ಆರ್​ಎಸ್​ಎಸ್​ ತಂಟೆಗೆ ಬಂದರೆ ಹುಷಾರ್; ಸಿದ್ದರಾಮಯ್ಯಗೆ ಕಂದಾಯ ಸಚಿವ ಆರ್ ಅಶೋಕ್ ಎಚ್ಚರಿಕೆ

| Updated By: sandhya thejappa

Updated on: Jun 05, 2022 | 2:49 PM

ಹನುಮಂತನ ಬಾಲಕ್ಕೆ ಬೆಂಕಿ ಬಿದ್ದು ಲಂಕೆಯೇ ಸುಟ್ಟೋಯ್ತು. ಆರ್​ಎಸ್​ಎಸ್​ ಶಕ್ತಿ ಏನು ಎಂದು ಇಡೀ ಪ್ರಪಂಚಕ್ಕೆ ಗೊತ್ತು. ಪ್ಯಾಂಟು, ಚಡ್ಡಿ ಸುಡುವುದನ್ನೆಲ್ಲಾ ಬಿಟ್ಟು ಬಿಡಿ.

ಆರ್​ಎಸ್​ಎಸ್​ ತಂಟೆಗೆ ಬಂದರೆ ಹುಷಾರ್; ಸಿದ್ದರಾಮಯ್ಯಗೆ ಕಂದಾಯ ಸಚಿವ ಆರ್ ಅಶೋಕ್ ಎಚ್ಚರಿಕೆ
ಆರ್​.ಅಶೋಕ್​
Follow us on

ಬೆಂಗಳೂರು: ಆರ್​ಎಸ್​​ಎಸ್​ (RSS) ಚಡ್ಡಿ ಸುಡುವ ಅಭಿಯಾನದ ಬಗ್ಗೆ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ (Siddaramaiah) ಕಂದಾಯ ಸಚಿವ ಆರ್ ಅಶೋಕ್ (R Ashok) ಎಚ್ಚರಿಕೆ ನೀಡಿದ್ದಾರೆ. ಆರ್​ಎಸ್​ಎಸ್​ ತಂಟೆಗೆ ಬಂದರೆ ಹುಷಾರ್ ಎಂದಿರುವ ಅಶೋಕ್, ಈ ರೀತಿ ಸುಡೋರೆಲ್ಲ ಮನೆ ಸುಟ್ಟಿಕೊಂಡಿದ್ದಾರೆ. ಹನುಮಂತನ ಬಾಲಕ್ಕೆ ಬೆಂಕಿ ಬಿದ್ದು ಲಂಕೆಯೇ ಸುಟ್ಟೋಯ್ತು. ಆರ್​ಎಸ್​ಎಸ್​ ಶಕ್ತಿ ಏನು ಎಂದು ಇಡೀ ಪ್ರಪಂಚಕ್ಕೆ ಗೊತ್ತು. ಪ್ಯಾಂಟು, ಚಡ್ಡಿ ಸುಡುವುದನ್ನೆಲ್ಲಾ ಬಿಟ್ಟು ಬಿಡಿ. ಆರ್​ಎಸ್​ಎಸ್​​ ತಂಟೆಗೆ ಬಂದರೆ ನೀವು ಸುಟ್ಟು ಹೋಗುತ್ತೀರಿ ಎಂದರು.

ನೀವೇ ಬಾದಾಮಿ ಕ್ಷೇತ್ರದಲ್ಲಿ ಸ್ವಲ್ಪ ಅಂತರದಿಂದ ಗೆದ್ದಿದ್ದೀರಿ. ಈಗ ಆರ್​ಎಸ್​ಎಸ್​​ ಬಗ್ಗೆ ಟೀಕಿಸಿದ್ರೆ ಚುನಾವಣೆಯಲ್ಲಿ ಸೋಲುತ್ತೀರಿ. ಕೇವಲ ಸೋನಿಯಾ ಗಾಂಧಿಯನ್ನ ಮೆಚ್ಚಿಸುವುದಕ್ಕೆ ಹೋಗಿ, ನೀವೇ ಚುನಾವಣೆಯಲ್ಲಿ ಸುಟ್ಟು ಹೋಗುತ್ತೀರಿ ಹುಷಾರ್ ಎಂದು ಸಿದ್ದರಾಮಯ್ಯಗೆ ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ರಾಜ್ಯಸಭಾ ಚುನಾವಣೆಯಲ್ಲಿ ಮೂರನೇ ಅಭ್ಯರ್ಥಿ ಗೆಲ್ಲುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವರು, ನಮ್ಮ ಬಳಿ ಅಗತ್ಯ ಮತಗಳು ಇರೋದಕ್ಕೆ ಮೂರನೇ ಅಭ್ಯರ್ಥಿ ಹಾಕಿದ್ದೇವೆ. ನೂರಕ್ಕೂ ನೂರರಷ್ಟು ಮೂರು ಅಭ್ಯರ್ಥಿಗಳು ಆಯ್ಕೆ ಆಗುತ್ತಾರೆ. ಈಗಾಗಲೇ ಅಭ್ಯರ್ಥಿಗಳನ್ನು ಗೆಲ್ಲಿಸಲು ನಮ್ಮ ನಾಯಕರೆಲ್ಲರೂ ಸೇರಿ ಫೀಲ್ಡಿಗೆ ಇಳಿದಿದ್ದೇವೆ. ಇಲ್ಲಿ ಕಾಂಗ್ರೆಸ್, ಜೆಡಿಎಸ್ ಅನಾವಶ್ಯಕವಾಗಿ ಅಭ್ಯರ್ಥಿಗಳು ಹಾಕಿದ್ದಾರೆ. ಒಂದು ಕಡೆ ನಿತ್ಯ ಇಬ್ಬರು ಕಿತ್ತಾಡುತ್ತಾರೆ. ಇನ್ನೊಂದು ಕಡೆ ಅವರು ಇವರನ್ನು ಮತ ಕೇಳಿದ್ದೇವೆ ಅಂತಾರೆ. ಕೊನೆಗೆ ಇದು ಯಾವುದು ವರ್ಕೌಟ್ ಆಗಲ್ಲ ಎಂದು ಹೇಳಿದರು.

ಇದನ್ನೂ ಓದಿ
Coffee Benefits: ಕಾಫಿ ಕುಡಿಯುವುದರಿಂದ ನಿಮ್ಮ ಜೀವಿತಾವಧಿ ಹೆಚ್ಚುತ್ತಂತೆ!
ಎಷ್ಟೇ ಪ್ರಚಾರ ಮಾಡಿದ್ರೂ ಮಂಕಾಗಿದೆ ‘ಸಾಮ್ರಾಟ್​ ಪೃಥ್ವಿರಾಜ್​’ ಕಲೆಕ್ಷನ್​; 2ನೇ ದಿನದ ಗಳಿಕೆ ಎಷ್ಟು?
Sanjana Anand Photos: ಸಂಜನಾ ಆನಂದ್; ‘ವಿಂಡೋ ಸೀಟ್’ ಬೆಡಗಿಯ ಕ್ಯೂಟ್​ ಫೋಟೋ ಆಲ್ಬಂ
Autobiography: ಆಧುನಿಕ ಶಕುಂತಲಾ ಕಥನ; ಅಷ್ಟು ದೇಶಗಳನ್ನು ಸುತ್ತಲು ಧೈರ್ಯ ತುಂಬಿದ್ದೇ ನನ್ನ ಬಾಲ್ಯದ ‘ಕೆಜಿಎಫ್​ ಸಂಸ್ಕೃತಿ’

ಇದನ್ನೂ ಓದಿ: Sanjana Anand Photos: ಸಂಜನಾ ಆನಂದ್; ‘ವಿಂಡೋ ಸೀಟ್’ ಬೆಡಗಿಯ ಕ್ಯೂಟ್​ ಫೋಟೋ ಆಲ್ಬಂ

ನಿಜವಾಗಿಯೂ ಮತದಾನ ನಡೆಯೋದ ಓಟ್ ಮೇಲೆ. ಮತದಾನ ವ್ಯಾಲ್ಯೂ ಮೇಲೆ. ಎರಡನೇ ಪ್ರಾಶಸ್ತ್ಯ ಮತ, ಮೂರನೇ ಪ್ರಾಶಸ್ತ್ಯ ಮತ ಮೌಲ್ಯಗಳ ಮೇಲೆ ಚುನಾವಣೆ ನಡೆಯೋದು. ನಮಗೆ 122 ಮತಗಳು ಇವೆ. ಸುಲಭವಾಗಿ ಗೆಲ್ಲುವ ವಿಶ್ವಾಸ ಇದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Sun, 5 June 22