- TV9 Kannada Photo gallery Junior bhogeshwara elephant becomes tourist favorite kabini backwaters mysore news
ಕಬಿನಿ ಹಿನ್ನೀರಿನಲ್ಲಿ ಜೂನಿಯರ್ ಭೋಗೇಶ್ವರನದ್ದೇ ಹವಾ, ಇವನ ದಂತಕ್ಕೆ ಪ್ರವಾಸಿಗರು ಫಿದಾ
ಮೈಸೂರಿನಲ್ಲಿ ಜೂನಿಯರ್ ಭೋಗೇಶ್ವರನದ್ದೇ ಹವಾ. ಹೆಚ್ಡಿ ಕೋಟೆ ತಾಲ್ಲೂಕು ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿರುವ ಅರಣ್ಯ ಇಲಾಖೆ ತರಬೇತಿ ಶಿಬಿರದಲ್ಲಿರುವ ಜೂನಿಯರ್ ಭೋಗೇಶ್ವರ ಆಕರ್ಷಕ ವಿಭಿನ್ನ ದಂತ ಪ್ರವಾಸಿಗರನ್ನು ಸೆಳೆಯುತ್ತಿದೆ.
Updated on: Jul 31, 2023 | 7:44 AM

ತನ್ನದೇ ಗತ್ತು, ಗಾಂಭೀರ್ಯ ನಡಿಗೆ, ಉದ್ದನೆಯ ಕೂಡು ದಂತದಿಂದ ಜೂನಿಯರ್ ಭೋಗೇಶ್ವರ ಆನೆ ವನ್ಯ ಪ್ರಿಯರ ಮನ ಗೆದ್ದಿದೆ.

ಮಿಸ್ಟರ್ ಕಬಿನಿ ಅಂತಲೇ ಖ್ಯಾತಿಯಾಗಿದ್ದ ದೊಡ್ಡ ದಂತದ ಭೋಗೇಶ್ವರ ಸಹಜ ಸಾವಿನ ನಂತರ ಅದೇ ಸ್ಥಳದಲ್ಲಿ ಕೂಡು ದಂತದ ಜೂನಿಯರ್ ಭೋಗೇಶ್ವರ ವನ್ಯ ಪ್ರಿಯರಿಗೆ ಫೇವರೆಟ್

ಹೆಚ್ಡಿ ಕೋಟೆ ತಾಲ್ಲೂಕು ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿರುವ ಅರಣ್ಯ ಇಲಾಖೆ ತರಬೇತಿ ಶಿಬಿರದಲ್ಲಿರುವ ಜೂನಿಯರ್ ಭೋಗೇಶ್ವರ ಆಕರ್ಷಕ ವಿಭಿನ್ನ ದಂತವನ್ನು ಹೊಂದಿದ್ದಾನೆ.

ಕೂಡು ದಂತದ 30-35 ವರ್ಷ ವಯಸ್ಸಿನ ಜೂನಿಯರ್ ಭೋಗೇಶ್ವರ ಅಂದ್ರೆ ಪ್ರವಾಸಿಗರಿಗೆ ಸಿಕ್ಕಾಪಟ್ಟೆ ಇಷ್ಟ. ಪ್ರವಾಸಿಗರ ಜೊತೆ ಪೋಟೋಗೆ ಫೋಸ್ ನೀಡುತ್ತಾನೆ.

ಅತಿಹೆಚ್ಚು ಆನೆಗಳನ್ನು ಹೊಂದಿರುವ ಬಂಡೀಪುರ ನಾಗರಹೊಳೆ ಅರಣ್ಯ ಪ್ರದೇಶದ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಸಫಾರಿಗೆ ಹೆಚ್ಚು ಜನರು ಮುಗಿಬೀಳುತ್ತಾರೆ.

ಹೀಗೆ ಸಫಾರಿಗೆ ಬಂದ ಜನರು ಜೂನಿಯರ್ ಭೋಗೇಶ್ವರನ ಕಂಡು ಖುಷ್ ಆಗಿ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುವ ಪ್ರಯತ್ನ ಮಾಡ್ತಿದ್ದಾರೆ. ಜೂನಿಯರ್ ಭೋಗೇಶ್ವರ ಆನೆಯ ಅಪರೂಪದ ದೃಶ್ಯಗಳು ದಾ ರಾ ಮಹೇಶ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.
Read More



