Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಸರ್ಕಾರಿ ರತಿ-ಕಾಮಣ್ಣ ಮೂರ್ತಿಗೆ 29 ಕೆಜಿ ಚಿನ್ನದಿಂದ ಶೃಂಗಾರ

ಅದು ಸರ್ಕಾರಿ ರತಿ-ಕಾಮಣ್ಣ ಅಂತಲೇ ಫೇಮಸ್. ಯುವಕ, ಯವತಿಯರಿಗೆ ಕಂಕಣ ಭಾಗ್ಯ, ಮಹಿಳೆಯರಿಗೆ ಸಂತಾನಭಾಗ್ಯ, ಬೇಡಿದವರಿಗೆ ಬಯಸಿದ ಭಾಗ್ಯ ಇಡೇರಿಸುವ ಸರ್ಕಾರಿ ರತಿ-ಕಾಮಣ್ಣ. ಅರೇ ಇದೇನಪ್ಪ ಸರ್ಕಾರ ಹೊಸ ಭಾಗ್ಯಗಳೇನಾದರೂ ಘೋಷಿಸಿದೆ ಅಂದುಕೊಳ್ಳಬೇಡಿ. ಇದು ಸರ್ಕಾರದ ಭಾಗ್ಯವಲ್ಲ.‌‌‌ ನಂಬಿದ ಭಕ್ತರಿಗೆ ರತಿ-ಕಾಮಣ್ಣ ನೀಡುವ ಭಾಗ್ಯಗಳು. ಈ ರತಿ-ಕಾಮಣ್ಣಗೆ ಕೆಜಿಗಟ್ಟಲೇ ಬಂಗಾರ ಹಾಕಿ ಶೃಂಗಾರ ಮಾಡ್ತಾರೆ. ಇಲ್ಲಿದೆ ಫೋಟೋಸ್​.

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ವಿವೇಕ ಬಿರಾದಾರ

Updated on:Mar 18, 2025 | 9:41 AM

ಗದಗ ನಗರದ ಕಿಲ್ಲಾ ಓಣಿಯಲ್ಲಿನ ಐತಿಹಾಸಿಕ ತ್ರಿಕೂಟೇಶ್ವರ ದೇವಾಲಯದ ಉತ್ತರ ಮಹಾದ್ವಾರದಲ್ಲಿ ರತಿ-ಕಾಮಣ್ಣರ ಹಬ್ಬ ಸಡಗರದಿಂದ ಆಚರಿಸ್ತಾರೆ. ಹೋಳಿ ಹುಣ್ಣಿಮೆ ಸಮಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ಕಾಮಣ್ಣ-ರತಿಯರ ಶೃಂಗಾರ ನೋಡುವುದೆ ಕಣ್ಣಿಗೆ ಹಬ್ಬ. ಇದು ರಾಜ್ಯದಲ್ಲೇ ಪ್ರಸಿದ್ದಿ ಹೊಂದಿದೆ.

ಗದಗ ನಗರದ ಕಿಲ್ಲಾ ಓಣಿಯಲ್ಲಿನ ಐತಿಹಾಸಿಕ ತ್ರಿಕೂಟೇಶ್ವರ ದೇವಾಲಯದ ಉತ್ತರ ಮಹಾದ್ವಾರದಲ್ಲಿ ರತಿ-ಕಾಮಣ್ಣರ ಹಬ್ಬ ಸಡಗರದಿಂದ ಆಚರಿಸ್ತಾರೆ. ಹೋಳಿ ಹುಣ್ಣಿಮೆ ಸಮಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ಕಾಮಣ್ಣ-ರತಿಯರ ಶೃಂಗಾರ ನೋಡುವುದೆ ಕಣ್ಣಿಗೆ ಹಬ್ಬ. ಇದು ರಾಜ್ಯದಲ್ಲೇ ಪ್ರಸಿದ್ದಿ ಹೊಂದಿದೆ.

1 / 6
ಸುಮಾರು 159 ವರ್ಷಗಳಿಂದ ಇಲ್ಲಿ ಕಾಮರತಿಯರ ಉತ್ಸವ ಮೂರ್ತಿಗಳನ್ನು ಹೋಳಿ ಹುಣ್ಣಿಮೆಯ ದಿನ ಪ್ರತಿಷ್ಠಾಪಿಸಲಾಗುತ್ತಿದೆ. ರಂಗಪಂಚಮಿ ಹಿಂದಿನ ದಿನ ಕಾಮ-ರತಿಯರಲ್ಲಿ ಭಕ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಪ್ರಾರ್ಥಿಸುತ್ತಾರೆ. ಯುವತಿಯರು ಕಾಮನ ಕೈಗೆ ಅರಿಷಿಣದ ತುಂಡಿನಿಂದ ಕಂಕಣಕಟ್ಟಿ ಕಂಕಣ ಭಾಗ್ಯ ಕರುಣಿಸೆಂದು ಬೇಡಿಕೊಂಡರೇ, ಸಂತಾನ ಭಾಗ್ಯಕ್ಕಾಗಿ ಮಹಿಳೆಯರು ರತಿಗೆ ಉಡಿ ತುಂಬಿ ಚಿನ್ನಾಭರಣಗಳಿಂದ ಶೃಂಗರಿಸಿ ಬೇಡಿಕೊಳ್ಳುತ್ತಾರೆ.

ಸುಮಾರು 159 ವರ್ಷಗಳಿಂದ ಇಲ್ಲಿ ಕಾಮರತಿಯರ ಉತ್ಸವ ಮೂರ್ತಿಗಳನ್ನು ಹೋಳಿ ಹುಣ್ಣಿಮೆಯ ದಿನ ಪ್ರತಿಷ್ಠಾಪಿಸಲಾಗುತ್ತಿದೆ. ರಂಗಪಂಚಮಿ ಹಿಂದಿನ ದಿನ ಕಾಮ-ರತಿಯರಲ್ಲಿ ಭಕ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಪ್ರಾರ್ಥಿಸುತ್ತಾರೆ. ಯುವತಿಯರು ಕಾಮನ ಕೈಗೆ ಅರಿಷಿಣದ ತುಂಡಿನಿಂದ ಕಂಕಣಕಟ್ಟಿ ಕಂಕಣ ಭಾಗ್ಯ ಕರುಣಿಸೆಂದು ಬೇಡಿಕೊಂಡರೇ, ಸಂತಾನ ಭಾಗ್ಯಕ್ಕಾಗಿ ಮಹಿಳೆಯರು ರತಿಗೆ ಉಡಿ ತುಂಬಿ ಚಿನ್ನಾಭರಣಗಳಿಂದ ಶೃಂಗರಿಸಿ ಬೇಡಿಕೊಳ್ಳುತ್ತಾರೆ.

2 / 6
ಭಕ್ತರು ಯಾವುದೇ ಭಯವಿಲ್ಲದ ರಂಗ ಪಂಚಮಿಯ ಹಿಂದಿನ ದಿನ ಮನೆಯಲ್ಲಿದ್ದ ಚಿನ್ನಾಭರಣವನ್ನು ರತಿ-ಕಾಮಣ್ಣನ ಮೈಮೇಲೆ ಹಾಕುತ್ತಾರೆ. ಅಂದಾಜು 25 ಕೆಜಿಯಷ್ಟು ಬಂಗಾರದ ಆಭರಣಗಳನ್ನು ಹಾಕಿ  ಶೃಂಗರಿಸಲಾಗುತ್ತದೆ. ಕಾಮನ ಮೈಮೇಲೆಯೂ ಪುರುಷರು ಧರಿಸುವ ಕೆಲವು ಆಭರಣಗಳನ್ನು ಹಾಕಿ ಶೃಂಗಾರ ಮಾಡಲಾಗುತ್ತದೆ.

ಭಕ್ತರು ಯಾವುದೇ ಭಯವಿಲ್ಲದ ರಂಗ ಪಂಚಮಿಯ ಹಿಂದಿನ ದಿನ ಮನೆಯಲ್ಲಿದ್ದ ಚಿನ್ನಾಭರಣವನ್ನು ರತಿ-ಕಾಮಣ್ಣನ ಮೈಮೇಲೆ ಹಾಕುತ್ತಾರೆ. ಅಂದಾಜು 25 ಕೆಜಿಯಷ್ಟು ಬಂಗಾರದ ಆಭರಣಗಳನ್ನು ಹಾಕಿ ಶೃಂಗರಿಸಲಾಗುತ್ತದೆ. ಕಾಮನ ಮೈಮೇಲೆಯೂ ಪುರುಷರು ಧರಿಸುವ ಕೆಲವು ಆಭರಣಗಳನ್ನು ಹಾಕಿ ಶೃಂಗಾರ ಮಾಡಲಾಗುತ್ತದೆ.

3 / 6
ಈ ಬಂಗಾರದ ಆಭರಣಗಳನ್ನು ಭಕ್ತರು ಸ್ವಯಂ ಪ್ರೇರಣೆಯಿಂದಲೇ ತಂದು ಕೊಡುತ್ತಾರೆ. ಆಭರಣಗಳ ಮೇಲೆ ಅವರ ಹೆಸರಿನ ಚೀಟಿ ಬರೆದು ರತಿಯ ಮೈಮೇಲೆ ಹಾಕಲಾಗುತ್ತದೆ. ರಂಗ ಪಂಚಮಿಯ ದಿನ ರಾತ್ರಿ ಉತ್ಸವ ಮೂರ್ತಿಗಳ ಮೆರವಣಿಗೆ ಮುಗಿದ ಮೇಲೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.

ಈ ಬಂಗಾರದ ಆಭರಣಗಳನ್ನು ಭಕ್ತರು ಸ್ವಯಂ ಪ್ರೇರಣೆಯಿಂದಲೇ ತಂದು ಕೊಡುತ್ತಾರೆ. ಆಭರಣಗಳ ಮೇಲೆ ಅವರ ಹೆಸರಿನ ಚೀಟಿ ಬರೆದು ರತಿಯ ಮೈಮೇಲೆ ಹಾಕಲಾಗುತ್ತದೆ. ರಂಗ ಪಂಚಮಿಯ ದಿನ ರಾತ್ರಿ ಉತ್ಸವ ಮೂರ್ತಿಗಳ ಮೆರವಣಿಗೆ ಮುಗಿದ ಮೇಲೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.

4 / 6
ಈ ಪ್ರದೇಶದಲ್ಲಿ ಈ ಹಿಂದೆ ಸರಕಾರಿ ಕಚೇರಿಗಳ ಇದ್ದುದರಿಂದ ಪೊಲೀಸ್ ಹಾಗೂ ಕಂದಾಯ ಇಲಾಖೆ ನೌಕರರು ಕೂಡ ಈ ಉತ್ಸವದಲ್ಲಿ ಭಕ್ತಿ, ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಈ ಕಾರಣದಿಂದ ಇದು ಸರ್ಕಾರಿ ಕಾಮಣ್ಣ ಅಂತಲೇ ಫೇಮಸ್ ಆಗಿದೆ. ಕಾಮ-ರತಿಯರ ಸಂಭ್ರಮ ನೋಡಲು ಗದಗ ನಗರ ಮಾತ್ರವಲ್ಲ ಧಾರವಾಡ, ಹಾವೇರಿ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಯಿಂದ ಜನರು ಆಗಮಿಸುತ್ತಾರೆ. ಕಾಮ-ರತಿಯರ ಸಂಭ್ರಮ ನೋಡಿ ಖುಷಿ ಪಡುತ್ತಾರೆ.

ಈ ಪ್ರದೇಶದಲ್ಲಿ ಈ ಹಿಂದೆ ಸರಕಾರಿ ಕಚೇರಿಗಳ ಇದ್ದುದರಿಂದ ಪೊಲೀಸ್ ಹಾಗೂ ಕಂದಾಯ ಇಲಾಖೆ ನೌಕರರು ಕೂಡ ಈ ಉತ್ಸವದಲ್ಲಿ ಭಕ್ತಿ, ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಈ ಕಾರಣದಿಂದ ಇದು ಸರ್ಕಾರಿ ಕಾಮಣ್ಣ ಅಂತಲೇ ಫೇಮಸ್ ಆಗಿದೆ. ಕಾಮ-ರತಿಯರ ಸಂಭ್ರಮ ನೋಡಲು ಗದಗ ನಗರ ಮಾತ್ರವಲ್ಲ ಧಾರವಾಡ, ಹಾವೇರಿ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಯಿಂದ ಜನರು ಆಗಮಿಸುತ್ತಾರೆ. ಕಾಮ-ರತಿಯರ ಸಂಭ್ರಮ ನೋಡಿ ಖುಷಿ ಪಡುತ್ತಾರೆ.

5 / 6
ಗದಗ ನಗರಕ್ಕೆ ಇನ್ನೂ ರೈಲ್ವೆ ಮಾರ್ಗ ನಿರ್ಮಾಣ ವಾಗದಿದ್ದ ಕಾಲದಲ್ಲೇ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲಾವಿದರಿಂದ ಈ ಉತ್ಸವ ಮೂರ್ತಿಗಳನ್ನು ಮಾಡಿಸಿಕೊಂಡು ತರಲಾಗಿದೆ. ಒಟ್ಟಿನಲ್ಲಿ ಗದಗ ನಗರದ ಕಿಲ್ಲಾ ಓಣಿಯ ರತಿ-ಕಾಮಣ್ಣರು ಅಪರೂಪದಲ್ಲೆ ಬಲು ಅಪರೂಪ. ವಿಶಿಷ್ಠ ಆಚರಣೆ ಮೂಲಕ ನೂರಾರು ವರ್ಷದ ಸಂಪ್ರದಾಯ ಮುಂದುವರೆದಿದ್ದು ಮಾತ್ರ ವಿಶೇಷ.

ಗದಗ ನಗರಕ್ಕೆ ಇನ್ನೂ ರೈಲ್ವೆ ಮಾರ್ಗ ನಿರ್ಮಾಣ ವಾಗದಿದ್ದ ಕಾಲದಲ್ಲೇ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲಾವಿದರಿಂದ ಈ ಉತ್ಸವ ಮೂರ್ತಿಗಳನ್ನು ಮಾಡಿಸಿಕೊಂಡು ತರಲಾಗಿದೆ. ಒಟ್ಟಿನಲ್ಲಿ ಗದಗ ನಗರದ ಕಿಲ್ಲಾ ಓಣಿಯ ರತಿ-ಕಾಮಣ್ಣರು ಅಪರೂಪದಲ್ಲೆ ಬಲು ಅಪರೂಪ. ವಿಶಿಷ್ಠ ಆಚರಣೆ ಮೂಲಕ ನೂರಾರು ವರ್ಷದ ಸಂಪ್ರದಾಯ ಮುಂದುವರೆದಿದ್ದು ಮಾತ್ರ ವಿಶೇಷ.

6 / 6

Published On - 9:41 am, Tue, 18 March 25

Follow us
ರಿಕ್ಕಿ ಬಲಗೈಯಲ್ಲಿದ್ದ ಗುಂಡನ್ನು ವೈದ್ಯರು ಹೊರತೆಗೆದಿದ್ದಾರೆ: ಜಗದೀಶ್
ರಿಕ್ಕಿ ಬಲಗೈಯಲ್ಲಿದ್ದ ಗುಂಡನ್ನು ವೈದ್ಯರು ಹೊರತೆಗೆದಿದ್ದಾರೆ: ಜಗದೀಶ್
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಪರಮೇಶ್ವರ್
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಪರಮೇಶ್ವರ್
ಮುಂಬೈನಲ್ಲಿ ದೇವಾಲಯ ಧ್ವಂಸ; ಸಾವಿರಾರು ಜೈನರಿಂದ ಪ್ರತಿಭಟನೆ
ಮುಂಬೈನಲ್ಲಿ ದೇವಾಲಯ ಧ್ವಂಸ; ಸಾವಿರಾರು ಜೈನರಿಂದ ಪ್ರತಿಭಟನೆ
ಸಮುದ್ರದಲ್ಲಿ 28 ಕಿಮೀ ಈಜಿದ ಹುಬ್ಬಳ್ಳಿ CPI
ಸಮುದ್ರದಲ್ಲಿ 28 ಕಿಮೀ ಈಜಿದ ಹುಬ್ಬಳ್ಳಿ CPI
ರಥೋತ್ಸವ ಅವಘಡದಲ್ಲಿ ಯಾರೂ ಗಾಯಗೊಳ್ಳದಿರುವುದೇ ಪವಾಡ
ರಥೋತ್ಸವ ಅವಘಡದಲ್ಲಿ ಯಾರೂ ಗಾಯಗೊಳ್ಳದಿರುವುದೇ ಪವಾಡ
ಶಿವಕುಮಾರ್ ಟೀಕಿಸಿದ್ದಕ್ಕೆ ಮುನಿರತ್ನ ಸಾಕಷ್ಟು ಅನುಭವಿಸಿದ್ದಾರೆ: ಗಣಿಗ
ಶಿವಕುಮಾರ್ ಟೀಕಿಸಿದ್ದಕ್ಕೆ ಮುನಿರತ್ನ ಸಾಕಷ್ಟು ಅನುಭವಿಸಿದ್ದಾರೆ: ಗಣಿಗ
ಆಗ ಅಹಿಂದ ಅಯ್ತು ಈಗ ಜಾತಿ ಗಣತಿ ವರದಿಯ ಸರದಿ: ಪ್ರತಾಪ್ ಸಿಂಹ
ಆಗ ಅಹಿಂದ ಅಯ್ತು ಈಗ ಜಾತಿ ಗಣತಿ ವರದಿಯ ಸರದಿ: ಪ್ರತಾಪ್ ಸಿಂಹ
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಬಂತು ಇಕೋಫಿಕ್ಸ್ ತಂತ್ರಜ್ಞಾನ
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಬಂತು ಇಕೋಫಿಕ್ಸ್ ತಂತ್ರಜ್ಞಾನ
ಚುನಾಯಿತ ಪ್ರತಿನಿಧಿಗಳು ಶಿವಕುಮಾರ್​ರನ್ನು ಭೇಟಿಯಾಗುವುದು ತಪ್ಪಲ್ಲ: ಸಂಸದ
ಚುನಾಯಿತ ಪ್ರತಿನಿಧಿಗಳು ಶಿವಕುಮಾರ್​ರನ್ನು ಭೇಟಿಯಾಗುವುದು ತಪ್ಪಲ್ಲ: ಸಂಸದ
ಕಳೆದ ವರ್ಷಕ್ಕಿಂತ ಈ ವರ್ಷ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ: ಪರಮೇಶ್ವರ್
ಕಳೆದ ವರ್ಷಕ್ಕಿಂತ ಈ ವರ್ಷ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ: ಪರಮೇಶ್ವರ್