ಶಿವಮೊಗ್ಗದಲ್ಲಿ ಸೀತಾರಾಮರ ಕಲ್ಯಾಣೋತ್ಸವ: ತುಂಗಾ ನದಿಯಲ್ಲಿ ಜರುಗಿದ ತೆಪ್ಪೋತ್ಸವ, ಫೋಟೋಸ್ ನೋಡಿ
ಶಿವಮೊಗ್ಗದ ತುಂಗಾ ನದಿಯಲ್ಲಿ ಸೀತಾರಾಮ ಕಲ್ಯಾಣೋತ್ಸವದ ಅಂಗವಾಗಿ ಅದ್ಧೂರಿ ತೆಪ್ಪೋತ್ಸವ ನಡೆಯಿತು. ಸೀತೆ, ರಾಮ, ಲಕ್ಷ್ಮಣ ಮತ್ತು ಆಂಜನೇಯರ ವಿಗ್ರಹಗಳನ್ನು ಅಲಂಕರಿಸಲಾಗಿತ್ತು. ತೆಪ್ಪವನ್ನು ಪುಷ್ಪ ಮತ್ತು ದೀಪಗಳಿಂದ ಅಲಂಕರಿಸಲಾಗಿತ್ತು. ನದಿಯಲ್ಲಿ ಐದು ಪ್ರದಕ್ಷಿಣೆ ಹಾಕಲಾಯಿತು. ಸಾವಿರಾರು ಭಕ್ತರು ಈ ದೃಶ್ಯವನ್ನು ಕಣ್ತುಂಬಿಕೊಂಡರು. ವಿದ್ಯುತ್ ಅಲಂಕಾರವು ಉತ್ಸವಕ್ಕೆ ಮತ್ತಷ್ಟು ವೈಭವ ತಂದಿತ್ತು.
Updated on: Jan 22, 2025 | 2:16 PM

ಸೀತಾರಾಮರ ಕಲ್ಯಾಣೋತ್ಸವದ ಅಂಗವಾಗಿ ಶಿವಮೊಗ್ಗದಲ್ಲಿ ವಿಜೃಂಭಣೆಯಿಂದ ತೆಪ್ಪೋತ್ಸವ ಜರುಗಿತು. ತುಂಗಾ ನದಿಯಲ್ಲಿ ನಡೆದ ತೆಪ್ಪೋತ್ಸವ ಎಲ್ಲರ ಗಮನ ಸೆಳೆಯಿತು. ತಲೆಮಾರುಗಳಿಂದ ಬಂದಿರುವ ಸಂಪ್ರದಾಯಗಳನ್ನು ಚಾಚು ತಪ್ಪದೇ ಆಚರಿಸಿಕೊಂಡು ಬರಲಾಗುತ್ತಿದೆ.

ಸೀತಾರಾಮರ ಕಲ್ಯಾಣೋತ್ಸವದ ಅಂಗವಾಗಿ ತೆಪ್ಪೋತ್ಸವ ಸಂಬಂಧ ಸೀತೆ, ರಾಮ, ಲಕ್ಷ್ಮಣ ಮತ್ತು ಆಂಜನೇಯನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ರಾಮ, ಲಕ್ಷ್ಮಣ, ಸೀತೆ ಮತ್ತು ಆಂಜನೆಯನ್ನು ವಿಶೇಷ ಅಲಂಕಾರವನ್ನು ಕಣ್ತುಂಬಿಕೊಳ್ಳಲು ದೇಗುಲದ ಬಳಿ ಭಕ್ತ ಸಾಗರವೇ ಸೇರಿತ್ತು. ತೆಪ್ಪೋತ್ಸವ ಸಂಬಂಧ ವಿದ್ಯುತ್ ಅಲಂಕಾರ ಮಾಡಲಾಗಿತ್ತು.

ಶಿವಮೊಗ್ಗ ನಗರದ ತುಂಗಾ ನದಿ ತಟದಲ್ಲಿರುವ ದೇವಸ್ಥಾನದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಸೀತಾ ಕಲ್ಯಾಣೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು. ಮಂಗಳವಾರ ಸಂಜೆಯಿಂದ ಆರಂಭವಾದ ತೆಪ್ಪೋತ್ಸವ ರಾತ್ರಿವರೆಗೂ ಸಡಗರದಿಂದ ನಡೆಯಿತು.

ಸೀತೆ, ರಾಮ, ಲಕ್ಷ್ಮಣ ಮತ್ತು ಆಂಜನೇಯನ ವಿಗ್ರಹಗಳಿಗೆ ವಿಶೇಷ ಪೂಜೆ ನರೆವೇರಿತು. ತೆಪ್ಪೋತ್ಸವ ಪ್ರಯುಕ್ತ ತೆಪ್ಪವನ್ನು ಪುಷ್ಪದಿಂದ ಅಲಂಕೃತಗೊಳಿಸಲಾಗಿತ್ತು. ದೀಪಗಳಿಂದ ತೆಪ್ಪವನ್ನು ಅಲಂಕರಿಸಲಾಗಿತ್ತು. ದೇವಸ್ಥಾನ ಮತ್ತು ಕೋಟೆ ರಸ್ತೆಯ ಬೀದಿಗಳನ್ನು ಸಂಪೂರ್ಣವಾಗಿ ವಿದ್ಯುತ್ ದೀಪಗಳಿಂದ ಗೊಂಗೊಳಿಸುತ್ತಿತ್ತು.

ಸಾವಿರಾರು ಭಕ್ತರು ಈ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು. ತೆಪ್ಪದಲ್ಲಿ ಸೀತೆ, ರಾಮ, ಲಕ್ಷ್ಮಣ ಮತ್ತು ಆಂಜನೇಯ ವಿಗ್ರಹಗಳನ್ನು ಇಟ್ಟುಕೊಂಡು ನದಿಯ ಮದ್ಯದಲ್ಲಿ 5 ಪ್ರದಕ್ಷಣೆ ಹಾಕಲಾಯಿತು. ತೆಪ್ಪದಲ್ಲಿರುವ ಅರ್ಚಕರು ತುಂಗೆಗೆ ಬಾಗಿನ ಅರ್ಪಿಸಿ ವಾಪಸ್ಸಾದರು. ಬಾಗಿನ ಅರ್ಪಿಸಿದ ಬಳಿಕ ತೆಪ್ಪೋತ್ಸವಕ್ಕೆ ತೆರೆ ಬಿದ್ದಿತು.



















