ಎಲ್. ಕೆ ಅಡ್ವಾಣಿ ಅವರನ್ನು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಇಂದು (ಸೆ.12) ರಂದು ದೆಹಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಉಭಯಕುಶಲೋಪರಿ ವಿಚಾರಿಸಿದ ಪೇಜಾವರ ಶ್ರೀ ಅಡ್ವಾಣಿ ಅವರ ಆರೋಗ್ಯದ ಚೇತರಿಕೆಗೆ ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ಅಯೋಧ್ಯೆ ರಾಮ ಮಂದಿರ ನಿರ್ಮಾಣ, ರಥಯಾತ್ರೆಯ ದಿನಗಳು ಮತ್ತು ರಾಮ ಮಂದಿರ ಹೋರಾಟದ ನೆನಪುಗಳನ್ನು ಅಡ್ವಾಣಿ ಮೆಲುಕು ಹಾಕಿದರು.
ಅಡ್ವಾಣಿ ಅವರಿಗೆ ಉಡುಪಿ ಶ್ರೀಕೃಷ್ಣನ ಪ್ರಸಾದವನ್ನು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೀಡಿದರು.
ಮಾತುಕತೆ ವೇಳೆ ಹಿರಿಯ ವಿಶ್ವೇಶತೀರ್ಥ ಸ್ವಾಮೀಜಿ ಅವರು ಎಲ್.ಕೆ ಅಡ್ವಾಣಿ ಅವರಿಗೆ ನೀಡಿದ ಸ್ಪೂರ್ತಿಯನ್ನು ನೆನಪಿಸಿಕೊಂಡರು.
ಇನ್ನು ಭೇಟಿ ವೇಳೆ ವಿದ್ವಾನ ದೇವಿಪ್ರಸಾದ ಭಟ್ಟ, ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್ ಉಪಸ್ಥಿತರಿದ್ದರು.
Published On - 3:07 pm, Wed, 12 October 22