
ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್ ಆಯೋಜಿಸಲಾಗಿತ್ತು.

ಈ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್ನಲ್ಲಿ ಭಾಗವಹಿಸಿದ್ದ ಟಿವಿ9 ಕನ್ನಡ ವಾಹಿನಿಯಲ್ಲಿ ಕಾರ್ಯನಿರ್ವಾಹಿಸುತ್ತಿರುವ ರಾಜೇಶ್. ಎಸ್ ಅವರು ಚಿನ್ನದ ಪದಕ ಗೆದಿದ್ದಾರೆ.

ಕೇರಳ, ತಮಿಳುನಾಡು, ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು.

75 ರಿಂದ 80 ಕೆಜಿ ಪುರುಷರ ವಿಭಾಗದಲ್ಲಿ ರಾಜೇಶ್. ಎಸ್ ಅವರು ಭಾಗವಹಿಸಿದ್ದರು.

ಮೊದಲ ಸುತ್ತಿನಲ್ಲಿ ಕೇರಳ ಕ್ರೀಡಾಪಟು ವಿರುದ್ದ ಗೆದ್ದು ಸೆಮಿ ಫೈನಲ್ಗೆ ಲಗ್ಗೆ ಇಟ್ಟರು. ಬಳಿಕ ಫೈನಲ್ ಸುತ್ತಿನಲ್ಲಿ ತಮಿಳುನಾಡು ಕ್ರೀಡಾಪಟುವನ್ನು ಸೋಲಿಸುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.