AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರಿನಲ್ಲಿ ಶ್ರೀರಾಮನ ಕುರುಹು ಪತ್ತೆ: ಅಯೋಧ್ಯಾಪತಿ ಬಿಟ್ಟ ಬಾಣಕ್ಕೆ ಬಂಡೆಯಿಂದ ಚಿಮ್ಮಿತು ನೀರು

ಪ್ರಭು ಶ್ರೀರಾಮಚಂದ್ರ ಕರ್ನಾಟಕದಲ್ಲೂ ಸಂಚರಿಸಿದ್ದಾನೆ ಎಂಬುವುದಕ್ಕೆ ಅನೇಕ ಕುರುಹುಗಳು ಈಗಾಗಲೆ ಪತ್ತೆಯಾಗಿವೆ. ಇದೀಗ ಮತ್ತೊಂದು ಕುರಹು ಪತ್ತೆಯಾಗಿದೆ. ಹೌದು ಶ್ರೀರಾಮನಿಗೂ ರಾಯಚೂರಿಗು ನಂಟು ಇರುವ ಕುರುಹು ಬೆಳಕಿಗೆ ಬಂದಿದೆ.

ಭೀಮೇಶ್​​ ಪೂಜಾರ್
| Edited By: |

Updated on:Jan 16, 2024 | 11:55 AM

Share
Raichuru diristict lingasuru ayodhya Sriram kuruhu

ಪ್ರಭು ಶ್ರೀರಾಮಚಂದ್ರ ಕರ್ನಾಟಕದಲ್ಲೂ ಸಂಚರಿಸಿದ್ದಾನೆ ಎಂಬುವುದಕ್ಕೆ ಅನೇಕ ಕುರುಹುಗಳು ಈಗಾಗಲೆ ಪತ್ತೆಯಾಗಿವೆ. ಇದೀಗ ಮತ್ತೊಂದು ಕುರಹು ಪತ್ತೆಯಾಗಿದೆ. ಹೌದು ಶ್ರೀರಾಮನಿಗೂ ರಾಯಚೂರಿಗು ನಂಟು ಇರುವ ಕುರುಹು ಬೆಳಕಿಗೆ ಬಂದಿದೆ.

1 / 11
Raichuru diristict lingasuru ayodhya Sriram kuruhu

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಯರಡೋಣಿ ಗ್ರಾಮದ ದಟ್ಟ ಅರಣ್ಯದಲ್ಲಿ ಶ್ರೀರಾಮಚಂದ್ರನ ಕುರುಹು ಪತ್ತೆಯಾಗಿದ್ದು, ಈ ಸ್ಥಳಕ್ಕೆ ರಾಮತೀರ್ಥ ಅಂತ ಕರೆಯುತ್ತಾರೆ.

2 / 11
Raichuru diristict lingasuru ayodhya Sriram kuruhu

ವನಸವಾಸದ ಸಂದರ್ಭದಲ್ಲಿ ಸೀತಾ ಮಾತೆಯ ಅಪಹರಣವಾಗುತ್ತದೆ. ಸೀತಾ ಮಾತೆಯನ್ನು ಅರಸುತ್ತಾ ಶ್ರೀರಾಮಚಂದ್ರ ಈ ಸ್ಥಳಕ್ಕೆ ಬಂದಿದ್ದಾನೆ.

3 / 11
Raichuru diristict lingasuru ayodhya Sriram kuruhu

ಇಲ್ಲಿಗೆ ಬಂದ ರಾಮನಿಗೆ ಬಾಯಾರಿಕೆಯಾಗಿ ನೀರು ಹುಡುಕುತ್ತಾನೆ. ನೀರು ಸಿಗದೆ ಇದ್ದಾಗ, ಅಲ್ಲೇ ಇದ್ದ ಬೃಹತ್ ಬಂಡೆಗೆ ಬಾಣ ಬಿಡುತ್ತಾನೆ.

4 / 11
Raichuru diristict lingasuru ayodhya Sriram kuruhu

ರಾಮ ಬಿಟ್ಟ ಬಾಣದಿಂದ ಬಂಡೆಗಲ್ಲಿನಿಂದ ನೀರು ಚಿಮ್ಮುತ್ತದೆ. ಈ ನೀರನ್ನು ಕುಡಿದು ರಾಮ ಬಾಯಾರಿಕೆ ನೀಗಿಸಿಕೊಂಡಿದ್ದಾನೆ.

5 / 11
Raichuru diristict lingasuru ayodhya Sriram kuruhu

ಬಳಿಕ ಶ್ರೀರಾಮ ಇದೇ ಸ್ಥಳದಲ್ಲಿ 11 ದಿನ ತಪ್ಪಸ್ಸು ಮಾಡಿದ್ದಾನೆ ಎಂಬುವುದು ಪ್ರತೀತಿ. ನಂತರ ಶ್ರೀರಾಮ ಇಲ್ಲಿಂದ ಕೊಪ್ಪಳದ ಅಂಜನಾದ್ರಿಗೆ ಪ್ರಯಾಣ ಬೆಳಸಿದ್ದಾನೆ.

6 / 11
Raichuru diristict lingasuru ayodhya Sriram kuruhu

ರಾಮ ಬಿಟ್ಟ ಸ್ಥಳದಲ್ಲಿ ಕಂದಕವಿದ್ದು, ಅಲ್ಲಿಂದ ಇನ್ನೂ ನೀರು ಜಿನಗುತ್ತದೆ. ಬರಗಾಲವಿದ್ದರೂ ವರ್ಷ ಪೂರ್ತಿ ಈ ಸ್ಥಳದಲ್ಲಿ ಬಂಡೆಗಲ್ಲಿನ ಆಳದಿಂದ ನೀರು ಬರುತ್ತದೆ.

7 / 11
Raichuru diristict lingasuru ayodhya Sriram kuruhu

ಕಾಲಾ ನಂತರ ಅಮರಶಿಲ್ಪಿ‌ ಜಕಣಾಚಾರಿ ಈ ಸ್ಥಳಕ್ಕೆ ಬಂದು, ನೀರು ಜಿನುಗುವ ಬಂಡೆ ಪಕ್ಕದಲ್ಲಿ ಆಂಜನೇಯನ ಮೂರ್ತಿ ಕೆತ್ತನೆ ಮಾಡಿದ್ದಾರೆ.

8 / 11
Raichuru diristict lingasuru ayodhya Sriram kuruhu

ಬಂಡೆಯಿಂದ ಜಿನುಗುವ ನೀರು ಆಂಜನೇಯನ ಪಾದ ಸೇರುತ್ತದೆ. ಈ ನೀರು ಸೇವನೆಯಿಂದ ರೋಗಗಳು ವಾಸಿಯಾಗುತ್ತವೆ ಅನ್ನುವುದು ಪ್ರತೀತಿ.

9 / 11
Raichuru diristict lingasuru ayodhya Sriram kuruhu

ಇನ್ನು ತ್ರೇತಾಯುಗದಲ್ಲಿ ಈ ಪ್ರದೇಶಕ್ಕೆ ಜಟ್ಟಿಂಗಮಹಾರಾಜನ ಪಟ್ಟಣ ಅನ್ನೋ ಹೆಸರು ಇತ್ತು.

10 / 11
Raichuru diristict lingasuru ayodhya Sriram kuruhu

ಈ ಅರಣ್ಯದ ಪಕ್ಕದಲ್ಲೇ ಅಮರೇಶ್ವರ ಪುಣ್ಯ ಕ್ಷೇತ್ರದ ಬಳಿಯ ಬೆಟ್ಟದಲ್ಲಿ ನೂರಾರು ಖುಷಿಮುನಿಗಳು, ಸಾಧುಸಂತರು ತಪಸ್ಸು ಮಾಡಿದ್ದಾರಂತೆ. ಈ ಹಿನ್ನೆಲೆಯಲ್ಲಿ ರಾಮ ಇಲ್ಲಿಗೆ ಬಂದು ತಪಸ್ಸು ಮಾಡಿದ್ದನು.

11 / 11

Published On - 11:51 am, Tue, 16 January 24

ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ