AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಕ್ಕುಗಟ್ಟಿದ ಕೂದಲಿಗೆ ಹೊಳಪು ತರಲು ಈ 7 ಮನೆಮದ್ದುಗಳನ್ನು ಬಳಸಿ ನೋಡಿ

Hair Care Home Remedies: ಕೂದಲನ್ನು ಅತಿಯಾಗಿ ತೊಳೆಯುವುದರಿಂದ, ಆಲ್ಕೋಹಾಲ್ ಮತ್ತು ಕಠಿಣ ಸಾಬೂನುಗಳ ಬಳಕೆಯಿಂದ, ಡ್ರೈಯರ್​​ನಲ್ಲಿ ಕೂದಲನ್ನು ಒಣಗಿಸಿಕೊಳ್ಳುವುದರಿಂದ, ಅತಿಯಾಗಿ ಬಿಸಿಲಿಗೆ ಕೂದಲನ್ನು ಒಡ್ಡುವುದರಿಂದ, ಅಪೌಷ್ಟಿಕತೆಯಿಂದ ಹಾಗೂ ಹಾರ್ಮೋನುಗಳಲ್ಲಿ ಆಗುವ ಬದಲಾವಣೆಯಿಂದ ಕೂದಲಲ್ಲಿ ಸಿಕ್ಕು ಉಂಟಾಗಿ, ಉದುರಲಾರಂಬಿಸುತ್ತದೆ.

ಸುಷ್ಮಾ ಚಕ್ರೆ
|

Updated on: Oct 10, 2023 | 5:55 PM

Share
ಕೂದಲಿನ ಸೌಂದರ್ಯ ನಮ್ಮ ಆರೋಗ್ಯ ಹಾಗೂ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕೂದಲು ಉದುರುತ್ತಿದ್ದರೆ ಅದೇ ಬಗ್ಗೆ ನೆನಸಿಕೊಂಡು ಕೆಲವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ದೃಢವಾದ ಕೂದಲು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಕೂದಲಿನ ಸೌಂದರ್ಯ ನಮ್ಮ ಆರೋಗ್ಯ ಹಾಗೂ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕೂದಲು ಉದುರುತ್ತಿದ್ದರೆ ಅದೇ ಬಗ್ಗೆ ನೆನಸಿಕೊಂಡು ಕೆಲವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ದೃಢವಾದ ಕೂದಲು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

1 / 12
ಕೂದಲು ರೇಷ್ಮೆಯಂತೆ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಕೂದಲು ಸಿಕ್ಕುಗಟ್ಟಿದರೆ ಅದನ್ನು ಸರಿಪಡಿಸುವುದು ಹೇಗೆಂಬುದೇ ಗೊತ್ತಾಗುವುದಿಲ್ಲ.

ಕೂದಲು ರೇಷ್ಮೆಯಂತೆ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಕೂದಲು ಸಿಕ್ಕುಗಟ್ಟಿದರೆ ಅದನ್ನು ಸರಿಪಡಿಸುವುದು ಹೇಗೆಂಬುದೇ ಗೊತ್ತಾಗುವುದಿಲ್ಲ.

2 / 12
ಸಿಕ್ಕುಗಟ್ಟಿದ ಕೂದಲನ್ನು ಬಾಚಿಕೊಳ್ಳುವುದು ಕೂಡ ಕಷ್ಟ. ಕೂದಲು ಗಂಟುಗಂಟಾದರೆ ಉದುರಲಾರಂಭಿಸುತ್ತದೆ. ಸಿಕ್ಕುಗಟ್ಟಿದ ಕೂದಲಿನ ಮುಖ್ಯ ಕಾರಣವೆಂದರೆ ಘರ್ಷಣೆ. ಕೂದಲನ್ನು ಎಂದಿಗೂ ಅತಿಯಾಗಿ ಉಜ್ಜಬಾರದು.

ಸಿಕ್ಕುಗಟ್ಟಿದ ಕೂದಲನ್ನು ಬಾಚಿಕೊಳ್ಳುವುದು ಕೂಡ ಕಷ್ಟ. ಕೂದಲು ಗಂಟುಗಂಟಾದರೆ ಉದುರಲಾರಂಭಿಸುತ್ತದೆ. ಸಿಕ್ಕುಗಟ್ಟಿದ ಕೂದಲಿನ ಮುಖ್ಯ ಕಾರಣವೆಂದರೆ ಘರ್ಷಣೆ. ಕೂದಲನ್ನು ಎಂದಿಗೂ ಅತಿಯಾಗಿ ಉಜ್ಜಬಾರದು.

3 / 12
ಕೂದಲನ್ನು ಅತಿಯಾಗಿ ತೊಳೆಯುವುದರಿಂದ, ಆಲ್ಕೋಹಾಲ್ ಮತ್ತು ಕಠಿಣ ಸಾಬೂನುಗಳ ಬಳಕೆಯಿಂದ, ಡ್ರೈಯರ್​​ನಲ್ಲಿ ಕೂದಲನ್ನು ಒಣಗಿಸಿಕೊಳ್ಳುವುದರಿಂದ, ಅತಿಯಾಗಿ ಬಿಸಿಲಿಗೆ ಕೂದಲನ್ನು ಒಡ್ಡುವುದರಿಂದ, ಅಪೌಷ್ಟಿಕತೆಯಿಂದ ಹಾಗೂ ಹಾರ್ಮೋನುಗಳಲ್ಲಿ ಆಗುವ ಬದಲಾವಣೆಯಿಂದ ಕೂದಲು ಉದುರಲಾರಂಬಿಸುತ್ತದೆ.

ಕೂದಲನ್ನು ಅತಿಯಾಗಿ ತೊಳೆಯುವುದರಿಂದ, ಆಲ್ಕೋಹಾಲ್ ಮತ್ತು ಕಠಿಣ ಸಾಬೂನುಗಳ ಬಳಕೆಯಿಂದ, ಡ್ರೈಯರ್​​ನಲ್ಲಿ ಕೂದಲನ್ನು ಒಣಗಿಸಿಕೊಳ್ಳುವುದರಿಂದ, ಅತಿಯಾಗಿ ಬಿಸಿಲಿಗೆ ಕೂದಲನ್ನು ಒಡ್ಡುವುದರಿಂದ, ಅಪೌಷ್ಟಿಕತೆಯಿಂದ ಹಾಗೂ ಹಾರ್ಮೋನುಗಳಲ್ಲಿ ಆಗುವ ಬದಲಾವಣೆಯಿಂದ ಕೂದಲು ಉದುರಲಾರಂಬಿಸುತ್ತದೆ.

4 / 12
ಕೂದಲು ಸಿಕ್ಕಾಗುವುದನ್ನು ಮತ್ತು ಉದುರುವುದನ್ನು ತಡೆಯಲು 7 ಮನೆಮದ್ದುಗಳು ಇಲ್ಲಿವೆ...

ಕೂದಲು ಸಿಕ್ಕಾಗುವುದನ್ನು ಮತ್ತು ಉದುರುವುದನ್ನು ತಡೆಯಲು 7 ಮನೆಮದ್ದುಗಳು ಇಲ್ಲಿವೆ...

5 / 12
ಬಿಸಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದರಿಂದ ಕೂದಲಿಗೆ ತೇವಾಂಶ ಸಿಗುತ್ತದೆ. ಇದಕ್ಕೆ ಆಲಿವ್ ಅಥವಾ ಕ್ಯಾನೋಲಾ ಎಣ್ಣೆಯನ್ನು ಬಳಸಬಹುದು. ಎಣ್ಣೆಯನ್ನು ಸ್ವಲ್ಪ ಬೆಚ್ಚಗಾಗಿಸಿ, ನಿಮ್ಮ ನೆತ್ತಿಗೆ ಎಣ್ಣೆಯನ್ನು ಮಸಾಜ್ ಮಾಡಬೇಕು. ಅರ್ಧ ಗಂಟೆ ಬಿಟ್ಟು ಕೂದಲನ್ನು ತೊಳೆದುಕೊಳ್ಳಿ.

ಬಿಸಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದರಿಂದ ಕೂದಲಿಗೆ ತೇವಾಂಶ ಸಿಗುತ್ತದೆ. ಇದಕ್ಕೆ ಆಲಿವ್ ಅಥವಾ ಕ್ಯಾನೋಲಾ ಎಣ್ಣೆಯನ್ನು ಬಳಸಬಹುದು. ಎಣ್ಣೆಯನ್ನು ಸ್ವಲ್ಪ ಬೆಚ್ಚಗಾಗಿಸಿ, ನಿಮ್ಮ ನೆತ್ತಿಗೆ ಎಣ್ಣೆಯನ್ನು ಮಸಾಜ್ ಮಾಡಬೇಕು. ಅರ್ಧ ಗಂಟೆ ಬಿಟ್ಟು ಕೂದಲನ್ನು ತೊಳೆದುಕೊಳ್ಳಿ.

6 / 12
ಆಪಲ್ ಸೈಡರ್ ವಿನೆಗರ್ ಕೂದಲಿಗೆ ಹೊಳಪನ್ನು ನೀಡುತ್ತದೆ. ಹಾಗೇ ಕೂದಲಿನ ತೈಲ ಸಂಗ್ರಹವನ್ನು ತೆಗೆದುಹಾಕುತ್ತದೆ. ಕೂದಲಿಗೆ ಇದನ್ನು ಹಚ್ಚಿಕೊಂಡು ಸ್ವಲ್ಪ ಸಮಯ ಹಾಗೇ ಬಿಡಿ. ಆಗ ಕೂದಲು ಆಪಲ್ ಸೈಡರ್ ವಿನೆಗರ್ ಅನ್ನು ಹೀರಿಕೊಳ್ಳುತ್ತದೆ.

ಆಪಲ್ ಸೈಡರ್ ವಿನೆಗರ್ ಕೂದಲಿಗೆ ಹೊಳಪನ್ನು ನೀಡುತ್ತದೆ. ಹಾಗೇ ಕೂದಲಿನ ತೈಲ ಸಂಗ್ರಹವನ್ನು ತೆಗೆದುಹಾಕುತ್ತದೆ. ಕೂದಲಿಗೆ ಇದನ್ನು ಹಚ್ಚಿಕೊಂಡು ಸ್ವಲ್ಪ ಸಮಯ ಹಾಗೇ ಬಿಡಿ. ಆಗ ಕೂದಲು ಆಪಲ್ ಸೈಡರ್ ವಿನೆಗರ್ ಅನ್ನು ಹೀರಿಕೊಳ್ಳುತ್ತದೆ.

7 / 12
ಅವಕಾಡೊದಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಅವಕಾಡೊಗಳು ನಿಮ್ಮ ಕೂದಲಿನ ಹೊಳಪನ್ನು ವಾಪಾಸ್ ತಂದುಕೊಡುತ್ತವೆ. ಅವಕಾಡೊವನ್ನು ಬಳಸಿ ನೀವು ಪೇಸ್ಟ್ ತಯಾರಿಸಬಹುದು. ನೀವು ಈ ಪೇಸ್ಟ್ ಅನ್ನು ಒದ್ದೆಯಾದ ಕೂದಲಿಗೆ ಹಚ್ಚಿಕೊಳ್ಳಬಹುದು. ಬಳಿಕ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ನಿಮ್ಮ ಕೂದಲನ್ನು ತೊಳೆಯಿರಿ. ಇದನ್ನು ಬಳಸುವುದರಿಂದ ನಿಮ್ಮ ಕೂದಲು ಸುಂದರವಾಗಿ, ದೃಢವಾಗಿರುತ್ತದೆ.

ಅವಕಾಡೊದಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಅವಕಾಡೊಗಳು ನಿಮ್ಮ ಕೂದಲಿನ ಹೊಳಪನ್ನು ವಾಪಾಸ್ ತಂದುಕೊಡುತ್ತವೆ. ಅವಕಾಡೊವನ್ನು ಬಳಸಿ ನೀವು ಪೇಸ್ಟ್ ತಯಾರಿಸಬಹುದು. ನೀವು ಈ ಪೇಸ್ಟ್ ಅನ್ನು ಒದ್ದೆಯಾದ ಕೂದಲಿಗೆ ಹಚ್ಚಿಕೊಳ್ಳಬಹುದು. ಬಳಿಕ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ನಿಮ್ಮ ಕೂದಲನ್ನು ತೊಳೆಯಿರಿ. ಇದನ್ನು ಬಳಸುವುದರಿಂದ ನಿಮ್ಮ ಕೂದಲು ಸುಂದರವಾಗಿ, ದೃಢವಾಗಿರುತ್ತದೆ.

8 / 12
ತೆಂಗಿನ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಅನೇಕ ಪ್ರಯೋಜನಗಳಿವೆ. ತೆಂಗಿನ ಎಣ್ಣೆಯು ಹಾನಿಗೊಳಗಾದ ಕೂದಲನ್ನು ಸರಿ ಮಾಡುತ್ತದೆ. ಎಣ್ಣೆ ಹಚ್ಚಿಕೊಂಡ ಒಂದೆರಡು ಗಂಟೆಯ ನಂತರ ತಲೆಸ್ನಾನ ಮಾಡಬಹುದು ಅಥವಾ ರಾತ್ರಿಯಿಡೀ ಕೂದಲಿಗೆ ಎಣ್ಣೆ ಹಚ್ಚಿ ಬಿಡಬಹುದು.

ತೆಂಗಿನ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಅನೇಕ ಪ್ರಯೋಜನಗಳಿವೆ. ತೆಂಗಿನ ಎಣ್ಣೆಯು ಹಾನಿಗೊಳಗಾದ ಕೂದಲನ್ನು ಸರಿ ಮಾಡುತ್ತದೆ. ಎಣ್ಣೆ ಹಚ್ಚಿಕೊಂಡ ಒಂದೆರಡು ಗಂಟೆಯ ನಂತರ ತಲೆಸ್ನಾನ ಮಾಡಬಹುದು ಅಥವಾ ರಾತ್ರಿಯಿಡೀ ಕೂದಲಿಗೆ ಎಣ್ಣೆ ಹಚ್ಚಿ ಬಿಡಬಹುದು.

9 / 12
ಮೊಟ್ಟೆಯ ಬಿಳಿಭಾಗ, ಆಪಲ್ ಸೈಡರ್ ವಿನೆಗರ್ ಮತ್ತು ಆಲಿವ್ ಎಣ್ಣೆಯನ್ನು ಮಿಕ್ಸ್ ಮಾಡಿಕೊಂಡು ಕೂದಲಿಗೆ ಹಚ್ಚಿಕೊಳ್ಳಿ.  ಇದು ಹಾನಿಗೊಳಗಾದ ಕೂದಲಿಗೆ ಜೀವ ನೀಡುತ್ತದೆ.

ಮೊಟ್ಟೆಯ ಬಿಳಿಭಾಗ, ಆಪಲ್ ಸೈಡರ್ ವಿನೆಗರ್ ಮತ್ತು ಆಲಿವ್ ಎಣ್ಣೆಯನ್ನು ಮಿಕ್ಸ್ ಮಾಡಿಕೊಂಡು ಕೂದಲಿಗೆ ಹಚ್ಚಿಕೊಳ್ಳಿ. ಇದು ಹಾನಿಗೊಳಗಾದ ಕೂದಲಿಗೆ ಜೀವ ನೀಡುತ್ತದೆ.

10 / 12
ಮಯನೇಸ್ ನಿಮ್ಮ ಕೂದಲಿಗೆ ಕಂಡಿಷನರ್ ಆಗಿ ಕೆಲಸ ಮಾಡುತ್ತದೆ. ನಿಮ್ಮ ಕೂದಲಿಗೆ ಸ್ವಲ್ಪ ಮಯನೇಸ್ ಅನ್ನು ಹಚ್ಚಿಕೊಂಡು, ಸುಮಾರು 1 ಗಂಟೆ ಬಟ್ಟೆಯಿಂದ ಸುತ್ತಿಕೊಳ್ಳಿ. ನಂತರ ಕೂದಲು ವಾಶ್ ಮಾಡಿ.

ಮಯನೇಸ್ ನಿಮ್ಮ ಕೂದಲಿಗೆ ಕಂಡಿಷನರ್ ಆಗಿ ಕೆಲಸ ಮಾಡುತ್ತದೆ. ನಿಮ್ಮ ಕೂದಲಿಗೆ ಸ್ವಲ್ಪ ಮಯನೇಸ್ ಅನ್ನು ಹಚ್ಚಿಕೊಂಡು, ಸುಮಾರು 1 ಗಂಟೆ ಬಟ್ಟೆಯಿಂದ ಸುತ್ತಿಕೊಳ್ಳಿ. ನಂತರ ಕೂದಲು ವಾಶ್ ಮಾಡಿ.

11 / 12
ಚಹಾವನ್ನು ಕೂದಲು ವಾಶ್ ಮಾಡಲು ಬಳಸಿ. ಚಹಾವು ಕೂದಲಿಗೆ ಹೊಳಪನ್ನು ನೀಡುತ್ತದೆ. ಕೂದಲನ್ನು ಶಾಂಪೂನಿಂದ ತೊಳೆದ ನಂತರ ಕೊನೆಯಲ್ಲಿ ಟೀ ಡಿಕಾಕ್ಷನ್ ಅನ್ನು ಕೂದಲ ತುಂಬ ಹಚ್ಚಿಕೊಳ್ಳಿ. ಇದು ಕಂಡೀಷನರ್ ರೀತಿ ಕೆಲಸ ಮಾಡುತ್ತದೆ.

ಚಹಾವನ್ನು ಕೂದಲು ವಾಶ್ ಮಾಡಲು ಬಳಸಿ. ಚಹಾವು ಕೂದಲಿಗೆ ಹೊಳಪನ್ನು ನೀಡುತ್ತದೆ. ಕೂದಲನ್ನು ಶಾಂಪೂನಿಂದ ತೊಳೆದ ನಂತರ ಕೊನೆಯಲ್ಲಿ ಟೀ ಡಿಕಾಕ್ಷನ್ ಅನ್ನು ಕೂದಲ ತುಂಬ ಹಚ್ಚಿಕೊಳ್ಳಿ. ಇದು ಕಂಡೀಷನರ್ ರೀತಿ ಕೆಲಸ ಮಾಡುತ್ತದೆ.

12 / 12
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?