- Kannada News Photo gallery Sigandur Chowdeshwari Temple jathre an Hindu pilgrimage site in shivamogga
ಶರಾವತಿ ಹಿನ್ನೀರಿನಲ್ಲಿ ಸಂಕ್ರಮಣದ ದಿನ ಸಿಗಂದೂರು ಚೌಡೇಶ್ವರಿ ಅದ್ಧೂರಿ ಜಾತ್ರೆ ವಿಜೃಂಭಣೆಯಿಂದ ನಡೆಯಿತು, ಚಿತ್ರಗಳಲ್ಲಿ ಕಣ್ತುಂಬಿಕೊಳ್ಳಿ
Sigandur Chowdeshwari Temple jathre: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಾಗರದ ಸಿಗಂದೂರು ಚೌಡೇಶ್ವರಿಯ ಜಾತ್ರೆಯು ಇಂದು ಶನಿವಾರ ಅದ್ದೂರಿಯಿಂದ ನಡೆಯಿತು. ಪ್ರತಿ ವರ್ಷ ಸಂಕ್ರಮಣದ ದಿನದಂದು ದೇವಿಯ ಮೂಲಸ್ಥಾನದಲ್ಲಿ ವಿಶೇಷ ಪೂಜೆ ಹೋಮ ಹವನ ನಡೆಯುತ್ತದೆ. ಶರಾವತಿಯ ಹಿನ್ನೀರಿನಲ್ಲಿರುವ ಚೌಡೇಶ್ವರಿ ದೇವಿಯ ಅದ್ಧೂರಿಯ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು.. ದೇವಿ ಜಾತ್ರೆ ಕುರಿತು ಒಂದು ಸಚಿತ್ರ ವರದಿ ಇಲ್ಲಿದೆ.
Updated on: Jan 14, 2023 | 9:27 PM
![ದ್ವೀಪದಲ್ಲಿ ಸಿಗಂದೂರು ಸಂಕ್ರಮಣ ಜಾತ್ರೆ ಹಿನ್ನೀರಿನಲ್ಲಿ ಸಂಭ್ರಮದ ಹಬ್ಬವಾಗಿದೆ. ಹೀಗೆ ಮಲೆನಾಡಿನ ಆರಾಧ್ಯ ದೈವ ಸಿಗಂದೂರು ದೇವಿಯ ಜಾತ್ರೆಯಲ್ಲಿ ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆಯುತ್ತಿದ್ದರು.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-22.jpg?w=1280&enlarge=true)
ದ್ವೀಪದಲ್ಲಿ ಸಿಗಂದೂರು ಸಂಕ್ರಮಣ ಜಾತ್ರೆ ಹಿನ್ನೀರಿನಲ್ಲಿ ಸಂಭ್ರಮದ ಹಬ್ಬವಾಗಿದೆ. ಹೀಗೆ ಮಲೆನಾಡಿನ ಆರಾಧ್ಯ ದೈವ ಸಿಗಂದೂರು ದೇವಿಯ ಜಾತ್ರೆಯಲ್ಲಿ ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆಯುತ್ತಿದ್ದರು.
![ಸಿಗಂದೂರು ದೇವಾಲಯದ ಇರುವುದು ಸೀಗೆ ಕಣಿವೆಯಲ್ಲಿ. ಸಹ್ಯಾದ್ರಿ ಪರ್ವತ ಶ್ರೇಣಿಯ ನಡುವೆ ಹರಿವ ಶರಾವತಿ ನದಿಯ ತಟದಲ್ಲಿ ವನದೇವತೆಯಾಗ ತಾಯಿ ಆರಾಧನೆ ಪಡುತ್ತಾ ಇದ್ದವಳು.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-15.jpg)
ಸಿಗಂದೂರು ದೇವಾಲಯದ ಇರುವುದು ಸೀಗೆ ಕಣಿವೆಯಲ್ಲಿ. ಸಹ್ಯಾದ್ರಿ ಪರ್ವತ ಶ್ರೇಣಿಯ ನಡುವೆ ಹರಿವ ಶರಾವತಿ ನದಿಯ ತಟದಲ್ಲಿ ವನದೇವತೆಯಾಗ ತಾಯಿ ಆರಾಧನೆ ಪಡುತ್ತಾ ಇದ್ದವಳು.
![ಹೀಗೆ ಮೆಲೆನಾಡಿನ ಕಾಡಿನ ನಡುವೆ ದೇವಿಯ ಜಾತ್ರೆಯು ಅದ್ಧೂರಿ ಮತ್ತು ವಿಜೃಂಭಣೆಯಿಂದ ಕೂಡಿತ್ತು. ಜಾತ್ರೆಯಲ್ಲಿ ಭಾಗವಹಿಸಿದ ಭಕ್ತರು ಸಖತ್ ಖುಷಿಪಟ್ಟರು.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-23.jpg)
ಹೀಗೆ ಮೆಲೆನಾಡಿನ ಕಾಡಿನ ನಡುವೆ ದೇವಿಯ ಜಾತ್ರೆಯು ಅದ್ಧೂರಿ ಮತ್ತು ವಿಜೃಂಭಣೆಯಿಂದ ಕೂಡಿತ್ತು. ಜಾತ್ರೆಯಲ್ಲಿ ಭಾಗವಹಿಸಿದ ಭಕ್ತರು ಸಖತ್ ಖುಷಿಪಟ್ಟರು.
![ಇಂದಿಗೂ ದೇವಿಯ ಶಕ್ತಿಗೆ ಭಕ್ತರು ತಲೆಬಾಗುತ್ತಾರೆ. ಇನ್ನೂ ಅನೇಕ ವ್ಯಾಜ್ಯಗಳು ದೇವಿಯ ಸನ್ನಿಧಾನದಲ್ಲಿ ತೀರ್ಮಾನಗಳಾಗಿವೆ.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-21.jpg)
ಇಂದಿಗೂ ದೇವಿಯ ಶಕ್ತಿಗೆ ಭಕ್ತರು ತಲೆಬಾಗುತ್ತಾರೆ. ಇನ್ನೂ ಅನೇಕ ವ್ಯಾಜ್ಯಗಳು ದೇವಿಯ ಸನ್ನಿಧಾನದಲ್ಲಿ ತೀರ್ಮಾನಗಳಾಗಿವೆ.
![ಮಲೆನಾಡಿನಲ್ಲಿ ಯಾವುದೇ ಕಳ್ಳತನ ಅದರೂ ಅವರು ದೇವಿಗೆ ಬಂದು ಹರಕೆ ಹೊರುತ್ತಾರೆ. ಹೀಗೆ ಹರಕೆ ಬಳಿಕ ಕಳ್ಳತನ ಆಗಿರುವ ಗ್ರಾಮಸ್ಥರ ವಸ್ತಗಳು ವಾಪಸ್ ಸಿಗುತ್ತವೆ.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-20.jpg)
ಮಲೆನಾಡಿನಲ್ಲಿ ಯಾವುದೇ ಕಳ್ಳತನ ಅದರೂ ಅವರು ದೇವಿಗೆ ಬಂದು ಹರಕೆ ಹೊರುತ್ತಾರೆ. ಹೀಗೆ ಹರಕೆ ಬಳಿಕ ಕಳ್ಳತನ ಆಗಿರುವ ಗ್ರಾಮಸ್ಥರ ವಸ್ತಗಳು ವಾಪಸ್ ಸಿಗುತ್ತವೆ.
![ಸಿಗಂದೂರಿನ ಚೌಡೇಶ್ವರಿ ದೇವಸ್ಥಾನದ ಗರ್ಭಗುಡಿಯ ದೇವಿಗೆ ದಿವ್ಯ ಜ್ಯೋತಿಯನ್ನ ಆರತಿ ಬೆಳಗುವ ಮೂಲಕ ಇರಿಸಲಾಯಿತು. ಈ ವೇಳೆ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-19.jpg)
ಸಿಗಂದೂರಿನ ಚೌಡೇಶ್ವರಿ ದೇವಸ್ಥಾನದ ಗರ್ಭಗುಡಿಯ ದೇವಿಗೆ ದಿವ್ಯ ಜ್ಯೋತಿಯನ್ನ ಆರತಿ ಬೆಳಗುವ ಮೂಲಕ ಇರಿಸಲಾಯಿತು. ಈ ವೇಳೆ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.
![ನೀರು ಕಡಿಮೆ ಇದ್ದ ಸಮಯದಲ್ಲಿ ಮೂಲ ಸ್ಥಾನದಲ್ಲಿ ದೇವಿಯ ದರ್ಶನ ಸಿಗುತ್ತಿತ್ತು.ಇದರ ಬಳಿಕ ದೇವಿಯನ್ನು ಸಿಗಂದೂರಿನಲ್ಲಿ ಪ್ರತಿಷ್ಠಾಪಿಸಲಾಯಿತು. ಹೀಗೆ ಪ್ರತಿವರ್ಷ ಸಂಕ್ರಮಣದಂದು ದೇವಿಯ ಮೂಲ ಸ್ಥಾನದಲ್ಲಿ ವಿಶೇಷ ಪೂಜೆ ಹೋಮ ಮತ್ತು ಹವನಗಳು ನಡೆಯುತ್ತವೆ.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-18.jpg)
ನೀರು ಕಡಿಮೆ ಇದ್ದ ಸಮಯದಲ್ಲಿ ಮೂಲ ಸ್ಥಾನದಲ್ಲಿ ದೇವಿಯ ದರ್ಶನ ಸಿಗುತ್ತಿತ್ತು.ಇದರ ಬಳಿಕ ದೇವಿಯನ್ನು ಸಿಗಂದೂರಿನಲ್ಲಿ ಪ್ರತಿಷ್ಠಾಪಿಸಲಾಯಿತು. ಹೀಗೆ ಪ್ರತಿವರ್ಷ ಸಂಕ್ರಮಣದಂದು ದೇವಿಯ ಮೂಲ ಸ್ಥಾನದಲ್ಲಿ ವಿಶೇಷ ಪೂಜೆ ಹೋಮ ಮತ್ತು ಹವನಗಳು ನಡೆಯುತ್ತವೆ.
![ವಿದ್ಯುತ್ ಯೋಜನೆಗಾಗಿ 1967 ರಲ್ಲಿ 76 ಹಳ್ಳಿಗಳು ಮುಳುಗಡೆಯಾದವು. ಅದರಲ್ಲಿ ಸಿಗಂದೂರಿನ ದೇವಿನ ಬನವಿದ್ದ ಜಾಗ ಸೀಗೆ ಕಣವಿ ಕೂಡಾ ಮುಳಗಡೆಯಾಗಿತ್ತು.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-17.jpg)
ವಿದ್ಯುತ್ ಯೋಜನೆಗಾಗಿ 1967 ರಲ್ಲಿ 76 ಹಳ್ಳಿಗಳು ಮುಳುಗಡೆಯಾದವು. ಅದರಲ್ಲಿ ಸಿಗಂದೂರಿನ ದೇವಿನ ಬನವಿದ್ದ ಜಾಗ ಸೀಗೆ ಕಣವಿ ಕೂಡಾ ಮುಳಗಡೆಯಾಗಿತ್ತು.
![ಈಗಿನ ಧರ್ಮದರ್ಶಿ ಡಾ. ರಾಮಪ್ಪ ಅವರ ಪೂರ್ವಜರ ಮನೆ ದೇವತೆಯಾಗಿ ಗ್ರಾಮ ಬಹು ಸಂಖ್ಯಾತ ದೀವರ ಕುಟುಂಬಗಳ ಆರಾಧನಾ ದೇವತೆಯಾಗಿ ಪ್ರಸಿದ್ಧಿ ಪಡೆದುಕೊಂಡಿದೆ.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-16.jpg)
ಈಗಿನ ಧರ್ಮದರ್ಶಿ ಡಾ. ರಾಮಪ್ಪ ಅವರ ಪೂರ್ವಜರ ಮನೆ ದೇವತೆಯಾಗಿ ಗ್ರಾಮ ಬಹು ಸಂಖ್ಯಾತ ದೀವರ ಕುಟುಂಬಗಳ ಆರಾಧನಾ ದೇವತೆಯಾಗಿ ಪ್ರಸಿದ್ಧಿ ಪಡೆದುಕೊಂಡಿದೆ.
![ಪ್ರತಿ ವರ್ಷ ಸಂಕ್ರಮಣ ಮತ್ತು ಅದರ ಮರುದಿನ ಎರಡು ದಿನ ಸಿಗಂದೂರು ದೇವಿಯ ಅದ್ದೂರಿ ಜಾತ್ರೆಯು ನಡೆಯುತ್ತದೆ.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-14.jpg)
ಪ್ರತಿ ವರ್ಷ ಸಂಕ್ರಮಣ ಮತ್ತು ಅದರ ಮರುದಿನ ಎರಡು ದಿನ ಸಿಗಂದೂರು ದೇವಿಯ ಅದ್ದೂರಿ ಜಾತ್ರೆಯು ನಡೆಯುತ್ತದೆ.
![ಹೀಗೆ ದೇವಿಯ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಜನರು ಬಂದಿದ್ದರು. ಶರಾವತಿಯ ಹಿನ್ನೀರಿನ ಲಾಂಚ್ ಮೂಲಕ ಸಾವಿರಾರು ಭಕ್ತರು ಬಂದು ದೇವಿಯ ದರ್ಶನ ಪಡೆದರು. ಹೀಗೆ ಬಂದಂತಹ ಸಾವಿರಾರು ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-13.jpg)
ಹೀಗೆ ದೇವಿಯ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಜನರು ಬಂದಿದ್ದರು. ಶರಾವತಿಯ ಹಿನ್ನೀರಿನ ಲಾಂಚ್ ಮೂಲಕ ಸಾವಿರಾರು ಭಕ್ತರು ಬಂದು ದೇವಿಯ ದರ್ಶನ ಪಡೆದರು. ಹೀಗೆ ಬಂದಂತಹ ಸಾವಿರಾರು ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
![ಮೆರವಣಿಗೆಯಲ್ಲಿ ಧರ್ಮದರ್ಶಿ ರಾಮಪ್ಪ, ಪುತ್ರ ರವಿ ಕುಮಾರ್ ಮತ್ತು ಕುಟುಂಬ ಪಾಲ್ಗೊಂಡಿತ್ತು. ಶಾಸಕ ಹಾಲಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ದೇವಿಯ ದರ್ಶನ ಪಡೆದರು.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-12.jpg)
ಮೆರವಣಿಗೆಯಲ್ಲಿ ಧರ್ಮದರ್ಶಿ ರಾಮಪ್ಪ, ಪುತ್ರ ರವಿ ಕುಮಾರ್ ಮತ್ತು ಕುಟುಂಬ ಪಾಲ್ಗೊಂಡಿತ್ತು. ಶಾಸಕ ಹಾಲಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ದೇವಿಯ ದರ್ಶನ ಪಡೆದರು.
![ದರ್ಶನ ಪಡೆದ ಮಹಿಳೆಯರಿಗೆ ಸೀರೆ ರವಿಕೆಯ ಬಾಗಿನವನ್ನ ದೇಸ್ಥಾನದ ಕಮಿಟಿ ವತಿಯಿಂದ ನೀಡಲಾಯಿತು. ಸುತ್ತಮುತ್ತದ ಗ್ರಾಮದ ಮಹಿಳೆಯರು ಕಳಶಕುಂಭ ಹೊತ್ತು ದೇವಿಯ ದರ್ಶನ ಪಡೆದಿರುವುದು ವಿಶೇಷವಾಗಿತ್ತು.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-11.jpg)
ದರ್ಶನ ಪಡೆದ ಮಹಿಳೆಯರಿಗೆ ಸೀರೆ ರವಿಕೆಯ ಬಾಗಿನವನ್ನ ದೇಸ್ಥಾನದ ಕಮಿಟಿ ವತಿಯಿಂದ ನೀಡಲಾಯಿತು. ಸುತ್ತಮುತ್ತದ ಗ್ರಾಮದ ಮಹಿಳೆಯರು ಕಳಶಕುಂಭ ಹೊತ್ತು ದೇವಿಯ ದರ್ಶನ ಪಡೆದಿರುವುದು ವಿಶೇಷವಾಗಿತ್ತು.
![ಸಿಗಂದೂರಿನ ಚೌಡೇಶ್ವರಿ ದೇವಸ್ಥಾನದ ಗರ್ಭಗುಡಿಯ ದೇವಿಗೆ ದಿವ್ಯ ಜ್ಯೋತಿಯನ್ನ ಆರತಿ ಬೆಳಗುವಮೂಲಕ ಇರಿಸಲಾಯಿತು. ಈ ವೇಳೆ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-10.jpg)
ಸಿಗಂದೂರಿನ ಚೌಡೇಶ್ವರಿ ದೇವಸ್ಥಾನದ ಗರ್ಭಗುಡಿಯ ದೇವಿಗೆ ದಿವ್ಯ ಜ್ಯೋತಿಯನ್ನ ಆರತಿ ಬೆಳಗುವಮೂಲಕ ಇರಿಸಲಾಯಿತು. ಈ ವೇಳೆ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.
![ಡೊಳ್ಳು ಕುಣಿತ, ತಟ್ಟಿರಾಯನ ಕುಣಿತ, ಹೀಗೆ ಮೊದಲಾದ ಜಾನಪದ ಗೀತೆಗಳ ಮೂಲಕ ಮೆರವಣಿಗೆ ನಡೆದುಬಂದಿತು.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-9.jpg)
ಡೊಳ್ಳು ಕುಣಿತ, ತಟ್ಟಿರಾಯನ ಕುಣಿತ, ಹೀಗೆ ಮೊದಲಾದ ಜಾನಪದ ಗೀತೆಗಳ ಮೂಲಕ ಮೆರವಣಿಗೆ ನಡೆದುಬಂದಿತು.
![ಶ್ರೀಧರ ಭಟ್ಟರಿಂದ ಅಭೂತಪೂರ್ವವಾಗಿ ಮಂತ್ರಘೋಷಗಳು ಮೊಳಗಿದವು. ದಿವ್ಯ ಜ್ಯೋತಿಯನ್ನ ಅತಿಥಿಗಳಿಂದ ಮತ್ತು ಧರ್ಮಧರ್ಶಿಗಳಿಂದ ಜ್ಯೋತಿ ಬೆಳಗಿಸಲಾಯಿತು. 8. ಮೆರವಣಿಗೆಯಲ್ಲಿ ದಿವ್ಯಜ್ಯೋತಿಯನ್ನ ಹೊತ್ತುತರಲಾಯಿತು. ಈ ವೇಳೆ ಕುಂಭ ಹೊತ್ತು ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-8.jpg)
ಶ್ರೀಧರ ಭಟ್ಟರಿಂದ ಅಭೂತಪೂರ್ವವಾಗಿ ಮಂತ್ರಘೋಷಗಳು ಮೊಳಗಿದವು. ದಿವ್ಯ ಜ್ಯೋತಿಯನ್ನ ಅತಿಥಿಗಳಿಂದ ಮತ್ತು ಧರ್ಮಧರ್ಶಿಗಳಿಂದ ಜ್ಯೋತಿ ಬೆಳಗಿಸಲಾಯಿತು. 8. ಮೆರವಣಿಗೆಯಲ್ಲಿ ದಿವ್ಯಜ್ಯೋತಿಯನ್ನ ಹೊತ್ತುತರಲಾಯಿತು. ಈ ವೇಳೆ ಕುಂಭ ಹೊತ್ತು ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
![ನಂತರ ಕ್ಷೇತ್ರಪಾಲಕ ಭೂತರಾಯನಿಗೆ ಪೂಜೆ ಸಲ್ಲಿಸಲಾಯಿತು. ನಂತರ ಚೌಡೇಶ್ವರಿ ದೇವಿಯ ಮೂಲ ಜಾಗದಲ್ಲಿ ತಾವರೆ ಹೂವುಗಳಿಂದ ಅಲಂಕಾರ ಮಾಡಿ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-7.jpg)
ನಂತರ ಕ್ಷೇತ್ರಪಾಲಕ ಭೂತರಾಯನಿಗೆ ಪೂಜೆ ಸಲ್ಲಿಸಲಾಯಿತು. ನಂತರ ಚೌಡೇಶ್ವರಿ ದೇವಿಯ ಮೂಲ ಜಾಗದಲ್ಲಿ ತಾವರೆ ಹೂವುಗಳಿಂದ ಅಲಂಕಾರ ಮಾಡಿ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು.
![ಅಚ್ಚುಕಟ್ಟಾದ ವ್ಯವಸ್ಥೆಯ ನಡುವೆ ಹೋಮ, ಹವನ, ವಿಶೇಷ ಪೂಜೆಗಳು ಜರುಗಿದವು. ಸಿಗಂದೂರಿನ ಸೀಗೇಕಣಿವೆಯಲ್ಲಿಯಲ್ಲಿ ಚಂಡಿಕಾ ಹೋಮ, ಭೂತರಾಯನ ಕ್ಷೇತ್ರಪಾಲಕನಿಗೆ ವಿಶೇಷ ಪೂಜೆ ಹಾಗೂ ಚೌಡೇಶ್ವರಿಯ ಜ್ಯೋತಿ ಹೊತ್ತು ದೇವಸ್ಥಾನದ ವರೆಗೆ ಮೆರವಣಿಗೆ ನಡೆಯಿತು.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-6.jpg)
ಅಚ್ಚುಕಟ್ಟಾದ ವ್ಯವಸ್ಥೆಯ ನಡುವೆ ಹೋಮ, ಹವನ, ವಿಶೇಷ ಪೂಜೆಗಳು ಜರುಗಿದವು. ಸಿಗಂದೂರಿನ ಸೀಗೇಕಣಿವೆಯಲ್ಲಿಯಲ್ಲಿ ಚಂಡಿಕಾ ಹೋಮ, ಭೂತರಾಯನ ಕ್ಷೇತ್ರಪಾಲಕನಿಗೆ ವಿಶೇಷ ಪೂಜೆ ಹಾಗೂ ಚೌಡೇಶ್ವರಿಯ ಜ್ಯೋತಿ ಹೊತ್ತು ದೇವಸ್ಥಾನದ ವರೆಗೆ ಮೆರವಣಿಗೆ ನಡೆಯಿತು.
![ಮಕರಣ ಸಂಕ್ರಮಣ ಪ್ರಯುಕ್ತ ಸಿಗಂದೂರು ಚೌಡೇಶ್ವರಿಯ ಮೂಲಸ್ಥಳದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣಗೊಂಡಿತ್ತು.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-5.jpg)
ಮಕರಣ ಸಂಕ್ರಮಣ ಪ್ರಯುಕ್ತ ಸಿಗಂದೂರು ಚೌಡೇಶ್ವರಿಯ ಮೂಲಸ್ಥಳದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣಗೊಂಡಿತ್ತು.
![ಶರಾವತಿಯ ಹಿನ್ನೀರಿನಲ್ಲಿರುವ ಚೌಡೇಶ್ವರಿ ದೇವಿಯ ಅದ್ಧೂರಿಯ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು.. ದೇವಿ ಜಾತ್ರೆ ಕುರಿತು ಒಂದು ವರದಿ ಇಲ್ಲಿದೆ. (ವರದಿ: ಬಸವರಾಜ್ ಯರಗಣವಿ ಟಿವಿ 9 ಶಿವಮೊಗ್ಗ)](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-4.jpg)
ಶರಾವತಿಯ ಹಿನ್ನೀರಿನಲ್ಲಿರುವ ಚೌಡೇಶ್ವರಿ ದೇವಿಯ ಅದ್ಧೂರಿಯ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು.. ದೇವಿ ಜಾತ್ರೆ ಕುರಿತು ಒಂದು ವರದಿ ಇಲ್ಲಿದೆ. (ವರದಿ: ಬಸವರಾಜ್ ಯರಗಣವಿ ಟಿವಿ 9 ಶಿವಮೊಗ್ಗ)
![ಪ್ರತಿ ವರ್ಷ ಸಂಕ್ರಮಣದ ದಿನದಂದು ದೇವಿಯ ಮೂಲಸ್ಥಾನದಲ್ಲಿ ವಿಶೇಷ ಪೂಜೆ ಹೋಮ ಹವನ ನಡೆಯುತ್ತದೆ.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-3.jpg)
ಪ್ರತಿ ವರ್ಷ ಸಂಕ್ರಮಣದ ದಿನದಂದು ದೇವಿಯ ಮೂಲಸ್ಥಾನದಲ್ಲಿ ವಿಶೇಷ ಪೂಜೆ ಹೋಮ ಹವನ ನಡೆಯುತ್ತದೆ.
![ಕಾಡಿನ ನಡುವೆ ಶರಾವತಿಯ ಹಿನ್ನೀರಿನ ದ್ವೀಪದಲ್ಲಿರುವ ವನದೇವತೆ ಸಿಗಂದೂರು ದೇವಿಯ ಅದ್ಧೂರಿ ಜಾತ್ರೆ ನೋಡಿ ಭಕ್ತರು ಕಣ್ಣು ತುಂಬಿಕೊಂಡರು. ಕಳೆದ ಎರಡು ವರ್ಷದಿಂದ ಕೊರೊನಾ ಹಿನ್ನಲೆಯಲ್ಲಿ ಸರಳ ಜಾತ್ರೆ ನಡೆದಿತ್ತು. ಆದ್ರೆ ಈ ವರ್ಷ ಯಾವುದೇ ಕೊರೊನಾದ ಆತಂಕ ಭಯವಿಲ್ಲದೇ ಜಾತ್ರೆಗೆ ಭಕ್ತರು ಹರಿದುಬಂದಿದ್ದು ವಿಶೇಷವಾಗಿತ್ತು.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-2.jpg)
ಕಾಡಿನ ನಡುವೆ ಶರಾವತಿಯ ಹಿನ್ನೀರಿನ ದ್ವೀಪದಲ್ಲಿರುವ ವನದೇವತೆ ಸಿಗಂದೂರು ದೇವಿಯ ಅದ್ಧೂರಿ ಜಾತ್ರೆ ನೋಡಿ ಭಕ್ತರು ಕಣ್ಣು ತುಂಬಿಕೊಂಡರು. ಕಳೆದ ಎರಡು ವರ್ಷದಿಂದ ಕೊರೊನಾ ಹಿನ್ನಲೆಯಲ್ಲಿ ಸರಳ ಜಾತ್ರೆ ನಡೆದಿತ್ತು. ಆದ್ರೆ ಈ ವರ್ಷ ಯಾವುದೇ ಕೊರೊನಾದ ಆತಂಕ ಭಯವಿಲ್ಲದೇ ಜಾತ್ರೆಗೆ ಭಕ್ತರು ಹರಿದುಬಂದಿದ್ದು ವಿಶೇಷವಾಗಿತ್ತು.
![ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಾಗರದ ಸಿಗಂದೂರು ಚೌಡೇಶ್ವರಿಯ ಜಾತ್ರೆಯು (Sigandur Chowdeshwari Temple jathre) ಇಂದು ಶನಿವಾರ ಅದ್ದೂರಿಯಿಂದ ನಡೆಯಿತು.](https://images.tv9kannada.com/wp-content/uploads/2023/01/Sigandur-Chowdeshwari-Temple-jathre-in-shivamogga-1.jpg)
ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಾಗರದ ಸಿಗಂದೂರು ಚೌಡೇಶ್ವರಿಯ ಜಾತ್ರೆಯು (Sigandur Chowdeshwari Temple jathre) ಇಂದು ಶನಿವಾರ ಅದ್ದೂರಿಯಿಂದ ನಡೆಯಿತು.
![ಜಯಲಲಿತಾ ಬಳಿ ಇದ್ದ ಸಾವಿರಾರು ಕೋಟಿ ರೂ. ಚಿನ್ನ-ವಜ್ರಾಭರಣಗಳ ಫೋಟೋಗಳು ಜಯಲಲಿತಾ ಬಳಿ ಇದ್ದ ಸಾವಿರಾರು ಕೋಟಿ ರೂ. ಚಿನ್ನ-ವಜ್ರಾಭರಣಗಳ ಫೋಟೋಗಳು](https://images.tv9kannada.com/wp-content/uploads/2025/02/jayalalitha-1.jpg?w=280&ar=16:9)
![ಧನಂಜಯ್-ಧನ್ಯತಾ ಮದುವೆ ಶಾಸ್ತ್ರದ ನಡುವೆ ಮೊದಲ ಮುತ್ತು ಧನಂಜಯ್-ಧನ್ಯತಾ ಮದುವೆ ಶಾಸ್ತ್ರದ ನಡುವೆ ಮೊದಲ ಮುತ್ತು](https://images.tv9kannada.com/wp-content/uploads/2025/02/daali-dhananjay-wedding-dis.jpg?w=280&ar=16:9)
![ಮೊದಲ ಪಂದ್ಯದಲ್ಲೇ 2 ಹೀನಾಯ ದಾಖಲೆಗಳಿಗೆ ಕೊರೊಳೊಡ್ಡಿದ RCB ಮೊದಲ ಪಂದ್ಯದಲ್ಲೇ 2 ಹೀನಾಯ ದಾಖಲೆಗಳಿಗೆ ಕೊರೊಳೊಡ್ಡಿದ RCB](https://images.tv9kannada.com/wp-content/uploads/2025/02/rcb-20-1.jpg?w=280&ar=16:9)
![WPL 2025: RCB ತಂಡದಿಂದ ಕನ್ನಡತಿ ಔಟ್ WPL 2025: RCB ತಂಡದಿಂದ ಕನ್ನಡತಿ ಔಟ್](https://images.tv9kannada.com/wp-content/uploads/2025/02/rcb-womens-1.jpg?w=280&ar=16:9)
![IPL 2025: ಐಪಿಎಲ್ ಆರಂಭಕ್ಕೆ ಡೇಟ್ ಫಿಕ್ಸ್ IPL 2025: ಐಪಿಎಲ್ ಆರಂಭಕ್ಕೆ ಡೇಟ್ ಫಿಕ್ಸ್](https://images.tv9kannada.com/wp-content/uploads/2025/02/ipl-2025-3.jpg?w=280&ar=16:9)
![ಬಾಬರ್ ಆಝಂ ಆರ್ಭಟಕ್ಕೆ ವಿರಾಟ್ ಕೊಹ್ಲಿ ವಿಶ್ವ ದಾಖಲೆ ಉಡೀಸ್ ಬಾಬರ್ ಆಝಂ ಆರ್ಭಟಕ್ಕೆ ವಿರಾಟ್ ಕೊಹ್ಲಿ ವಿಶ್ವ ದಾಖಲೆ ಉಡೀಸ್](https://images.tv9kannada.com/wp-content/uploads/2025/02/babar-azam-virat-kohli.jpg?w=280&ar=16:9)
![6,6,6,6: RCB ಪರ ಭರ್ಜರಿ ದಾಖಲೆ ಬರೆದ ರಿಚಾ ಘೋಷ್ 6,6,6,6: RCB ಪರ ಭರ್ಜರಿ ದಾಖಲೆ ಬರೆದ ರಿಚಾ ಘೋಷ್](https://images.tv9kannada.com/wp-content/uploads/2025/02/richa-ghosh-rcb.jpg?w=280&ar=16:9)
![WPL 2025: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಇತಿಹಾಸ ನಿರ್ಮಿಸಿದ RCB WPL 2025: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಇತಿಹಾಸ ನಿರ್ಮಿಸಿದ RCB](https://images.tv9kannada.com/wp-content/uploads/2025/02/rcb-32.jpg?w=280&ar=16:9)
![ಧನಂಜಯ-ಧನ್ಯತಾ ಹಳದಿ ಶಾಸ್ತ್ರದ ಫೋಟೋ ಗ್ಯಾಲರಿ; ಇಲ್ಲಿವೆ ಸಂಭ್ರಮದ ಕ್ಷಣಗಳು ಧನಂಜಯ-ಧನ್ಯತಾ ಹಳದಿ ಶಾಸ್ತ್ರದ ಫೋಟೋ ಗ್ಯಾಲರಿ; ಇಲ್ಲಿವೆ ಸಂಭ್ರಮದ ಕ್ಷಣಗಳು](https://images.tv9kannada.com/wp-content/uploads/2025/02/daali-dhananjaya-marriage-6.jpg?w=280&ar=16:9)
![ಶ್ರೀಗಳು ಸನ್ನೆ ಮಾಡಿದ್ರೆ ಸಾಗುತ್ತೆ ರಥ: ಬೂದಿ ಬಸವೇಶ್ವರ ರಥೋತ್ಸವದ ವಿಶೇಷ ಶ್ರೀಗಳು ಸನ್ನೆ ಮಾಡಿದ್ರೆ ಸಾಗುತ್ತೆ ರಥ: ಬೂದಿ ಬಸವೇಶ್ವರ ರಥೋತ್ಸವದ ವಿಶೇಷ](https://images.tv9kannada.com/wp-content/uploads/2025/02/boodibasaveshwara.jpg?w=280&ar=16:9)
![Weekly Horoscope: ವಾರ ಭವಿಷ್ಯ: ಫೆ 16 ರಿಂದ 22 ರವರೆಗೆ ವಾರ ಭವಿಷ್ಯ Weekly Horoscope: ವಾರ ಭವಿಷ್ಯ: ಫೆ 16 ರಿಂದ 22 ರವರೆಗೆ ವಾರ ಭವಿಷ್ಯ](https://images.tv9kannada.com/wp-content/uploads/2025/02/astrology-5.jpg?w=280&ar=16:9)
![Horoscope: ಕೌಟುಂಬಿಕ ಜೀವನದಲ್ಲಿ ಅಹಂಕಾರಕ್ಕೆ ಅವಕಾಶ ನೀಡಬೇಡಿ Horoscope: ಕೌಟುಂಬಿಕ ಜೀವನದಲ್ಲಿ ಅಹಂಕಾರಕ್ಕೆ ಅವಕಾಶ ನೀಡಬೇಡಿ](https://images.tv9kannada.com/wp-content/uploads/2025/02/zodiac-3.jpg?w=280&ar=16:9)
![Daily Horoscope: ಆರ್ಥಿಕವಾಗಿ ಸ್ಥಿರತೆ ಪಡೆಯಲು ಹೊಸ ಮಾರ್ಗಗಳ ಹುಡುಕಾಟ Daily Horoscope: ಆರ್ಥಿಕವಾಗಿ ಸ್ಥಿರತೆ ಪಡೆಯಲು ಹೊಸ ಮಾರ್ಗಗಳ ಹುಡುಕಾಟ](https://images.tv9kannada.com/wp-content/uploads/2025/02/kannada-horoscope-1.jpg?w=280&ar=16:9)
![Horoscope Today 16 February: ಉದ್ಯೋಗದಲ್ಲಿ ಪ್ರೇಮಾಂಕುರ, ಮನೆಯವರ ಭೀತಿ Horoscope Today 16 February: ಉದ್ಯೋಗದಲ್ಲಿ ಪ್ರೇಮಾಂಕುರ, ಮನೆಯವರ ಭೀತಿ](https://images.tv9kannada.com/wp-content/uploads/2025/02/astrologytoday.jpg?w=280&ar=16:9)
![ಕೊಲೆ ಬೆದರಿಕೆ ಬರುತ್ತಿದೆ, ಭಯವಾಗುತ್ತಿದೆ; ರಣವೀರ್ ಅಲ್ಲಾಹಬಾಡಿಯಾ ಕೊಲೆ ಬೆದರಿಕೆ ಬರುತ್ತಿದೆ, ಭಯವಾಗುತ್ತಿದೆ; ರಣವೀರ್ ಅಲ್ಲಾಹಬಾಡಿಯಾ](https://images.tv9kannada.com/wp-content/uploads/2025/02/ranveer-allahbadia.jpg?w=280&ar=16:9)
![ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ](https://images.tv9kannada.com/wp-content/uploads/2025/02/shivalinge-gowda-1.jpg?w=280&ar=16:9)
![ಡಾಲಿ-ಧನ್ಯತಾ ಮದುವೆಗೆ ಪರೋಕ್ಷ ಕಾರಣ ಸತೀಶ್ ನೀನಾಸಂ, ಗೆಳೆಯನ ಹಾರೈಕೆ ಹೀಗಿತ ಡಾಲಿ-ಧನ್ಯತಾ ಮದುವೆಗೆ ಪರೋಕ್ಷ ಕಾರಣ ಸತೀಶ್ ನೀನಾಸಂ, ಗೆಳೆಯನ ಹಾರೈಕೆ ಹೀಗಿತ](https://images.tv9kannada.com/wp-content/uploads/2025/02/dhananjay-satish.jpg?w=280&ar=16:9)
![ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್ಪಿಪಿ ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್ಪಿಪಿ](https://images.tv9kannada.com/wp-content/uploads/2025/02/jayalalitha-and-spp-kiran.jpg?w=280&ar=16:9)
![LIVE: ಡಾಲಿ ಧನಂಜಯ್-ಧನ್ಯತಾ ವಿವಾಹ ಆರತಕ್ಷತೆ: ನೇರ ಪ್ರಸಾರ LIVE: ಡಾಲಿ ಧನಂಜಯ್-ಧನ್ಯತಾ ವಿವಾಹ ಆರತಕ್ಷತೆ: ನೇರ ಪ್ರಸಾರ](https://images.tv9kannada.com/wp-content/uploads/2025/02/dhanyatha-dhananjay-live.jpg?w=280&ar=16:9)
![ಮದುವೆ ಆರತಕ್ಷತೆ ಸೆಟ್ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ ಮದುವೆ ಆರತಕ್ಷತೆ ಸೆಟ್ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ](https://images.tv9kannada.com/wp-content/uploads/2025/02/reception-set.jpg?w=280&ar=16:9)
![ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ](https://images.tv9kannada.com/wp-content/uploads/2025/02/hd-devegowda-13.jpg?w=280&ar=16:9)
![ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ](https://images.tv9kannada.com/wp-content/uploads/2025/02/dhanyatha-dhananjay-food.jpg?w=280&ar=16:9)
![2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್ಎನ್ಎಲ್;ಜ್ಯೋತಿರಾದಿತ್ಯ ಸಿಂಧಿಯಾ 2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್ಎನ್ಎಲ್;ಜ್ಯೋತಿರಾದಿತ್ಯ ಸಿಂಧಿಯಾ](https://images.tv9kannada.com/wp-content/uploads/2025/02/jyotiraditya-scindia-2.jpg?w=280&ar=16:9)
![ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ](https://images.tv9kannada.com/wp-content/uploads/2025/02/rudrappa-lamani.jpg?w=280&ar=16:9)
![ಕಾಂಗ್ರೆಸ್ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ ಕಾಂಗ್ರೆಸ್ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ](https://images.tv9kannada.com/wp-content/uploads/2025/02/kn-rajanna-15.jpg?w=280&ar=16:9)