Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲಿ ನದಿ-ಸರೋವರದ ನೀರು ತಂಪಾಗಿರುತ್ತದೆ; ಚಳಿಗಾಲದಲ್ಲಿ ಬಿಸಿಯಾಗಿರುತ್ತದೆ; ಇದಕ್ಕೆ ಕಾರಣವೇನು?

Knowledge: ನೀರಿನ ತಾಪಮಾನವು ಅದರ ಸುತ್ತಲಿನ ತಾಪಮಾನಕ್ಕೆ ವಿರುದ್ಧವಾಗಿರುವುದು ಏಕೆ ಎಂಬುದು ಕುತೂಹಲಕರ ಪ್ರಶ್ನೆ. ಚಳಿಗಾಲದಲ್ಲಿ, ಗಾಳಿ ತಂಪಾಗಿದ್ದರೂ ನೀರು ಬೆಚ್ಚಗಿರುತ್ತದೆ. ಬೇಸಿಗೆಯಲ್ಲಿ ಬಿಸಿ ಗಾಳಿಯಿದ್ದರೂ ನೀರು ತಂಪಿರುತ್ತದೆ. ಇದಕ್ಕೆ ಕಾರಣ, ವಾತಾವರಣವು ನೀರಿನ ಮೂಲದ ಮೇಲೆ ಪರಿಣಾಮ ಬೀರುವುದಿಲ್ಲ. ಅದು ಒಂದೇ ರೀತಿ ಇರುತ್ತದೆ. ಹೀಗಾಗಿಯೇ ನಮಗೆ ಚಳಿ ಎನ್ನಿಸಿದಾಗ ನೀರು ಬೆಚ್ಚಗಿದ್ದಂತೆ ಅನ್ನಿಸುತ್ತದೆ ಮತ್ತು ಹೊರಗೆ ಬಿಸಿಲಿನ ವಾತಾವರಣ ಇದ್ದಾಗ ನೀರು ತಣ್ಣಗಿದೆ ಎನ್ನಿಸುವುದು.

shivaprasad.hs
|

Updated on: Apr 07, 2022 | 9:45 AM

ನೀರಿನ ತಾಪಮಾನವು ಅದರ ಸುತ್ತಲಿನ ತಾಪಮಾನಕ್ಕೆ ವಿರುದ್ಧವಾಗಿರುವುದು ಏಕೆ ಎಂಬುದು ಕುತೂಹಲಕರ ಪ್ರಶ್ನೆ. ಚಳಿಗಾಲದಲ್ಲಿ, ಗಾಳಿ ತಂಪಾಗಿದ್ದರೂ ನೀರು ಬೆಚ್ಚಗಿರುತ್ತದೆ. ಬೇಸಿಗೆಯಲ್ಲಿ ಬಿಸಿ ಗಾಳಿಯಿದ್ದರೂ ನೀರು ತಂಪಿರುತ್ತದೆ. ಇದಕ್ಕೆ ಕಾರಣ ಏನು? ವಿಜ್ಞಾನಿಗಳು ಏನನ್ನುತ್ತಾರೆ? ಇಲ್ಲಿದೆ ಉತ್ತರ

1 / 5
ಬೇಸಿಗೆಯಲ್ಲೂ ನೀರು ಏಕೆ ತಂಪಾಗಿರುತ್ತದೆ? ಸರಳವಾಗಿ ಹೇಳುವುದಾದರೆ, ನೀರು ಬಿಸಿ ಮಾಡದೆಯೇ ಗರಿಷ್ಠ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಬಿಸಿಮಾಡಲು ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಆದ್ದರಿಂದ ನದಿಗಳು ಮತ್ತು ಸರೋವರಗಳ ನೀರು ಬೇಸಿಗೆಯಲ್ಲಿ ತಂಪಾಗಿರುತ್ತದೆ. ಪ್ರಪಂಚದ ಅನೇಕ ದೇಶಗಳಲ್ಲಿ ತಾಪಮಾನ ಹೆಚ್ಚಾದಾಗ ಜನರು ನದಿಗಳು ಮತ್ತು ಸಾಗರಗಳ ದಡದಲ್ಲಿ ವಿಹರಿಸುವುದು ಇದಕ್ಕೆ ಉದಾಹರಣೆ.

2 / 5
ಚಳಿಗಾಲದಲ್ಲಿ ನೀರು ಏಕೆ ಬೆಚ್ಚಗಿರುತ್ತದೆ ಎಂದರೆ, ನೀರಿನ ತಾಪಮಾನವು ಅದರ ಅಣುಗಳ ವೇಗವನ್ನು ಅವಲಂಬಿಸಿರುತ್ತದೆ. ನೀರಿನ ಉಷ್ಣತೆಯು ಹೆಚ್ಚಾದಾಗ ಅದರ ಅಣುಗಳು ಬೇಗ ಚಲಿಸುತ್ತವೆ. ಆದರೆ ನೀರಿನ ಅಣುಗಳ ಚಲನೆ ನಿಧಾನವಾದಾಗ, ಅವು ಒಟ್ಟಿಗೆ ಅಂಟಿಕೊಳ್ಳುತ್ತವೆ. ಹೀಗಾದಾಗ ಶಾಖ ಅಂದರೆ ನೀರಿನ ಉಷ್ಣ ಸಾಮರ್ಥ್ಯವು ಹೆಚ್ಚಾಗಿರುತ್ತದೆ. ಇದರಿಂದಾಗಿ ಬಾಹ್ಯ ಪರಿಸರವು ನೀರಿನ ತಾಪಮಾನದ ಮೇಲೆ ಪರಿಣಾಮ ಬೀರುವುದಿಲ್ಲ.

3 / 5
ಒಂದು ವರದಿಯ ಪ್ರಕಾರ, ವಾತಾವರಣವು ನೀರಿನ ಮೂಲದ ಮೇಲೆ ಪರಿಣಾಮ ಬೀರುವುದಿಲ್ಲ. ಅದು ಒಂದೇ ರೀತಿ ಇರುತ್ತದೆ. ಹೀಗಾಗಿಯೇ ನಮಗೆ ಚಳಿ ಎನ್ನಿಸಿದಾಗ ನೀರು ಬೆಚ್ಚಗಿದ್ದಂತೆ ಅನ್ನಿಸುತ್ತದೆ ಮತ್ತು ಹೊರಗೆ ಬಿಸಿಲಿನ ವಾತಾವರಣ ಇದ್ದಾಗ ನೀರು ತಣ್ಣಗಿದೆ ಎನ್ನಿಸುವುದು.

4 / 5
ಚಳಿಗಾಲದಲ್ಲಿ ನದಿಗಳು ಮತ್ತು ಸರೋವರಗಳಲ್ಲಿನ ನೀರಿನ ಮೇಲ್ಮೈಯಿಂದ ಹೊಗೆ ಏಕೆ ಹೊರಬರುತ್ತದೆ? ಚಳಿಗಾಲದಲ್ಲಿ ಸಹ ನದಿ ಮತ್ತು ಸಮುದ್ರದ ನೀರು ಘನೀಕರಿಸುವ ಬಿಂದುವಿಗಿಂತ ತಂಪಾಗಿರುವುದಿಲ್ಲ. ಆದ್ದರಿಂದ ಸಮುದ್ರದ ಮೇಲ್ಮೈ ಮೇಲಿನ ತಂಪಾದ ಗಾಳಿಗಿಂತ ಬೆಚ್ಚಗಿರುತ್ತದೆ. ಈ ಬಿಸಿ ಮತ್ತು ಶೀತ ವಾತಾವರಣದಿಂದಾಗಿ, ಬಹಳಷ್ಟು ನೀರು ಆವಿಯಾಗುತ್ತದೆ. ದೂರದಿಂದ ನೋಡಿದಾಗ ಇದು ಗಾಳಿಯಂತೆ ಕಾಣುತ್ತದೆ.

5 / 5
Follow us
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು