
ರಕ್ಷಿತಾ ಶೆಟ್ಟಿ ಅವರು ಈ ಸೀಸನ್ನ ರನ್ನರ್ ಅಪ್ ಆಗಿದ್ದಾರೆ. ಅವರ ಜರ್ನಿ ಅನೇಕರಿಗೆ ಮಾದರಿ. ಅವರ ಪ್ರಯಾಣ ಮಿರಾಕಲ್ ಎನಿಸಿಕೊಂಡಿದೆ. ರಕ್ಷಿತಾ ಶೆಟ್ಟಿ ಅವರ ಆಟಕ್ಕೆ ಎಲ್ಲರೂ ಭೇಷ್ ಎಂದು ಹೇಳಿದ್ದಾರೆ.

ರಕ್ಷಿತಾ ಶೆಟ್ಟಿ ಅವರು ಮೊದಲ ದಿನವೇ ಹೊರ ಹೋದರು! ಮನೆಯವರ ವೋಟಿಂಗ್ ಆಧಾರದ ಮೇಲೆ ಅವರನ್ನು ಹೊರಕ್ಕೆ ಕಳುಹಿಸಲಾಯಿತು. ಇದು ಅನೇಕರಿಗೆ ಶಾಕಿಂಗ್ ಎನಿಸಿತು. ಒಂದು ವಾರ ಬಿಟ್ಟು ಅವರು ದೊಡ್ಮನೆಗೆ ಮರಳಿದರು.

ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿಯನ್ನು ಗೋಳುಹೊಯ್ದುಕೊಂಡರು. ಗೆಜ್ಜೆ ವಿಷಯದಲ್ಲಿ ಅವರನ್ನು ಟೀಕಿಸಿದರು. ಆಗ ರಕ್ಷಿತಾ ಶೆಟ್ಟಿಗೆ ಮೈಲೇಜ್ ಸಿಕ್ಕಿತು.ಅಲ್ಲಿಂದ ಅವರನ್ನು ಯಾರೂ ಹಿಡಿಯೋರೇ ಇರಲಿಲ್ಲ.

ರಕ್ಷಿತಾ ಶೆಟ್ಟಿಗೆ ಸುದೀಪ್ ಪಾಠ ಹೇಳಿದರು. ಇದಾದ ಮರುದಿನವೇ ರಕ್ಷಿತಾ ಆಟ ಬದಲಾಯಿತು. ಆಟ ಬದಲಿಸಿಕೊಂಡು ಅವರು ಕಿಚ್ಚನ ಚಪ್ಪಾಳೆ ಪಡೆದುಕೊಂಡರು. ಅದು ಅವರ ಆಟ ಬದಲಿಸಿತು. ಅಂದಿನಿಂದ ಅವರು ಆಟ ಬದಲಿಸಿಕೊಂಡರು.

ರಕ್ಷಿತಾ ಶೆಟ್ಟಿ ಅವರು ಕೆಲ ವಾರಗಳ ಹಿಂದೆ ಎಲಿಮಿನೇಷನ್ ಮಾಡುವ ನಾಟಕ ಮಾಡಲಾಯಿತು. ಆ ಬಳಿಕ ಅವರನ್ನು ಸೀಕ್ರೆಟ್ ರೂಂನಲ್ಲಿ ಇಡಲಾಯಿತು. ಆ ಬಳಿಕ ರಕ್ಷಿತಾಗೆ