ಧಾರವಾಡಕ್ಕೆ ಬಂದು ಹಳೆ ಗೆಳೆಯರ ಭೇಟಿಯಾದ ತೆಲುಗಿನ ಖ್ಯಾತ ನಟ ಶ್ರೀಕಾಂತ್

|

Updated on: Sep 15, 2024 | 1:44 PM

Actor Srikanth: ತೆಲುಗಿನ ಜನಪ್ರಿಯ ನಟ ಶ್ರೀಕಾಂತ್ ಹಠಾತ್ತನೆ ಧಾರವಾಡಕ್ಕೆ ಭೇಟಿ ನೀಡಿದ್ದರು. ಇಲ್ಲಿ ಬಂದು ಹಳೆಯ ಗೆಳೆಯರನ್ನು ಭೇಟಿಯಾಗಿ ಕೆಲ ಕಾಲ ಸಮಯ ಕಳೆದರು. ಅಂದಹಾಗೆ ಶ್ರೀಕಾಂತ್ ಹುಟ್ಟೂರು ಗಂಗಾವತಿ.

1 / 7
ತೆಲುಗು ಚಿತ್ರರಂಗದ ಜನಪ್ರಿಯ ಹಾಗೂ ಹಿರಿಯ ನಟ ಶ್ರೀಕಾಂತ್. ಪೋಷಕ ನಟನಾಗಿ, ನಾಯಕನಾಗಿ, ವಿಲನ್ ಆಗಿ ಎಲ್ಲ ರೀತಿಯ ಪಾತ್ರಗಳಲ್ಲಿಯೂ ಶ್ರೀಕಾಂತ್ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ತೆಲುಗು ಚಿತ್ರರಂಗದ ಜನಪ್ರಿಯ ಹಾಗೂ ಹಿರಿಯ ನಟ ಶ್ರೀಕಾಂತ್. ಪೋಷಕ ನಟನಾಗಿ, ನಾಯಕನಾಗಿ, ವಿಲನ್ ಆಗಿ ಎಲ್ಲ ರೀತಿಯ ಪಾತ್ರಗಳಲ್ಲಿಯೂ ಶ್ರೀಕಾಂತ್ ನಟಿಸಿ ಸೈ ಎನಿಸಿಕೊಂಡಿದ್ದಾರೆ.

2 / 7
ತೆಲುಗು ಚಿತ್ರರಂಗದಲ್ಲಿ ದಶಕಗಳಿಂದಲೂ ಕೆಲಸ ಮಾಡಿರುವ ಶ್ರೀಕಾಂತ್​ಗೆ ಕರ್ನಾಟಕದೊಂದಿಗೆ ಅವಿನಾಭಾವ ಬಂಧವಿದೆ. ಅಸಲಿಗೆ ಈ ಶ್ರೀಕಾಂತ್ ಮೂಲತಃ ಕರ್ನಾಟಕದವರೇ.

ತೆಲುಗು ಚಿತ್ರರಂಗದಲ್ಲಿ ದಶಕಗಳಿಂದಲೂ ಕೆಲಸ ಮಾಡಿರುವ ಶ್ರೀಕಾಂತ್​ಗೆ ಕರ್ನಾಟಕದೊಂದಿಗೆ ಅವಿನಾಭಾವ ಬಂಧವಿದೆ. ಅಸಲಿಗೆ ಈ ಶ್ರೀಕಾಂತ್ ಮೂಲತಃ ಕರ್ನಾಟಕದವರೇ.

3 / 7
ಶ್ರೀಕಾಂತ್ ಅಲಿಯಾಸ್ ಮೇಕ ಶ್ರೀಕಾಂತ್ ಹುಟ್ಟಿದ್ದು ಕರ್ನಾಟಕದ ಗಂಗಾವತಿಯಲ್ಲಿ. ಅವರ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣಗಳೆಲ್ಲ ನಡೆದಿದ್ದು ಧಾರವಾಡದಲ್ಲಿಯೆ.

ಶ್ರೀಕಾಂತ್ ಅಲಿಯಾಸ್ ಮೇಕ ಶ್ರೀಕಾಂತ್ ಹುಟ್ಟಿದ್ದು ಕರ್ನಾಟಕದ ಗಂಗಾವತಿಯಲ್ಲಿ. ಅವರ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣಗಳೆಲ್ಲ ನಡೆದಿದ್ದು ಧಾರವಾಡದಲ್ಲಿಯೆ.

4 / 7
ಇದೀಗ ತಮ್ಮ ಹಳೆಯ ಗೆಳೆಯರನ್ನು ಭೇಟಿ ಆಗಲು ಶ್ರೀಕಾಂತ್ ಧಾರವಾಡಕ್ಕೆ ಬಂದಿದ್ದರು. ಧಾರವಾಡದ ಸಿಎಸ್‌ಐ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದಿದ್ದರು ನಟ ಶ್ರೀಕಾಂತ್.

ಇದೀಗ ತಮ್ಮ ಹಳೆಯ ಗೆಳೆಯರನ್ನು ಭೇಟಿ ಆಗಲು ಶ್ರೀಕಾಂತ್ ಧಾರವಾಡಕ್ಕೆ ಬಂದಿದ್ದರು. ಧಾರವಾಡದ ಸಿಎಸ್‌ಐ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದಿದ್ದರು ನಟ ಶ್ರೀಕಾಂತ್.

5 / 7
ಕಾಲೇಜು ಕಲಿಯುವ ಸಮಯದಲ್ಲಿ ಶ್ರೀಕಾಂತ್​ಗೆ ಧಾರವಾಡದಲ್ಲಿ ಹಲವು ಗೆಳೆಯರಿದ್ದರು, ಅವರನ್ನೆಲ್ಲ ಇಂದು ಶ್ರೀಕಾಂತ್ ಭೇಟಿಯಾದರು. ಅವರೊಟ್ಟಿಗೆ ಬಹಳ ಕಾಲ ಸಮಯವನ್ನು ಸಹ ಕಳೆದರು.

ಕಾಲೇಜು ಕಲಿಯುವ ಸಮಯದಲ್ಲಿ ಶ್ರೀಕಾಂತ್​ಗೆ ಧಾರವಾಡದಲ್ಲಿ ಹಲವು ಗೆಳೆಯರಿದ್ದರು, ಅವರನ್ನೆಲ್ಲ ಇಂದು ಶ್ರೀಕಾಂತ್ ಭೇಟಿಯಾದರು. ಅವರೊಟ್ಟಿಗೆ ಬಹಳ ಕಾಲ ಸಮಯವನ್ನು ಸಹ ಕಳೆದರು.

6 / 7
ಧಾರವಾಡದ ಗೆಳೆಯ ದಿನೇಶ ಶೆಟ್ಟಿ ಮನೆಯಲ್ಲಿ ಉಪಹಾರ ಸೇವನೆ ಮಾಡಿದರು ಶ್ರೀಕಾಂತ್, ದಿನೇಶ್ ಶೆಟ್ಟಿ ಉಪವನ ಹೊಟೇಲ್ ಮಾಲೀಕರಾಗಿದ್ದಾರೆ.

ಧಾರವಾಡದ ಗೆಳೆಯ ದಿನೇಶ ಶೆಟ್ಟಿ ಮನೆಯಲ್ಲಿ ಉಪಹಾರ ಸೇವನೆ ಮಾಡಿದರು ಶ್ರೀಕಾಂತ್, ದಿನೇಶ್ ಶೆಟ್ಟಿ ಉಪವನ ಹೊಟೇಲ್ ಮಾಲೀಕರಾಗಿದ್ದಾರೆ.

7 / 7
ಶ್ರೀಕಾಂತ್ ತಮ್ಮ ಹುಟ್ಟೂರಾದ ಗಂಗಾವತಿಗೆ ಹೋಗುವ ಸಮಯದಲ್ಲಿ ಧಾರವಾಡಕ್ಕೆ ಭೇಟಿ ನೀಡಿದ್ದರು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಗಂಗಾವತಿಗೆ ತೆರಳಿದ ಶ್ರೀಕಾಂತ್.

ಶ್ರೀಕಾಂತ್ ತಮ್ಮ ಹುಟ್ಟೂರಾದ ಗಂಗಾವತಿಗೆ ಹೋಗುವ ಸಮಯದಲ್ಲಿ ಧಾರವಾಡಕ್ಕೆ ಭೇಟಿ ನೀಡಿದ್ದರು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಗಂಗಾವತಿಗೆ ತೆರಳಿದ ಶ್ರೀಕಾಂತ್.