AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರಂಭದಲ್ಲಿ ಅನುಮಾನ! ಕಾಲಾಂತರದಲ್ಲಿ ಗಟ್ಟಿಯಾಗಿ ನೆಲೆಯೂರಿದ EVMಗಳ ಯಶಸ್ಸಿನ ಕತೆ: ಏನಿದರ ಬೆಳವಣಿಗೆಯ ರಹಸ್ಯ?

ಅಂದಿನ ಅನಕ್ಷರಸ್ಥ ಭಾರತದಲ್ಲಿ ದುರ್ಬಲ ನಾಗರಿಕರಿಗೆ ಪೇಪರ್ ಬ್ಯಾಲೆಟ್ ವ್ಯವಸ್ಥೆಯಲ್ಲಿ ಮತ ಚಲಾಯಿಸುವುದಕ್ಕೆ ಸಾಕಷ್ಟು ಅಡ್ಡಿ ಆತಂಕಗಳಿದ್ದವು. ಇದು ಬಲಾಢ್ಯ ರಾಜಕಾರಣಿಗಳಿಗೆ ಅನುಕೂಲಸಿಂಧು ಆಗುತ್ತಿತ್ತು. ದೇಶದಿಂದ ಕಾಲ್ತೆಗೆದಿದ್ದ ಬ್ರಿಟೀಷರು ಸೇರಿದಂತೆ ಮುಂದುವರಿದ ದೇಶಗಳ ನಾಯಕರು ಅಂಬೆಗಾಲಿಡುತ್ತಿದ್ದ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಅವಹೇಳನ ಮಾಡತೊಗಿದ್ದರು. ಬುದ್ಧಿಜೀವಿಗಳು, ಶಿಕ್ಷಣ ತಜ್ಞರು ಪ್ರಜಾಪ್ರಭುತ್ವ/ ಮತದಾನ ಎಂಬುದು ಭಾರತಕ್ಕೆ ಹೇಳಿಮಾಡಿಸಿದ್ದಲ್ಲ ಎಂದು ವ್ಯಂಗ್ಯವಾಗತೊಡಗಿದ್ದರು. ಆದರೆ ಹರಿದು ಹಂಚಿಕೆಯಾಗಿದ್ದ ಮತಪತ್ರ ಚುನಾವಣೆಗೆ ಗುಡ್​​ಬೈ ಹೇಳುವ ಕಾಲ ಬಂದಿತ್ತು.

ಆರಂಭದಲ್ಲಿ ಅನುಮಾನ! ಕಾಲಾಂತರದಲ್ಲಿ ಗಟ್ಟಿಯಾಗಿ ನೆಲೆಯೂರಿದ EVMಗಳ ಯಶಸ್ಸಿನ ಕತೆ: ಏನಿದರ ಬೆಳವಣಿಗೆಯ ರಹಸ್ಯ?
ಕಾಲಾಂತರದಲ್ಲಿ ಗಟ್ಟಿಯಾಗಿ ನೆಲೆಯೂರಿದ EVMಗಳ ಯಶಸ್ಸಿನ ಕತೆ ಇಲ್ಲಿದೆ
ಸಾಧು ಶ್ರೀನಾಥ್​
|

Updated on:May 29, 2024 | 8:27 AM

Share

ಆ ಕಾಲಕ್ಕೆ ಮಹಾ ಚುನಾವಣೆಗಳು ನಡೆಯುತ್ತಿದ್ದುದ್ದೇ ಹಾಗೆ. ದುಡ್ಡು ಮತ್ತು ತೋಳಿನ ಶಕ್ತಿಯನ್ನೇ ಅಸ್ತ್ರವಾಗಿಸಿಕೊಂಡಿದ್ದ ಬಲಾಢ್ಯ ರಾಜಕಾರಣಿಗಳು ಚುನಾವಣೆಗಳನ್ನು ಗೆಲ್ಲುತ್ತಿದ್ದರು. ಭಾರತದ ರಾಜಕೀಯದಲ್ಲಿ Money and Muscle Power ಪಾತ್ರ ಮಿತಿಮೀರಿತ್ತು. ವಾಸ್ತವದಲ್ಲಿ ಪ್ರಜಾಪ್ರಭುತ್ವದ ಮುಖ್ಯ ಆಶಯಕ್ಕೆ ಎಳ್ಳು ನೀರು ಬಿಡಲಾಗಿತ್ತು. ನಿಜವಾದ ಕಾಳಜಿಯೊಂದಿಗೆ ಜನ ಸೇವೆ ಮಾಡುವುದು ಗಗನಕುಸುಮವಾಗಿತ್ತು. ದುಡ್ಡಿನ ಆಮಿಷವೊಡ್ಡಿ ಮತ ಹಾಕಿಸಿಕೊಳ್ಳಲಾಗುತ್ತಿತ್ತು. ಇಲ್ಲಾಂದ್ರೆ ತೋಳಿನ ಶಕ್ತಿ ಬಳಸಿ ಮತದಾರರನ್ನು ಹೆದರಿಸಿ, ಬೆದರಿಸಿ ಓಲೈಕೆ ಮಾಡಲಾಗುತ್ತಿತ್ತು. ಆದರೆ ಇದು ಇಷ್ಟಕ್ಕೇ ನಿಲ್ಲಲಿಲ್ಲ. ಬಲಿಷ್ಟ ದುಷ್ಟ ಜನನಾಯಕರು ಮತಗಟ್ಟೆಯೊಳಕ್ಕೆ ನುಗ್ಗಿ ಮತಪತ್ರಗಳನ್ನು ವಶಪಡಿಸಿಕೊಂಡು ತಮ್ಮ ಪಟಾಲಂಗಳ ಮೂಲಕ ತಮ್ಮ ಗುರ್ತಿಗೆ ಮತ ಒತ್ತಿಸಿಕೊಳ್ಳುತ್ತಿದ್ದರು. ಇದಿಷ್ಟೂ ರಾಜಕಾರಣಿಗಳ ಮುಖವಾಡವಾಗಿದ್ದರೆ ಇದಕ್ಕೆ ಮತ್ತೊಂದು ಆಯಾಮವೂ ಸೇರಿಕೊಂಡಿತ್ತು. ಅದು ತಾಂತ್ರಿಕವಾಗಿ ಎದುರಾಗುತ್ತಿದ್ದ ಸಮಸ್ಯೆಗಳು. ಅಂದರೆ ಮತಪತ್ರಗಳ ಪಾಲನೆ. ಬೃಹತ್​ ಭಾರತದಲ್ಲಿ ಅದು ಹೇಳಿಕೇಳಿ ಕಾಗದದ ಮತಪತ್ರ ಪದ್ಧತಿ (paper ballot system) ಇದ್ದ ಕಾಲ. ಅವುಗಳ ಮುದ್ರಣ, ರಕ್ಷಣೆ, ಮತ ಪತ್ರಗಳ ಸಾಗಣೆ, ವೆಚ್ಚ ಕೊನೆಗೆ ಮತ ಎಣಿಕೆ ಇವೇ ಮುಂತಾದ ಬೃಹತ್​​ ಸಮಸ್ಯೆಗಳೂ ತಾಂಡವವಾಗತೊಡಗಿದ್ದವು. ಸರಿಯಾಗಿ ಅದೇ ಕಾಲಕ್ಕೆ ಪ್ರಜ್ಞಾವಂತ ಮತದಾರ ಜಾಗೃತನಾಗತೊಡಗಿದ್ದ. ಚುನಾವಣೆ/ ಮತದಾನ ಎಂಬ ಈ ಬೃಹತ್​​ ನಾಟಕದಲ್ಲಿ ಹೊಸತನ್ನು ಬಯಸತೊಡಗಿದ್ದ. ಹೇಗಾದರೂ ಮಾಡಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಪರಿಣಮಿಸಿದ್ದ ದುಡ್ಡು ಮತ್ತು ತೋಳಿನ ಶಕ್ತಿ ಕುತಂತ್ರವನ್ನು ಹಿಮ್ಮೆಟ್ಟಿಸಲು ಹಾತೊರೆಯುತ್ತಿದ್ದ. ಇಲ್ಲಿ ಮತ್ತೂ ಒಂದು ಅಹಿತಕರ ವಿದ್ಯಮಾನ ನಡೆಯುತ್ತಿತ್ತು. ಬಲಾಢ್ಯ ರಾಜಕಾರಣಿಗಳ ಕುತಂತ್ರದಿಂದ ಬೇಸತ್ತು ಹೆಚ್ಚಾಗಿ ಜನ ಮತಗಟ್ಟೆಗಳತ್ತ ಸುಳಿಯುತ್ತಿರಲಿಲ್ಲ. ಅಂದರೆ ಮತದಾನ...

Published On - 2:37 pm, Sat, 11 May 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!