AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಮಿತಿಮೀರಿದ ಪ್ರವಾಸಿಗರ ಹುಚ್ಚಾಟ! ಅಪಾಯಕಾರಿ ಬಂಡೆಯನ್ನೇರಿ ರೀಲ್ಸ್

ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಈಗ ಆವುಲಬೆಟ್ಟದತ್ತ ಮುಖ ಮಾಡಿದ್ದಾರೆ. ಇಲ್ಲಿರುವ ಬೆಟ್ಟದಲ್ಲಿರುವ ಕೊಕ್ಕರೆಯಾಕಾರದ ಅಪಾಯಕಾರಿ ಬಂಡೆಯ ಮೇಲೇರಿ, ರೀಲ್ಸ್ ಮಾಡಿಕೊಳ್ಳಲು ಮುಗಿಬಿದ್ದಾರೆ. ಇದು ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ತಲೆ ನೋವು ಆಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Sep 01, 2024 | 8:01 PM

Share
ಅದು ಪ್ರಕೃತಿ ಸೌಂದರ್ಯದ ರಮಣೀಯ ತಾಣ. ಭೂಮಿಯಿಂದ ಸಾವಿರಾರು ಅಡಿಗಳ ಎತ್ತರದಲ್ಲಿದೆ. ಇನ್ನು ಅಲ್ಲಿಗೆ ಹೋಗಿ ಅಲ್ಲಿರುವ ಬಂಡೆಯೊಂದರ ಮೇಲೆ, ಒಂದೇ ಒಂದು ಸೆಲ್ಫಿ ಅಥವಾ ರೀಲ್ಸ್ ಮಾಡಿದ್ರೆ ಅದೇನೂ ಆನಂದವೊ ಏನೊ! ಅಪಾಯವನ್ನ ಮೀರಿ ಹುಚ್ಚಾಟ ನಡೆಸಿದ್ದಾರೆ. 

ಅದು ಪ್ರಕೃತಿ ಸೌಂದರ್ಯದ ರಮಣೀಯ ತಾಣ. ಭೂಮಿಯಿಂದ ಸಾವಿರಾರು ಅಡಿಗಳ ಎತ್ತರದಲ್ಲಿದೆ. ಇನ್ನು ಅಲ್ಲಿಗೆ ಹೋಗಿ ಅಲ್ಲಿರುವ ಬಂಡೆಯೊಂದರ ಮೇಲೆ, ಒಂದೇ ಒಂದು ಸೆಲ್ಫಿ ಅಥವಾ ರೀಲ್ಸ್ ಮಾಡಿದ್ರೆ ಅದೇನೂ ಆನಂದವೊ ಏನೊ! ಅಪಾಯವನ್ನ ಮೀರಿ ಹುಚ್ಚಾಟ ನಡೆಸಿದ್ದಾರೆ. 

1 / 6
ಸುರಕ್ಷತೆಯನ್ನು ಧಿಕ್ಕರಿಸಿ, ಹೀಗೆ ಪ್ರವಾಸಿಗರು ಮುಗಿಬಿದ್ದು ಒಂದೆ ಒಂದು ಸೆಲ್ಫಿ ಹಾಗೂ ರೀಲ್ಸ್​ಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟಿರುವುದು ಚಿಕ್ಕಬಳ್ಳಾಪುರ ತಾಲೂಕಿನ ಆವುಲಬೆಟ್ಟದಲ್ಲಿ.

ಸುರಕ್ಷತೆಯನ್ನು ಧಿಕ್ಕರಿಸಿ, ಹೀಗೆ ಪ್ರವಾಸಿಗರು ಮುಗಿಬಿದ್ದು ಒಂದೆ ಒಂದು ಸೆಲ್ಫಿ ಹಾಗೂ ರೀಲ್ಸ್​ಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟಿರುವುದು ಚಿಕ್ಕಬಳ್ಳಾಪುರ ತಾಲೂಕಿನ ಆವುಲಬೆಟ್ಟದಲ್ಲಿ.

2 / 6
ಹೌದು, ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಈಗ ಆವುಲಬೆಟ್ಟದತ್ತ ಮುಖ ಮಾಡಿದ್ದಾರೆ. ಇಲ್ಲಿರುವ ಬೆಟ್ಟದಲ್ಲಿರುವ ಕೊಕ್ಕರೆಯಾಕಾರದ ಅಪಾಯಕಾರಿ ಬಂಡೆಯ ಮೇಲೇರಿ, ರೀಲ್ಸ್ ಮಾಡಿಕೊಳ್ಳಲು ಮುಗಿಬಿದ್ದಾರೆ.

ಹೌದು, ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಈಗ ಆವುಲಬೆಟ್ಟದತ್ತ ಮುಖ ಮಾಡಿದ್ದಾರೆ. ಇಲ್ಲಿರುವ ಬೆಟ್ಟದಲ್ಲಿರುವ ಕೊಕ್ಕರೆಯಾಕಾರದ ಅಪಾಯಕಾರಿ ಬಂಡೆಯ ಮೇಲೇರಿ, ರೀಲ್ಸ್ ಮಾಡಿಕೊಳ್ಳಲು ಮುಗಿಬಿದ್ದಾರೆ.

3 / 6
ಸ್ವಲ್ಪ ಯಮಾರಿದರೂ ಪ್ರಾಣಕ್ಕೆ ಕುತ್ತು ಬರುತ್ತದೆ. ಆದರೂ ಯಾವುದಕ್ಕೂ ಡೋಂಟ್ ಕೇರ್ ಅಂತಿದ್ದಾರೆ. ಇದ್ರಿಂದ ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ತಲೆ ನೋವು ಆಗಿದೆ. ಬಂಡೆಯ ಕೆಳಗೆ ಸಾವಿರಾರು ಅಡಿ ಪಾತಾಳವಿದೆ, ಅಪ್ಪಿ ತಪ್ಪಿ ಮೇಲಿಂದ ಬಿದ್ದರೆ ಹೆಣ ಸಹ ಸಿಗದಷ್ಟು ದುರ್ಗಮ ಅರಣ್ಯ ಹಾಗೂ ಕಲ್ಲು ಬಂಡೆಗಳಿವೆ.

ಸ್ವಲ್ಪ ಯಮಾರಿದರೂ ಪ್ರಾಣಕ್ಕೆ ಕುತ್ತು ಬರುತ್ತದೆ. ಆದರೂ ಯಾವುದಕ್ಕೂ ಡೋಂಟ್ ಕೇರ್ ಅಂತಿದ್ದಾರೆ. ಇದ್ರಿಂದ ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ತಲೆ ನೋವು ಆಗಿದೆ. ಬಂಡೆಯ ಕೆಳಗೆ ಸಾವಿರಾರು ಅಡಿ ಪಾತಾಳವಿದೆ, ಅಪ್ಪಿ ತಪ್ಪಿ ಮೇಲಿಂದ ಬಿದ್ದರೆ ಹೆಣ ಸಹ ಸಿಗದಷ್ಟು ದುರ್ಗಮ ಅರಣ್ಯ ಹಾಗೂ ಕಲ್ಲು ಬಂಡೆಗಳಿವೆ.

4 / 6
ಇನ್ನು ಜೋಡಿಗಳ ಕಥೆ ಹೇಳುವುದೇ ಬೇಡ, ಜೊತೆಗಾರ ಹತ್ತಿ ಇಳಿದ ಮೇಲೆ ತಾವು ಯಾರಿಗೇನೂ ಕಡಿಮೆ ಎಂದು ಇಲ್ಲಿಗೆ ಬರುವ ಯುವತಿಯರು ಹರಸಾಹಸ ಪಟ್ಟು ಎತ್ತರದ ಗ್ರೀಲ್​​ನಲ್ಲಿ ತೂರಿ ಇಳಿಯಲು ತಿಣುಕಾಡುತ್ತಾರೆ. ಈ ಹಿಂದೆ ಸಹ ಕೆಲವರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ.

ಇನ್ನು ಜೋಡಿಗಳ ಕಥೆ ಹೇಳುವುದೇ ಬೇಡ, ಜೊತೆಗಾರ ಹತ್ತಿ ಇಳಿದ ಮೇಲೆ ತಾವು ಯಾರಿಗೇನೂ ಕಡಿಮೆ ಎಂದು ಇಲ್ಲಿಗೆ ಬರುವ ಯುವತಿಯರು ಹರಸಾಹಸ ಪಟ್ಟು ಎತ್ತರದ ಗ್ರೀಲ್​​ನಲ್ಲಿ ತೂರಿ ಇಳಿಯಲು ತಿಣುಕಾಡುತ್ತಾರೆ. ಈ ಹಿಂದೆ ಸಹ ಕೆಲವರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ.

5 / 6
ರಮಣೀಯ ಪ್ರಕೃತಿ ಸೌಂದರ್ಯ ಸವಿಯಲು ಎಂದು ಬೆಟ್ಟಕ್ಕೆ ಬರುವ ಜೋಡಿಗಳು, ಆವುಲಬೆಟ್ಟದ ತುತ್ತ ತುದಿ ತಲುಪುತ್ತಿದ್ದಂತೆ, ಕೊಕ್ಕರೆಯಾಕಾರದ ಬಂಡೆಯನ್ನೇರಿ ಫೋಟೋ ವಿಡಿಯೋಗಾಗಿ ಸರ್ಕಸ್ ಮಾಡ್ತಿದ್ದಾರೆ. ಆಗಬಾರದ ಅನಾವುತಗಳು ಆಗುವುದಕ್ಕೂ ಮುನ್ನ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.

ರಮಣೀಯ ಪ್ರಕೃತಿ ಸೌಂದರ್ಯ ಸವಿಯಲು ಎಂದು ಬೆಟ್ಟಕ್ಕೆ ಬರುವ ಜೋಡಿಗಳು, ಆವುಲಬೆಟ್ಟದ ತುತ್ತ ತುದಿ ತಲುಪುತ್ತಿದ್ದಂತೆ, ಕೊಕ್ಕರೆಯಾಕಾರದ ಬಂಡೆಯನ್ನೇರಿ ಫೋಟೋ ವಿಡಿಯೋಗಾಗಿ ಸರ್ಕಸ್ ಮಾಡ್ತಿದ್ದಾರೆ. ಆಗಬಾರದ ಅನಾವುತಗಳು ಆಗುವುದಕ್ಕೂ ಮುನ್ನ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.

6 / 6
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?