AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಒಪಿ ಗಣೇಶ ಮೂರ್ತಿಗಳಿಗೆ ಸೆಡ್ಡು ಹೊಡೆಯುತ್ತಿರೋ ಪೇಪರ್ ಗಣೇಶ ಮೂರ್ತಿಗಳು!

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪಿಒಪಿ ಗಣೇಶ ಮೂರ್ತಿಗಳನ್ನ ಮಾರಾಟ ಮಾಡದಂತೆ ನಿಷೇಧ ಹೇರಿದೆ.‌ ಇತ್ತ ಮಣ್ಣಿನ ಗಣೇಶ ಮೂರ್ತಿಗಳ ಬೇಡಿಕೆ ಹೆಚ್ಚಾಗಿದೆ. ಇದರ ಮಧ್ಯೆ ಜನರ ಅನುಕೂಲಕ್ಕೆ ತಕ್ಕಂತೆ ಈ ವ್ಯಾಪಾರಸ್ಥರು ಪೇಪರ್ ಗಣೇಶ ಮೂರ್ತಿಗಳನ್ನು ಮಾಕೇರ್ಟ್​ಗೆ ತಂದಿದ್ದು, ಫುಲ್ ಡಿಮ್ಯಾಂಡ್ ಶುರುವಾಗಿದೆ.‌ ಈ ಕುರಿತ ಒಂದು ಸ್ಟೋರಿ ಇಲ್ಲಿದೆ.

Poornima Agali Nagaraj
| Edited By: |

Updated on: Sep 04, 2024 | 9:59 PM

Share
ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಸಂಭ್ರಮ, ಸಡಗರ ಜೋರಾಗಿದೆ. ಅತ್ತ ಗಣೇಶ ಮೂರ್ತಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಸಿಟಿಯ ಅಂಗಡಿಗಳು ಮಕ್ಕಳು- ಯುವಕರಿಂದ ಫುಲ್ ರಶ್ ಆಗಿದೆ. ಅತ್ತ ಸರ್ಕಾರ ಪಿಒಪಿ ಗಣಪನಿಗೆ ನಿಷೇಧ ಹೇರಿದ ಹಿನ್ನಲೆ ಗಣೇಶ ತಯಾರಕರು ಪರಿಸರ ಸ್ನೇಹಿ ಪೇಪರ್ ಗಣಪ ಮೂರ್ತಿ ತಯಾರಿಸಿದ್ದಾರೆ.‌ ಈ ಪೇಪರ್ ಗಣಪನಿಗೆ ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಡಿಮ್ಯಾಂಡ್ ಬಂದಿದೆ.

ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಸಂಭ್ರಮ, ಸಡಗರ ಜೋರಾಗಿದೆ. ಅತ್ತ ಗಣೇಶ ಮೂರ್ತಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಸಿಟಿಯ ಅಂಗಡಿಗಳು ಮಕ್ಕಳು- ಯುವಕರಿಂದ ಫುಲ್ ರಶ್ ಆಗಿದೆ. ಅತ್ತ ಸರ್ಕಾರ ಪಿಒಪಿ ಗಣಪನಿಗೆ ನಿಷೇಧ ಹೇರಿದ ಹಿನ್ನಲೆ ಗಣೇಶ ತಯಾರಕರು ಪರಿಸರ ಸ್ನೇಹಿ ಪೇಪರ್ ಗಣಪ ಮೂರ್ತಿ ತಯಾರಿಸಿದ್ದಾರೆ.‌ ಈ ಪೇಪರ್ ಗಣಪನಿಗೆ ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಡಿಮ್ಯಾಂಡ್ ಬಂದಿದೆ.

1 / 6
ಹೌದು, ನೀರು ಕಲುಷಿತವಾಗುತ್ತದೆ ಎಂದು ಪಿಒಪಿ ಗಣೇಶನ ಮೂರ್ತಿಗಳ ಮಾರಾಟಕ್ಕೆ ಬಿಬಿಎಂಪಿ ನಿಷೇಧ ಹೇರಿದೆ. ಹೀಗಾಗಿ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.‌ ಜೇಡಿ ಮಣ್ಣಿಗೆ ಕೊರತೆ ಹಿನ್ನೆಲೆಯಲ್ಲಿ ಮಣ್ಣಿನ ಮೂರ್ತಿ ಸಿಗದೆ ಜನ ಪರದಾಡುತ್ತಿದ್ದಾರೆ. ಹೀಗಾಗಿ ಈ ವರ್ಷ ಪೇಪರ್‌ ಮೂರ್ತಿಗಳ ಮೊರೆ ಹೋಗಿದ್ದು, ನಗರದ ಟ್ರಿನಿಟಿ ಸರ್ಕಲ್, ಯಶವಂತಪುರ, ಬಸವನಗುಡಿ, ಕಂಟೋನ್ಮೆಂಟ್, ಸೇರಿದಂತೆ ಹಲವೆಡೆ ಪೇಪರ್ ಗಣೇಶಗಳ ಹಾವಾಳಿ ಜೋರಾಗಿದೆ.

ಹೌದು, ನೀರು ಕಲುಷಿತವಾಗುತ್ತದೆ ಎಂದು ಪಿಒಪಿ ಗಣೇಶನ ಮೂರ್ತಿಗಳ ಮಾರಾಟಕ್ಕೆ ಬಿಬಿಎಂಪಿ ನಿಷೇಧ ಹೇರಿದೆ. ಹೀಗಾಗಿ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.‌ ಜೇಡಿ ಮಣ್ಣಿಗೆ ಕೊರತೆ ಹಿನ್ನೆಲೆಯಲ್ಲಿ ಮಣ್ಣಿನ ಮೂರ್ತಿ ಸಿಗದೆ ಜನ ಪರದಾಡುತ್ತಿದ್ದಾರೆ. ಹೀಗಾಗಿ ಈ ವರ್ಷ ಪೇಪರ್‌ ಮೂರ್ತಿಗಳ ಮೊರೆ ಹೋಗಿದ್ದು, ನಗರದ ಟ್ರಿನಿಟಿ ಸರ್ಕಲ್, ಯಶವಂತಪುರ, ಬಸವನಗುಡಿ, ಕಂಟೋನ್ಮೆಂಟ್, ಸೇರಿದಂತೆ ಹಲವೆಡೆ ಪೇಪರ್ ಗಣೇಶಗಳ ಹಾವಾಳಿ ಜೋರಾಗಿದೆ.

2 / 6
ಇನ್ನು ಮಣ್ಣಿನ ಮೂರ್ತಿಗಳಾದರೆ 5 ಅಡಿಗಿಂತ ಹೆಚ್ಚು ಎತ್ತರ ನಿರ್ಮಿಸುವುದು ಕಷ್ಟ. ಆದರೆ, ಈ ಪೇಪರ್ ಗಣಪತಿಯನ್ನ 10 ಅಡಿಗೂ ಹೆಚ್ಚು ಎತ್ತರ ನಿರ್ಮಾಣ ಮಾಡಬಹುದು. ಈ ಪೇಪರ್‌ ಗಣಪನ ಮೂರ್ತಿಗಳನ್ನು ತಯಾರಿಸುವುದು ಬಹಳ ಕಷ್ಟ, ಆದರೆ, ಮೂರ್ತಿ ತುಂಬಾ ಹಗುರ. ಇದರ ನಿರ್ವಹಣೆಯೂ ಸುಲಭ, ಜೊತೆಗೆ ಪೂಜೆಯ ನಂತರ ವಿಸರ್ಜನೆಗೂ ತೊಡಕಿಲ್ಲ. ಪರಿಸರಕ್ಕೂ ಹಾನಿಯಾಗಲ್ಲ, ಹೀಗಾಗಿ, ತಯಾರಕರು ಮತ್ತು ಗ್ರಾಹಕರಿಂದ ಪೇಪರ್‌ ಗಣೇಶಗಳ ಕಡೆ ಒಲವು ಜಾಸ್ತಿಯಾಗಿದೆ.

ಇನ್ನು ಮಣ್ಣಿನ ಮೂರ್ತಿಗಳಾದರೆ 5 ಅಡಿಗಿಂತ ಹೆಚ್ಚು ಎತ್ತರ ನಿರ್ಮಿಸುವುದು ಕಷ್ಟ. ಆದರೆ, ಈ ಪೇಪರ್ ಗಣಪತಿಯನ್ನ 10 ಅಡಿಗೂ ಹೆಚ್ಚು ಎತ್ತರ ನಿರ್ಮಾಣ ಮಾಡಬಹುದು. ಈ ಪೇಪರ್‌ ಗಣಪನ ಮೂರ್ತಿಗಳನ್ನು ತಯಾರಿಸುವುದು ಬಹಳ ಕಷ್ಟ, ಆದರೆ, ಮೂರ್ತಿ ತುಂಬಾ ಹಗುರ. ಇದರ ನಿರ್ವಹಣೆಯೂ ಸುಲಭ, ಜೊತೆಗೆ ಪೂಜೆಯ ನಂತರ ವಿಸರ್ಜನೆಗೂ ತೊಡಕಿಲ್ಲ. ಪರಿಸರಕ್ಕೂ ಹಾನಿಯಾಗಲ್ಲ, ಹೀಗಾಗಿ, ತಯಾರಕರು ಮತ್ತು ಗ್ರಾಹಕರಿಂದ ಪೇಪರ್‌ ಗಣೇಶಗಳ ಕಡೆ ಒಲವು ಜಾಸ್ತಿಯಾಗಿದೆ.

3 / 6
ಈ ಪೇಪರ್​ ಗಣಪನನ್ನು ಯಾವುದೇ ವಾಹನಗಳಲ್ಲಿ ತೆಗೆದುಕೊಂಡು ಹೋಗಬಹುದು. ಅಲ್ಲದೆ ಪೇಪರ್ ಮೂರ್ತಿಗಳು ತುಂಬ ಹಗುರವಾಗಿರುತ್ತವೆ. ನಿರ್ವಹಣೆಯೂ ಸುಲಭ. ಈ ಬಗೆಯ ಗಣಪತಿಗಳಿಂದ ಪರಿಸರಕ್ಕೂ ಹಾನಿಯಾಗದು. ಹೀಗಾಗಿ, ಗ್ರಾಹಕರು ಪೇಪರ್‌ ಗಣೇಶಗಳ ಖರೀದಿಯತ್ತ ಹೆಚ್ಚು ಒಲವು ತೋರುತ್ತಿದ್ದಾರಂತೆ.‌

ಈ ಪೇಪರ್​ ಗಣಪನನ್ನು ಯಾವುದೇ ವಾಹನಗಳಲ್ಲಿ ತೆಗೆದುಕೊಂಡು ಹೋಗಬಹುದು. ಅಲ್ಲದೆ ಪೇಪರ್ ಮೂರ್ತಿಗಳು ತುಂಬ ಹಗುರವಾಗಿರುತ್ತವೆ. ನಿರ್ವಹಣೆಯೂ ಸುಲಭ. ಈ ಬಗೆಯ ಗಣಪತಿಗಳಿಂದ ಪರಿಸರಕ್ಕೂ ಹಾನಿಯಾಗದು. ಹೀಗಾಗಿ, ಗ್ರಾಹಕರು ಪೇಪರ್‌ ಗಣೇಶಗಳ ಖರೀದಿಯತ್ತ ಹೆಚ್ಚು ಒಲವು ತೋರುತ್ತಿದ್ದಾರಂತೆ.‌

4 / 6
 ಒಟ್ಟಿನಲ್ಲಿ ಒಂದು ಕಡೆ ಗಣಪನ ಹಬ್ಬಕ್ಕೆ ಮೂರ್ತಿಗಳ ಮಾರಾಟ ಜೋರಾಗಿದೆ. ಮತ್ತೊಂದೆಡೆ ಪಿಒಪಿ ಗಣಪನಿಗೆ ಕಡಿವಾಣ ಹಾಕಿರೋದು ವ್ಯಾಪಾರಿಗಳನ್ನ ಹೈರಾಣಾಗಿಸಿದೆ. ಹೀಗಾಗಿ ಪೇಪರ್ ಗಣೇಶನ ಮೊರೆ ಹೋಗಿದ್ದಾರೆ.

ಒಟ್ಟಿನಲ್ಲಿ ಒಂದು ಕಡೆ ಗಣಪನ ಹಬ್ಬಕ್ಕೆ ಮೂರ್ತಿಗಳ ಮಾರಾಟ ಜೋರಾಗಿದೆ. ಮತ್ತೊಂದೆಡೆ ಪಿಒಪಿ ಗಣಪನಿಗೆ ಕಡಿವಾಣ ಹಾಕಿರೋದು ವ್ಯಾಪಾರಿಗಳನ್ನ ಹೈರಾಣಾಗಿಸಿದೆ. ಹೀಗಾಗಿ ಪೇಪರ್ ಗಣೇಶನ ಮೊರೆ ಹೋಗಿದ್ದಾರೆ.

5 / 6
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪೇಪರ್ ಗಣಪನಿಗೆ 20 ಪರ್ಸೆಂಟ್ ಬೇಡಿಕೆ ಹೆಚ್ಚಾಗಿದ್ದು, 100 ರೂ. ಯಿಂದ 2 ಲಕ್ಷದವರೆಗಿನ ಗಣೇಶ ಮೂರ್ತಿಗಳು ಇವೆ. ‌ಅಂದಹಾಗೇ ಈ ಮೂರ್ತಿಗಳನ್ನ ಆಂಧ್ರಪ್ರದೇಶ, ಹೈದರಾಬಾದ್ ಸೇರಿದಂತೆ ಹಲವೆಡೆಯಿಂದ ತರಿಸಿಕೊಳ್ಳುತ್ತಿದ್ದು, ವ್ಯಾಪಾರ ವಹಿವಾಟು ಜೋರಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪೇಪರ್ ಗಣಪನಿಗೆ 20 ಪರ್ಸೆಂಟ್ ಬೇಡಿಕೆ ಹೆಚ್ಚಾಗಿದ್ದು, 100 ರೂ. ಯಿಂದ 2 ಲಕ್ಷದವರೆಗಿನ ಗಣೇಶ ಮೂರ್ತಿಗಳು ಇವೆ. ‌ಅಂದಹಾಗೇ ಈ ಮೂರ್ತಿಗಳನ್ನ ಆಂಧ್ರಪ್ರದೇಶ, ಹೈದರಾಬಾದ್ ಸೇರಿದಂತೆ ಹಲವೆಡೆಯಿಂದ ತರಿಸಿಕೊಳ್ಳುತ್ತಿದ್ದು, ವ್ಯಾಪಾರ ವಹಿವಾಟು ಜೋರಾಗಿದೆ.

6 / 6
Follow Us
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!