Sign In

By signing in or creating an account, you agree with Associated Broadcasting Company's Terms & Conditions and Privacy Policy.

Queen Elizabeth II: ರಾಣಿ ಎಲಿಜಬೆತ್ II ಅವರ ಬಗ್ಗೆ ನಿಮಗೆ ತಿಳಿದಿರದ 10 ಸತ್ಯಸಂಗತಿಗಳು

ರಾಣಿ ಎಲಿಜಬೆತ್ II ಅವರು ಬ್ರಿಟನ್‌ನ ದೀರ್ಘಾವಧಿಯ ರಾಣಿಯಾಗಿದ್ದರು. 70 ವರ್ಷಗಳ ಕಾಲ ಸುದೀರ್ಘ ಆಳ್ವಿಕೆ ನಡೆಸಿದ ಅವರು ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಕ್ಯಾಸಲ್‌ನಲ್ಲಿ ಗುರುವಾರ ನಿಧನರಾದರು.

TV9 Web
| Updated By: Rakesh Nayak Manchi

Updated on: Sep 09, 2022 | 10:29 AM

1926ರ ಏಪ್ರಿಲ್ 21 ರಂದು ಲಂಡನ್​ನಲ್ಲಿ ಜನಿಸಿದ ರಾಣಿ ಎಲಿಜಬೆತ್ ಅವರು ಕಿಂಗ್ ಜಾರ್ಜ್ VI ಮತ್ತು ರಾಣಿ ಎಲಿಜಬೆತ್ ಅವರ ಹಿರಿಯ ಮಗಳು. ಅವಳ ಜನ್ಮ ಹೆಸರು ಎಲಿಜಬೆತ್ ಅಲೆಕ್ಸಾಂಡ್ರಾ ಮೇರಿ, ಅವಳ ತಾಯಿ ರಾಣಿ ಎಲಿಜಬೆತ್, ಅವಳ ತಂದೆಯ ಮುತ್ತಜ್ಜಿ ರಾಣಿ ಅಲೆಕ್ಸಾಂಡ್ರಾ ಮತ್ತು ಅವಳ ತಂದೆಯ ಅಜ್ಜಿ ಕ್ವೀನ್ ಮೇರಿ ಹೆಸರನ್ನು ಸೇರಿಸಿ ಹೆಸರನ್ನು ಇಡಲಾಯಿತು. ಅವರು 1947ರ ನವೆಂಬರ್ 20 ರಂದು ಎಡಿನ್ಬರ್ಗ್ ಡ್ಯೂಕ್ ಪ್ರಿನ್ಸ್ ಫಿಲಿಪ್ ಅವರನ್ನು ವಿವಾಹವಾದರು.

Queen Elizabeth II here are 10 lesser known facts about her

1 / 10
ರಾಣಿಯು ಎಂದಿಗೂ ಶಾಲೆಗೆ ಹೋಗಿರಲಿಲ್ಲ. ಅರಮನೆಯಲ್ಲೇ ಉತ್ತಮ ಶಿಕ್ಷಣ ನೀಡಲಾಯಿತು, ಇದರ ಮೇಲ್ವಿಚಾರಣೆಯನ್ನು ಈಕೆಯ ತಾಯಿಯೇ ನೋಡಿಕೊಳ್ಳುತ್ತಿದ್ದರು.

Queen Elizabeth II here are 10 lesser known facts about her

2 / 10
Queen Elizabeth II here are 10 lesser known facts about her

ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಪ್ರಕಾರ, ಪುರುಷ ಉತ್ತರಾಧಿಕಾರಿಯಾಗುವ ಸಾಧ್ಯತೆಯ ಕಾರಣದಿಂದ ಆಕೆಯ ಚಿಕ್ಕಪ್ಪ, ಕಿಂಗ್ ಎಡ್ವರ್ಡ್ VIII ಪದತ್ಯಾಗ ಮಾಡಿದಾಗ ಎಲಿಜಬೆತ್ ಉತ್ತರಾಧಿಕಾರಿ ಎಂದು ಘೋಷಿಸಿರಲಿಲ್ಲ. ಅದಾಗ್ಯೂ, ಎಲಿಜಬೆತ್ II 1952ರ ಫೆಬ್ರವರಿಯಲ್ಲಿ ತನ್ನ ತಂದೆ ನಿಧನರಾದಾಗ ಸಿಂಹಾಸನಕ್ಕೆ ಔಪಚಾರಿಕವಾಗಿ ಒಪ್ಪಿಕೊಂಡರು. ಅದರಂತೆ 1953ರ ಜೂನ್ 2ರಂದು ವೆಸ್ಟ್ಮಿನಿಸ್ಟರ್ ಅಬ್ಬೆಯಲ್ಲಿ ಪಟ್ಟಾಭಿಷೇಕ ನಡೆಯಿತು.

3 / 10
Queen Elizabeth II here are 10 lesser known facts about her

ರಾಣಿ ಎಲಿಜಬೆತ್ ಬ್ರಿಟಿಷ್ ರಾಜಮನೆತನದ ಇತಿಹಾಸದಲ್ಲಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ ಮೊದಲ ಮತ್ತು ಏಕೈಕ ಮಹಿಳೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಅವರು ಕೇವಲ 18 ವರ್ಷ ವಯಸ್ಸಿನವರಾಗಿದ್ದಾಗ ರಾಣಿ ಮಹಿಳಾ ಸಹಾಯಕ ಪ್ರಾದೇಶಿಕ ಸೇವೆ (ATS) ಗೆ ಪ್ರವೇಶಿಸಿದ್ದರು. ವಿಶ್ವ ಸಮರ II ರಲ್ಲಿ ಸ್ವಯಂಸೇವಕ ಮೆಕ್ಯಾನಿಕ್ ಮತ್ತು ಟ್ರಕ್ ಡ್ರೈವರ್ ಆಗಿ ಸೇವೆ ಸಲ್ಲಿಸಿದ್ದರು.

4 / 10
Queen Elizabeth II here are 10 lesser known facts about her

ಎರಡನೇ ಮಹಾಯುದ್ಧದ ಸಮಯದಲ್ಲಿ ಸೈನ್ಯಕ್ಕೆ ಬಂದ ನಂತರ ರಾಣಿ ಟ್ರಕ್ ಚಕ್ರಗಳನ್ನು ಹೇಗೆ ಬದಲಾಯಿಸುವುದು, ಇತರ ವಿಷಯಗಳ ನಡುವೆ ಕಾರ್ ಎಂಜಿನ್​ಗಳನ್ನು ಸರಿಪಡಿಸುವುದು ಹೇಗೆ ಎಂದು ಕಲಿತ್ತಿದ್ದರು.

5 / 10
Queen Elizabeth II here are 10 lesser known facts about her

ನಾಜಿಗಳ ವಿರುದ್ಧ ಹೋರಾಡಲು ತನ್ನ ಸಿದ್ಧತೆಯಾಗಿ ರಾಣಿಯು ಹದಿಹರೆಯದವನಾಗಿದ್ದಾಗ ಯುಕೆ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್‌ನ ಟಾಮಿ ಗನ್‌ನೊಂದಿಗೆ ಗನ್ ಶೂಟ್ ಮಾಡುವುದು ಕಲಿತ್ತಿದ್ದರು.

6 / 10
Queen Elizabeth II here are 10 lesser known facts about her

1976 ರಲ್ಲಿ, ರಾಣಿ ಎಲಿಜಬೆತ್ II ಇ-ಮೇಲ್ ಕಳುಹಿಸಿದ ಮೊದಲ ರಾಜಮನೆತನದವರಾದರು. 1976ರ ಮಾರ್ಚ್ 26 ರಂದು ಎಲಿಜಬೆತ್ ದೂರಸಂಪರ್ಕ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದಾಗ ಅರ್ಪಾನೆಟ್ ಬಳಸಿ ಇಮೇಲ್ ಕಳುಹಿಸಿದ್ದರು.

7 / 10
Queen Elizabeth II here are 10 lesser known facts about her

ಎಲಿಜಬೆತ್ ಪಾಸ್ಪೋರ್ಟ್ ಇಲ್ಲದೆ ಈ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಪ್ರಯಾಣಿಸಬಹುದಾಗಿತ್ತು. ರಾಜಮನೆತನದ ಪ್ರತಿಯೊಬ್ಬರಿಗೂ ಪಾಸ್‌ಪೋರ್ಟ್ ಅಗತ್ಯವಿದೆ, ಆದರೆ ಇವರಿಗೆ ಮಾತ್ರ ಪಾಸ್‌ಪೋರ್ಟ್ ಅಗತ್ಯವಿಲ್ಲ. ಇದರ ಹಿಂದಿನ ಕಾರಣವೆಂದರೆ ಪ್ರತಿಯೊಂದು ಪಾಸ್‌ಪೋರ್ಟ್ ಅನ್ನು ರಾಣಿಯ ಹೆಸರಿನಲ್ಲಿ ನೀಡಲ್ಪಡುವುದು.

8 / 10
Queen Elizabeth II here are 10 lesser known facts about her

ಯುಕೆಯಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ವಾಹನವನ್ನು ಚಲಾಯಿಸಲು ಚಾಲನಾ ಪರವಾನಗಿಯ ಅವಶ್ಯಕತೆ ಇದೆ. ಆದರೆ ಇದರಿಂದ ರಾಣಿಗೆ ಮಾತ್ರ ವಿನಾಯಿತಿ ಇದೆ.

9 / 10
Queen Elizabeth II here are 10 lesser known facts about her

ರಾಣಿ ತನ್ನ ಆಳ್ವಿಕೆಯಲ್ಲಿ 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿದ್ದರು. ಅವರು ಫ್ರಾನ್ಸ್‌ಗೆ 13 ಬಾರಿ ಮತ್ತು ಕೆನಡಾಕ್ಕೆ 22 ಬಾರಿ ಭೇಟಿ ನೀಡಿದ್ದರು.

10 / 10
Follow us
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್