AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗರ ಪಂಚಮಿಯಂದೇ ಯಾದಗಿರಿಯ ಕೊಂಡಮ್ಮ ದೇವಿಯ ಜಾತ್ರೆ: ವಿಷಕಾರಿ ಚೇಳುಗಳೊಂದಿಗೆ ಭಕ್ತರ ಆಟ

ನಾಗರ ಪಂಚಮಿ ದಿನದಂದು ನಾಗಪ್ಪನ ಮೂರ್ತಿಗೆ ಹಾಲೆರುವುದು ಕಾಣುತ್ತೇವೆ. ಆದರೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಮಾತ್ರ ವಿಷಕಾರಿ ಚೇಳುಗಳಿಗೆ ಪೂಜೆ ಸಲ್ಲಿಸುತ್ತಾರೆ. ಅದಕ್ಕೆ ಪ್ರಮುಖ ಕಾರಣವೇ ಈ ಗ್ರಾಮದ ಬೆಟ್ಟದ ಮೇಲಿರುವ ಕೊಂಡಮ್ಮ ದೇವಿ. ವಿಷ ಜಂತುಗಳ ಜೊತೆ ಚಿಣ್ಣರು, ಮಹಿಳೆಯರು, ದೊಡ್ಡವರು ಸಂಭ್ರಮ ಪಡುತ್ತಾರೆ.

ಅಮೀನ್​ ಸಾಬ್​
| Edited By: |

Updated on: Aug 09, 2024 | 8:00 PM

Share
ನಾಗರ ಪಂಚಮಿ ದಿನ ನಾಗಪ್ಪನ ಮೂರ್ತಿಗೆ ಹಾಲೆರುವುದು ಕಾಣುತ್ತೇವೆ. ಆದರೆ ಪಂಚಮಿ ದಿನವೇ ಆ ಗ್ರಾಮದಲ್ಲಿ ಚೇಳುಗಳನ್ನು ಪೂಜಿಸಿ ಆರಾಧಿಸುತ್ತಾರೆ. ನೀಜ ಚೇಳುಗಳನ್ನು ಕೈಮೇಲೆ, ಮೈಮೇಲೆ, ಬಾಯಲ್ಲಿ ಹಾಕಿಕೊಂಡು ಜಾತ್ರೆಯಲ್ಲಿ ಸಂಭ್ರಮ ಪಡುತ್ತಾರೆ. ವಿಷ ಜಂತುಗಳ ಜೊತೆ ಯಾವುದೇ ಭಯವಿಲ್ಲದೇ ಚಿಣ್ಣರು, ಮಹಿಳೆಯರು, ದೊಡ್ಡವರು ಸಂಭ್ರಮ ಪಡುತ್ತಾರೆ.

ನಾಗರ ಪಂಚಮಿ ದಿನ ನಾಗಪ್ಪನ ಮೂರ್ತಿಗೆ ಹಾಲೆರುವುದು ಕಾಣುತ್ತೇವೆ. ಆದರೆ ಪಂಚಮಿ ದಿನವೇ ಆ ಗ್ರಾಮದಲ್ಲಿ ಚೇಳುಗಳನ್ನು ಪೂಜಿಸಿ ಆರಾಧಿಸುತ್ತಾರೆ. ನೀಜ ಚೇಳುಗಳನ್ನು ಕೈಮೇಲೆ, ಮೈಮೇಲೆ, ಬಾಯಲ್ಲಿ ಹಾಕಿಕೊಂಡು ಜಾತ್ರೆಯಲ್ಲಿ ಸಂಭ್ರಮ ಪಡುತ್ತಾರೆ. ವಿಷ ಜಂತುಗಳ ಜೊತೆ ಯಾವುದೇ ಭಯವಿಲ್ಲದೇ ಚಿಣ್ಣರು, ಮಹಿಳೆಯರು, ದೊಡ್ಡವರು ಸಂಭ್ರಮ ಪಡುತ್ತಾರೆ.

1 / 6
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಮಾತ್ರ ಇಂದು ವಿಷಕಾರಿ ಚೇಳುಗಳಿಗೆ ಪೂಜೆ ಸಲ್ಲಿಸುತ್ತಾರೆ. ಅದಕ್ಕೆ ಪ್ರಮುಖ ಕಾರಣವೇ ಈ ಗ್ರಾಮದ ಬೆಟ್ಟದ ಮೇಲಿರುವ ಕೊಂಡಮ್ಮ ದೇವಿ. ನಾಗರ ಪಂಚಮಿಯಂದು ಈ ಕೊಂಡಮ್ಮ ದೇವಿಯ ಜಾತ್ರೆ ನಡೆಯುತ್ತೆ. ಈ ಜಾತ್ರೆಯ ವಿಶೇಷವೇ ಚೇಳುಗಳನ್ನ ಕೈಯಲ್ಲಿ ಹಿಡಿದು ಆಟ ಆಡುವುದು.

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಮಾತ್ರ ಇಂದು ವಿಷಕಾರಿ ಚೇಳುಗಳಿಗೆ ಪೂಜೆ ಸಲ್ಲಿಸುತ್ತಾರೆ. ಅದಕ್ಕೆ ಪ್ರಮುಖ ಕಾರಣವೇ ಈ ಗ್ರಾಮದ ಬೆಟ್ಟದ ಮೇಲಿರುವ ಕೊಂಡಮ್ಮ ದೇವಿ. ನಾಗರ ಪಂಚಮಿಯಂದು ಈ ಕೊಂಡಮ್ಮ ದೇವಿಯ ಜಾತ್ರೆ ನಡೆಯುತ್ತೆ. ಈ ಜಾತ್ರೆಯ ವಿಶೇಷವೇ ಚೇಳುಗಳನ್ನ ಕೈಯಲ್ಲಿ ಹಿಡಿದು ಆಟ ಆಡುವುದು.

2 / 6
ಆಶ್ಚರ್ಯ ಪಡುವ ವಿಚಾರವೆಂದರೆ ಇಲ್ಲಿ ವಿಷಕಾರಿ ಚೇಳುಗಳು ಯಾರಿಗೂ ಕಚ್ಚುವುದಿಲ್ಲ. ಇದೆ ಕಾರಣದಿಂದ ಈ ದೇವಿಯ ದರ್ಶನಕ್ಕೆ ಬಂದ ಭಕ್ತರು ಈ ಬೆಟ್ಟದ ಮೇಲೆ ಕಲ್ಲುಗಳನ್ನ ಕಿತ್ತುವ ಮೂಲಕ ಚೇಳುಗಳನ್ನ ಹುಡುಕುತ್ತಾರೆ. ಈ ದೇವಸ್ಥಾನ ಸುತ್ತಮುತ್ತಲಿರುವ ಬೆಟ್ಟದ ಮೇಲೆ ಎಲ್ಲೇ ಕಲ್ಲುಗಳನ್ನ ಕಿತ್ತಿದ್ರು ಚೇಳುಗಳು ಕೈಗೆ ಸಿಗುತ್ತವೆ. ಇದೆ ಕಾರಣದಿಂದ ದೇವಿ ಜಾತ್ರೆಗಿಂತ ಇಲ್ಲಿ ಚೇಳುಗಳನ್ನ ಹಿಡಿಯಲು ಭಕ್ತರು ಬರುತ್ತಾರೆ.

ಆಶ್ಚರ್ಯ ಪಡುವ ವಿಚಾರವೆಂದರೆ ಇಲ್ಲಿ ವಿಷಕಾರಿ ಚೇಳುಗಳು ಯಾರಿಗೂ ಕಚ್ಚುವುದಿಲ್ಲ. ಇದೆ ಕಾರಣದಿಂದ ಈ ದೇವಿಯ ದರ್ಶನಕ್ಕೆ ಬಂದ ಭಕ್ತರು ಈ ಬೆಟ್ಟದ ಮೇಲೆ ಕಲ್ಲುಗಳನ್ನ ಕಿತ್ತುವ ಮೂಲಕ ಚೇಳುಗಳನ್ನ ಹುಡುಕುತ್ತಾರೆ. ಈ ದೇವಸ್ಥಾನ ಸುತ್ತಮುತ್ತಲಿರುವ ಬೆಟ್ಟದ ಮೇಲೆ ಎಲ್ಲೇ ಕಲ್ಲುಗಳನ್ನ ಕಿತ್ತಿದ್ರು ಚೇಳುಗಳು ಕೈಗೆ ಸಿಗುತ್ತವೆ. ಇದೆ ಕಾರಣದಿಂದ ದೇವಿ ಜಾತ್ರೆಗಿಂತ ಇಲ್ಲಿ ಚೇಳುಗಳನ್ನ ಹಿಡಿಯಲು ಭಕ್ತರು ಬರುತ್ತಾರೆ.

3 / 6
ನಾಗರ ಪಂಚಮಿ ದಿನ ನಡೆಯುವ ಈ ಜಾತ್ರೆಗೆ ಸಾವಿರಾರು ಭಕ್ತರು ಬರುತ್ತಾರೆ. ಕೇವಲ ಒಂದು ದಿನ ನಡೆಯುವ ಈ ಜಾತ್ರೆಗೆ ಸಾವಿರಾರು ಮಂದಿ ಭಕ್ತರು ಬಂದು ಮೊದಲು ಕೊಂಡಮ್ಮ ದೇವಿಯ ದರ್ಶನವನ್ನ ಪಡೆಯುತ್ತಾರೆ. ನಂತರ ಈ ಬೆಟ್ಟದ ಮೇಲೆ ಚೇಳುಗಳಿಗಾಗಿ ಹುಡುಕಾಟ ನಡೆಸುತ್ತಾರೆ. ಇನ್ನು ದೇವಿ ಪವಾಡ ಹೇಗಿದೆ ಅಂದ್ರೆ ಇಲ್ಲಿನ ವಿಷಕಾರಿ ಚೇಳುಗಳು ಇದುವರೆಗೂ ಯಾರಿಗೂ ಕಚ್ಚಿರುವ ಉದಾಹರಣೆನೇ ಇಲ್ಲ.

ನಾಗರ ಪಂಚಮಿ ದಿನ ನಡೆಯುವ ಈ ಜಾತ್ರೆಗೆ ಸಾವಿರಾರು ಭಕ್ತರು ಬರುತ್ತಾರೆ. ಕೇವಲ ಒಂದು ದಿನ ನಡೆಯುವ ಈ ಜಾತ್ರೆಗೆ ಸಾವಿರಾರು ಮಂದಿ ಭಕ್ತರು ಬಂದು ಮೊದಲು ಕೊಂಡಮ್ಮ ದೇವಿಯ ದರ್ಶನವನ್ನ ಪಡೆಯುತ್ತಾರೆ. ನಂತರ ಈ ಬೆಟ್ಟದ ಮೇಲೆ ಚೇಳುಗಳಿಗಾಗಿ ಹುಡುಕಾಟ ನಡೆಸುತ್ತಾರೆ. ಇನ್ನು ದೇವಿ ಪವಾಡ ಹೇಗಿದೆ ಅಂದ್ರೆ ಇಲ್ಲಿನ ವಿಷಕಾರಿ ಚೇಳುಗಳು ಇದುವರೆಗೂ ಯಾರಿಗೂ ಕಚ್ಚಿರುವ ಉದಾಹರಣೆನೇ ಇಲ್ಲ.

4 / 6
ಇಂದು ಮಾತ್ರ ಈ ಸ್ಥಳದಲ್ಲಿ ಚೇಳುಗಳು ಹುಡುಕಿದ್ರೆ ಸಿಗುತ್ತವೆ. ನಾಳೆ ಬಂದು ಹುಡುಕಿದರೆ ಒಂದೇ ಒಂದು ಚೇಳು ಸಿಗೋದಿಲ್ಲ ಎನ್ನುವುದು ಇಲ್ಲಿಗೆ ಬಂದ ಭಕ್ತರ ಮಾತಾಗಿದ್ದು, ಇದು ನಿಜ ಕೂಡ ಹೌದು.

ಇಂದು ಮಾತ್ರ ಈ ಸ್ಥಳದಲ್ಲಿ ಚೇಳುಗಳು ಹುಡುಕಿದ್ರೆ ಸಿಗುತ್ತವೆ. ನಾಳೆ ಬಂದು ಹುಡುಕಿದರೆ ಒಂದೇ ಒಂದು ಚೇಳು ಸಿಗೋದಿಲ್ಲ ಎನ್ನುವುದು ಇಲ್ಲಿಗೆ ಬಂದ ಭಕ್ತರ ಮಾತಾಗಿದ್ದು, ಇದು ನಿಜ ಕೂಡ ಹೌದು.

5 / 6
ಕೊಂಡಮ್ಮ ದೇವಿಯ ದರ್ಶನಕ್ಕೆ ಬಂದ ಭಕ್ತರು ಚೇಳಿನ ಜೊತೆ ಆಟವಾಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಇದು ಪವಾಡ ಅಂತಾನೆ ಹೇಳಬಹುದು.

ಕೊಂಡಮ್ಮ ದೇವಿಯ ದರ್ಶನಕ್ಕೆ ಬಂದ ಭಕ್ತರು ಚೇಳಿನ ಜೊತೆ ಆಟವಾಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಇದು ಪವಾಡ ಅಂತಾನೆ ಹೇಳಬಹುದು.

6 / 6
Ameen Sab
Ameen Sab

ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದೆನೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿದ್ದೆನೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೆನೆ.. ನನ್ನ ಹವ್ಯಾಸ ಕ್ರಿಕೆಟ್ ಆಡೋದು,ಮಾನವೀಯ ಮೌಲ್ಯ ಮೌಲ್ಯಯುಳ್ಳ ಸುದ್ದಿಗಳನ್ನ ಮಾಡೋದು.

Read More
Follow Us
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್