ಶರದ್ ಪವಾರ್ ಆಯೋಜಿಸುವ ಭೋಜನ ಕೂಟಕ್ಕೆ ಹಾಜರಾಗುವುದಿಲ್ಲ: ದೇವೇಂದ್ರ ಫಡ್ನವಿಸ್

ಎರಡು ಪ್ರಮುಖ ಕಾರ್ಯಕ್ರಮಗಳನ್ನು ಒಂದರ ನಂತರ ಒಂದರಂತೆ ಆಯೋಜಿಸುತ್ತಿರುವುದರಿಂದ ಇಡೀ ದಿನ ತುಂಬಾ ಬ್ಯುಸಿ. ಆದ್ದರಿಂದ, ಈ ಬಾರಿ ನಿಮ್ಮ ತುರ್ತು ಆಹ್ವಾನವನ್ನು ಸ್ವೀಕರಿಸಲು ನನಗೆ ಸಾಧ್ಯವಾಗುವುದಿಲ್ಲ. ಮತ್ತೊಮ್ಮೆ ಧನ್ಯವಾದಗಳು ಎಂದು ದೇವೇಂದ್ರ ಫಡ್ನವಿಸ್, ಶರದ್ ಪವಾರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಶರದ್ ಪವಾರ್ ಆಯೋಜಿಸುವ ಭೋಜನ ಕೂಟಕ್ಕೆ ಹಾಜರಾಗುವುದಿಲ್ಲ: ದೇವೇಂದ್ರ ಫಡ್ನವಿಸ್
ದೇವೇಂದ್ರ ಫಡ್ನವಿಸ್
ರಶ್ಮಿ ಕಲ್ಲಕಟ್ಟ

Updated on: Mar 01, 2024 | 7:08 PM

ಮುಂಬೈ ಮಾರ್ಚ್ 01: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಅವರ ಬಾರಾಮತಿ ನಿವಾಸದಲ್ಲಿ ಶನಿವಾರ ಮಧ್ಯಾಹ್ನ ಭೋಜನ ಏರ್ಪಡಿಸಿದ್ದು,ಇದರಲ್ಲಿ ಭಾಗಿಯಾಗುವುದಿಲ್ಲ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis )ಹೇಳಿದ್ದಾರೆ. “ನೀವು ಬರೆದ ಪತ್ರ ಮತ್ತು ನಿಮ್ಮಿಂದ ಭೋಜನಕೂಟದ ಆಹ್ವಾನವನ್ನು ನಾನು ಸ್ವೀಕರಿಸಿದ್ದೇನೆ. ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪ್ರಯತ್ನದ ನಂತರ ಬಾರಾಮತಿಯಲ್ಲಿ ನಮೋ ಮಹಾರೋಜ್​​​ಗಾರ್ ಮೇಳವನ್ನು ಆಯೋಜಿಸುತ್ತಿರುವುದು ನಿಮಗೆ ತಿಳಿದಿದೆಯಲ್ಲವೇ, ಬಾರಾಮತಿಯಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಛತ್ರಪತಿ ಸಂಭಾಜಿ ಮಹಾರಾಜರ ಸ್ಮಾರಕದ ಭೂಮಿಪೂಜೆಯನ್ನು  ಬುದ್ರುಕ್ ಮತ್ತು ತುಳಜಾಪುರದಲ್ಲಿ ನಡೆಸಲಾಗುವುದು. ತಕ್ಷಣವೇ ಕ್ರಾಂತಿಕಾರಿ ಲಾಹುಜಿ ವಸ್ತಾದ್ ಸಾಳ್ವೆ ಅವರ ಸ್ಮಾರಕದ ಭೂಮಿಪೂಜೆಯನ್ನು ನಿಗದಿಪಡಿಸಲಾಗಿದೆ.

“ಎರಡು ಪ್ರಮುಖ ಕಾರ್ಯಕ್ರಮಗಳನ್ನು ಒಂದರ ನಂತರ ಒಂದರಂತೆ ಆಯೋಜಿಸುತ್ತಿರುವುದರಿಂದ ಇಡೀ ದಿನ ತುಂಬಾ ಬ್ಯುಸಿ. ಆದ್ದರಿಂದ, ಈ ಬಾರಿ ನಿಮ್ಮ ತುರ್ತು ಆಹ್ವಾನವನ್ನು ಸ್ವೀಕರಿಸಲು ನನಗೆ ಸಾಧ್ಯವಾಗುವುದಿಲ್ಲ. ಮತ್ತೊಮ್ಮೆ ಧನ್ಯವಾದಗಳು ಎಂದು ಶರದ್ ಪವಾರ್ ಅವರಿಗೆ ಬರೆದ ಪತ್ರದಲ್ಲಿ ಫಡ್ನವಿಸ್ ತಿಳಿಸಿದ್ದಾರೆ.

83 ವರ್ಷದ ನಾಯಕ, ಶರದ್ ಪವಾರ್, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಸೋದರಳಿಯ ಅಜಿತ್ ಪವಾರ್ ಸೇರಿದಂತೆ ಅವರ ಇಬ್ಬರು ಡಿಸಿಎಂಗಳನ್ನು ಮಾರ್ಚ್ 2 ರಂದು ಊಟಕ್ಕೆ ಆಹ್ವಾನಿಸಿದ್ದರು. “ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಸಿಎಂ ಮೊದಲ ಬಾರಿಗೆ ಬಾರಾಮತಿಗೆ ಬರುತ್ತಿದ್ದಾರೆ. ಬಾರಾಮತಿಯಲ್ಲಿ ನಮೋ ಮಹಾರೋಜ್​​​ಗಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿರುವ ಭೇಟಿಯ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಆದ್ದರಿಂದ, ಕಾರ್ಯಕ್ರಮದ ನಂತರ ಅವರ ಇತರ ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ನನ್ನ ನಿವಾಸದಲ್ಲಿ ಊಟಕ್ಕೆ ಆಹ್ವಾನವನ್ನು ನೀಡಲು ನಾನು ಬಯಸುತ್ತೇನೆ ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ಬಂಗಾಳದ ಟಿಎಂಸಿ ಸರ್ಕಾರದ ಅಂತ್ಯಕ್ಕೆ ನಾಂದಿ ಹಾಡಲಿದೆ: ನರೇಂದ್ರ ಮೋದಿ

ಬುಧವಾರ, ಪವಾರ್ ಅವರು ಬಾರಾಮತಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ದಿನವಿಡೀ ಸಭೆ ನಡೆಸಿದ್ದರು, ಲೋಕಸಭೆ ಚುನಾವಣೆಗೆ ಸಿದ್ಧತೆ ಕುರಿತು ಚರ್ಚಿಸಲು ಹಿರಿಯ ನಾಯಕರ ಪುತ್ರಿ ಸುಪ್ರಿಯಾ ಸುಳೆ ಅವರು ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಅವರ ಸವಾಲನ್ನು ಎದುರಿಸಲು ಸಿದ್ಧರಾಗಿದ್ದಾರೆ.

ಕಳೆದ ತಿಂಗಳು, ಶರದ್ ಪವಾರ್ ಅವರು ಸ್ಥಾಪಿಸಿದ ಪಕ್ಷದ ಹೆಸರು ಮತ್ತು ಚಿಹ್ನೆ ತಮ್ಮ ಸೋದರಳಿಯ ಅಜಿತ್ ಪವಾರ್‌ ಬಣಕ್ಕೆ ಹೋಗಿತ್ತು.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us