AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮತ್ತೆ ಗುಡುಗು, ಸಿಡಿಲಿನ ಆರ್ಭಟ…ಇನ್ನೆಷ್ಟು ದಿನ ಮಳೆ? ಇಲ್ಲಿದೆ ಡಿಟೇಲ್ಸ್

ಬೇಸಿಗೆ ಆದರೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಗೇನೂ ಕಡಿಮೆ ಇಲ್ಲ. ಎರಡು ದಿನ ಆಯ್ತು ಸಂಜೆ ಆಗುತ್ತಿದ್ದಂತೆಯೇ ವರುಣ ಎಂಟ್ರಿಕೊಡುತ್ತಿದ್ದು, ಜನರನ್ನು ಬೇಗ ಮನೆ ಸೇರುವಂತೆ ಮಾಡುತ್ತಿದ್ದಾನೆ. ನಿನ್ನೆಯೂ (ಮೇ 01) ಸಂಜೆ ಹೊತ್ತಿಗೆ ವರುಣ ಅಬ್ಬರ ಜೋರಾಗಿತ್ತು. ಇಂದು(ಮೇ 02) ಸಹ ಮಳೆ ಅರ್ಭಟ ಜೋರಾಗಿದೆ. ಹಾಗಾದ್ರೆ, ಈ ಮಳೆ ಇನ್ನೆಷ್ಟು ದಿನ ಇರಲಿದೆ? ಹವಾಮಾನ ಇಲಾಖೆ ಏನು ಮುನ್ಸೂಚನೆ ನೀಡಿದೆ ಎನ್ನುವ ವಿವರ ಇಲ್ಲಿದೆ.

TV9 Web
| Updated By: ರಮೇಶ್ ಬಿ. ಜವಳಗೇರಾ

Updated on: May 02, 2025 | 8:29 PM

ಬೆಂಗಳೂರಿನಲ್ಲಿ  ಹಲವೆಡೆ ಮತ್ತೆ ಇಂದು(ಮೇ 02) ಮಳೆಯಾಗಿದ್ದು, ಬೈಕ್ ಸವಾರರು, ವಾಹನ ಚಾಲಕರು ಕೊಂಚ ಸಮಸ್ಯೆ ಎದುರಿಸುವಂತೆ ಆಗಿದೆ. ಎಲ್ಲರೂ ಕೆಲಸದಿಂದ ಮನೆಗೆ ಹೋಗುವ ಸಮಯಕ್ಕೆ ಮಳೆ ಬರುತ್ತಿದ್ದರಿಂದ ನಗರದ ರಸ್ತೆಗಳಲ್ಲಿ ಟ್ರಾಫಿಕ್ ಹೆಚ್ಚಾಗಿ ಆಗುತ್ತಿದ್ದು ಗಂಟೆಗಟ್ಟಲೇ ನಿಲ್ಲುವಂತೆ ಆಗುತ್ತಿದೆ.

ಬೆಂಗಳೂರಿನಲ್ಲಿ ಹಲವೆಡೆ ಮತ್ತೆ ಇಂದು(ಮೇ 02) ಮಳೆಯಾಗಿದ್ದು, ಬೈಕ್ ಸವಾರರು, ವಾಹನ ಚಾಲಕರು ಕೊಂಚ ಸಮಸ್ಯೆ ಎದುರಿಸುವಂತೆ ಆಗಿದೆ. ಎಲ್ಲರೂ ಕೆಲಸದಿಂದ ಮನೆಗೆ ಹೋಗುವ ಸಮಯಕ್ಕೆ ಮಳೆ ಬರುತ್ತಿದ್ದರಿಂದ ನಗರದ ರಸ್ತೆಗಳಲ್ಲಿ ಟ್ರಾಫಿಕ್ ಹೆಚ್ಚಾಗಿ ಆಗುತ್ತಿದ್ದು ಗಂಟೆಗಟ್ಟಲೇ ನಿಲ್ಲುವಂತೆ ಆಗುತ್ತಿದೆ.

1 / 8
ಹೆಬ್ಬಾಳ, ಸಂಜಯನಗರ, ಆರ್.ಟಿ ನಗರ, ಗಂಗಾನಗರ, ಮೇಖ್ರಿ ಸರ್ಕಲ್, ಶಿವಾನಂದ ಸರ್ಕಲ್, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಗಾಂಧಿನಗರ, ಕೆ.ಆರ್ ಸರ್ಕಲ್, ಕಾರ್ಪೋರೇಶನ್ ಹಾಗೂ ಮಾರ್ಕೆಟ್​ ಸೇರಿದಂತೆ ಸುತ್ತಮುತ್ತ ಭಾರೀ ಮಳೆಯಾಗಿದೆ.

ಹೆಬ್ಬಾಳ, ಸಂಜಯನಗರ, ಆರ್.ಟಿ ನಗರ, ಗಂಗಾನಗರ, ಮೇಖ್ರಿ ಸರ್ಕಲ್, ಶಿವಾನಂದ ಸರ್ಕಲ್, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಗಾಂಧಿನಗರ, ಕೆ.ಆರ್ ಸರ್ಕಲ್, ಕಾರ್ಪೋರೇಶನ್ ಹಾಗೂ ಮಾರ್ಕೆಟ್​ ಸೇರಿದಂತೆ ಸುತ್ತಮುತ್ತ ಭಾರೀ ಮಳೆಯಾಗಿದೆ.

2 / 8
ಮಳೆ ನೀರು ನಿಂತಿರುವುದರಿಂದ ಕಾಫಿ ಡೇ ಯಲಹಂಕದಿಂದ ವಿಮಾನ ನಿಲ್ದಾಣದ ಕಡೆಗೆ ಹಾಗೂ ಸಂತೆ ಸರ್ಕಲ್ ಯಿಂದ ಕೋಗಿಲು ಕ್ರಾಸ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.

ಮಳೆ ನೀರು ನಿಂತಿರುವುದರಿಂದ ಕಾಫಿ ಡೇ ಯಲಹಂಕದಿಂದ ವಿಮಾನ ನಿಲ್ದಾಣದ ಕಡೆಗೆ ಹಾಗೂ ಸಂತೆ ಸರ್ಕಲ್ ಯಿಂದ ಕೋಗಿಲು ಕ್ರಾಸ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.

3 / 8
ಮಳೆ ನೀರು  ನಿಂತಿರುವುದರಿಂದ ಬೆಳ್ಳಹಳ್ಳಿಯಿಂದ  ಭಾರತೀಯ ನಗರ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಳೆ ನೀರು ನಿಂತಿರುವುದರಿಂದ ಬೆಳ್ಳಹಳ್ಳಿಯಿಂದ ಭಾರತೀಯ ನಗರ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

4 / 8
ಮಳೆ ನೀರು  ನಿಂತಿರುವುದರಿಂದ ಲುಲು ಮಾಲ್‌ನಿಂದ ಮೆಜಾಸ್ಟಿಕ್  ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ವಾಹನ ಸವಾರರಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಮಳೆ ನೀರು ನಿಂತಿರುವುದರಿಂದ ಲುಲು ಮಾಲ್‌ನಿಂದ ಮೆಜಾಸ್ಟಿಕ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ವಾಹನ ಸವಾರರಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

5 / 8
ಭಾರೀ ಗಾಳಿ ಮಳೆಯಿಂದಾಗಿ  ಮರ ಬಿದ್ದಿದೆ. ಇದರಿಂದ ಶೇಷಾದ್ರಿಪುರಂನಿಂದ ಜಟ್ಕಾ ಸ್ಟ್ಯಾಂಡ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.

ಭಾರೀ ಗಾಳಿ ಮಳೆಯಿಂದಾಗಿ ಮರ ಬಿದ್ದಿದೆ. ಇದರಿಂದ ಶೇಷಾದ್ರಿಪುರಂನಿಂದ ಜಟ್ಕಾ ಸ್ಟ್ಯಾಂಡ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.

6 / 8
ಬೆಂಗಳೂರಿಗೆ ಮುಂದಿನ ಮೂರು ಗಂಟೆ ಆರೆಂಜ್ ಅಲರ್ಟ್ ನೀಡಲಾಗಿದೆ. ಗಾಳಿ, ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿಗೆ ಮುಂದಿನ ಮೂರು ಗಂಟೆ ಆರೆಂಜ್ ಅಲರ್ಟ್ ನೀಡಲಾಗಿದೆ. ಗಾಳಿ, ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

7 / 8
ರಾಜ್ಯಾದ್ಯಂತ ಮುಂದಿನ 5 ದಿನ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಅಲ್ಲಲ್ಲಿ ತುಂತುರು ಮಳೆ, ಸಾಧಾರಣ ಮಳೆ ಸಾಧ್ಯತೆ ಇದ್ದು, ಬೆಂಗಳೂರಿನಲ್ಲಿ ಮುಂದಿನ 3 ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯಾದ್ಯಂತ ಮುಂದಿನ 5 ದಿನ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಅಲ್ಲಲ್ಲಿ ತುಂತುರು ಮಳೆ, ಸಾಧಾರಣ ಮಳೆ ಸಾಧ್ಯತೆ ಇದ್ದು, ಬೆಂಗಳೂರಿನಲ್ಲಿ ಮುಂದಿನ 3 ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

8 / 8
Follow us