AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

D Gukesh: ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಗುಕೇಶ್​ಗೆ ತೆರಿಗೆ ವಿನಾಯಿತಿ?

D Gukesh: ಭಾರತದ ಯುವ ಚೆಸ್ ಪ್ರತಿಭೆ ಡಿ. ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಅವರಿಗೆ 11.45 ಕೋಟಿ ರೂಪಾಯಿ ಬಹುಮಾನ ದೊರೆತಿದೆ. ತೆರಿಗೆ ನಿಯಮಗಳ ಪ್ರಕಾರ, ಅವರು ಭಾರೀ ಮೊತ್ತದ ತೆರಿಗೆ ಪಾವತಿಸಬೇಕಾಗಿತ್ತು. ಆದರೆ, ಮೋದಿ ಸರ್ಕಾರ ಅವರಿಗೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಪರಿಶೀಲಿಸುತ್ತಿದೆ ಎಂಬ ವರದಿಗಳಿವೆ. ಇದರಿಂದ ಅವರು ಸಂಪೂರ್ಣ ಬಹುಮಾನವನ್ನು ಪಡೆಯುವ ಸಾಧ್ಯತೆ ಇದೆ.

ಪೃಥ್ವಿಶಂಕರ
|

Updated on: Dec 20, 2024 | 6:31 PM

Share
 ಭಾರತದ ಯುವ ಚೆಸ್ ಆಟಗಾರ ಡಿ ಗುಕೇಶ್ ಕೆಲವು ದಿನಗಳ ಹಿಂದೆ ಸಿಂಗಾಪುರದಲ್ಲಿ ನಡೆದಿದ್ದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ವಿಶ್ವ ಚೆಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಇದರ ಜೊತೆಗೆ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಎಂಬ ದಾಖಲೆಯನ್ನು ನಿರ್ಮಿಸಿದ್ದರು.

ಭಾರತದ ಯುವ ಚೆಸ್ ಆಟಗಾರ ಡಿ ಗುಕೇಶ್ ಕೆಲವು ದಿನಗಳ ಹಿಂದೆ ಸಿಂಗಾಪುರದಲ್ಲಿ ನಡೆದಿದ್ದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ವಿಶ್ವ ಚೆಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಇದರ ಜೊತೆಗೆ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಎಂಬ ದಾಖಲೆಯನ್ನು ನಿರ್ಮಿಸಿದ್ದರು.

1 / 6
ಈ ಅದ್ಭುತ ಗೆಲುವಿನ ನಂತರ ಗುಕೇಶ್‌ಗೆ ಆಯೋಜಕರಿಂದ ಬರೋಬ್ಬರಿ 11.45 ಕೋಟಿ ಬಹುಮಾನ ಸಿಕ್ಕಿತ್ತು. ಇದರ ಜೊತೆಗೆ ಹೆಚ್ಚುವರಿಯಾಗಿ, ತಮಿಳುನಾಡು ಸರ್ಕಾರವು ಅವರಿಗೆ 5 ಕೋಟಿ ರೂಪಾಯಿಗಳ ಬಹುಮಾನದ ಮೊತ್ತವನ್ನು ಘೋಷಿಸಿತ್ತು. ಹೀಗಾಗಿ ಗುಕೇಶ್‌ಗೆ ಒಟ್ಟು 16.45 ಕೋಟಿ ರೂ. ಬಹುಮಾನ ಲಭಿಸಿತ್ತು.

ಈ ಅದ್ಭುತ ಗೆಲುವಿನ ನಂತರ ಗುಕೇಶ್‌ಗೆ ಆಯೋಜಕರಿಂದ ಬರೋಬ್ಬರಿ 11.45 ಕೋಟಿ ಬಹುಮಾನ ಸಿಕ್ಕಿತ್ತು. ಇದರ ಜೊತೆಗೆ ಹೆಚ್ಚುವರಿಯಾಗಿ, ತಮಿಳುನಾಡು ಸರ್ಕಾರವು ಅವರಿಗೆ 5 ಕೋಟಿ ರೂಪಾಯಿಗಳ ಬಹುಮಾನದ ಮೊತ್ತವನ್ನು ಘೋಷಿಸಿತ್ತು. ಹೀಗಾಗಿ ಗುಕೇಶ್‌ಗೆ ಒಟ್ಟು 16.45 ಕೋಟಿ ರೂ. ಬಹುಮಾನ ಲಭಿಸಿತ್ತು.

2 / 6
ಆದರೆ ಭಾರತೀಯ ತೆರಿಗೆ ನಿಯಮಗಳ ಪ್ರಕಾರ, ಗುಕೇಶ್ ತಾವು ಪಡೆದ ಬಹುಮಾನದ ಮೊತ್ತದ ಶೇ. 42.5 ಪ್ರತಿಶತ ಹಣವನ್ನು ತೆರಿಗೆಯಾಗಿ ಪಾವತಿಸಬೇಕಿತ್ತು. ಅಂದರೆ ಗುಕೇಶ್ ತಾವು ಪಡೆದ 16.45 ಕೋಟಿ ರೂ. ಬಹುಮಾನದಲ್ಲಿ ಸರಿಸುಮಾರು 6.23 ಕೋಟಿ ರೂಗಳನ್ನು ತೆರಿಗೆಯಾಗಿ ಪಾವತಿಸಬೇಕಾಗಿತ್ತು.

ಆದರೆ ಭಾರತೀಯ ತೆರಿಗೆ ನಿಯಮಗಳ ಪ್ರಕಾರ, ಗುಕೇಶ್ ತಾವು ಪಡೆದ ಬಹುಮಾನದ ಮೊತ್ತದ ಶೇ. 42.5 ಪ್ರತಿಶತ ಹಣವನ್ನು ತೆರಿಗೆಯಾಗಿ ಪಾವತಿಸಬೇಕಿತ್ತು. ಅಂದರೆ ಗುಕೇಶ್ ತಾವು ಪಡೆದ 16.45 ಕೋಟಿ ರೂ. ಬಹುಮಾನದಲ್ಲಿ ಸರಿಸುಮಾರು 6.23 ಕೋಟಿ ರೂಗಳನ್ನು ತೆರಿಗೆಯಾಗಿ ಪಾವತಿಸಬೇಕಾಗಿತ್ತು.

3 / 6
ಆದರೀಗ ಮೋದಿ ಸರ್ಕಾರದ ಹಣಕಾಸು ಸಚಿವಾಲಯ ಗುಕೇಶ್ ಅವರ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಬಹುಮಾನದ ಮೇಲೆ ತೆರಿಗೆ ವಿನಾಯಿತಿ ಘೋಷಿಸಲು ಚಿಂತಿಸಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಈ ನಿರ್ಧಾರವನ್ನು ಶೀಘ್ರದಲ್ಲೇ ಅಧಿಕೃತವಾಗಿ ಹೊರಡಿಸಲಾಗುವುದು. ಇದರಿಂದಾಗಿ ಗುಕೇಶ್ ಸಂಪೂರ್ಣ ಬಹುಮಾನದ ಹಣವನ್ನು ಪಡೆಯಲಿದ್ದಾರೆ.

ಆದರೀಗ ಮೋದಿ ಸರ್ಕಾರದ ಹಣಕಾಸು ಸಚಿವಾಲಯ ಗುಕೇಶ್ ಅವರ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಬಹುಮಾನದ ಮೇಲೆ ತೆರಿಗೆ ವಿನಾಯಿತಿ ಘೋಷಿಸಲು ಚಿಂತಿಸಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಈ ನಿರ್ಧಾರವನ್ನು ಶೀಘ್ರದಲ್ಲೇ ಅಧಿಕೃತವಾಗಿ ಹೊರಡಿಸಲಾಗುವುದು. ಇದರಿಂದಾಗಿ ಗುಕೇಶ್ ಸಂಪೂರ್ಣ ಬಹುಮಾನದ ಹಣವನ್ನು ಪಡೆಯಲಿದ್ದಾರೆ.

4 / 6
ಚೆಸ್ ಚಾಂಪಿಯನ್‌ಶಿಪ್ ಗೆದ್ದಿದ್ದ ಗುಕೇಶ್ ಅವರು 13 ಲಕ್ಷ ಡಾಲರ್ ಬಹುಮಾನ ಪಡೆದಿದ್ದರು. ಅಂದರೆ ಭಾರತೀಯ ಕರೆನ್ಸಿಯಲ್ಲಿ 11.45 ಕೋಟಿ ರೂ. ಬಹುಮಾನ ಸಿಕ್ಕಿತ್ತು. ಭಾರತೀಯ ತೆರಿಗೆ ನಿಯಮಗಳ ಪ್ರಕಾರ, ಈ ಮೊತ್ತವು 30 ಪ್ರತಿಶತ ತೆರಿಗೆ, 15 ಪ್ರತಿಶತ ಸರ್ಚಾರ್ಜ್ ಮತ್ತು 4 ಪ್ರತಿಶತ ಸೆಸ್ಗೆ ಒಳಪಟ್ಟಿರುತ್ತದೆ.

ಚೆಸ್ ಚಾಂಪಿಯನ್‌ಶಿಪ್ ಗೆದ್ದಿದ್ದ ಗುಕೇಶ್ ಅವರು 13 ಲಕ್ಷ ಡಾಲರ್ ಬಹುಮಾನ ಪಡೆದಿದ್ದರು. ಅಂದರೆ ಭಾರತೀಯ ಕರೆನ್ಸಿಯಲ್ಲಿ 11.45 ಕೋಟಿ ರೂ. ಬಹುಮಾನ ಸಿಕ್ಕಿತ್ತು. ಭಾರತೀಯ ತೆರಿಗೆ ನಿಯಮಗಳ ಪ್ರಕಾರ, ಈ ಮೊತ್ತವು 30 ಪ್ರತಿಶತ ತೆರಿಗೆ, 15 ಪ್ರತಿಶತ ಸರ್ಚಾರ್ಜ್ ಮತ್ತು 4 ಪ್ರತಿಶತ ಸೆಸ್ಗೆ ಒಳಪಟ್ಟಿರುತ್ತದೆ.

5 / 6
ಒಟ್ಟಿನಲ್ಲಿ ಗುಕೇಶ್ 4.09 ಕೋಟಿ ತೆರಿಗೆ ಪಾವತಿಸಬೇಕಿದ್ದು, ಸಿಕ್ಕಿರುವ 11.45 ಕೋಟಿ ರೂ ಬಹುಮಾನದಲ್ಲಿ ತೆರಿಗೆಯನ್ನು ಕಳೆದರೆ ಗುಕೇಶ್​ಗೆ 7.36 ಕೋಟಿ ರೂ. ಬಹುಮಾನವಾಗಿ ಸಿಗಲಿದೆ. ಇದಲ್ಲದೇ ತಮಿಳುನಾಡು ಸರ್ಕಾರ ನೀಡಿದ 5 ಕೋಟಿಗೂ ತೆರಿಗೆ ವಿಧಿಸಲಾಗಿದ್ದು, ಇದರಿಂದ ಗುಕೇಶ್ 2.86 ಕೋಟಿ ತೆರಿಗೆ ಕಟ್ಟಬೇಕಿದೆ.

ಒಟ್ಟಿನಲ್ಲಿ ಗುಕೇಶ್ 4.09 ಕೋಟಿ ತೆರಿಗೆ ಪಾವತಿಸಬೇಕಿದ್ದು, ಸಿಕ್ಕಿರುವ 11.45 ಕೋಟಿ ರೂ ಬಹುಮಾನದಲ್ಲಿ ತೆರಿಗೆಯನ್ನು ಕಳೆದರೆ ಗುಕೇಶ್​ಗೆ 7.36 ಕೋಟಿ ರೂ. ಬಹುಮಾನವಾಗಿ ಸಿಗಲಿದೆ. ಇದಲ್ಲದೇ ತಮಿಳುನಾಡು ಸರ್ಕಾರ ನೀಡಿದ 5 ಕೋಟಿಗೂ ತೆರಿಗೆ ವಿಧಿಸಲಾಗಿದ್ದು, ಇದರಿಂದ ಗುಕೇಶ್ 2.86 ಕೋಟಿ ತೆರಿಗೆ ಕಟ್ಟಬೇಕಿದೆ.

6 / 6
Follow Us
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು