Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಗತಿಕರ ಆಶ್ರಮಕ್ಕೆ ಹೆಗಲಾದ ರಾಯಚೂರಿನ ಪೊಲೀಸ್ ಪಡೆ: ಫೋಟೋಸ್​ ನೋಡಿ

ರಾಯಚೂರು ಜಿಲ್ಲೆಯ ಸಿಂಧನೂರಿನ ಕಾರುಣ್ಯ ವೃದ್ಧಾಶ್ರಮವು ಅನಾಥರು ಮತ್ತು ವಯಸ್ಸಾದವರಿಗೆ ಆಶ್ರಯ ನೀಡುತ್ತದೆ. ವಸತಿ ಸಮಸ್ಯೆಯನ್ನು ಪರಿಹರಿಸಲು ರಾಯಚೂರು ಪೊಲೀಸ್ ಇಲಾಖೆಯು ಹೊಸ ಕಟ್ಟಡವನ್ನು ನಿರ್ಮಿಸಿಕೊಟ್ಟಿದೆ. 20 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಪೊಲೀಸ್ ಸಿಬ್ಬಂದಿ ಈ ಕಾರ್ಯವನ್ನು ಮಾಡಿದ್ದು ಸಮಾಜಕ್ಕೆ ಒಳ್ಳೆಯ ಸಂದೇಶವಾಗಿದೆ. ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭೀಮೇಶ್​​ ಪೂಜಾರ್
| Updated By: ವಿವೇಕ ಬಿರಾದಾರ

Updated on: Mar 25, 2025 | 8:20 AM

ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಹೊರ ಭಾಗದಲ್ಲಿರುವ ಕಾರುಣ್ಯ ವೃದ್ಧಾಶ್ರಮವು ಅನಾಥರು, ವಯೋಸಹಜ ಖಾಯಲೆಯಿಂದ ಬಳಲುತ್ತಿರುವ, ಬುದ್ಧಿಮಾಂದ್ಯರು ಮತ್ತು ಹಿರಿಯ ಜೀವಿಗಳ ಆಶ್ರಯ ತಾಣವಾಗಿದೆ. ಈ ವೃದ್ಧಾಶ್ರಮಕ್ಕೆ ಜಿಲ್ಲೆಯ ಪೊಲೀಸರು ನೆರವಾಗಿದ್ದಾರೆ.

ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಹೊರ ಭಾಗದಲ್ಲಿರುವ ಕಾರುಣ್ಯ ವೃದ್ಧಾಶ್ರಮವು ಅನಾಥರು, ವಯೋಸಹಜ ಖಾಯಲೆಯಿಂದ ಬಳಲುತ್ತಿರುವ, ಬುದ್ಧಿಮಾಂದ್ಯರು ಮತ್ತು ಹಿರಿಯ ಜೀವಿಗಳ ಆಶ್ರಯ ತಾಣವಾಗಿದೆ. ಈ ವೃದ್ಧಾಶ್ರಮಕ್ಕೆ ಜಿಲ್ಲೆಯ ಪೊಲೀಸರು ನೆರವಾಗಿದ್ದಾರೆ.

1 / 5
ಪೊಲೀಸರು ಸೂಚಿಸುವ ಭಿಕ್ಷುಕರು, ಅನಾಥರಿಗೆ ಕಾರುಣ್ಯ ಆಶ್ರಮದವರು ಆಶ್ರಯ ನೀಡುತ್ತಾರೆ. ಹೀಗಾಗಿ, ಆಶ್ರಮದಲ್ಲಿ ಹಂತಹಂತವಾಗಿ ನಿರ್ಗತಿಕರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಸತಿಗೆ ಸಮಸ್ಯೆಯಾಗುತ್ತಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಪೊಲೀಸ್ ಪಡೆ ಆಶ್ರಮಕ್ಕೆ ಹೊಸ ಕಟ್ಟಡ ಕಟ್ಟಿಸಿ ಕೊಟ್ಟಿದೆ.

ಪೊಲೀಸರು ಸೂಚಿಸುವ ಭಿಕ್ಷುಕರು, ಅನಾಥರಿಗೆ ಕಾರುಣ್ಯ ಆಶ್ರಮದವರು ಆಶ್ರಯ ನೀಡುತ್ತಾರೆ. ಹೀಗಾಗಿ, ಆಶ್ರಮದಲ್ಲಿ ಹಂತಹಂತವಾಗಿ ನಿರ್ಗತಿಕರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಸತಿಗೆ ಸಮಸ್ಯೆಯಾಗುತ್ತಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಪೊಲೀಸ್ ಪಡೆ ಆಶ್ರಮಕ್ಕೆ ಹೊಸ ಕಟ್ಟಡ ಕಟ್ಟಿಸಿ ಕೊಟ್ಟಿದೆ.

2 / 5
ರಾಯಚೂರಿನ 2005 ನೇ ಬ್ಯಾಚ್​​ನ ಸಿವಿಲ್ ಸರ್ವಿಸ್​ನ ಪೊಲೀಸ್ ಸಿಬ್ಬಂದಿ ತಮ್ಮ ವೃತ್ತಿ ಜೀವನ ಆರಂಭವಾಗಿ 20 ವರ್ಷಗಳಾದ ಹಿನ್ನೆಲೆ ಸಮಾಜಕ್ಕೆ ಒಂದೊಳ್ಳೆ ಸಂದೇಶ ಕೊಡುವ ನಿಟ್ಟಿನಲ್ಲಿ, ನಿರ್ಗತಿಕರ ಲಾಲನೆ, ಪಾಲನೆ ಮಾಡುತ್ತಿರುವ ಕಾರುಣ್ಯ ಆಶ್ರಮಕ್ಕೆ ಕಟ್ಟಡ ನಿರ್ಮಿಸಿ ಕೊಟ್ಟಿದ್ದಾರೆ.

ರಾಯಚೂರಿನ 2005 ನೇ ಬ್ಯಾಚ್​​ನ ಸಿವಿಲ್ ಸರ್ವಿಸ್​ನ ಪೊಲೀಸ್ ಸಿಬ್ಬಂದಿ ತಮ್ಮ ವೃತ್ತಿ ಜೀವನ ಆರಂಭವಾಗಿ 20 ವರ್ಷಗಳಾದ ಹಿನ್ನೆಲೆ ಸಮಾಜಕ್ಕೆ ಒಂದೊಳ್ಳೆ ಸಂದೇಶ ಕೊಡುವ ನಿಟ್ಟಿನಲ್ಲಿ, ನಿರ್ಗತಿಕರ ಲಾಲನೆ, ಪಾಲನೆ ಮಾಡುತ್ತಿರುವ ಕಾರುಣ್ಯ ಆಶ್ರಮಕ್ಕೆ ಕಟ್ಟಡ ನಿರ್ಮಿಸಿ ಕೊಟ್ಟಿದ್ದಾರೆ.

3 / 5
ಸುಮಾರು 80ಕ್ಕೂ ಹೆಚ್ಚು ಸಿಬ್ಬಂದಿ ಪ್ರತಿವರ್ಷ ಒಂದಲ್ಲ ಒಂದು ರೀತಿ ಕಾರ್ಯಕ್ರಮಗಳನ್ನು ಮಾಡುತ್ತಾ ವಿನೂತ ಸೇವೆ ಮಾಡುತ್ತಿದ್ದಾರೆ. ಇದರ ಭಾಗವಾಗಿ ಮುಗ್ಧ ಜೀವಿಗಳು ಬದಕು ನಡೆಸುತ್ತಿರುವ ಆ ಆಶ್ರಮಕ್ಕೆ ಆಶ್ರಮ ಧಾಮ ಹೆಸರಿನಲ್ಲಿ ಕಟ್ಟಡ ಕಟ್ಟಿಸಿಕೊಟ್ಟಿದ್ದು, ಅದನ್ನು ರಾಯಚೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಉದ್ಘಾಟಿಸಿ ಶ್ಲಾಘಿಸಿದ್ದಾರೆ..

ಸುಮಾರು 80ಕ್ಕೂ ಹೆಚ್ಚು ಸಿಬ್ಬಂದಿ ಪ್ರತಿವರ್ಷ ಒಂದಲ್ಲ ಒಂದು ರೀತಿ ಕಾರ್ಯಕ್ರಮಗಳನ್ನು ಮಾಡುತ್ತಾ ವಿನೂತ ಸೇವೆ ಮಾಡುತ್ತಿದ್ದಾರೆ. ಇದರ ಭಾಗವಾಗಿ ಮುಗ್ಧ ಜೀವಿಗಳು ಬದಕು ನಡೆಸುತ್ತಿರುವ ಆ ಆಶ್ರಮಕ್ಕೆ ಆಶ್ರಮ ಧಾಮ ಹೆಸರಿನಲ್ಲಿ ಕಟ್ಟಡ ಕಟ್ಟಿಸಿಕೊಟ್ಟಿದ್ದು, ಅದನ್ನು ರಾಯಚೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಉದ್ಘಾಟಿಸಿ ಶ್ಲಾಘಿಸಿದ್ದಾರೆ..

4 / 5
ವಿವಿಧ ಕಾರ್ಯಕ್ರಮಗಳನ್ನು ಮಾಡ್ತಾ ಆಚರಣೆ ಹೆಸರಲ್ಲಿ ಮೋಜು ಮಸ್ತಿ ಮಾಡುವ ಈ ಕಾಲದಲ್ಲಿ ಪೊಲೀಸ್​ ಪಡೆ,  ಬಡವರ ಸೇವೆ ಮಾಡುತ್ತಿರುವ ಈ ಆಶ್ರಮಕ್ಕೆ ಹೆಗಲು ಕೊಟ್ಟಿದ್ದು ಸಾರ್ವಜನಿಕರ ಮೆಚ್ಚುಗೆ ಕಾರಣವಾಗಿದೆ.

ವಿವಿಧ ಕಾರ್ಯಕ್ರಮಗಳನ್ನು ಮಾಡ್ತಾ ಆಚರಣೆ ಹೆಸರಲ್ಲಿ ಮೋಜು ಮಸ್ತಿ ಮಾಡುವ ಈ ಕಾಲದಲ್ಲಿ ಪೊಲೀಸ್​ ಪಡೆ, ಬಡವರ ಸೇವೆ ಮಾಡುತ್ತಿರುವ ಈ ಆಶ್ರಮಕ್ಕೆ ಹೆಗಲು ಕೊಟ್ಟಿದ್ದು ಸಾರ್ವಜನಿಕರ ಮೆಚ್ಚುಗೆ ಕಾರಣವಾಗಿದೆ.

5 / 5
Follow us