ನಾಳೆ ವಾರಾಣಸಿಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ, ₹1,800 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ

| Updated By: ರಶ್ಮಿ ಕಲ್ಲಕಟ್ಟ

Updated on: Jul 06, 2022 | 12:33 PM

ಡಾ ಸಂಪೂರ್ಣಾನಂದ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೋದಿ ಅವರು ₹590 ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ನಾಳೆ ವಾರಾಣಸಿಗೆ ಭೇಟಿ ನೀಡಲಿದ್ದಾರೆ  ಪ್ರಧಾನಿ ಮೋದಿ, ₹1,800 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ
ನರೇಂದ್ರ ಮೋದಿ
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi)ನಾಳೆ (ಜುಲೈ 7) ವಾರಣಾಸಿಗೆ (Varanasi) ಭೇಟಿ ನೀಡಲಿದ್ದು ₹1,800 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಮೋದಿ ಅವರು ವಾರಣಾಸಿಯ ಎಲ್ ಟಿ ಕಾಲೇಜಿನಲ್ಲಿ ಅಕ್ಷಯ್ ಪಾತ್ರ ಮಿಡ್ ಡೇ ಮೀಲ್ ಕಿಚನ್(Akshay Patra Mid Day Meal Kitchen) ಉದ್ಘಾಟನೆ ಮಾಡಲಿದ್ದಾರೆ. ಈ ಅಡುಗೆ ಮನೆ ಸರಿಸುಮಾರು 1 ಲಕ್ಷ ಮಕ್ಕಳಿಗೆ ಮಧ್ಯಾಹ್ನದೂಟ ತಯಾರಿ ಮಾಡುವ ಸಾಮರ್ಥ್ಯ ಹೊಂದಿದೆ. 2.45ಕ್ಕೆ ಪ್ರಧಾನಿ ರುದ್ರಾಕ್ಷದಲ್ಲಿರುವ ಇಂಟರ್​​ನ್ಯಾಷನಲ್ ಕಾರ್ಪೊರೇಷನ್ ಅಂಡ್ ಕನ್ವೆನ್ಶನ್ ಸೆಂಟರ್​​ಗೆ ಭೇಟಿ ನೀಡಲಿದ್ದು ಅಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಕಾರ್ಯಕ್ರಮವಾದ ಅಖಿಲ ಭಾರತೀಯ ಶಿಕ್ಷಾ ಸಮಾಗಮ ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಿ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸಂಜೆ 4 ಗಂಟೆಗೆ ಅವರು ಸಿಗ್ರಾದಲ್ಲಿರುವ ಡಾ ಸಂಪೂರ್ಣಾನಂದ ಸ್ಪೋರ್ಟ್ ಸ್ಟೇಡಿಯಂ ತಲುಪಲಿದ್ದು ಅಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಮೋದಿ ತಮ್ಮ ತವರು ಕ್ಷೇತ್ರವಾದ ವಾರಣಾಸಿಯಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಿದ್ದು ಅಲ್ಲಿನ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಡಾ ಸಂಪೂರ್ಣಾನಂದ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೋದಿ ಅವರು ₹590 ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ವಾರಣಾಸಿ ಸ್ಮಾರ್ಟ್ ಸಿಟಿ ಮತ್ತು ನಗರಾಭಿವೃದ್ಧಿ ಯೋಜನೆಗಳಡಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಾದ ನಮೋ ಘಾಟ್ ಹಂತ-1ರ ಪುನರಾಭಿವೃದ್ಧಿ, ಬೋಟ್ ಗಳಲ್ಲಿರುವ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಗಳನ್ನು ಸಿಎನ್ ಜಿ ಆಗಿ ಪರಿವರ್ತಿಸುವುದು, ಹಳೆಯ ಕಾಶಿಯ ಕಾಮೇಶ್ವರ ಮಹಾದೇವ್ ವಾರ್ಡ್‌ನ ಪುನರಾಭಿವೃದ್ಧಿ ಮತ್ತು ಹರ್ಹುವಾ, ದಾಸೆಪುರದಲ್ಲಿ 600 ಕ್ಕೂ ಹೆಚ್ಚು EWS ಫ್ಲಾಟ್‌ಗಳ ನಿರ್ಮಾಣ, ಹೊಸ ಮಾರಾಟ ವಲಯ ಮತ್ತು ಲಹರ್ತಾರಾ-ಚೌಕಾ ಘಾಟ್ ಫ್ಲೈಓವರ್ ಅಡಿಯಲ್ಲಿ ಸಿದ್ಧಪಡಿಸಲಾದ ನಗರ ಸ್ಥಳ, ದಶಾಶ್ವಮೇಧ ಘಾಟ್‌ನಲ್ಲಿ ಪ್ರವಾಸಿ ಸೌಲಭ್ಯ ಮತ್ತು ಮಾರುಕಟ್ಟೆ ಸಂಕೀರ್ಣ ಮತ್ತು IPDS ವರ್ಕ್ ಹಂತ-3 ಅಡಿಯಲ್ಲಿ ನಾಗ್ವಾದಲ್ಲಿ 33/11 KV ಸಬ್ ಸ್ಟೇಷನ್ ಸೇರಿದೆ.

ಇದನ್ನೂ ಓದಿ
PM Special Scheme: ಪಿಎಂ ಸ್ಪೆಷಲ್ ಯೋಜನೆ; ವೃದ್ಧರಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೌಲಭ್ಯ ನೀಡಲು ಸರ್ಕಾರ ಚಿಂತನೆ
PM Modi Agradoot Group Anniversary: ಅಗ್ರದೂತ್​ ಮಾಧ್ಯಮ ಸಂಸ್ಥೆಯ 50ನೇ ವಾರ್ಷಿಕೋತ್ಸವಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ
‘ನಾನು ವಿನಂತಿಸಿದ್ದರೆ ಮುಖ್ಯಮಂತ್ರಿಯಾಗಬಹುದಿತ್ತು’: ದೇವೇಂದ್ರ ಫಡ್ನವಿಸ್

ಬಬತ್‌ಪುರ-ಕಪ್ಸೇಥಿ-ಭದೋಹಿ ರಸ್ತೆಯಲ್ಲಿ ನಾಲ್ಕು ಪಥದ ರಸ್ತೆಯ ಮೇಲ್ಸೇತುವೆ ನಿರ್ಮಾಣ, ಕೇಂದ್ರ ಕಾರಾಗೃಹದ ರಸ್ತೆಯಲ್ಲಿ ವರುಣಾ ನದಿಗೆ ಸೇತುವೆ, ಪಿಂದ್ರ-ಕತಿರಾವ್ ರಸ್ತೆಯ ಅಗಲೀಕರಣ, ಫೂಲ್ಪುರ್-ಸಿಂಧೌರಾ ಸಂಪರ್ಕ ರಸ್ತೆ ಅಗಲೀಕರಣ, ಎಂಟು ಗ್ರಾಮೀಣ ರಸ್ತೆಗಳ ನಿರ್ಮಾಣ, ಪಿಎಂಜಿಎಸ್‌ವೈ ಅಡಿಯಲ್ಲಿ ಏಳು ರಸ್ತೆಗಳ ನಿರ್ಮಾಣ ಮತ್ತು ಧರ್ಸೌನಾ-ಸಿಂಧೌರಾ ರಸ್ತೆಯ ಅಗಲೀಕರಣ ಸೇರಿದಂತೆ ವಿವಿಧ ರಸ್ತೆ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ ಜಿಲ್ಲೆಯಲ್ಲಿ ಒಳಚರಂಡಿ ಮತ್ತು ನೀರು ಸರಬರಾಜು ಸುಧಾರಣೆಗೆ ಸಂಬಂಧಿಸಿದ ವಿವಿಧ ಯೋಜನೆಗಳ.ನ್ನೂ ಮೋದಿ ಉದ್ಘಾಟಿಸಲಿದ್ದಾರೆ ಎಂದು ಪಿಎಂಒ ತಿಳಿಸಿದೆ.