Kannada News » Photo gallery » Rangoli on tribute of swami vivekananda by artist archana srirama and team
ಯುವಕರನ್ನು ಬಡಿದೆಬ್ಬಿಸಿದ ವಿವೇಕಾನಂದರ ಜನ್ಮ ದಿನಕ್ಕೆ ರಂಗೋಲಿ ಅರ್ಪಣೆ
ಭಾರತದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಭಾರತ ಸಂಸ್ಕೃತಿ ಮಂತ್ರಾಲಯವು ಜನವರಿ 11 ಮತ್ತು 12 ರಂದು ಕನ್ಯಾಕುಮಾರಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ವಿವೇಕಾನಂದರ ರಂಗೋಲಿ ಚಿತ್ರವನ್ನು ರಚಿಸಲು ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯದಿಂದ ಆಹ್ವಾನ ಬಂದಿದ್ದು, ನಮ್ಮ ಹೆಬ್ಬಾಳ ಮತ್ತು ಯಲಹಂಕ ಸಮಿತಿಯ ಸಂಸ್ಕಾರ ಭಾರತಿ ತಂಡವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಸಂಸ್ಕಾರ ಭಾರತಿಯ ಕಾರ್ತಕರ್ತೆ, ಅದ್ಭುತ ರಂಗೋಲಿ ಕಲಾವಿದೆ ಅರ್ಚನಾ ಶ್ರೀರಾಮ ರಂಗೋಲಿ ಹಾಕಿದ್ದಾರೆ.