AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರಿನಲ್ಲಿ ಶ್ರೀರಾಮನ ಕುರುಹು ಪತ್ತೆ: ಅಯೋಧ್ಯಾಪತಿ ಬಿಟ್ಟ ಬಾಣಕ್ಕೆ ಬಂಡೆಯಿಂದ ಚಿಮ್ಮಿತು ನೀರು

ಪ್ರಭು ಶ್ರೀರಾಮಚಂದ್ರ ಕರ್ನಾಟಕದಲ್ಲೂ ಸಂಚರಿಸಿದ್ದಾನೆ ಎಂಬುವುದಕ್ಕೆ ಅನೇಕ ಕುರುಹುಗಳು ಈಗಾಗಲೆ ಪತ್ತೆಯಾಗಿವೆ. ಇದೀಗ ಮತ್ತೊಂದು ಕುರಹು ಪತ್ತೆಯಾಗಿದೆ. ಹೌದು ಶ್ರೀರಾಮನಿಗೂ ರಾಯಚೂರಿಗು ನಂಟು ಇರುವ ಕುರುಹು ಬೆಳಕಿಗೆ ಬಂದಿದೆ.

ಭೀಮೇಶ್​​ ಪೂಜಾರ್
| Edited By: |

Updated on:Jan 16, 2024 | 11:55 AM

Share
Raichuru diristict lingasuru ayodhya Sriram kuruhu

ಪ್ರಭು ಶ್ರೀರಾಮಚಂದ್ರ ಕರ್ನಾಟಕದಲ್ಲೂ ಸಂಚರಿಸಿದ್ದಾನೆ ಎಂಬುವುದಕ್ಕೆ ಅನೇಕ ಕುರುಹುಗಳು ಈಗಾಗಲೆ ಪತ್ತೆಯಾಗಿವೆ. ಇದೀಗ ಮತ್ತೊಂದು ಕುರಹು ಪತ್ತೆಯಾಗಿದೆ. ಹೌದು ಶ್ರೀರಾಮನಿಗೂ ರಾಯಚೂರಿಗು ನಂಟು ಇರುವ ಕುರುಹು ಬೆಳಕಿಗೆ ಬಂದಿದೆ.

1 / 11
Raichuru diristict lingasuru ayodhya Sriram kuruhu

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಯರಡೋಣಿ ಗ್ರಾಮದ ದಟ್ಟ ಅರಣ್ಯದಲ್ಲಿ ಶ್ರೀರಾಮಚಂದ್ರನ ಕುರುಹು ಪತ್ತೆಯಾಗಿದ್ದು, ಈ ಸ್ಥಳಕ್ಕೆ ರಾಮತೀರ್ಥ ಅಂತ ಕರೆಯುತ್ತಾರೆ.

2 / 11
Raichuru diristict lingasuru ayodhya Sriram kuruhu

ವನಸವಾಸದ ಸಂದರ್ಭದಲ್ಲಿ ಸೀತಾ ಮಾತೆಯ ಅಪಹರಣವಾಗುತ್ತದೆ. ಸೀತಾ ಮಾತೆಯನ್ನು ಅರಸುತ್ತಾ ಶ್ರೀರಾಮಚಂದ್ರ ಈ ಸ್ಥಳಕ್ಕೆ ಬಂದಿದ್ದಾನೆ.

3 / 11
Raichuru diristict lingasuru ayodhya Sriram kuruhu

ಇಲ್ಲಿಗೆ ಬಂದ ರಾಮನಿಗೆ ಬಾಯಾರಿಕೆಯಾಗಿ ನೀರು ಹುಡುಕುತ್ತಾನೆ. ನೀರು ಸಿಗದೆ ಇದ್ದಾಗ, ಅಲ್ಲೇ ಇದ್ದ ಬೃಹತ್ ಬಂಡೆಗೆ ಬಾಣ ಬಿಡುತ್ತಾನೆ.

4 / 11
Raichuru diristict lingasuru ayodhya Sriram kuruhu

ರಾಮ ಬಿಟ್ಟ ಬಾಣದಿಂದ ಬಂಡೆಗಲ್ಲಿನಿಂದ ನೀರು ಚಿಮ್ಮುತ್ತದೆ. ಈ ನೀರನ್ನು ಕುಡಿದು ರಾಮ ಬಾಯಾರಿಕೆ ನೀಗಿಸಿಕೊಂಡಿದ್ದಾನೆ.

5 / 11
Raichuru diristict lingasuru ayodhya Sriram kuruhu

ಬಳಿಕ ಶ್ರೀರಾಮ ಇದೇ ಸ್ಥಳದಲ್ಲಿ 11 ದಿನ ತಪ್ಪಸ್ಸು ಮಾಡಿದ್ದಾನೆ ಎಂಬುವುದು ಪ್ರತೀತಿ. ನಂತರ ಶ್ರೀರಾಮ ಇಲ್ಲಿಂದ ಕೊಪ್ಪಳದ ಅಂಜನಾದ್ರಿಗೆ ಪ್ರಯಾಣ ಬೆಳಸಿದ್ದಾನೆ.

6 / 11
Raichuru diristict lingasuru ayodhya Sriram kuruhu

ರಾಮ ಬಿಟ್ಟ ಸ್ಥಳದಲ್ಲಿ ಕಂದಕವಿದ್ದು, ಅಲ್ಲಿಂದ ಇನ್ನೂ ನೀರು ಜಿನಗುತ್ತದೆ. ಬರಗಾಲವಿದ್ದರೂ ವರ್ಷ ಪೂರ್ತಿ ಈ ಸ್ಥಳದಲ್ಲಿ ಬಂಡೆಗಲ್ಲಿನ ಆಳದಿಂದ ನೀರು ಬರುತ್ತದೆ.

7 / 11
Raichuru diristict lingasuru ayodhya Sriram kuruhu

ಕಾಲಾ ನಂತರ ಅಮರಶಿಲ್ಪಿ‌ ಜಕಣಾಚಾರಿ ಈ ಸ್ಥಳಕ್ಕೆ ಬಂದು, ನೀರು ಜಿನುಗುವ ಬಂಡೆ ಪಕ್ಕದಲ್ಲಿ ಆಂಜನೇಯನ ಮೂರ್ತಿ ಕೆತ್ತನೆ ಮಾಡಿದ್ದಾರೆ.

8 / 11
Raichuru diristict lingasuru ayodhya Sriram kuruhu

ಬಂಡೆಯಿಂದ ಜಿನುಗುವ ನೀರು ಆಂಜನೇಯನ ಪಾದ ಸೇರುತ್ತದೆ. ಈ ನೀರು ಸೇವನೆಯಿಂದ ರೋಗಗಳು ವಾಸಿಯಾಗುತ್ತವೆ ಅನ್ನುವುದು ಪ್ರತೀತಿ.

9 / 11
Raichuru diristict lingasuru ayodhya Sriram kuruhu

ಇನ್ನು ತ್ರೇತಾಯುಗದಲ್ಲಿ ಈ ಪ್ರದೇಶಕ್ಕೆ ಜಟ್ಟಿಂಗಮಹಾರಾಜನ ಪಟ್ಟಣ ಅನ್ನೋ ಹೆಸರು ಇತ್ತು.

10 / 11
Raichuru diristict lingasuru ayodhya Sriram kuruhu

ಈ ಅರಣ್ಯದ ಪಕ್ಕದಲ್ಲೇ ಅಮರೇಶ್ವರ ಪುಣ್ಯ ಕ್ಷೇತ್ರದ ಬಳಿಯ ಬೆಟ್ಟದಲ್ಲಿ ನೂರಾರು ಖುಷಿಮುನಿಗಳು, ಸಾಧುಸಂತರು ತಪಸ್ಸು ಮಾಡಿದ್ದಾರಂತೆ. ಈ ಹಿನ್ನೆಲೆಯಲ್ಲಿ ರಾಮ ಇಲ್ಲಿಗೆ ಬಂದು ತಪಸ್ಸು ಮಾಡಿದ್ದನು.

11 / 11

Published On - 11:51 am, Tue, 16 January 24