AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜ್ಜಿ ಮನೆಯಲ್ಲಿ ಬೆಕ್ಕು ಮರಿ ಹಾಕಿತ್ತು: ಬೆಕ್ಕಿನ ಕಥೆ ಹೇಳಿ ಕಾಂಗ್ರೆಸ್​ಗೆ ಟಾಂಗ್​ ಕೊಟ್ಟ ತೇಜಸ್ವಿ ಸೂರ್ಯ

ಬಿಜೆಪಿ ಇರುವ ಎಲ್ಲಾ ರಾಜ್ಯಗಳಲ್ಲಿ ಅಭಿವೃದ್ಧಿ ಆಗಿದೆ. ಅದೇ ಥರಾ ಕರ್ನಾಟಕದಲ್ಲೂ ಹಿಂದೆಂದೂ ಆಗದ ಅಭಿವೃದ್ಧಿ ಕೆಲಸ ಐದು ವರ್ಷದಲ್ಲಿ ಆಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಅಜ್ಜಿ ಮನೆಯಲ್ಲಿ ಬೆಕ್ಕು ಮರಿ ಹಾಕಿತ್ತು: ಬೆಕ್ಕಿನ ಕಥೆ ಹೇಳಿ ಕಾಂಗ್ರೆಸ್​ಗೆ ಟಾಂಗ್​ ಕೊಟ್ಟ ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ Image Credit source: financialexpress.com
ಗಂಗಾಧರ​ ಬ. ಸಾಬೋಜಿ
|

Updated on:Feb 22, 2023 | 4:06 PM

Share

ಮಂಡ್ಯ: ಬೇರೆ ಬೇರೆ ರಾಜ್ಯದ ಚುನಾವಣೆಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಎಲ್ಲಾ ಕಡೆ ನೋಡೋಕೆ ಸಾಮನ್ಯವಾಗಿ ಸಿಕ್ಕಿದ್ದು ಅಭಿವೃದ್ಧಿ. ಬಿಜೆಪಿ ಇರುವ ಎಲ್ಲಾ ರಾಜ್ಯಗಳಲ್ಲಿ ಅಭಿವೃದ್ಧಿ ಆಗಿದೆ. ಅದೇ ಥರಾ ಕರ್ನಾಟಕದಲ್ಲೂ ಹಿಂದೆಂದೂ ಆಗದ ಅಭಿವೃದ್ಧಿ ಕೆಲಸ ಐದು ವರ್ಷದಲ್ಲಿ ಆಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದರು. ರೈಲು, ಹೈವೇ ಸೇರಿದಂತೆ ಅನೇಕ ಕೆಲಸಗಳು ಕಾಂಗ್ರೆಸ್ ಕಾಲದಲ್ಲಿ ಆಗದಿರುವ ಕಾರ್ಯಗಳು ನರೇಂದ್ರ ಮೋದಿ ಸರ್ಕಾರದಲ್ಲಿ ಆಗಿದೆ. ಮಂಡ್ಯದಿಂದಲೇ  ವಂದೇ ಭಾರತ್ ಟ್ರೇನ್ ಹೋಗ್ತಾ ಇದೆ. ಇದನ್ನು ಮಾಡಿ ಕೊಟ್ಟಿದ್ದು ನರೇಂದ್ರ ಮೋದಿ. ದಶಪಥ ಹೈವೇ ಕೂಡ ನರೇಂದ್ರ ಮೋದಿ, ಸಿಎಂ ಬೊಮ್ಮಾಯಿ ಕೊಟ್ಟಿದ್ದು. ಒಂದು ಗಂಟೆಯ ಸಮಯ ಈಗ ಕೇವಲ ಅರ್ಧ ತಾಸಿನಲ್ಲೇ ಹೋಗಬಹುದು. ಮೈಸೂರು, ಮಂಡ್ಯ ಯುವಕರು ಬೆಂಗಳೂರಿಗೆ ಕೆಲಸ ಮಾಡೋಕೆ ಬರ್ತಾರೆ. ಯಾಕೆಂದ್ರೆ ಇಲ್ಲಿರುವವರು ಫ್ಯಾಕ್ಟರಿಗಳನ್ನು ತೆಗೆಸಿರಲಿಲ್ಲ, ಅದೇ ಯಡಿಯೂರಪ್ಪನವರು ಹಾಗೂ ಬೊಮ್ಮಾಯಿಯವರು ಇಲ್ಲಿನ ಶುಗರ್​ ಫ್ಯಾಕ್ಟರಿಗಳಿಗೆ ಹಣ ಕೊಟ್ಟು ಒಪನ್ ಮಾಡಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Anant Nag: ಇಂದು ಸಂಜೆ ಬಿಜೆಪಿ ಸೇರಲಿದ್ದಾರೆ ಹಿರಿಯ ನಟ ಅನಂತ್ ನಾಗ್

ಬೆಕ್ಕಿನ ಉದಾಹರಣೆಯೊಂದಿಗೆ ಕಾಂಗ್ರೆಸ್​ಗೆ ಟಾಂಗ್​ ಕೊಟ್ಟ ತೇಜಸ್ವಿ 

ಇನ್ನು ನಾನು ಉತ್ತರ ಪ್ರದೇಶಕ್ಕೆ ಹೋದಾಗ ಒಂದು ಘಟನೆ ನಡೆಯಿತು. ಅಜ್ಜಿಯೊಬ್ಬರ ಮನೆಯಲ್ಲಿ ಬೆಕ್ಕು ಮರಿ ಹಾಕಿತ್ತು. ಆ ಬೆಕ್ಕಿನ ಮರಿಗಳು ಆಗ ಮಾತಾಡೋಕೆ ಶುರುಮಾಡಿದ್ದು, ಕಾಂಗ್ರೆಸ್ ಅಧಿಕಾರರಕ್ಕೆ ಬರುತ್ತೆ ಅಂತ ಹೇಳ್ತಾ ಇದ್ವಂತೆ. ಆ ಅಜ್ಜಿ ಕೂಡ ಎಲ್ಲರಿಗೂ ಹೇಳಿದ್ಳಂತೆ. ಈ ಸುದ್ದಿ ಡೆಲ್ಲಿಗೂ ಮುಟ್ಟಿತಂತೆ. ಏನಿದು ಇಡೀ ದೇಶದಲ್ಲಿ ನಾವು ಸೋಲ್ತಾ ಇದೀವಿ ಆದರೆ ಬೆಕ್ಕುಗಳು ಅದ್ಹೇಗೆ ಕಾಂಗ್ರೆಸ್ ಬರುತ್ತೆ ಅಂತ ನೋಡೋಕೆ ಹೋದ್ರಂತೆ. ಆಗ ರಾಹುಲ್ ಗಾಂಧಿಯವರು ಕೂಡ ಎಂಟು ಜನರ ಸ್ಪೆಷಲ್ ಪ್ಲೇನ್ ಮಾಡಿ ಕಳ್ಸಿದ್ರಂತೆ. ಆಗ ಹೋಗಿ ನೋಡಿದ್ರೆ ಬೆಕ್ಕುಗಳು ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂದ್ವಂತೆ.

ಇದನ್ನೂ ಓದಿ: Karnataka News Live Updates: ಯಡಿಯೂರಪ್ಪ ವ್ಯಕ್ತಿತ್ವ ದೊಡ್ಡದು; ಯುಟಿ ಖಾದರ್

ಏನಜ್ಜಿ ಏನಾಯ್ತು ಬೆಕ್ಕಿನ ಮರಿಗೆ ಎಂದು ಕಾಂಗ್ರೆಸ್​ನವರು ಅಜ್ಜಿಗೆ ರೇಗಿಸಿದ್ರಂತೆ. ಆಗ ಅಜ್ಜೆ ಹೇಳಿದಳಂತೆ, ಆಗ ಅವು ಕಣ್ಣು ತೆಗೆದಿರಲಿಲ್ಲ. ಈಗ‌ ಕಣ್ಣು ತೆಗೆದಿದಾವೆ ಅದಕ್ಕೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತ ಹೇಳ್ತಾ ಇದಾವೆ ಅಂದ್ಳಂತೆ. ಅದೇ ಥರಾ‌ ಮಂಡ್ಯದಲ್ಲಿ ಜನ ಕಣ್ಣು ತೆರೆದಿದ್ದಾರೆ. ಈಗ ಏನೇ ಇದ್ರೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಬೆಕ್ಕಿನ ಕಥೆಯೊಂದು ಹೇಳುವ ಮೂಲಕ ಕಾಂಗ್ರೆಸ್​ಗೆ ಟಾಂಗ್​ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:05 pm, Wed, 22 February 23

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ