ ಸ್ವರ್ಧೆಗಳನ್ನ ಆಯೋಜನೆ ಮಾಡುತ್ತಿದೆ. ಅದರಲ್ಲೂ ಮಂಡ್ಯ ಅಂದರೆ ಕಬ್ಬಿಗೆ ಫೇಮಸ್. ಈ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಕಟಾವು ಚಾಲೆಂಜ್ ಅನ್ನ ಏರ್ಪಡಿಸಿತ್ತು.

ಸಮ್ಮೇಳನವನ್ನ ಹೆಚ್ಚು ಪ್ರಚಾರ ಪಡಿಸಿ, ಜನರನ್ನ ಆಕರ್ಷಿಸಲು ಈಗಿನಿಂದಲೇ ಎಲ್ಲ ಸ್ವರ್ಧೆಗಳನ್ನ ಆಯೋಜನೆ ಮಾಡುತ್ತಿದೆ. ಅದರಲ್ಲೂ ಮಂಡ್ಯ ಅಂದರೆ ಕಬ್ಬಿಗೆ ಫೇಮಸ್. ಈ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಕಟಾವು ಚಾಲೆಂಜ್ ಅನ್ನ ಏರ್ಪಡಿಸಿತ್ತು.

2 / 6
ಜಿಲ್ಲೆಯ ಮದ್ದೂರು ತಾಲೂಕಿನ ಕಾರಕಹಳ್ಳಿ ಗ್ರಾಮದ ಜಮೀನುವೊಂದರಲ್ಲಿ ಕೃಷಿ ಕ್ರೀಡಾಕೂಟವನ್ನ ಆಯೋಜನೆ ಮಾಡಲಾಗಿತ್ತು. ಬಾ ಗುರು ಕಬ್ಬು ಕಡಿ ಸ್ವರ್ಧೆ ಎಲ್ಲರ ಗಮನ ಸೆಳೆದಿತ್ತು. ಈ ಸ್ಪರ್ಧೆಯಲ್ಲಿ 18 ವರ್ಷ ಮೇಲ್ಪಟ್ಟ ಜನರಿಗೆ ಅವಕಾಶವಿತ್ತು.

ಜಿಲ್ಲೆಯ ಮದ್ದೂರು ತಾಲೂಕಿನ ಕಾರಕಹಳ್ಳಿ ಗ್ರಾಮದ ಜಮೀನುವೊಂದರಲ್ಲಿ ಕೃಷಿ ಕ್ರೀಡಾಕೂಟವನ್ನ ಆಯೋಜನೆ ಮಾಡಲಾಗಿತ್ತು. ಬಾ ಗುರು ಕಬ್ಬು ಕಡಿ ಸ್ವರ್ಧೆ ಎಲ್ಲರ ಗಮನ ಸೆಳೆದಿತ್ತು. ಈ ಸ್ಪರ್ಧೆಯಲ್ಲಿ 18 ವರ್ಷ ಮೇಲ್ಪಟ್ಟ ಜನರಿಗೆ ಅವಕಾಶವಿತ್ತು.

3 / 6
ಒಂದು ತಂಡದಲ್ಲಿ ಆರು ಯುವಕರಿಗೆ ಅವಕಾಶ ನೀಡಲಾಗಿತ್ತು. 15 ನಿಮಿಷಗಳ ಕಾಲಾವಕಾಶ ನೀಡಿ ಇದರಲ್ಲಿ ಯಾರು ಹೆಚ್ಚು ಕಬ್ಬು ಕಡಿಯುತ್ತಾರೋ ಆ ತಂಡಕ್ಕೆ ಬಹುಮಾನವನ್ನ ಸಹ ಇಡಲಾಗಿತ್ತು. ಮದ್ದೂರು ತಾಲೂಕಿನ ವಿವಿಧ ಗ್ರಾಮದ ಎಂಟು ಯುವಕರ ತಂಡ ಈ ಚಾಲೆಂಜ್ ನಲ್ಲಿ ಭಾಗವಹಿಸಿದ್ರು.

ಒಂದು ತಂಡದಲ್ಲಿ ಆರು ಯುವಕರಿಗೆ ಅವಕಾಶ ನೀಡಲಾಗಿತ್ತು. 15 ನಿಮಿಷಗಳ ಕಾಲಾವಕಾಶ ನೀಡಿ ಇದರಲ್ಲಿ ಯಾರು ಹೆಚ್ಚು ಕಬ್ಬು ಕಡಿಯುತ್ತಾರೋ ಆ ತಂಡಕ್ಕೆ ಬಹುಮಾನವನ್ನ ಸಹ ಇಡಲಾಗಿತ್ತು. ಮದ್ದೂರು ತಾಲೂಕಿನ ವಿವಿಧ ಗ್ರಾಮದ ಎಂಟು ಯುವಕರ ತಂಡ ಈ ಚಾಲೆಂಜ್ ನಲ್ಲಿ ಭಾಗವಹಿಸಿದ್ರು.

4 / 6
ಸ್ವರ್ಧೆಯಲ್ಲಿ ಗೆದ್ದ ತಂಡ ನಗದು ಹಾಗೂ ಪ್ರಶಸ್ತಿ ಪತ್ರವನ್ನ ಕೂ ನೀಡಲಾಗಿತ್ತು. ಹಳ್ಳಿ ಯುವಕರು ಸಹ ಈ ಸ್ವರ್ಧೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವರ್ಧೆಯಲ್ಲಿ ಗೆದ್ದ ತಂಡ ನಗದು ಹಾಗೂ ಪ್ರಶಸ್ತಿ ಪತ್ರವನ್ನ ಕೂ ನೀಡಲಾಗಿತ್ತು. ಹಳ್ಳಿ ಯುವಕರು ಸಹ ಈ ಸ್ವರ್ಧೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

5 / 6
 ಒಟ್ಟಾರೆ ಇದೇ ಮೊದಲ ಬಾರಿ ಆಯೋಜನೆ ಮಾಡಿದ್ದ ಕಬ್ಬು ಕಟಾವು ಸ್ವರ್ಧೆ ಎಲ್ಲರ ಗಮನ ಸೆಳೆದಿತ್ತು. ಯುಕವರು ಕೂಡ ಸಾಕಷ್ಟು ಉತ್ಸಹಕ್ಕೆ ಸ್ವರ್ಧೆಯಲ್ಲಿ ಪಾಲ್ಗೊಂಡು ಕಬ್ಬು ಕಟಾವು ಮಾಡಿದರು.

ಒಟ್ಟಾರೆ ಇದೇ ಮೊದಲ ಬಾರಿ ಆಯೋಜನೆ ಮಾಡಿದ್ದ ಕಬ್ಬು ಕಟಾವು ಸ್ವರ್ಧೆ ಎಲ್ಲರ ಗಮನ ಸೆಳೆದಿತ್ತು. ಯುಕವರು ಕೂಡ ಸಾಕಷ್ಟು ಉತ್ಸಹಕ್ಕೆ ಸ್ವರ್ಧೆಯಲ್ಲಿ ಪಾಲ್ಗೊಂಡು ಕಬ್ಬು ಕಟಾವು ಮಾಡಿದರು.

6 / 6
Follow us