- Kannada News Photo gallery The craze of tourists in Chikkaballapura Auvlabetta is too much, They are going to climb the dangerous rock and make reels, Kannada News
ಚಿಕ್ಕಬಳ್ಳಾಪುರ: ಮಿತಿಮೀರಿದ ಪ್ರವಾಸಿಗರ ಹುಚ್ಚಾಟ! ಅಪಾಯಕಾರಿ ಬಂಡೆಯನ್ನೇರಿ ರೀಲ್ಸ್
ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಈಗ ಆವುಲಬೆಟ್ಟದತ್ತ ಮುಖ ಮಾಡಿದ್ದಾರೆ. ಇಲ್ಲಿರುವ ಬೆಟ್ಟದಲ್ಲಿರುವ ಕೊಕ್ಕರೆಯಾಕಾರದ ಅಪಾಯಕಾರಿ ಬಂಡೆಯ ಮೇಲೇರಿ, ರೀಲ್ಸ್ ಮಾಡಿಕೊಳ್ಳಲು ಮುಗಿಬಿದ್ದಾರೆ. ಇದು ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ತಲೆ ನೋವು ಆಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
Updated on: Sep 01, 2024 | 8:01 PM

ಅದು ಪ್ರಕೃತಿ ಸೌಂದರ್ಯದ ರಮಣೀಯ ತಾಣ. ಭೂಮಿಯಿಂದ ಸಾವಿರಾರು ಅಡಿಗಳ ಎತ್ತರದಲ್ಲಿದೆ. ಇನ್ನು ಅಲ್ಲಿಗೆ ಹೋಗಿ ಅಲ್ಲಿರುವ ಬಂಡೆಯೊಂದರ ಮೇಲೆ, ಒಂದೇ ಒಂದು ಸೆಲ್ಫಿ ಅಥವಾ ರೀಲ್ಸ್ ಮಾಡಿದ್ರೆ ಅದೇನೂ ಆನಂದವೊ ಏನೊ! ಅಪಾಯವನ್ನ ಮೀರಿ ಹುಚ್ಚಾಟ ನಡೆಸಿದ್ದಾರೆ.

ಸುರಕ್ಷತೆಯನ್ನು ಧಿಕ್ಕರಿಸಿ, ಹೀಗೆ ಪ್ರವಾಸಿಗರು ಮುಗಿಬಿದ್ದು ಒಂದೆ ಒಂದು ಸೆಲ್ಫಿ ಹಾಗೂ ರೀಲ್ಸ್ಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟಿರುವುದು ಚಿಕ್ಕಬಳ್ಳಾಪುರ ತಾಲೂಕಿನ ಆವುಲಬೆಟ್ಟದಲ್ಲಿ.

ಹೌದು, ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಈಗ ಆವುಲಬೆಟ್ಟದತ್ತ ಮುಖ ಮಾಡಿದ್ದಾರೆ. ಇಲ್ಲಿರುವ ಬೆಟ್ಟದಲ್ಲಿರುವ ಕೊಕ್ಕರೆಯಾಕಾರದ ಅಪಾಯಕಾರಿ ಬಂಡೆಯ ಮೇಲೇರಿ, ರೀಲ್ಸ್ ಮಾಡಿಕೊಳ್ಳಲು ಮುಗಿಬಿದ್ದಾರೆ.

ಸ್ವಲ್ಪ ಯಮಾರಿದರೂ ಪ್ರಾಣಕ್ಕೆ ಕುತ್ತು ಬರುತ್ತದೆ. ಆದರೂ ಯಾವುದಕ್ಕೂ ಡೋಂಟ್ ಕೇರ್ ಅಂತಿದ್ದಾರೆ. ಇದ್ರಿಂದ ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ತಲೆ ನೋವು ಆಗಿದೆ. ಬಂಡೆಯ ಕೆಳಗೆ ಸಾವಿರಾರು ಅಡಿ ಪಾತಾಳವಿದೆ, ಅಪ್ಪಿ ತಪ್ಪಿ ಮೇಲಿಂದ ಬಿದ್ದರೆ ಹೆಣ ಸಹ ಸಿಗದಷ್ಟು ದುರ್ಗಮ ಅರಣ್ಯ ಹಾಗೂ ಕಲ್ಲು ಬಂಡೆಗಳಿವೆ.

ಇನ್ನು ಜೋಡಿಗಳ ಕಥೆ ಹೇಳುವುದೇ ಬೇಡ, ಜೊತೆಗಾರ ಹತ್ತಿ ಇಳಿದ ಮೇಲೆ ತಾವು ಯಾರಿಗೇನೂ ಕಡಿಮೆ ಎಂದು ಇಲ್ಲಿಗೆ ಬರುವ ಯುವತಿಯರು ಹರಸಾಹಸ ಪಟ್ಟು ಎತ್ತರದ ಗ್ರೀಲ್ನಲ್ಲಿ ತೂರಿ ಇಳಿಯಲು ತಿಣುಕಾಡುತ್ತಾರೆ. ಈ ಹಿಂದೆ ಸಹ ಕೆಲವರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ.

ರಮಣೀಯ ಪ್ರಕೃತಿ ಸೌಂದರ್ಯ ಸವಿಯಲು ಎಂದು ಬೆಟ್ಟಕ್ಕೆ ಬರುವ ಜೋಡಿಗಳು, ಆವುಲಬೆಟ್ಟದ ತುತ್ತ ತುದಿ ತಲುಪುತ್ತಿದ್ದಂತೆ, ಕೊಕ್ಕರೆಯಾಕಾರದ ಬಂಡೆಯನ್ನೇರಿ ಫೋಟೋ ವಿಡಿಯೋಗಾಗಿ ಸರ್ಕಸ್ ಮಾಡ್ತಿದ್ದಾರೆ. ಆಗಬಾರದ ಅನಾವುತಗಳು ಆಗುವುದಕ್ಕೂ ಮುನ್ನ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.









