ಹಾವೇರಿ: ನಾಗರಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಪಶುವೈದ್ಯ, ಫೋಟೋಸ್ ನೋಡಿ
ಹಾವೇರಿ ನಗರದ ಹಳೆಯ ಕಟ್ಟಡ ತೆರವು ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ ನಾಗರಹಾವಿಗೆ ಇಲ್ಲಿನ ಪಾಲಿಕ್ಲಿನಿಕ್ನ ಪಶುವೈದ್ಯ ಡಾ.ಸಣ್ಣಭೀರಪ್ಪ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ಮೂಲಕ ನಾಗರಪಂಚಮಿ ಸಮಯದಲ್ಲಿ ಪಶುವೈದ್ಯ ನಾಗರಹಾವಿಗೆ ಪಂಚಮಿ ಉಡುಗೊರೆ ನೀಡಿದ್ದಾರೆ.
ಹಾವೇರಿ ನಗರದ ಹಳೆಯ ಕಟ್ಟಡ ತೆರವು ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ ನಾಗರಹಾವಿಗೆ ಇಲ್ಲಿನ ಪಾಲಿಕ್ಲಿನಿಕ್ನ ಪಶುವೈದ್ಯ ಡಾ.ಸಣ್ಣಭೀರಪ್ಪ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
1 / 5
ಹಾವೇರಿ ನಗರದ ಕನಕಾಪುರ ರಸ್ತೆಯ ರಾಜಸ್ಥಾನ ಡಾಬಾ ಹಳೆಯ ಕಟ್ಟಡವನ್ನು ತೆರವುಗೊಳಿಸುತ್ತದ್ದ ವೇಳೆ ಅವೇಶಷಗಳಡಿಯಲ್ಲಿ ಸಿಲುಕಿ ನಾಗರಹಾವು ಗಾಯಗೊಂಡು ಒದ್ದಾಡುತ್ತಿತ್ತು. ಕೂಡಲೆ ಡಾಬಾದವರು ಉರಗ ರಕ್ಷಕ ನಾಗರಾಜ ಭೈರಣ್ಣನವರಿಗೆ ವಿಷಯ ತಿಳಿಸಿದ್ದಾರೆ.
2 / 5
ಸ್ಥಳಕ್ಕೆ ಬಂದ ಉರಗ ರಕ್ಷಕ ಭೈರಣ್ಣ ಹಾವನ್ನು ರಕ್ಷಿಸಿ, ಚೀಲದೊಳಗೆ ಹಾಕಿಕೊಂಡು ಪಾಲಿಕ್ಲಿಕ್ಗೆ ತೆಗೆದಯಕೊಂಡು ಹೋಗಿದ್ದಾರೆ. ಅಲ್ಲಿ ಪಶುವೈದ್ಯಾಧಿಕಾರಿ ಡಾ.ಸಣ್ಣಭೀರಪ್ಪ ಹಾವನ್ನು ತಪಾಸಣೆ ಮಾಡಿ ಶಸ್ತ್ರಚಿಕಿತ್ಸೆಗೆ ಸಿದ್ದತೆ ಮಾಡಿದ್ದಾರೆ. ಬಳಿಕ, ಹಾವಿಗೆ ಅನಸ್ತೇಶಿಯಾ ನೀಡಿ ಪ್ರಜ್ಞೆ ತಪ್ಪಿಸಿ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೀಡಿದ್ದಾರೆ.
3 / 5
ಬಳಿಕ ಸ್ನೇಕ್ ನಾಗರಾಜ ತಮ್ಮ ನಿವಾಸದಲ್ಲಿ ಐದು ದಿನ ಹಾವಿಗೆ ಆರೈಕೆ ಮಾಡಿದ್ದಾರೆ. ಹಾವು ಗುಣಮುಖವಾಗಿದೆ. ನಂತರ ಕರ್ಜಗಿ ಅರಣ್ಯ ಪ್ರದೇಶದಲ್ಲಿ ಹಾವು ಬಿಟ್ಟಿದ್ದಾರೆ.
4 / 5
ಈ ಮೂಲಕ ನಾಗರಪಂಚಮಿ ಸಮಯದಲ್ಲಿ ಪಶುವೈದ್ಯ ನಾಗರಹಾವಿಗೆ ಪಂಚಮಿ ಉಡುಗೊರೆ ನೀಡಿದ್ದಾರೆ.